` sruthi hariharan - chitraloka.com | Kannada Movie News, Reviews | Image

sruthi hariharan

  • Teaser of 'Ambi Ninge Vayassaitho' Released

    teaser of ambi ninge vayassaitho released

    The shooting for 'Ambi Ninge Vayassaitho' starring Ambarish and Sudeep is in full progress and a teaser of the film was released on Monday. The teaser showcases Ambarish and the teaser is trending in social media.

    The film is being directed by Gurudutt Ganiga and the screenplay is by Sudeep. Jack Manju is producing the film under the Kichcha Creations banner.

    The film stars Ambarish, Suhasini, Sudeep and others in prominent roles. Arjun Janya is the music director, while Jabeen Jacob is the cameraman of the film.

  • Two Male Star Actors Involved In Defaming Arjun Sarja: Sambargi

    two male star actors involved in defaming arjun sarja - prashanth sambargi

    As soon as Karnataka Film Chamber of Commerce (KFCC) took up the matter of actress Sruthi Hariharan's 'me too’ allegations against actor Arjun Sarja, the actor's close associate Prashanth Sambargi made series of explosive revelations claiming that two male star actors are also involved in the ongoing campaign to malign and defame Arjun Sarja.

    He adds, saying that actress Sruthi has engaged paid social media campaign to defame Arjun Sarja at international level.

    “It is a well known fact that Arjun Sarja is working on his ambitious mission building a Lord Hanuman temple near Chennai at a cost of around Rs 25 crores. A paid media campaign has been engaged at international level by misusing the 'me too’ campaign to hurt the Hindu sentiments and to defame Arjun and his family members,” Sambargi told media in front of KFCC premises, even as KFCC was hearing the complaint filed before it by Rajesh, actor's father-in-law.

    However, Sambargi refused to divulge information on who those star actors which he claims are involved in defaming Arjun Sarja. He even revealed that he has enclosed 400 pages of documentary evidence about by the entire campaign.

    Further, Sambargi said that two more persons are gearing up to file defamation case against Sruthi for misusing the 'me too’ movement to defame the actor.

  • Upendra Matte Baa Audio Release Postponed

    upendra matte hutti baa audio release postponed

    If everything had gone right, then the songs of Upendra starrer 'Upendra Matte Baa' was supposed to release today. However, the audio release has been postponed due to various reasons and the new date will be announced soon.

    'Upendra Matte Baa' is a remake of Telugu hit 'Soggade Chinna Nayana'. Upendra's protege Loki who had directed Upendra in 'H2O' is the director of the film. Upendra's another protege Rajaram is producing the film along with Srikanth, Shashikanth and Narendranath,

    Upendra is playing a dual role in the film apart from scripting it. Prema and Shruthi Hariharan are the heroines. Sridhar Sambhram has composed the music for the film.

  • Vismaya Is Arjun Sarja's 150th Film

    vismaya is arjun sarja's 150th film

    Actor-director Arjun Sarja who made his debut in 'Putani Agent 123' has successfully completed 150 films and his 150th film as an actor is 'Vismaya'. The shooting for the film is complete and the teaser is expected to release today.

    'Vismaya' is being produced by Umesh, Arun Vaidyanathan, Jayaram and others and Arun Vaidyanathan has scripted the film apart from directing it. The film is being simultaneously made in Kannada and Tamil and the music has been composed by Naveen, while Aravind Krishna is the cinematographer.

    'Vismaya' stars Arjun Sarja, Shruthi Hariharan, Prasanna, Varalakshmi, Suman, Suhasini, Sudharani and others in prominent roles.

     

  • Vismaya Songs Released

    vismaya audio launched

    The songs of Arjun Sarja's 150th film 'Vismaya' was released at the Taj West End on Sunday night in Bangalore. Arjun Sarja himself released the songs of the film.

    'Vismaya' is being produced by Umesh, Arun Vaidyanathan, Jayaram and others and Arun Vaidyanathan has scripted the film apart from directing it. The film is being simultaneously made in Kannada and Tamil and the music has been composed by Naveen, while Aravind Krishna is the cinematographer.

    'Vismaya' stars Arjun Sarja, Shruthi Hariharan, Prasanna, Varalakshmi, Suman, Suhasini, Sudharani and others in prominent roles. The film is all set to release on the 07th of July in Kannada and Tamil simultaneously.

    Related Articles :-

    Vismaya Songs To Release On June 18th

    Vismaya Is Arjun Sarja's 150th Film

     

  • Vismaya Songs To Release On June 18th

    vismaya song on june 18th

    The songs of Arjun Sarja's 150th film 'Vismaya' is all set to be released on Sunday in Bangalore. Many of the artistes and technicians of the film are expected to be a part of this event.

    'Vismaya' is being produced by Umesh, Arun Vaidyanathan, Jayaram and others and Arun Vaidyanathan has scripted the film apart from directing it. The film is being simultaneously made in Kannada and Tamil and the music has been composed by Naveen, while Aravind Krishna is the cinematographer.

    'Vismaya' stars Arjun Sarja, Shruthi Hariharan, Prasanna, Varalakshmi, Suman, Suhasini, Sudharani and others in prominent roles.

    Re;ated Articles :-

    Vismaya Is Arjun Sarja's 150th Film

  • Women Commission Files Suo Motu Case Against Arjun Sarja

    women commission files suo motu case on arjun sarja

    Following media reports over 'me too’ allegations by actress Sruthi Hariharan against actor Arjun Sarja accusing him of sexual harassment, the Karnataka State Women's Commission has taken up a suo motu case against Arjun Sarja.

    It is learnt that the commission has written to the Bengaluru City Police Commissioner to investigate into the serious allegations made by the actress in the matter.

    This is the second case against Arjun Sarja after Sruthi complained to the Cubbon Park police stating that Arjun Sarja sexually abused her since 2015.

    In her complaint, the actress has also revealed that she is married to one Raam Kumar. It may be recalled that Arjun Sarja's close aide Prashanth Sambargi recently claimed before the media that a person by name 'Raam’ had contacted him urging to 'compromise’ in the matter.

    There are even unconfirmed reports that Sruthi Hariharan will soon go abroad, the U.S., for further studies in the month of January in 2019.

