` cm siddaramaiah - chitraloka.com | Kannada Movie News, Reviews | Image

cm siddaramaiah

  • Shalini IAS Launched By Chief Minister

    shalini ias launch

    Chief Minister Siddaramaiah on Saturday evening launched 'Shalini IAS' by sounding the clap for the film. The film is based on senior IAS officer Shalini Rajaneesh.

    Director Nikhil Manju who recently got a National award for his film 'Reservation' is directing the film on senior IAS officer Shalini Rajneesh. The film is not exactly based on the life of Shalini Rajneesh, but based on the book written by Shalini and Rajneesh . Based on the book, Nikhil Manju has written the screenplay and dialogues of the film.

    Actress Sonu Gowda is playing the role of Shalini Rajneesh in the film, while Roger Narayan is seen in the role of Rajaneesh. Sameer Kulkarni is the music director, while V Manohar has written the lyrics.

    The launch was held at Gandhi Bhavan in Bangalore and many celebrities from the film industry as well as from politics were present at the occasion.

    Related Articles :-

    A Film On IAS Officer Shalini Rajneesh

  • Siddaramaiah To Act In Summer Holidays

    siddaramaiah to act in summer holidyas

    Chief Minister Siddaramaiah will act in the Kannada film Summer Holidays directed by Kavita Lankesh. He will act in the role of a chief Minister in the film. This will be his first attempt at acting in Films. He has not yet given the dates when he will act but has agreed to it according to reports quoting Kavita Lankesh.

    Many politicians have acted in small roles in Kannada Films before including former CM the late Ramakrishna Hegde. Summer Holidays is a children's film. In the story the children in the film approach the CM to get help to a tribal woman.

    Related Articles :-

    ಚಿತ್ರರಂಗಕ್ಕೆ ಲಂಕೇಶ್ ಮೊಮ್ಮಕ್ಕಳ ಪ್ರವೇಶ

  • Siddaramaiah Urges People To Watch Kannada Films

    cm siddaramaiah image

    The Chief Minister on Thursday urged the people of Karnataka to watch more Kannada films and support the Kannada film industry. Chief Minister Siddaramaiah was talking during the inauguration of the 09th BIFFES in front of Bangalore.

    'Cinema is a powerful medium. The people must use this medium for awareness and good messages. Even the people must watch more Kannada films and support the industry. Earlier, there were very few films and artistes. But now the industry is churning out 180 films per year. Out of those films, how many quality films gets released is a matter to think' said the Chief Minister.

    Before that, KCA president S V Rajendra Singh Babu and KFCC chairman Sa Ra Govindu urged the Chief Minister to resolve the multiplex issue, for which the Chief Minister said a meeting will be called soon, where the multiplex issue would be discussed in detail.

    Related Articles :-

    9th Bangalore International Film Festival Inaugurated

    Stage Set For The Inauguration Of 9th BIFFES

    KANFIDA To Stay Out Of BIFFES

    CM Siddaramaiah To Inaugurate 9th BIFFES

  • The Belgium Connection

    c m siddaramaiah h d kumarswamy image

    Recently there were reports that HD Kumaraswamy left for Belgium to visit the shooting of his son Nikhil Kumar's film Jaguar. It created a minor storm as there were serious political developments and the former chief minister was going to a film shooting at that time.

    Now current Chief Minister Siddaramaiah is going to Belgium to see his son Rakesh who is hospitalised there. While Nikhil is making his film debut, Kumarswamy was a producer even before he became a politician. Rakesh is however not new to films.

    He wanted to be an actor and started acting in the lead role in Nanage Neenu Ninage Naanu 15 years ago. But the film was shelved after the producer asked Suddaramaiah to fund it. Siddaramaiah said no to fund his son's film career. Now Siddaramaiah is going to Belgium to see his son, just like Kumaraswamy did, but for a different reason and not for films.

  • Will CM Sign Rs 200 Order Tomorrow?

    cm siddaramaiah

    The suspense over the Rs 200 ticket prices is likely to end on Tuesday. The cap on ticket prices was set to be implemented from last week itself but did not come through.

    There were many speculations about what went wrong. In the meantime there were three days of government holidays and the CM went on a foreign visit. He is back in Bengaluru and is expected to resolve whatever the problem is sources said.

