` amulya, - chitraloka.com | Kannada Movie News, Reviews | Image

amulya,

  • ಅಮೂಲ್ಯ, ಈಗ ಮರ್ಸಿಡಿಸ್ ಮಹಾರಾಣಿ..!

    amulya gets mercedes benz as gift

    ಚಿತ್ರನಟಿ ಅಮೂಲ್ಯ ಮದುವೆಯಾದ ನಂತರ ಮೊದಲ ಹುಟ್ಟುಹಬ್ಬ ಆಚರಿಸಿದ್ದು ಸೆಪ್ಟೆಂಬರ್ 14ರಂದು. ಎಂದಿನಂತೆ ಅಭಿಮಾನಿಗಳು, ಮನೆಯವರು ಅಮೂಲ್ಯಗೆ ಶುಭ ಹಾರೈಸಿದ್ರು. ಆದರೆ, ಅಮೂಲ್ಯರನ್ನು ಮರ್ಸಿಡಿಸ್ ಮಹಾರಾಣಿಯನ್ನಾಗಿಸಿದ್ದು ಅಮೂಲ್ಯ ಅವರ ಪ್ರೀತಿಯ ಪತಿ ಜಗದೀಶ್.

    ಹುಟ್ಟುಹಬ್ಬದ ವಿಶೇಷವಾಗಿ ಜಗದೀಶ್, ಪ್ರೀತಿಯ ಪತ್ನಿ ಅಮೂಲ್ಯಗೆ ಮರ್ಸಿಡಿಸ್ ಬೆಂಜ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಡ್ರೈವ್ ಮಾಡಿದ ಗೋಲ್ಡನ್ ಕ್ವೀನ್ ಅಮೂಲ್ಯ, ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. 24ನೇ ಹುಟ್ಟುಹಬ್ಬಕ್ಕೆ ಮರ್ಸಿಡಿಸ್ ಮಹಾರಾಣಿಯಾಗಿದ್ದಾರೆ ಅಮೂಲ್ಯ.

  • ಅಮೂಲ್ಯಗೆ ಅವಳಿ ಜವಳಿ

    ಅಮೂಲ್ಯಗೆ ಅವಳಿ ಜವಳಿ

    ನಟಿ ಅಮೂಲ್ಯ ಶಿವರಾತ್ರಿಯಂದೇ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಅಮೂಲ್ಯ ಜಗದೀಶ್ ದಂಪತಿಗೆ ಅವಳಿ ಜವಳಿ ಮಕ್ಕಳು. ಮಂಗಳವಾರ ಬೆಳಗ್ಗೆ 11.45ಕ್ಕೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಅಮೂಲ್ಯ.

    ತಾಯಿ ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರೀತಿ ಆಶೀರ್ವಾದ ಇರಲಿ ಎಂದಿದ್ದಾರೆ ಪತಿ ಜಗದೀಶ್. ಚಿತ್ರರಂಗದ ತಾರೆಯರು ಸೇರಿದಂತೆ ಅಭಿಮಾನಿಗಳು ಅಮೂಲ್ಯ ಮತ್ತು ಮಕ್ಕಳಿಗೆ ಶುಭ ಹಾರೈಸಿದ್ದಾರೆ.

  • ಅಮೂಲ್ಯಾ ಈಗ ಜೆಡಿಎಸ್ ನಾಯಕಿ

    amulya joins jds

    ಚಿತ್ರನಟಿ ಅಮೂಲ್ಯಾ, ರಾಜಕಾರಣದಲ್ಲಿ ಪ್ರಥಮ ಪಾದ ಊರಿದ್ದಾರೆ. ಚೆಲುವಿನ ಚಿತ್ತಾರ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಅಮೂಲ್ಯ, ಈಗ ಅಮೂಲ್ಯ ಜಗದೀಶ್ ಆಗಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅಮೂಲ್ಯ ಅವರ ಮಾವ ಜಿ.ಹೆಚ್. ರಾಮಚಮದ್ರ, ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ಮಾವನ ಜೊತೆ ಅಮೂಲ್ಯ ಕೂಡಾ ಜೆಡಿಎಸ್ ಸೇರಿದ್ದಾರೆ. ಅಮೂಲ್ಯ ಅವರನ್ನು ದೇವೇಗೌಡರೇ ಆಶೀರ್ವಾದ ಮಾಡಿ ಬರಮಾಡಿಕೊಂಡಿದ್ದು ವಿಶೇಷ.