    Following her police complaint, Cubbon Park police along with the actress conducted mahazar procedure including the place U.B City premises as alleged in the complaint.

  • ಅಂಬಿ.. ಚಿತ್ರದಲ್ಲಿ ಶೃತಿಗಿರೋ ಬೇಸರ ಅದೊಂದೇ..

    sruthi hariharan still waiting to share screen with suhasini

    ಅಂಬಿ ನಿಂಗ್ ವಯಸ್ಸಾಯ್ತೋ.. ಇದು ರೆಬಲ್‍ಸ್ಟಾರ್ ಅಂಬರೀಷ್ ಸುಹಾಸಿನಿ ಜೋಡಿಯಾಗಿ ನಟಿಸಿರುವ ಸಿನಿಮಾ. ಯಂಗ್ ಅಂಬಿಯಾಗಿ ಸುದೀಪ್ ನಟಿಸಿದ್ದರೆ, ಯಂಗ್ ಸುಹಾಸಿನಿಯಾಗಿ ನಟಿಸಿರುವುದು ಶೃತಿ ಹರಿಹರನ್. 

    ಸುಹಾಸಿನಿಯವರ ಯಂಗ್ ಪಾತ್ರಕ್ಕೆ ನಿರ್ದೇಶಕ, ನಿರ್ಮಾಪಕರ ಮನಸ್ಸಿನಲ್ಲಿ ಮೂಡಿದ ಮೊದಲ ಹೆಸರೇ ಶೃತಿ ಹರಿಹರನ್. ಆ ವಿಷಯಕ್ಕೆ ಶೃತಿಗೆ ಸಂತೋಷವಿದೆ. ಹೆಮ್ಮೆಯೂ ಇದೆ. ಸುದೀಪ್ ಜೊತೆ ನಟಿಸಿರುವ ಶೃತಿ, ಅದನ್ನು ಖುಷಿಯಿಂದಲೇ ಹೇಳಿಕೊಳ್ತಾರೆ. ಇದೆಲ್ಲದರ ಜೊತೆಗೆ ಅವರನ್ನು ಅದೊಂದು ಬೇಸರ ಕಾಡುತ್ತಲೇ ಇದೆ.

    ನಾನು ಸುಹಾಸಿನಿ ಮೇಡಂ ಜೊತೆ 4 ಚಿತ್ರಗಳಲ್ಲಿ ಜೊತೆಯಾಗಿದ್ದೇನೆ. ಅಂಬಿ.. 4ನೇ ಸಿನಿಮಾ. ಆದರೆ, ಅವರ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶವೇ ನನಗೆ ಸಿಕ್ಕಿಲ್ಲ ಎಂಬ ಬೇಸರ ಕಾಡುತ್ತಲೇ ಇದೆ ಎಂದು ಹೇಳಿಕೊಂಡಿದ್ದಾರೆ ಶೃತಿ ಹರಿಹರನ್. ಮುಂದಿನ ದಿನಗಳಲ್ಲಿ ಆ ಕನಸು ಕೂಡಾ ಈಡೇರಲಿದೆ ಎಂಬ ಆಸೆ ಅವರಲ್ಲಿದೆ.

    ಸುದೀಪ್, ಜಾಕ್‍ಮಂಜು ನಿರ್ಮಾಣದ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನವಿದ್ದು, ಇದೇ ವಾರ ತೆರೆಗೆ ಬರುತ್ತಿದೆ. 

  • ಅಂಬಿ.. ಟೀಂಗೆ ಸುದೀಪ್, ಶೃತಿ

    sudeep sruthi hariharan in ambi ninge vaisaito

    ರೆಬಲ್‍ಸ್ಟಾರ್ ಅಂಬರೀಷ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಅಂಬಿ ನಿಂಗೆ ವಯಸ್ಸಾಯ್ತೋ. ಕಿಚ್ಚ ಕ್ರಿಯೇಷನ್ಸ್‍ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾಗೆ ಈಗ ಸುದೀಪ್ ಮತ್ತು ಶೃತಿ ಹರಿಹರನ್ ಎಂಟ್ರಿ ಕೊಟ್ಟಿದ್ದಾರೆ.

    ಚಿತ್ರದಲ್ಲಿ ಸುದೀಪ್, ಯೌವ್ವನದ ಅಂಬರೀಷ್ ಆಗಿ ಕಾಣಿಸಿಕೊಳ್ತಾರೆ. ಜೋಡಿಯಾಗಿ ಶೃತಿ ಹರಿಹರನ್ ಇರ್ತಾರೆ. ಇಬ್ಬರ ಪಾತ್ರಗಳ ಶೂಟಿಂಗ್ ಶುರುವಾಗಿದೆ. ತಮಿಳಿನ ಪವರ್ ಪಾಂಡಿ ಚಿತ್ರದ ರೀಮೇಕ್ ಆಗಿರುವ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನವಿದೆ. 

     

  • ಅಂಬಿಗೆ ವಯಸ್ಸಾಗುವ ಮುನ್ನ.. ಹಳ್ಳಿ ಹೈದ ಕಿಚ್ಚ.. 

    ambi ninge vaisaitho shooting image

    ಅಂಬಿ ನಿಂಗೆ ವಯಸ್ಸಾಯ್ತೊ... ಬಹಳ ವರ್ಷಗಳ ನಂತರ ಅಂಬರೀಷ್ ಪೋಷಕ ಪಾತ್ರ ಬಿಟ್ಟು, ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ. ಅಂಬರೀಷ್ ಅವರನ್ನು ಹೀರೋ ಮಾಡಿರುವ ಜಾಕ್ ಮಂಜು, ಯಂಗ್ ಅಂಬರೀಷ್ ಪಾತ್ರದಲ್ಲಿ ತೋರಿಸಿರೋದು ಸುದೀಪ್ ಅವರನ್ನ. 

