` raghuram, - chitraloka.com | Kannada Movie News, Reviews | Image

raghuram,

  • Kichcha To Release The Trailer Of ‘Missing Boy’

    kichcha to release the trailer of missing boy

    Director Raghu Ram who was missing in action for a while returns with a realistic subject - 'Missing Boy’, which is all set for a grand release on March 22. After announcing the release of the movie in a unique manner through video message involving Kannada movie lovers, the trailer of it will be released by none other than Abhinaya Chakravarthy Kichcha Sudeepa on Thursday.

    Missing Boy features Gurunandan of First Rank Raju fame along with Archana Radha Krishnan and Ravi Shankar Gowda. Composer V Harikrishna has scored the music for this missing boy. Previously Kichcha had made a special appearance in Raju Kannada Medium which starred Gurunandan in the lead.

    The filmmaker has ruled out that Missing Boy is the remake of Hollywood movie 'Lion’, and has revealed that the first 20 minutes of the movie will be in English language as it is set in Europe. It is about a Kannada couple settled abroad who goes in search of their missing adopted boy. Apart from the drama, it focuses on a relevant subject which is close to reality, the team wraps up.

  • Raghuram's Next Film Is Missing Boy

    missing boy image

    Director D P Raghuram had announced earlier that he would be announcing his next film on his birthday which is on the 09th of July. Likewise, Raghuram has announced the title of his new film and the film is titled as 'Missing Boy'.

    Except for the title and the news that the film is based on a true incident Raghuram has not divulged any news about his forthcoming film. Raghuram has posted a poster which has a boy lost in a crowded place.

    More details about the film are yet awaited

  • ಕಂಟೆಂಟ್ ಈಸ್ ಕಿಂಗ್ - ಮಿಸ್ಸಿಂಗ್ ಬಾಯ್‍ಗೆ ಕಿಚ್ಚನ ಮೆಚ್ಚುಗೆ

    content is king says kiccha sudeep

    ಮಿಸ್ಸಿಂಗ್ ಬಾಯ್. ಫಸ್ಟ್ ರ್ಯಾಂಕ್ ರಾಜು ಗುರುನಂದನ್ ಅಭಿನಯದ ಹೊಸ ಸಿನಿಮಾ. ರಘುರಾಮ್ ನಿರ್ದೇಶನದ ಈ ಸಿನಿಮಾಗೆ ನೈಜ ಘಟನೆಗಳೇ ಪ್ರೇರಣೆ. ದೊಡ್ಡ ದೊಡ್ಡ ಸ್ಟಾರ್ ಡಮ್ ಇಲ್ಲದ ಚಿತ್ರದ ಟ್ರೇಲರ್‍ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಬೆನ್ನುತಟ್ಟಿದ್ದಾರೆ. 

    ಮಿಸ್ಸಿಂಗ್ ಬಾಯ್ ಅನ್ನೋದು ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡು ಬೇರೆ ದೇಶ ಸೇರುವ ಯುವಕರು, ಮತ್ತೆ ತಮ್ಮ ಹೆತ್ತವರಿಗಾಗಿ ಹುಡುಕಿಕೊಂಡು ಬರುವ ಕಥೆ. ಸುದೀಪ್‍ಗೆ ಈ ಕಾರಣಕ್ಕೇ ಚಿತ್ರ ಇಷ್ಟವಾಗಿ ಹೋಗಿದೆ. 

    ಯಾವುದೇ ಚಿತ್ರಕ್ಕೆ ಕಂಟೆಂಟ್ ಈಸ್ ಕಿಂಗ್. ಕಂಟೆಂಟ್ ಅದ್ಭುತವಾಗಿರುವ ಚಿತ್ರಗಳು ಗೆಲ್ಲುತ್ತಿವೆ. ಸ್ಟಾರ್ ಡಮ್ ಚಿತ್ರಗಳೂ ಈ ಕಂಟೆಂಟ್ ಚಿತ್ರಗಳ ಎದುರು ಅಲ್ಲಾಡುತ್ತಿವೆ. ಆದರೆ, ಇಂತಹ ಚಿತ್ರಗಳಿಗೆ ಭರ್ಜರಿ ಓಪನಿಂಗ್ ಇರಲ್ಲ. ಒಮ್ಮೆ ಪ್ರೇಕ್ಷಕ ಥಿಯೇಟರಿಗೆ ಬಂದು ಇಷ್ಟಪಟ್ಟರೆ, ತಾನು ಇಷ್ಟಪಟ್ಟಿದ್ದನ್ನು ಇತರರಿಗೂ ಹೇಳಿದರೆ, ಸಾಕು. ಚಿತ್ರ ಹಿಟ್ ಆಗಿಬಿಡುತ್ತೆ ಎಂದಿದ್ದಾರೆ ಕಿಚ್ಚ. 