    There were rumors that there will be differential pricing allowed for various categories of multiplex tickets. But there is no clarity on the issue. But sources insist that the cap on prices will be made tomorrow. Hope it becomes true.

    Related Articles :-

    Rs 200 Ticket Will Help Multiplexes - KM Veeresh Writes

    Multiplex Ticket Price Capped At Rs 200

    KFCC asks Govt to Cap Multiplex Prices at Rs 150

    CM Promises To Solve Multiplex Ticket Price Issue

    Multiplexes Ticket For Rs 120. Will Govt Accept?

  • ಇವರಿಗೆ ಇಷ್ಟು ಸಿಕ್ಕಿರಲಿಲ್ಲ ಎಂಬುದೇ ಅಚ್ಚರಿ..!

    rajyotsava awards surprise

    ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿ 62 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ರಾಜಶೇಖರ್ ಎಂಬುವರಿಗೆ 2ನೇ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ ಎಂಬುದನ್ನು ಬಿಟ್ಟರೆ, ಅಪಸ್ವರಗಳ ಸಂಖ್ಯೆ ಕಡಿಮೆ ಎಂದೇ ಹೇಳಬೇಕು.

    ಚಿತ್ರರಂಗಕ್ಕೆ ಈ ಬಾರಿಯ ರಾಜ್ಯೋತ್ಸವ ಅಚ್ಚರಿಯನ್ನಂತೂ ತಂದಿದೆ. ಏಕೆಂದರೆ, ಪಟ್ಟಿಯಲ್ಲಿರುವುದು ಯೇಸುದಾಸ್, ಮುಖ್ಯಮಂತ್ರಿ ಚಂದ್ರು, ಕಾಂಚನಾ ಹಾಗೂ ಹಾಸನ ರಘು ಅವರ ಹೆಸರು. ಹೆಸರು ನೋಡಿದವರಿಗೆ ಅಚ್ಚರಿ ಕಾದಿತ್ತು. ಇವರಿಗೆ ಇಷ್ಟು ದಿನ ರಾಜ್ಯೋತ್ಸವ ಪುರಸ್ಕಾರ ಸಿಕ್ಕಿರಲಿಲ್ಲವಾ..? ಎಂದು ಅಭಿಮಾನಿಗಳು ಹುಬ್ಬೇರಿಸಿದ್ದರು.

    ಒಂದಂತೂ ಸತ್ಯ. ಈ ಸಾಧಕರು ಈ ಬಾರಿ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದ್ದಾರೆ. ಕೆಲವು ಅಪಸ್ವರಗಳನ್ನು ಹೊರತುಪಡಿಸಿದರೆ, ಬಹುತೇಕರ ಆಯ್ಕೆ ಸಮಾಧಾನಕರವಾಗಿದೆ.

  • ಎಂಎಲ್‍ಎ ಪ್ರಥಮ್ ಚಿತ್ರಕ್ಕೆ ಫೈರ್‍ಬ್ರಾಂಡ್ ಸಿಎಂ - Exclusive

    mla movie

    ಎಂಎಲ್‍ಎ ಪ್ರಥಮ್. ಇದು ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಅಭಿನಯಿಸುತ್ತಿರುವ ನೂತನ ಚಿತ್ರ. ಹಾಗೆಂದು ಚಿತ್ರದ ಶೂಟಿಂಗ್ ಪೂರ್ತಿ ಮುಗಿದಿಲ್ಲ.

    ಚಿತ್ರದಲ್ಲಿ ಪ್ರಥಮ್ ಎಂಎಲ್‍ಎ ಅಷ್ಟೇ ಅಲ್ಲ, ನಗರಾಭಿವೃದ್ಧಿ ಸಚಿವರಾಗಿಯೂ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೀವು ಈಗಾಗಲೇ ಚಿತ್ರಲೋಕದಲ್ಲಿ ಓದಿದ್ದೀರಿ. ಆದರೆ, ಸಿಎಂ ಯಾರಾಗಿರ್ತಾರೆ..? ಈ ಪ್ರಶ್ನೆಯನ್ನು ಪ್ರಥಮ್ ಮುಂದಿಟ್ಟರೆ, ರಾಜ್ಯ ರಾಜಕಾರಣದಲ್ಲಿರುವ ಅತ್ಯಂತ ಪ್ರಮುಖ ನಾಯಕರೊಬ್ಬರು ಚಿತ್ರದಲ್ಲಿ ಸಿಎಂ ಆಗಿ ನಟಿಸುತ್ತಿದ್ದಾರೆ ಎನ್ನುತ್ತಾರೆ. ಯಾರವರು ಎಂದರೆ ಗುಟ್ಟು ಬಿಟ್ಟುಕೊಡಲ್ಲ.