    ನನಗೆ ರಾಜಕೀಯ ಅಷ್ಟಾಗಿ ಗೊತ್ತಿಲ್ಲ. ಮಾವನವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಟ್ಟರೆ, ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ರಾಜ್ಯಾದ್ಯಂತ ಪ್ರಚಾರ ಮಾಡುವ ಯೋಚನೆ ಇಲ್ಲ ಎಂದಿದ್ದಾರೆ ಅಮೂಲ್ಯ.

  • ಅಮ್ಮನಾಗುತ್ತಿದ್ದಾರೆ ಅಮೂಲ್ಯ

    ಅಮ್ಮನಾಗುತ್ತಿದ್ದಾರೆ ಅಮೂಲ್ಯ

    ನಟಿ ಅಮೂಲ್ಯ, ಚಿಕ್ಕ ವಯಸ್ಸಿನಲ್ಲೇ ಸ್ಟಾರ್ ಆದ ನಟಿ. ಚೆಲುವಿನ ಚಿತ್ತಾರದ ಮೂಲಕ ಚಿತ್ರರಂಗಕ್ಕೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟ ಅಮೂಲ್ಯ, 2017ರಲ್ಲಿ ಜಗದೀಶ್ ಅವರನ್ನು ವಿವಾಹವಾದರು. ಈಗ ತಾಯಿಯಾಗುತ್ತಿದ್ದಾರೆ.

    ಮದುವೆ ನಂತರ ನಟನೆಯಿಂದ ದೂರವೇ ಇದ್ದ ಅಮೂಲ್ಯ, 2022ರ ಬೇಸಗೆಯಲ್ಲಿ ಪುಟ್ಟ ಮಗುವೊಂದಕ್ಕೆ ಅಮ್ಮನಾಗುತ್ತಿದ್ದಾರೆ. ನಾವೀಗ ಇಬ್ಬರಲ್ಲ.. ಮೂವರಾಗುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಶವರ್ ಫೋಟೋಸ್ ಹಾಕಿದ್ದಾರೆ.

  • ಎಲೆಕ್ಷನ್‍ಗೆ ನಿಲ್ಲಲ್ಲ ಅಮೂಲ್ಯ. ಆದರೆ..

    amulya will not contest in elections

    ಮೊನ್ನೆ ಮೊನ್ನೆಯಷ್ಟೇ ಮದುವೆಯಾಗಿ ವೈವಾಹಿಕ ಜೀವನದ ಸಂಭ್ರಮದಲ್ಲಿರುವ ಅಮೂಲ್ಯ, ಚಿತ್ರರಂಗದಿಂದ ದೂರವಾಗಿದ್ದಾರೆ. ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಹೊಸ ಚಿತ್ರಗಳನ್ನು ಒಪ್ಪಿಕೊಂಡ ಸುದ್ದಿಯೂ ಇಲ್ಲ. ಹೀಗಿರುವಾಗಲೇ ಅಮೂಲ್ಯ ಚಿತ್ರರಂಗ ಬಿಟ್ಟು, ರಾಜಕೀಯಕ್ಕೆ ಬರುತ್ತಾರಂತೆ. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಾರಂತೆ ಎಂಬ ಸುದ್ದಿಗೆ ಇನ್ನಿಲ್ಲದ ವೇಗ ಸಿಕ್ಕಿಬಿಟ್ಟಿತ್ತು. ಈಗ ಅವುಗಳಿಗೆಲ್ಲ ಖುದ್ದು ಅಮೂಲ್ಯ ಫುಲ್‍ಸ್ಟಾಪ್ ಹಾಕಿದ್ದಾರೆ.