    ಚಿತ್ರದಲ್ಲಿ ಸುದೀಪ್ ಹೇಗೆ ಕಾಣ್ತಾರೆ ಅನ್ನೋಕ್ಕೆ ಇನ್ನೊಂದು ಫೋಟೋ ಹೊರಗೆ ಬಿಟ್ಟಿದ್ದಾರೆ. ಅದರಲ್ಲಿ ಸುದೀಪ್ ಮತ್ತು ಶೃತಿ ಹರಿಹರನ್, ಅಪ್ಪಟ ಹಳ್ಳಿಯ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಮತ್ತು ಶೃತಿ, ಇಬ್ಬರಿಗೂ ಇಂಥಾದ್ದೊಂದು ಲುಕ್ ಹೊಸದೇ.. ಹೀಗಾಗಿಯೇ ಪೋಸ್ಟರ್‍ನಲ್ಲಿ ಫ್ರೆಶ್‍ನೆಸ್ ಇದೆ.

    ಗುರುದತ್ ನಿರ್ದೇಶನದ ಚಿತ್ರದಲ್ಲಿ 2 ಕಥೆಗಳಿವೆ. ಒಂದು 70-80ರ ದಶಕದ ಕಥೆ. ಇನ್ನೊಂದು ಈಗಿನ ಕಥೆ. 70ರ ದಶಕಕ್ಕೆ ಸುದೀಪ್, ಈಗಿನ ಕಾಲಕ್ಕೆ ಅಂಬರೀಷ್. ಸ್ಸೋ.. ಅಂಬಿಗೆ ವಯಸ್ಸಾಗುವ ಮುನ್ನ.. ಸುಹಾಸಿನಿಗೂ ವಯಸ್ಸಾಗೋ ಮೊದಲು, ತೆರೆ ಮೇಲೆ ಕಾಣಿಸಿಕೊಳ್ಳೋದು ಸುದೀಪ್ ಮತ್ತು ಶೃತಿ. ಚಿತ್ರ ಆಗಸ್ಟ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  • ಅಬ್ಬಾ.. ಶೃತೀನೂ ಹೆದರಿಸ್ತಾರಂತೆ..!

    sruthi hariharan in horror comedy

    ಶೃತಿ ಹರಿಹರನ್. ಸದಾ ನಗುಮೊಗದಲ್ಲಿಯೇ ಕಾಣಿಸಿಕೊಳ್ಳುವ ಚೆಲುವೆ. ಈ ಚೆಲುವೆ ಈಗ ಹೆದರಿಸೋಕೂ ಬರ್ತಿದ್ದಾರಂತೆ. ಶ್ರೀಕಂಠ ಚಿತ್ರ ಖ್ಯಾತಿಯ ಮಂಜು ಸ್ವರಾಜ್ ನಿರ್ದೇಶನದ ಹೊಸ ಚಿತ್ರದಲ್ಲಿ ಶೃತಿ ನಟಿಸುತ್ತಿದ್ದಾರೆ. ಅದು ಹಾರರ್ ಕಾಮಿಡಿ ಸಿನಿಮಾ.

    ನಾನು ಒಂದು ಹಾರರ್ ಸಿನಿಮಾ ಮಾಡ್ತೇನೆ ಅನ್ನೋ ಕಲ್ಪನೆಯೂ ನನಗೆ ಇರಲಿಲ್ಲ. ಆದರೆ, ಸ್ಕ್ರಿಪ್ಟ್ ನೋಡಿದಾಗ ಬಹಳ ಇಷ್ಟವಾಯ್ತು. ಹಾರರ್ ಜೊತೆಗೆ ಕಾಮಿಡಿಯೂ ಇದೆ. ನನಗೂ ಇದೊಂದು ವಿಭಿನ್ನ ಅನುಭವ ಎಂದು ಹೇಳಿಕೊಂಡಿದ್ದಾರೆ ಶೃತಿ.

    ಒಂದು ಕಡೆ ಅಂಬಿ ನಿಂಗ್ ವಯಸ್ಸಾಯ್ತೋ ಎಂಬ ಕಮರ್ಷಿಯಲ್, ಮತ್ತೊಂದೆಡೆ ನಾತಿಚರಾಮಿಯಂತ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸುತ್ತಿರುವ ಶೃತಿ, ಸದಾ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಕಲಾವಿದೆ. 

  • ಅರ್ಜುನ್ ನನಗೆ 34 ವರ್ಷಗಳಿಂದ ಗೊತ್ತು - ಖುಷ್‍ಬೂ

    khushbhu stands with arjun sarja

    ಶೃತಿ ಹರಿಹರನ್ ಮೀಟೂ ಆರೋಪದ ನಂತರ, ಅರ್ಜುನ್ ಸರ್ಜಾ ಪರ ನಿಲ್ಲುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಅದರಲ್ಲೂ ಅರ್ಜುನ್ ಸರ್ಜಾ ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ಖುಷ್‍ಬೂ, ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ.

    `ನಾನು ಚಿತ್ರರಂಗಕ್ಕೆ ಬಂದಿದ್ದೇ ಅರ್ಜುನ್ ಸರ್ಜಾ ಚಿತ್ರದ ಮೂಲಕ. ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಅವರು ಸಹನಟರಷ್ಟೇ ಅಲ್ಲ, ನನ್ನ ಅತ್ಯುತ್ತಮ ಗೆಳೆಯರೂ ಹೌದು. ಅವರು ನನಗೆ 34 ವರ್ಷಗಳಿಂದ ಗೊತ್ತು. ಅವರ ಮೇಲೆ ಆರೋಪ ಮಾಡಿದ್ದಾರೆ ಎಂದರೆ ನಂಬೋಕೂ ಆಗುತ್ತಿಲ್ಲ. ಎಷ್ಟೋ ಬಾರಿ ಅವರೇ ನನಗೆ ರಕ್ಷಿಸಿದ್ದಾರೆ. ಈ ಸಮಯದಲ್ಲಿ ಅರ್ಜುನ್ ಜೊತೆ ನಾನು ನಿಲ್ಲಲೇಬೇಕು. ಶೃತಿಗೆ ನಾನು ಹೇಳೋದಿಷ್ಟೆ, ನೀವು ಈ ಮೂಲಕ ಒಬ್ಬ ವ್ಯಕ್ತಿಯನ್ನು ದೂಷಿಸುತ್ತಿಲ್ಲ. ನಿಮ್ಮ ಈ ಆರೋಪದಿಂದ ಆತನ ಪತ್ನಿ, ತಾಯಿ, ಇಬ್ಬರು ಹೆಣ್ಣು ಮಕ್ಕಳು.. ಎಲ್ಲರೂ ನೋವಲ್ಲಿ ಮುಳುಗಿದ್ದಾರೆ. ಅರ್ಜುನ್ ಇಷ್ಟು ವರ್ಷ ಗಳಿಸಿದ್ದ ಹೆಸರು, ಸಾಧನೆ ಎಲ್ಲದಕ್ಕೂ ಮಸಿ ಬಳಿದಿದ್ದೀರಿ. ಒಬ್ಬ ಸ್ನೇಹಿತೆಯಾಗಿ ನಾನು ಅರ್ಜುನ್ ಪರ ನಿಲ್ಲುತ್ತೇನೆ'.