    ಚಿತ್ರಲೋಕಕ್ಕೆ ಲಭ್ಯವಾದ ಮಾಹಿತಿಗಳ ಪ್ರಕಾರ, ಸಿಎಂ ಆಗಿ ನಟಿಸುತ್ತಿರುವುದು ರಾಜ್ಯದ ಒಬ್ಬ ಫೈರ್‍ಬ್ರಾಂಡ್ ಲೀಡರ್. ಅವರು ಬಿಜೆಪಿಯಲ್ಲೂ ಇರಬಹುದು. ಕಾಂಗ್ರೆಸ್‍ನಲ್ಲೂ ಇರಬಹುದು, ಜೆಡಿಎಸ್‍ನಲ್ಲೂ ಇರಬಹುದು.

    ಆ ಬೆಂಕಿ ಲೀಡರ್ ಯಾರು..?

  • ಏಪ್ರಿಲ್ 24ಕ್ಕೆ ರಾಜ್ಯ ಪ್ರಶಸ್ತಿ ಪ್ರದಾನ ಅನುಮಾನ

    will state awards be held on april 24th

    ಕರ್ನಾಟಕ ರಾಜ್ಯ ಸರ್ಕಾರ ಡಾ.ರಾಜ್‍ಕುಮಾರ್ ಅವರ ಜನ್ಮದಿನದಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡುವುದಾಗಿ ಘೋಷಿಸಿತ್ತು. ಯಾವ್ಯಾವಾಗಲೋ.. ಮನಸ್ಸಿಗೆ ಬಂದಾಗ ಪ್ರಶಸ್ತಿ ಪ್ರದಾನ ಮಾಡುವ ಬದಲು, ಅದಕ್ಕೊಂದು ದಿನ ನಿಗದಿ ಮಾಡಿದ್ದ ಸರ್ಕಾರದ ನಿರ್ಧಾರ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. 

    ಆದರೆ, ಈ ಬಾರಿ ಪ್ರಶಸ್ತಿ ಪ್ರದಾನ ನಡೆಯುವ ಸಾಧ್ಯತೆ ಕಾಣುತ್ತಿಲ್ಲ. ಏಕೆಂದರೆ, ಈ ಬಾರಿ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲೀಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಏಪ್ರಿಲ್ 24ಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯುವುದು ಅನುಮಾನ.

    ಚಲನಚಿತ್ರ ಪ್ರಶಸ್ತಿ ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತಾ..? ಗೊತ್ತಿಲ್ಲ. ಸರ್ಕಾರ ಕೂಡಾ ಈ ಬಗ್ಗೆ ಗಮನ ಹರಿಸುತ್ತಿದೆ. ಸತ್ಸಂಪ್ರದಾಯ ಒಂದೇ ವರ್ಷಕ್ಕೆ ನಿಲ್ಲಬಾರದಲ್ಲವೇ..

  • ಕಿಚ್ಚನ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ

    cm sidaramaiah, sudeep image

    ಇತ್ತೀಚೆಗೆ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ವಿಷ್ನು ಸಮಾಧಿ ಅಭಿವೃದ್ಧಿಯ ಕುರಿತು ಮಾತನಾಡಿದ್ದರು. ವಿಷ್ಣು ಅವರ ಸಮಾಧಿ ಸ್ಥಳವನ್ನು ಪುಣ್ಯಭೂಮಿ ಎಂದು ಘೋಷಿಸಿ, ಅಭಿವೃದ್ಧಿಯ ಜವಾಬ್ದಾರಿಯನ್ನು ಅಭಿಮಾನಿಗಳಿಗೇ ಕೊಟ್ಟರೂ ನಿರ್ವಹಿಸುತ್ತೇವೆ ಎಂದು ಹೇಳಿದ್ದರು. ವಿಷ್ಣು ಸ್ಮಾರಕ ನಿರ್ಮಾಣದ ಯೋಜನೆಗೆ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದ ಸುದೀಪ್, ವಿಷ್ಣು ಅವರ ಸಮಾಧಿ ಸ್ಥಳ ಅಭಿವೃದ್ಧಿಯಾಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು.