    ಚಿತ್ರದ ಟ್ರೇಲರ್‍ಗೆ ಧ್ವನಿ ನೀಡಿರುವುದು ಶಿವರಾಜ್‍ಕುಮಾರ್. ಟ್ರೇಲರ್ ರಿಲೀಸ್ ಮಾಡಿರುವುದು ಕಿಚ್ಚ ಸುದೀಪ್.

  • ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ನಾನಿ ಶುಭ ಹಾರೈಕೆ

    southern star naani wishes for success of missing boy

    ಇದೇ ತಿಂಗಳು ತೆರೆಗೆ ಬರುತ್ತಿರುವ ಮಿಸ್ಸಿಂಗ್ ಬಾಯ್ ಸಿನಿಮಾ, ಟ್ರೇಲರ್, ವಿಭಿನ್ನ ಕಥಾ ಹಂದರದಿಂದಾಗಿಯೇ ಗಮನ ಸೆಳೆದಿರುವ ಚಿತ್ರ. ಕಿಚ್ಚನ ಮೆಚ್ಚುಗೆ ಪಡೆದಿದ್ದ ಮಿಸ್ಸಿಂಗ್ ಬಾಯ್ ಚಿತ್ರಕ್ಕೆ, ಕಿಚ್ಚನ ಎದುರು ಮಿಂಚಿದ್ದ ನಟನಿಂದಲೂ ಹಾರೈಕೆ ಸಿಕ್ಕಿದೆ. ಈಗ ಚಿತ್ರದಲ್ಲಿ ಕಿಚ್ಚನ ಎದುರು ನಟಿಸಿದ್ದ ನಾನಿ, ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭ ಕೋರಿದ್ದಾರೆ.

    ತೆಲುಗು, ತಮಿಳಿನ ಬಹುಬೇಡಿಕೆಯ ನಟರಾಗಿರುವ ನಾನಿ, ಮಿಸ್ಸಿಂಗ್ ಬಾಯ್ ಚಿತ್ರದ ನಿರ್ಮಾಪಕ ಪಮ್ಮಿಯನ್ನು ಹೊಗಳಿದ್ದಾರೆ. ಪಮ್ಮಿ ಎಂದರೆ, ಕೊಲ್ಲ ಪ್ರವೀಣ್. ಗುರುನಂದನ್ ಅಭಿನಯದ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವುದು ರಘುರಾಮ್. 

  • ಮಿಸ್ಸಿಂಗ್ ಬಾಯ್ ಡೈರೆಕ್ಟರ್ ಇವರೇ..

    missing boy movie director's story is also interesting

    ಮಿಸ್ಸಿಂಗ್ ಬಾಯ್ ಚಿತ್ರದ ಹೀರೋ ಗುರುನಂದನ್. ಕೊಲ್ಲ ಪ್ರವೀಣ್ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕ ರಘುರಾಮ್. ವಿಶೇಷ ಅಂದ್ರೆ, ಇದು ಇವರ 3ನೇ ಸಿನಿಮಾ. ಇವರು ನಿರ್ದೇಶಿಸಿದ ಈ ಹಿಂದಿನ ಎರಡು ಚಿತ್ರಗಳು ಬೇರೆ ಬೇರೆ ಕಾರಣಕ್ಕೆ ಸದ್ದು ಸುದ್ದಿ ಮಾಡಿದ್ದ ಚಿತ್ರಗಳು.

    ರಘುರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ನಿರ್ದೇಶಕನಾಗಿ. ನಿರ್ದೇಶಕನಾಗುವ ಮುಂಚೆಯೇ ನಟನಾಗಿ ಗುರುತಿಸಿಕೊಂಡರು. ವಿ.ರವಿಚಂದ್ರನ್, ಜೋಗಿ ಪ್ರೇಮ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ರಘು, ನಿರ್ದೇಶಕರಾಗಿದ್ದು ಚೆಲುವೆಯೇ ನಿನ್ನ ನೋಡಲು ಚಿತ್ರದ ಮೂಲಕ. ಶಿವಣ್ಣ ಅಭಿನಯದ ಆ ಚಿತ್ರವನ್ನು ಜಗತ್ತಿನ 7 ಅದ್ಭುತಗಳಲ್ಲಿ ಚಿತ್ರೀಕರಿಸಲಾಗಿತ್ತು. ಅದಾದ ನಂತರ ಫೇರ್ & ಲವ್ಲಿ ಚಿತ್ರ ಜನ ಮೆಚ್ಚುಗೆ ಪಡೆಯಿತು. ಈಗ ಮಿಸ್ಸಿಂಗ್ ಬಾಯ್. ರಘುರಾಮ್ ಹಿಟ್ ನಿರೀಕ್ಷೆಯಲ್ಲಿದ್ದಾರೆ.

  • ರಾಧಿಕಾ ಕುಮಾರಸ್ವಾಮಿ ಚಿತ್ರ ನಿಲ್ಲೋಕೆ ಕಾರಣ ಏನು..?

    raghuram, radhika kumaraswamy

    `ನಮಗಾಗಿ' ರಾಧಿಕಾ-ವಿಜಯ್ ರಾಘವೇಂದ್ರ ಜೋಡಿಯ ಸಿನಿಮಾ. ನಿನಗಾಗಿ ಚಿತ್ರದ ನಂತರ, ರಾಧಿಕಾ ಮತ್ತು ವಿಜಯ್ ರಾಘವೇಂದ್ರ ಒಟ್ಟಿಗೇ ನಟಿಸಿದ್ದ ಸಿನಿಮಾ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟು ಹೊತ್ತಿಗೆ ನಮಗಾಗಿ ಸಿನಿಮಾ ರಿಲೀಸ್ ಆಗಿ 2 ವರ್ಷಗಳಾಗುತ್ತಿತ್ತು. ಈಗ ಚಿತ್ರವೇ ಸ್ಥಗಿತಗೊಂಡಿರುವ ಸುದ್ದಿ ಬಂದಿದೆ.

    ಸ್ವತಃ ಚಿತ್ರದ ನಿರ್ದೇಶಕ ರಘುರಾಮ್ ಇನ್ನು ನನಗೂ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಚಿತ್ರ ಶುರುವಾದ ಕೆಲವೇ ದಿನಗಳಲ್ಲಿ ನಿರ್ಮಾಪಕರಿಗೆ ಸಮಸ್ಯೆಯಾಗಿ ಚಿತ್ರವನ್ನು ನಿಲ್ಲಿಸಿದರು. ನಂತರ, ನಿರ್ಮಾಣದ ಹೊಣೆಯನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಹೊತ್ತುಕೊಂಡರು. 

    ಆದರೆ, ರಾಧಿಕಾ ನಿರ್ಮಾಪಕಿಯಾದ ನಂತರವೂ ಚಿತ್ರ ಅದೇಕೋ ಟೇಕಾಫ್ ಆಗಲೇ ಇಲ್ಲ. ಏನು ಕಾರಣ ಎನ್ನುವುದೂ ಗೊತ್ತಾಗಲಿಲ್ಲ. ಚಿತ್ರಕ್ಕಾಗಿ 3 ವರ್ಷ ಕಾದು, ಈಗ ಹೊರಬರುತ್ತಿದ್ದೇನೆ. ನಮಗಾಗಿ ಮುಗಿದ ಅಧ್ಯಾಯ ಎಂದಿದ್ದಾರೆ ರಘುರಾಮ್.

    ಇಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿದ್ದು ಏಕೆ..? ಏನು ಕಾರಣವೋ.. ಏನೋ..