    ಮೀಟೂ ಅಭಿಯಾನ ಶುರುವಾದಾಗ, ರವಿಚಂದ್ರನ್ ಬಗ್ಗೆ ಯಾರೋ ಒಬ್ಬರು ಕೆಟ್ಟದಾಗಿ ಕೇಳಿದ್ದಕ್ಕೆ ರವಿಚಂದ್ರನ್ ವ್ಯಕ್ತಿತ್ವವನ್ನೇ ಕಟ್ಟಿಕೊಟ್ಟಿದ್ದ ಖುಷ್‍ಬೂ, ಈ ಬಾರಿ ಅರ್ಜುನ್ ಸರ್ಜಾ ಬೆನ್ನಿಗೂ ನಿಂತಿದ್ದಾರೆ.

  • ಆ 5 ಸಾಕ್ಷಿಗಳ ಕೈಲಿದೆ ಸರ್ಜಾ ಭವಿಷ್ಯ - ಯಾವ ಸೆಕ್ಷನ್ ಏನೇನು..?

    5 eye witnesses to decide arjun sarja's fate

    ಶೃತಿ ಹರಿಹರನ್ ದೂರು ಕೊಟ್ಟಿದ್ದಾರೆ. 4 ಘಟನೆಗಳನ್ನು ವಿವರವಾಗಿ ಹೇಳಿದ್ದಾರೆ. ಸ್ಥಳದ ಮಹಜರು ಕೂಡಾ ಆಗಿದೆ. ಅರ್ಜುನ್ ಸರ್ಜಾ ಅರೆಸ್ಟ್ ಆಗ್ತಾರಾ..? ಈಗಲೇ ಹೇಳೋಕೆ ಸಾಧ್ಯವಿಲ್ಲ. ಮಹಿಳಾ ಸಬ್‍ಇನ್ಸ್‍ಪೆಕ್ಟರ್ ರೇಣುಕಾ ಸಮ್ಮುಖದಲ್ಲಿ ಕೇಸ್ ದಾಖಲಾಗಿದೆ. ಅರೆಸ್ಟ್ ಮಾಡುತ್ತೇವೆ ಎಂದು ಈಗಲೇ ಹೇಳುವುದು ಆತುರದ ನಿರ್ಧಾರವಾಗುತ್ತದೆ. ವಿಚಾರಣೆ ಈಗಷ್ಟೇ ಆರಂಭವಾಗಿದೆ ಎಂದಿದ್ದಾರೆ ಡಿಸಿಪಿ ದೇವರಾಜ್.

    ಶೃತಿ ಹರಿಹರನ್ ದೂರಿನಲ್ಲಿರುವ ಮಾಹಿತಿ ಪ್ರಕಾರ, ಶೃತಿಯವರ ಸ್ಟಾಫ್ ಬೋರೇಗೌಡ, ಕಿರಣ್, ಅಸೋಸಿಯೇಟ್ ಡೈರೆಕ್ಟರುಗಳಾದ ಭರತ್ ನೀಲಕಂಠ, ಮೋನಿಕಾ ಹಾಗೂ ಶೃತಿ ಸ್ನೇಹಿತೆ ಯಶಸ್ವಿನಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಾರೆ. ಈ ಐದೂ ಜನ ಸರ್ಜಾ ವಿರುದ್ಧವಾಗಿ, ಪ್ರತ್ಯಕ್ಷದರ್ಶಿಗಳಾಗಿ ಹೇಳಿಕೆ ನೀಡಿದರೆ, ಸರ್ಜಾ ಬಂಧನಕ್ಕೊಳಗಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

    ಈ ಐವರೂ ಸಾಕ್ಷಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸರ್ಜಾ ವಿರುದ್ಧ 4 ಸೆಕ್ಷನ್‍ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

    ಐಪಿಸಿ 354 : ಮಹಿಳಾ ಗೌರವಕ್ಕೆ ಧಕ್ಕೆ. 3 ವರ್ಷಗಳ ಜೈಲು ಶಿಕ್ಷ ಮತ್ತು ದಂಡ ವಿಧಿಸಬಹುದು

    ಐಪಿಸಿ 354ಎ : ಲೈಂಗಿಕ ಕಿರುಕುಳ ನೀಡಿದ್ದಕ್ಕೆ 1 ವರ್ಷ ಜೈಲು ಶಿಕ್ಷೆ ವಿಧಿಸಬಹುದು

    ಐಪಿಸಿ 506 : ಜೀವ ಬೆದರಿಕೆ ಹಾಕಿದ್ದಕ್ಕೆ 2 ವರ್ಷ ಜೈಲು ಮತ್ತು ದಂಡ ಎರಡನ್ನೂ ವಿಧಿಸಬಹುದು

    ಐಪಿಸಿ 509 : ಸನ್ನೆ ಮೂಲಕ ಲೈಂಗಿಕ ಕಿರುಕುಳ ನೀಡಿರುವುದು. ಇದರಲ್ಲಿ ಶಿಕ್ಷೆ, ದಂಡ ಪ್ರಮಾಣ, ನ್ಯಾಯಾಧೀಶರ ವಿವೇಚನೆಗೆ ಸೇರಿರುತ್ತೆ.