    ಅಮೂಲ್ಯ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಹಾಗಂತ ರಾಜಕೀಯದಿಂದಲೇ ದೂರವೂ ಇರಲ್ಲ. ಏಕೆಂದರೆ ಅವರ ಮಾವ ರಾಮಚಂದ್ರಪ್ಪ ರಾಜಕಾರಣಿ.  ಬಿಜೆಪಿ ಟಿಕೆಟ್ ಆಕಾಂಕ್ಷಿ. ಅವರ ಪರವಾಗಿ ಅಮೂಲ್ಯ ಪ್ರಚಾರ ಮಾಡಲಿದ್ದಾರೆ.

    ಇನ್ನು ಅಮೂಲ್ಯ ಅವರ ಕುಟುಂಬದ ಆತ್ಮೀಯರಾದ ಶಿಲ್ಪಾ ಗಣೇಶ್ ಕೂಡಾ ರಾಜಕಾರಣಿ. ಅಕಸ್ಮಾತ್ ಅವರಿಗೆ ಟಿಕೆಟ್ ಸಿಕ್ಕರೂ, ಅವರ ಪರವಾಗಿಯೂ ಅಮೂಲ್ಯ ಪ್ರಚಾರ ಮಾಡಲಿದ್ದಾರೆ. ಒಟ್ಟಿನಲ್ಲಿ ಅಮೂಲ್ಯ ಟಿಕೆಟ್ ತೆಗೆದುಕೊಂಡು ಸ್ಪರ್ಧೆಗಿಳಿಯುತ್ತಿಲ್ಲ ಅಷ್ಟೆ. ರಾಜಕಾರಣದಲ್ಲಂತೂ ಇರುತ್ತಾರೆ.

  • ದರ್ಶನ್‍ಗೆ ಅಮೂಲ್ಯ ತಂಗಿ..!

    amulya will be sister to darshan

    ಅಮೂಲ್ಯ ಕನ್ನಡ ಚಿತ್ರರಂಗಕ್ಕೆ ಕಮ್‍ಬ್ಯಾಕ್ ಮಾಡಲಿದ್ದಾರೆ ಅನ್ನೋ ಸುದ್ದಿ ಈಗ ಅಧಿಕೃತವಾಗಿದೆ. ಅಮೂಲ್ಯ ತಮ್ಮ ಕಮ್‍ಬ್ಯಾಕ್‍ಗೆ ಆಯ್ಕೆ ಮಾಡಿಕೊಂಡಿರೋದು ದರ್ಶನ್ ಚಿತ್ರವನ್ನ. ದರ್ಶನ್ ತಮಿಳಿನ ವೇದಾಳಂ ಚಿತ್ರದ ರೀಮೇಕ್‍ನಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಅಮೂಲ್ಯ, ದರ್ಶನ್ ತಂಗಿಯ ಪಾತ್ರ ಮಾಡಲಿದ್ದಾರೆ.

    ವೇದಾಳಂ, ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾ. ಅಜಿತ್ ಅಭಿನಯದ ಚಿತ್ರದಲ್ಲಿ ಹೀರೋಯಿನ್‍ಗಿಂತಲೂ ಅತಿ ಹೆಚ್ಚು ಪ್ರಾಮುಖ್ಯತೆ ಇರೋದು ತಂಗಿಯ ಪಾತ್ರಕ್ಕೆ. ತಮಿಳಿನಲ್ಲಿ ಲಕ್ಷ್ಮಿ ಮೆನನ್ ಮಾಡಿದ್ದ ಪಾತ್ರವನ್ನು, ಕನ್ನಡದಲ್ಲಿ ಅಮೂಲ್ಯ ನಿರ್ವಹಿಸಲಿದ್ದಾರೆ. ದರ್ಶನ್ ಇಮೇಜ್‍ಗೆ ಹೇಳಿ ಮಾಡಿಸಿದಂತಿರುವ ಚಿತ್ರದ ಇನ್ನಷ್ಟು ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

    Related Articles :-

    ದರ್ಶನ್‍ಗೆ ಅಮೂಲ್ಯ ನಾಯಕಿ..?

  • ದರ್ಶನ್‍ಗೆ ಅಮೂಲ್ಯ ನಾಯಕಿ..?

    amulya is darshan's heroine?

    ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಅಮೂಲ್ಯ ನಾಯಕಿಯಾಗುತ್ತಿದ್ದಾರಾ..? ಮದುವೆಯ ನಂತರ ಮತ್ತೆ ಸಿನಿಮಾಗೆ ಕಮ್‍ಬ್ಯಾಕ್ ಸುಳಿವು ಕೊಟ್ಟಿರುವ ಅಮೂಲ್ಯ, ದರ್ಶನ್ ಚಿತ್ರದ ಮೂಲಕ ರೀ ಎಂಟ್ರಿ ಕೊಡ್ತಾರಾ..? ಸದ್ಯಕ್ಕೆ ಗಾಂಧಿನಗರದಲ್ಲಿ ಇಂಥಾದ್ದೊಂದು ಮಾತು ದೊಡ್ಡದಾಗಿ ಕೇಳಿಬರುತ್ತಿದೆ.

    ಅಧಿಕೃತವಾಗಿಲ್ಲ ಅಷ್ಟೆ.

    ದರ್ಶನ್, ತಮಿಳಿನ ವೇದಾಳಂ ರೀಮೇಕ್‍ಗೆ ಗ್ರೀನ್‍ಸಿಗ್ನಲ್ ಕೊಟ್ಟಿದ್ದಾರಂತೆ. ಆ ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಲಿದ್ದಾರಂತೆ. ಹಾಗೇನಾದರೂ ಆದರೆ, ದರ್ಶನ್ ಜೊತೆ 15 ವರ್ಷಗಳ ನಂತರ ತೆರೆ ಹಂಚಿಕೊಳ್ಳಲಿದ್ದಾರೆ ಅಮೂಲ್ಯ.

    ಸುಮಾರು 15 ವರ್ಷಗಳ ಹಿಂದೆ, ಅಮೂಲ್ಯ ದರ್ಶನ್ ಅವರ ಲಾಲಿಹಾಡು ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ದರ್ಶನ್ ಅವರ ಪ್ರೊಡಕ್ಷನ್ಸ್‍ನಲ್ಲಿಯೇ ತಯಾರಾಗಿದ್ದ ಮದುವೆಯ ಮಮತೆಯ ಕರೆಯೋಲೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಮೂಲ್ಯ, ಈಗ ದರ್ಶನ್‍ಗೇ ಜೋಡಿಯಾಗಲಿದ್ಧಾರೆ ಎನ್ನವುದು ಗಾಂಧಿನಗರದ ಬಿಸಿಬಿಸಿ ಸುದ್ದಿ.

  • ಶ್ರೀಮತಿ ಅಮೂಲ್ಯ ಜಗದೀಶ್ ಸಮಾಜಸೇವೆ

    amulya jagadish

    ಮದುವೆಯಾದ ಮೇಲೆ ಅಮೂಲ್ಯ ನಟನೆ ಮಾಡ್ತಾರಾ..? ಅಥವಾ ಸಂಪೂರ್ಣ ಗೃಹಿಣಿಯಾಗಿರ್ತಾರಾ..? ಅನ್ನೋ ಪ್ರಶ್ನೆಗಳಿಗೆ ನಟನೆ ಮುಂದುವರೆಸ್ತೀನಿ ಅನ್ನೋ ಉತ್ತರ ಕೊಟ್ಟಿದ್ದರು ಅಮೂಲ್ಯ. ಆದರೆ, ಹೊಸ ಚಿತ್ರಗಳನ್ನು ಒಪ್ಪಿಕೊಂಡ ಸುದ್ದಿಗಳ್ಯವುವೂ ಇರಲಿಲ್ಲ. ಹಾಗಾದರೆ ಅಮೂಲ್ಯ ಏನ್ ಮಾಡ್ತಿದ್ದಾರೆ ಅಂತಾ ಹುಡುಕಿಕೊಂಡು ಹೊರಟಾಗ, ಅಮೂಲ್ಯ ಅವರ ಸಮಾಜಸೇವೆಯ ಬಗ್ಗೆ ಗೊತ್ತಾಗಿದೆ.