    ಸುದೀಪ್ ಅವರ ಮನವಿಗೆ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಅಪರ ಕಾರ್ಯದರ್ಶಿ ಡಾ.ಸಿಂಧೆ ಭೀಮಸೇನ ರಾವ್ ಅವರಿಗೆ ಈ ಕುರಿತು ಪರಿಶೀಲಿಸುವಂತೆ ಸೂಚನೆ ಕೊಟ್ಟಿದ್ದಾರೆ. ಡಾ.ವಿಷ್ಣುವರ್ಧನ ಪುಣ್ಯಭೂಮಿ ಅಭಿವೃದ್ಧಿ ಕುರಿತು ಸಿಎಂ ಸೂಚನೆ ನೀಡಿದ್ದು, ತಮ್ಮ ಅರ್ಜಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಸ್ವತಃ ಭೀಮಸೇನ ರಾವ್ ಸುದೀಪ್ ಅವರಿಗೆ ಪತ್ರ ಬರೆದಿದ್ದಾರೆ. 

    ತುರ್ತಾಗಿ ಕ್ರಮ ತೆಗೆದುಕೊಂಡ ಮುಖ್ಯಮಂತ್ರಿಗಳಿಗೆ ಸುದೀಪ್ ಧನ್ಯವಾದ ಅರ್ಪಿಸಿದ್ದಾರೆ.ವಿಷ್ಣು ಅಭಿಮಾನಿಗಳಾದ ನಮಗೆಲ್ಲ ಇದು ಅವಿಸ್ಮರಣೀಯ ಕ್ಷಣ ಎಂದು ಹೇಳಿಕೊಂಡಿದ್ದಾರೆ ಸುದೀಪ್.

  • ದಾನಮ್ಮಳಿಗಾಗಿ ಮುಖ್ಯಮಂತ್ರಿ ಭೇಟಿ ಮಾಡಿದ ಪ್ರಥಮ್

    pratham meets cm

    ಬಿಗ್‍ಬಾಸ್ ಖ್ಯಾತಿಯ ಪ್ರಥಮ್, ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಇತ್ತೀಚೆಗೆ ಒಳ್ಳೆಯ ಕಾರಣಗಳಿಂದಲೇ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿರುವುದು ವಿಶೇಷ. ವಿಜಯಪುರದಲ್ಲಿ ಸಾಮೂಹಿಕ ಅತ್ಯಾಚಾರಿಗಳ ಅಟ್ಟಹಾಸಕ್ಕೆ ಬಲಿಯಾದ ಪುಟ್ಟ ಬಾಲಕಿ ದಾನಮ್ಮನಿಗಾಗಿ. ಆಕೆಯ ಸಾವಿಗೆ ನ್ಯಾಯ ಕೊಡಿಸುವ ಸಲುವಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ದಾನಮ್ಮ ಕುಟುಂಬಕ್ಕೆ ನ್ಯಾಯ ಸಲ್ಲಿಸುವಂತೆ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಕೊಟ್ಟಿದ್ದಾರೆ.

    ಸಿದ್ದರಾಮಯ್ಯನವರಿಗೆ ಕೊಟ್ಟಿರುವ ಮನವಿ ಪತ್ರದಲ್ಲಿ ಪ್ರಥಮ್ ಅವರ ಬೇಡಿಕೆಗಳು ಇಷ್ಟೆ. 

    ದಾನಮ್ಮ ಕುಟುಂಬಕ್ಕೆ ಇನ್ನಷ್ಟು ಆರ್ಥಿಕ ನೆರವು ಒದಗಿಸಬೇಕು. ಅವರ ಕುಟುಂಬದ ಯಾರಾದರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕು. 