    ಇಷ್ಟೆಲ್ಲ ಆಗಿಯೂ, ದೂರು ಕೊಟ್ಟಿರುವಂತೆ ಈ ಸೆಕ್ಷನ್‍ಗಳಡಿಯಲ್ಲಿ ಕೇಸು ದಾಖಲಾಗಿದೆಯೇ ಹೊರತು, ಯಾವುದೂ ಸಾಬೀತಾಗಿಲ್ಲ. ಈ ಕುರಿತು ಪೊಲೀಸರು ವಿಚಾರಣೆ ಮಾಡಿ, ಚಾರ್ಜ್‍ಶೀಟ್ ಸಲ್ಲಿಸಬೇಕು. ಈ ವೇಳೆ ಸರ್ಜಾ ಅವರನ್ನು ಬಂಧಿಸಿಯೇ ವಿಚಾರಣೆ ನಡೆಸಬೇಕು ಎಂದು ಕಂಡುಬಂದರೆ ಕೋರ್ಟ್ ಅನುಮತಿ ಪಡೆಯಬೇಕಾಗಬಹುದು. ಅರೆಸ್ಟ್ ಮಾಡದೆಯೂ ವಿಚಾರಣೆ ನಡೆಸಬಹುದು. ಪೊಲೀಸರ ವಿಚಾರಣೆಗೆ ಅರ್ಜುನ್ ಸರ್ಜಾ ಸಂಪೂರ್ಣ ಸಹಕಾರ ನೀಡಿದರೆ ಅರೆಸ್ಟ್ ಮಾಡುವ ಸಾಧ್ಯತೆ ಇರುವುದಿಲ್ಲ.

  • ಆ ದಿನ ಸೆಟ್‍ನಲ್ಲಿ ನಡೆದಿದ್ದು ಏನು..? - ವಿಸ್ಮಯ ಟೀಂ ಹೇಳಿದ್ದು

    vismaya team image

    ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ ಮಾಡಿದ್ದರೆ, ಅರ್ಜುನ್ ಸರ್ಜಾ ಪರ ಇಡೀ ವಿಸ್ಮಯ ಚಿತ್ರತಂಡವೇ ನಿಂತಿದೆ. ವಿಸ್ಮಯ ಚಿತ್ರದ ನಿರ್ಮಾಪಕ, ನಿರ್ದೇಶಕ, ಕ್ಯಾಮೆರಾಮನ್, ಕ್ಯಾರವಾನ್ ಉಸ್ತುವಾರಿ ಎಲ್ಲರೂ ಅರ್ಜುನ್ ಸರ್ಜಾ ಪರ ಹೇಳಿಕೆ ನೀಡಿದ್ದಾರೆ.

    ಅರುಣ್ ವೈದ್ಯನಾಥನ್, ವಿಸ್ಮಯ ಚಿತ್ರದ ನಿರ್ದೇಶಕ : ಶೃತಿ ಹರಿಹರನ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳುವವರೆಗೆ ನಮಗೆ ಏನೊಂದೂ ಗೊತ್ತಿರಲಿಲ್ಲ. ಶೃತಿ ಹೇಳಿಕೆ ನಮಗೂ ಶಾಕ್ ಆಗಿತ್ತು. ಚಿತ್ರೀಕರಣದ ವೇಳೆಯಲ್ಲಿ ಶೃತಿ ಹೇಳಿದಂತಹ ಯಾವುದೇ ಘಟನೆಗಳು ನಡೆದಿಲ್ಲ. ಅಷ್ಟೇ ಅಲ್ಲ, ಶೃತಿ ಎಲ್ಲ ರಿಹರ್ಸಲ್‍ಗಳಲ್ಲೂ ಪಾಲ್ಗೊಂಡಿದ್ದರು.

    ಉಮೇಶ್, ವಿಸ್ಮಯ ಚಿತ್ರದ ನಿರ್ಮಾಪಕ : ನನಗೆ ಗೊತ್ತಿರುವಂತೆ ಸಿನಿಮಾ ಚಿತ್ರೀಕರಣ ವೇಳೆ ಇಂತಹ ಯಾವುದೇ ಘಟನೆ ನಡೆದಿಲ್ಲ. ಶೃತಿ ಮಾಡ್ತಿರೋದೆಲ್ಲ ನಾಟಕ. ಶೃತಿ ಮಾಡಿರುವ ಆರೋಪಗಳಲ್ಲಿ ಒಂದೂ ಸತ್ಯವಿಲ್ಲ.

    ಅನಿರೀತ್, ವಿಸ್ಮಯ ಚಿತ್ರದ ಪ್ರೊಡಕ್ಷನ್ ಕಂಟ್ರೋಲರ್ : ಶೂಟಿಂಗ್ ನಡೆಯುತ್ತಿದ್ದ ಅಷ್ಟೂ ದಿನ ಶೃತಿ ಚೆನ್ನಾಗಿಯೇ ಇದ್ದರು. ಈಗ ಯಾಕೆ ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಇದು ಇಡೀ ವಿಸ್ಮಯ ಚಿತ್ರ ತಂಡಕ್ಕೇ ಮಾಡುತ್ತಿರುವ ಅವಮಾನ.

    ಅರವಿಂದ ಕೃಷ್ಣನ್, ವಿಸ್ಮಯ ಚಿತ್ರದ ಛಾಯಾಗ್ರಾಹಗ : ಶೃತಿ ಅವರ ಆರೋಪ ಕೇಳಿ ನನಗೆ ನಿಜಕ್ಕೂ ಶಾಕ್ ಆಯ್ತು. ಶೂಟಿಂಗ್ ವೇಳೆ ಇಡೀ ಟೀಂ ಪ್ರೊಫೆಷನಲ್ಲಾಗಿತ್ತು. ಜನ ತಪ್ಪಾಗಿ ಕಲ್ಪಿಸಿಕೊಳ್ಳೋದು ಬೇಡ. ಅಂತಹ ಯಾವುದೇ ಘಟನೆ ನಡೆದಿಲ್ಲ.