    ವನಿತಾ ವಿಕಾಸ್ ಅನ್ನೋ ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಅಮೂಲ್ಯ, ದುಡಿಯಲು ಆಸಕ್ತಿಯಿರುವ ಮಹಿಳೆಯರನ್ನು ಗುರುತಿಸಿ, ತರಬೇತಿ ನೀಡಿ ಉದ್ಯೋಗ ಕೊಡಿಸುವ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 10 ಸಾವಿರ ಜನಕ್ಕಾದರೂ ಇದನ್ನು ತಲುಪಿಸಬೇಕು ಅನ್ನೋದು ಅಮೂಲ್ಯ ಅವರ ಬಯಕೆ. ಟೈಲರಿಂಗ್, ಬುಕ್‍ಬೈಂಡಿಂಗ್‍ನಂತಾ ಕೆಲಸಗಳ ತರಬೇತಿಗೆ ಈಗಾಗಲೇ ಚಾಲನೆಯನ್ನೂ ಕೊಡಿಸಿಬಿಟ್ಟಿದ್ದಾರೆ.

    ಪತಿ ಜಗದೀಶ್ ಮತ್ತು ಮಾವ ರಾಮಚಂದ್ರ, ಅಮೂಲ್ಯ ಅವರ ಕೆಲಸಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಹಾಗಂತ ರಾಜಕೀಯಕ್ಕೆ ಬರ್ತೀರಾ ಅಂದ್ರೆ, ಒಂದೇ ಮಾತಲ್ಲಿ ಇಲ್ಲ ಅಂತಾರೆ ಅಮೂಲ್ಯ. ಈಗಾಗಲೇ 8 ಬ್ಯಾಚ್‍ನಲ್ಲಿ ತರಬೇತಿಯನ್ನೂ ಕೊಡಿಸಿದ್ದಾರಂತೆ. ಅಮೂಲ್ಯ ಅವರ ಸಮಾಜಸೇವೆಯೂ ಯಶಸ್ವಿಯಾಗಲಿ.

  • ಸಿನಿಮಾಗೆ ರೆಡಿಯಾಗುತ್ತಿದ್ದಾರಂತೆ ಅಮೂಲ್ಯ

    amulya gearing up to re enter films

    ಚೆಲುವಿನ ಚಿತ್ತಾರದ ಐಶೂ.. ಚಿತ್ರರಂಗಕ್ಕೆ ಮತ್ತೊಮ್ಮೆ ಕಮ್‍ಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಮದುವೆ, ಎಲೆಕ್ಷನ್‍ನಲ್ಲಿ ಬ್ಯುಸಿಯಾಗಿದ್ದ ಅಮೂಲ್ಯ, ಈಗ ಫಿಟ್‍ನೆಸ್‍ನತ್ತ ಗಮನ ಹರಿಸಿದ್ದಾರಂತೆ. ಎಲೆಕ್ಷನ್ ಕ್ಯಾಂಪೇನ್ ವೇಳೆ ಸಿಕ್ಕಿದ್ದನ್ನು ತಿನ್ನುತ್ತಿದ್ದೆ. ಫಿಟ್‍ನೆಸ್ ಕಡೆ ಗಮನ ಹರಿಸೋಕೆ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಮತ್ತೊಮ್ಮೆ ಫಿಟ್‍ನೆಸ್‍ನತ್ತ ಗಮನ ಹರಿಸುತ್ತಿದ್ದೇನೆ ಎಂದಿದ್ದಾರೆ ಅಮೂಲ್ಯ.

    ಅಮೂಲ್ಯ ಅವರ ಸಿನಿಮಾ ರೀ ಎಂಟ್ರಿಗೆ ಪತಿ ಜಗದೀಶ್ ಅವರ ಬೆಂಬಲವೂ ಇದೆ. ಈಗಾಗಲೇ ಎರಡು ಕಥೆ ಕೇಳಿದ್ದಾರಂತೆ ಅಮೂಲ್ಯ. ತಮಿಳಿನಲ್ಲಿ ನಯನತಾರಾ ಆಯ್ಕೆ ಮಾಡಿಕೊಳ್ಳುವ ಕಥೆಗಳಂತಿದೆ ಎಂದು ಹೇಳಿಕೊಂಡಿದ್ದಾರೆ ಅಮೂಲ್ಯ.