    ಅಪರಾಧಿಗಳು ಯಾವುದೇ ಕಾರಣಕ್ಕೂ ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.

    ಪ್ರಥಮ್ ಅವರಿಗೆ ಒಂದು ಹವ್ಯಾಸವಿದೆ. ಅವರು ಸಾಮಾನ್ಯವಾಗಿ ಯಾರೇ ಗಣ್ಯರನ್ನು ಭೇಟಿ ಮಾಡಿದರೂ, ಸೆಲ್ಫಿ ತೆಗೆದುಕೊಳ್ತಾರೆ. ಆದರೆ, ದಾನಮ್ಮ ವಿಚಾರಕ್ಕೆ ಸಿದ್ದರಾಮಯ್ಯರನ್ನು ಭೇಟಿ ಮಾಡಿದಾಗ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಅನ್ನಿಸಲಿಲ್ಲ ಎಂದಿದ್ದಾರೆ ಪ್ರಥಮ್. ಇನ್ನು ಪ್ರಥಮ್‍ಗೆ ಸಿದ್ದರಾಮಯ್ಯನವರ ಸರಳತೆ ಮತ್ತು ಕಳಕಳಿಯೂ ಇಷ್ಟವಾಗಿದೆಯಂತೆ. ಅವರ ಸಜ್ಜನಿಕೆಗೊಂದು ಸೆಲ್ಯೂಟ್ ಎಂದಿದ್ದಾರೆ ಪ್ರಥಮ್.

  • ದೇವ್ರಂಥ ಮನುಷ್ಯ ಸಿಎಂಗೇ ಇಷ್ಟವಾಗಿಬಿಡ್ತು..!

    cm siddaramaiah liked devarantha manushya

    ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಅಭಿನಯದ ಚಿತ್ರ ಚಿತ್ರಮಂದಿರಗಳಿಗೆ ಪ್ರವೇಶಿಸಿದೆ. ಪ್ರೇಕ್ಷಕರ ಅಭಿಪ್ರಾಯ ಕೇಳೋಕೂ ಮೊದಲೇ ಪ್ರಥಮ್ ಚಿತ್ರಕ್ಕೆ ಅತಿ ದೊಡ್ಡ ಮೆಚ್ಚುಗೆಯೊಂದು ಸಿಕ್ಕಿಬಿಟ್ಟಿದೆ. ಅದು ಸಿಎಂ ಸಿದ್ದರಾಮಯ್ಯನವರದ್ದು.

    ದೇವ್ರಂಥ ಮನುಷ್ಯ ಚಿತ್ರದ ಹಾಡು ಕೇಳಿರುವ ಸಿದ್ದರಾಮಯ್ಯ, ಚಿತ್ರದ  ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಹಾಡು ಕೇಳುತ್ತಿರುವ, ತಾಳ ಹಾಕುತ್ತಿರುವ ವಿಡಿಯೋವನ್ನು ಪ್ರಥಮ್ ಬಿಡುಗಡೆ ಮಾಡಿದ್ದಾರೆ. ದೇವ್ರಂಥ ಮನುಷ್ಯ ಸಂಜೆ ಮೇಲೆ ಸಿಗ್ಬೇಡಿ ಅನ್ನೋದನ್ನೇ ಟ್ಯಾಗ್‍ಲೈನ್ ಮಾಡಿಕೊಂಡಿರುವ ಚಿತ್ರದ ಥೀಮ್ ವಿಶೇಷವಾಗಿದೆ. ತಪ್ಪು ಮಾಡೋದು ಸಹಜ. ಆದರೆ, ತಪ್ಪುಗಳೇ ಅತಿಯಾಗಿಬಿಟ್ಟರೆ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ.

    ಎಚ್.ಸಿ.ಮಂಜುನಾಥ್, ತಿಮ್ಮರಾಜು ನಿರ್ಮಾಣದ ಚಿತ್ರಕ್ಕೆ ಕಿರಣ್ ಶೆಟ್ಟಿ ನಿರ್ದೇಶನವಿದೆ. ಶ್ರುತಿ ಹಾಗೂ ವೈಷ್ಣವಿ ಚಿತ್ರದ ನಾಯಕಿಯರು. ಸುಚೇಂದ್ರ ಪ್ರಸಾದ್, ತಬಲಾನಾಣಿ, ಕಿರಿಕ್ ಕೀರ್ತಿ ಕೂಡಾ ಚಿತ್ರದಲ್ಲಿದ್ದಾರೆ. 