  • ಆ ದಿನಗಳು ಚೇತನ್.. ಏನದು 9 ಲಕ್ಷದ ಕಥೆ..?

    is there any link behind arjun sarja and  sruthi hariharan me too story

    ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರ ಹಿಂದೆ ಪಿತೂರಿ ಇದೆಯಾ..? ಅಂಥಾದ್ದೊಂದು ಆರೋಪ ಮಾಡಿರುವುದು ಅರ್ಜುನ್ ಸರ್ಜಾ ಅವರ ಆಪ್ತರೂ ಆಗಿರುವ ಉದ್ಯಮಿ ಪ್ರಶಾಂತ್ ಸಂಬರಗಿ ಹಾಗೂ ನಿರ್ಮಾಪಕ ಮುನಿರತ್ನ. ಅದು ಪ್ರೇಮ ಬರಹ ಚಿತ್ರದ ವೇಳೆಯಲ್ಲಾದ ಘಟನೆ.

    ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾರನ್ನು ಪ್ರೇಮ ಬರಹ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆ ಚಿತ್ರಕ್ಕೆ ಮೊದಲು ನಾಯಕರಾಗಿ ಆಯ್ಕೆಯಾಗಿದ್ದವರು ಆ ದಿನಗಳು ಚೇತನ್. ಆಗ ಚೇತನ್‍ಗೆ ಅರ್ಜುನ್ ಸರ್ಜಾ 10 ಲಕ್ಷ ಅಡ್ವಾನ್ಸ್ ಕೂಡಾ ಕೊಟ್ಟಿದ್ದರು. ನಂತರ ಬೇರೆ ಬೇರೆ ಕಾರಣಗಳಿಂದಾಗಿ ಚೇತನ್‍ರನ್ನು ಚಿತ್ರದಿಂದ ಕೈಬಿಟ್ಟಿದ್ದರು. ಹಾಗೆ ಅವಕಾಶ ಕೈ ತಪ್ಪಿದ್ದಕ್ಕೆ ನಿಮಗೆ ತಕ್ಕ ಪಾಠ ಕಲಿಸುವೆ ಎಂದು ಮೆಸೇಜ್ ಮಾಡಿದ್ದರು ಚೇತನ್. ಈಗ ಶೃತಿ ಆರೋಪದ ಹಿಂದೆ ಕೆಲಸ ಮಾಡುತ್ತಿರುವುದು ಪ್ರೇಮ ಬರಹ ಚಿತ್ರದಿಂದ ಕೈ ಬಿಟ್ಟಿದ್ದು ಎಂದಿದ್ದಾರೆ ಪ್ರಶಾಂತ್ ಸಂಬರಗಿ ಹಾಗೂ ಮುನಿರತ್ನ.

    ಈ ಬಗ್ಗೆ ಚೇತನ್ ಹೇಳೋದೇ ಬೇರೆ. ಅರ್ಜುನ್ ಸರ್ಜಾ ಅಡ್ವಾನ್ಸ್ ಕೊಟ್ಟಿದ್ದರು ಅನ್ನೋದನ್ನು ಅವರು ಒಪ್ಪಿದ್ದಾರೆ. 10 ಲಕ್ಷ ಅಲ್ಲ,  9 ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದರು. ಅವರು ವಾಪಸ್ ಕೇಳಿಲ್ಲ. ನೋಟಿಸ್ ಕೂಡಾ ಕೊಟ್ಟಿಲ್ಲ. ಶೋಷಣೆಗೊಳಗಾಗುತ್ತಿರುವವರ ಪರ ನಾನಿದ್ದೇನೆ ಎಂದಿದ್ದಾರೆ ಚೇತನ್.

    ಸಿನಿಮಾದಿಂದ ಹೊರಬಂದ ಮೇಲೆ, ಅಡ್ವಾನ್ಸ್ ಪಡೆದುಕೊಂಡಿದ್ದ ಹಣವನ್ನು ಕೇಳದೇ ಹೋದರೆ ಕೊಡಬಾರದಾ..? ಏನೋ.. ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ.

  • ಆದ್ಯಾ ಇದ್ದಾಳೋ.. ಇಲ್ಲವೋ.. ಅದೇ ಸಸ್ಪೆನ್ಸ್..!

    aadhya suspense continues

    ಆದ್ಯಾ, ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾ. ಈ ಚಿತ್ರದಲ್ಲಿ ಆದ್ಯಾ ಎಂಬುದು ಮಗುವಿನ ಹೆಸರು.ಆ ಮಗು ಇದೆಯೋ.. ಇಲ್ಲವೋ.. ಎನ್ನುವುದೇ ಸಸ್ಪೆನ್ಸ್. ಹೌದು, ಇಂಥಾದ್ದೊಂದು ವಿಭಿನ್ನ ಕಲ್ಪನೆಯ ಚಿತ್ರಕ್ಕೆ ರಕ್ತಮಾಂಸ ತುಂಬಿ ತೆರೆಗೆ ತಂದಿದ್ದಾರೆ ಚೈತನ್ಯ.

    ಚಿರಂಜೀವಿ ಸರ್ಜಾ ಇಲ್ಲಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲೇಜ್ ಸ್ಟೂಡೆಂಟ್ ಆಗಿ ಮತ್ತು ಌಕ್ಷನ್ ಹೀರೋ ಆಗಿ. ಶ್ರುತಿ ಹರಿಹರನ್ ಅಚ್ಚರಿಯಾದರೆ, ಸಂಗೀತಾ ಭಟ್ ಅವರ ಪಾತ್ರ ಹಲವು ಮಜಲುಗಳಲ್ಲಿ ಓಪನ್ ಆಗುತ್ತಾ ಹೋಗುತ್ತೆ. ಇದು ಥ್ರಿಲ್ಲರ್ ಸಿನಿಮಾ. ಆದರೆ, ಭಯ, ರಕ್ತಪಾತ ಇರೋದಿಲ್ಲ ಅನ್ನೋದು ಕೆ.ಎಂ.ಚೈತನ್ಯ ಭರವಸೆ.

  • ಐಶ್ವರ್ಯಾ ಸರ್ಜಾ ಕೇಳಿದ ಸಿಡಿಲಿನಂತಾ ಪ್ರಶ್ನೆಗಳೇನು..?

    aishwarya sarja asks few questions to sruthi hariharan

    ಶೃತಿ ಹರಿಹರನ್, ಅಜುನ್ ಸರ್ಜಾ ಮೇಲಿನ ಆರೋಪ ಕುರಿತಂತೆ ಐಶ್ವರ್ಯ ಸರ್ಜಾ, ತಮ್ಮ ತಂದೆಯ ಬೆಂಬಲಕ್ಕೆ ನಿಂತಿರೋದು ಗೊತ್ತಿರೋದೇ. ಈಗ.. ಶೃತಿ ಹರಿಹರನ್ ಅವರ ದೂರಿನ ನಂತರ ಐಶ್ವರ್ಯಾ ಸರ್ಜಾ ಕೆಲವೊಂದು ಪ್ರಶ್ನೆಗಳನ್ನೆತ್ತಿದ್ದಾರೆ.

    ಶೃತಿ ಹರಿಹರನ್ ಅವರ ಬೆಂಬಲಕ್ಕೆ ನಿಂತಿರುವ ನಟ ಚೇತನ್, ಪ್ರೇಮಬರಹ ಚಿತ್ರಕ್ಕೆ ಮೊದಲು ಹೀರೋ ಆಗಿ ಆಯ್ಕೆಯಾಗಿದ್ದವರು. ಅವರ ಜೊತೆ ನಾನು ಫೋಟೋಶೂಟ್‍ನಲ್ಲಿ ಭಾಗವಹಿಸಿದ್ದೆ. ಅವರೂ ಕೂಡಾ ಆಗ ನನ್ನ ಜೊತೆ, ನನ್ನ ಬೆನ್ನು, ಸೊಂಟ ಮುಟ್ಟಿದ್ದಾರೆ. ಹೇಳಿ.. ನಾನು ಅದನ್ನು ಲೈಂಗಿಕ ಕಿರುಕುಳ ಎನ್ನಲೇ..?

    ಇದು ಶೃತಿಗೆ, ಸರ್ಜಾ ಪುತ್ರಿ ಕೇಳುತ್ತಿರೋ ಪ್ರಶ್ನೆ. ಇದೊಂದು ಪಕ್ಕಾ ಪ್ರೀಪ್ಲಾನ್ ಎನ್ನುತ್ತಿರುವ ಐಶ್ವರ್ಯಾ, ಸುಮಾರು 1 ತಿಂಗಳ ಹಿಂದಷ್ಟೇ ಶೃತಿ, ಟ್ವಿಟರ್‍ನಲ್ಲಿ ತಮ್ಮ ತಂದೆಯನ್ನು ಅನ್‍ಫಾಲೋ ಮಾಡಿದ್ದರು ಎಂಬ ವಿಷಯ ಬಹಿರಂಗಪಡಿಸಿದ್ದಾರೆ. ಅಂದರೆ, ಕಿರುಕುಳ ನೀಡುವಾಗಲೂ, ಸಿನಿಮಾ ಮುಗಿದ ಮೇಲೂ, ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ ಮೇಲೂ ಸರ್ಜಾರನ್ನು ಟ್ವಿಟರ್‍ನಲ್ಲಿ ಫಾಲೋ ಮಾಡುತ್ತಲೇ ಇದ್ದ ಶೃತಿ ಹರಿಹರನ್, ಅರ್ಜುನ್ ಸರ್ಜಾ ಹೆಸರು ಹೇಳುವುದಕ್ಕೆ 1 ತಿಂಗಳ ಮೊದಲು ಟ್ವಿಟರ್‍ನಲ್ಲಿ ಅನ್‍ಫಾಲೋ ಮಾಡಿದ್ದಾರೆ. 

    ಈಗ ಉತ್ತರಿಸಬೇಕಿರೋದು ಶೃತಿ ಹರಿಹರನ್.

  • ಒಂದ್ ಕಡೆ ದೆವ್ವ.. ಇನ್ನೊಂದ್ ಕಡೆ ಕಾಮಿಡಿ.. ನಗುವುದೋ.. ಹೆದರುವುದೋ ನೀವೇ ಹೇಳಿ.

    mane maratakkidhe is a fun filled horror comedy

    ಒಂದು ಕಡೆ ದೆವ್ವ. ಒಂದಲ್ಲ.. ಹಲವು ದೆವ್ವಗಳು. ಡಿಸೈನ್ ಡಿಸೈನ್ ದೆವ್ವಗಳು. ಮತ್ತೊಂದು ಕಡೆ ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್ ಗೌಡ ಮತ್ತು ಕುರಿ ಪ್ರತಾಪ್. ಒಬ್ಬರಿಗಂತ ಒಬ್ಬರು ಕಾಮಿಡಿ ರಾಕ್ಷಸರು. ಇವರೆಲ್ಲರೂ ಒಟ್ಟಿಗೇ ಸೇರಿದಾಗ ನಗುವುದೋ.. ಹೆದರುವುದೋ ನೀವೇ ಹೇಳಿ..

    ಮಂಜು ಮಾಂಡವ್ಯ ನಿರ್ದೇಶನದ ಚಿತ್ರಕ್ಕೆ ಎಸ್.ವಿ. ಬಾಬು ನಿರ್ಮಾಪಕ. ಶೃತಿ ಹರಿಹರನ್ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಕಾರುಣ್ಯ ರಾಮ್ ಕೂಡಾ ಹೆದರಿಸಲು ಸಿದ್ಧರಾಗಿದ್ದಾರೆ. ಅದೂ ನಾಗವಲ್ಲಿ ಗೆಟಪ್ಪಿನಲ್ಲಿ.

  • ಕಾಮುಕ ನಿರ್ಮಾಪಕರ ಹಾವಳಿ - ಸಂಜನಾ, ಜಗ್ಗೇಶ್ ಹೇಳಿದ್ದು ಹೀಗೆ

    sruthi hariharan's casting couch controversy

    ನಟಿ ಶೃತಿ ಹರಿಹರನ್ ಸಿಡಿಸಿರುವ ಬಾಂಬ್ ಜೋರಾಗಿಯೇ ಸದ್ದು ಮಾಡ್ತಿದೆ. ಕನ್ನಡ ಹಾಗೂ ತಮಿಳು ಚಿತ್ರರಂಗದ ಕೆಲವು ನಿರ್ಮಾಪಕರು, ಮಂಚಕ್ಕೆ ಕರೆದಿದ್ದನ್ನು ಬಹಿರಂಗಪಡಿಸಿದ್ದ ಶೃತಿ ಹರಿಹರನ್, ಹೆಸರನ್ನು ಹೇಳಿರಲಿಲ್ಲ. 

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್, ಒಬ್ಬ ಹಿರಿಯ ನಟನಾಗಿ ಹೇಳುತ್ತಿದ್ದೇನೆ. ಅಡ್ಡ ಗೋಡೆಯ ಮೇಲೆ ದೀಪವನ್ನಿಟ್ಟು ಗೊಂದಲ ಸೃಷ್ಟಿಸಬೇಡಿ. ನಮ್ಮ ಉದ್ಯಮಕ್ಕೆ ತನ್ನದೇ ಆದ ಘನತೆ ಇದೆ. ಅದನ್ನು ಹಾಳು ಮಾಡಬೇಡಿ. ಯಾರಾದರೂ ತೊಂದರೆ ಕೊಟ್ಟಿದ್ದರೆ, ಹೆಸರು ಹೇಳಿ. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರ ಜೊತೆಯಲ್ಲೂ ಮಾತನಾಡಿದ್ದೇನೆ ಎಂದಿದ್ದಾರೆ. ಶೀಘ್ರದಲ್ಲೇ ಸಭೆ ಕರೆಯೋಣ, ತಪ್ಪಿತಸ್ಥರಿಗೆ ಬುದ್ದಿ ಕಲಿಸೋಣ ಅನ್ನೋದು ಜಗ್ಗೇಶ್ ನೀಡಿರುವ ಭರವಸೆ. 

    ಇನ್ನು ನಟಿ ಸಂಜನಾ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವ ಹೊಸಬರು ಇಂಥ ಕೆಲಸ ಮಾಡ್ತಾರೆ. ಚಿತ್ರರಂಗದಲ್ಲಿರುವ ಫಿಲಂ ಚೇಂಬರ್ ಸದಸ್ಯರಲ್ಲದವರು ಇಂತಹ ಕೆಲಸ ಮಾಡ್ತಾರೆ. ನಟಿಯರಿಂದ ಇನ್ನೂ ಏನೇನನ್ನೋ ಬಯಸುತ್ತಾರೆ. ಆದರೆ ಯಾರೋ ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ಚಿತ್ರರಂಗದಲ್ಲಿರುವ ಎಲ್ಲರೂ ಅಂಥವರೇ ಎಂದು ದೂಷಿಸುವ ಅಗತ್ಯವಿಲ್ಲ ಎಂದಿದ್ದಾರೆ ಸಂಜನಾ.

    Related Articles :-

    ಚಾನ್ಸ್ ಗಾಗಿ ಹಾಸಿಗೆ - ವಿವಾದಕ್ಕೆ ಶ್ರುತಿ ಹೇಳಿದ್ದೇನು..?

    ಶ್ರುತಿ ಹರಿಹರನ್ ಬಿಚ್ಚಿಟ್ಟ ಕಾಮುಕ ನಿರ್ಮಾಪಕರ ಕಥೆ

  • ಕಿಚ್ಚನಲ್ಲಿ ಮಗುವನ್ನು ಕಂಡರಂತೆ ಶೃತಿ ಹರಿಹರನ್

    sruthi thanks sudeep

    ಕಿಚ್ಚ ಸುದೀಪ್ ಹೊರಗಿನಿಂದ ನೋಡುವವರಿಗೆ ಸದಾ ಸೀರಿಯಸ್ಸಾಗಿರುವಂತೆ ಕಾಣಿಸ್ತಾರೆ. ಅಫ್‍ಕೋರ್ಸ್, ವೃತ್ತಿಯ ವಿಚಾರಕ್ಕೆ ಬಂದರೆ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಸೀರಿಯಸ್. ಆದರೆ ಅವರ ಜೊತೆ ಕೆಲಸ ಮಾಡಿದವರಿಗೆ ಸ್ನೇಹಮಯಿ ಸುದೀಪ್ ಇಷ್ಟವಾಗಿಬಿಡ್ತಾರೆ. ಶೃತಿ ಹರಿಹರನ್‍ಗೆ ಆಗಿರುವುದು ಕೂಡಾ ಇಂಥದ್ದೇ ಅನುಭವ.

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಸುದೀಪ್‍ಗೆ ಜೋಡಿಯಾಗಿರುವ ಶೃತಿ ಹರಿಹರನ್, ಸುದೀಪ್ ಅವರಲ್ಲಿ ಮಗುವಿನ ಮನಸ್ಸು ಕಂಡಿದ್ದಾರಂತೆ. ನಿಮ್ಮೊಂದಿಗೆ ಕೆಲಸ ಮಾಡಿದ್ದು ಸುಂದರ ಅನುಭವ. ನಿಮ್ಮ ಆಹಾರ, ಸಂಗೀತ ಮತ್ತು ಸಿನಿಮಾ ಅಭಿರುಚಿ ಇಷ್ಟವಾಯ್ತು. ಎಲ್ಲಕ್ಕಿಂತ ಇಷ್ಟವಾಗಿದ್ದು ನಿಮ್ಮೊಳಗೆ ಈಗಲೂ ಜೀವಂತವಾಗಿರುವ ಮಗುತನ ಎಂದು ಹೇಳಿದ್ದಾರೆ ಶೃತಿ.

    ನೀವು ನನ್ನ ಸೀರಿಯಸ್ ಇಮೇಜ್‍ನ್ನೇ ಡ್ಯಾಮೇಜ್ ಮಾಡುತ್ತಿದ್ದೀರಿ ಎಂದಿರುವ ಕಿಚ್ಚ, ನಿಮ್ಮೊಂದಿಗೆ ಕೆಲಸ ಮಾಡಿದ್ದು ನನಗೂ ಮರೆಯಲಾಗದ ಅನುಭವ ಎಂದು ಹೇಳಿದ್ದಾರೆ.