    ಈಗಾಗಲೇ ಚಿತ್ರದ ಪುಟ್ಟ ಟ್ರೇಲರ್‍ಗಳು, ಡೈಲಾಗ್‍ಗಳು ಹಾಡುಗಳು ಚಿತ್ರರಸಿಕರ ಮನ ಗೆದ್ದಿವೆ. ಇನ್ನು ಥಿಯೇಟರ್‍ನಲ್ಲಿ ಜನ ಮೆಚ್ಚುವುದಷ್ಟೇ ಬಾಕಿ.

  • ಫಿಲಂ ಸಿಟಿಗೆ 500 ಕೋಟಿ. ಈ ಬಾರಿ ಬೆಂಗಳೂರಲ್ಲಂತೆ..!

    though cm announced 200 crore

    ಚಿತ್ರರಂಗದ ಬಹು ದಿನಗಳೇ ಏನು.. ಹಲವು ವರ್ಷಗಳ.. ದಶಕಗಳ ಬೇಡಿಕೆ ಫಿಲಂ ಸಿಟಿ ನಿರ್ಮಾಣ. ವಿ.ರವಿಚಂದ್ರನ್ ಅವರಿಂದ ಪ್ರಬಲವಾಗಿ ಶುರುವಾದ ಬೇಡಿಕೆ ಇದು. ಅಫ್ಕೋರ್ಸ್.. ಅದಕ್ಕೂ ಮೊದಲು ಹಲವರು ಪ್ರಸ್ತಾಪಿಸಿದ್ದರೂ.. ಅದಕ್ಕೊಂದು ಕಲ್ಪನೆ ಸಿಕ್ಕಿದ್ದು ರವಿಚಂದ್ರನ್ ಅವರ ನಂತರವೇ. ನಂತರ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ನಟ ಯಶ್ ಕೂಡಾ ಸಿಎಂ ಯಡಿಯೂರಪ್ಪನವರಿಗೆ ವೇದಿಕೆಯಲ್ಲೇ ಬೇಡಿಕೆಯಿಟ್ಟಿದ್ದರು. ಇಷ್ಟೆಲ್ಲ ಬೇಡಿಕೆ ಇಟ್ಟ ಮೇಲೆ.. ಫಿಲಂ ಸಿಟಿ ಬರೋದು ಪಕ್ಕಾ ಎನ್ನುವ ಭಾವನೆಯೇನೋ ಇತ್ತು. ಆ ಭಾವನೆಗೆ ಈಗ 500 ಕೋಟಿ ಅನುದಾನ ಘೋಷಿಸಿದ್ದಾರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

    ಭಾವನೆಗೆ 500 ಕೋಟಿ ಎನ್ನುವುದಕ್ಕೆ ಕಾರಣವೂ ಇದೆ. ಏಕೆಂದರೆ ಈ ಬಾರಿ ಫಿಲಂ ಸಿಟಿ ಪ್ರಸ್ತಾಪವಾಗಿರೋದು ಬೆಂಗಳೂರಿನಲ್ಲಿ. ಆದರೆ, ಬೆಂಗಳೂರಿನಲ್ಲಿ ಫಿಲಂ ಸಿಟಿ ಎಲ್ಲಿ ತಲೆ ಎತ್ತಲಿದೆ ಎನ್ನುವುದು ಬಜೆಟ್ ಘೋಷಣೆ ನಂತರವೂ ಸ್ಪಷ್ಟವಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಲೇ ಇದೆ ಫಿಲಂ ಸಿಟಿ.

    ಸಿದ್ದರಾಮಯ್ಯ ಸರ್ಕಾರ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸುವುದಾಗಿ ಹೇಳಿ ಅನುದಾನವನ್ನೂ ಘೋಷಿಸಿತ್ತು. ಆದರೆ.. ಫಲಿತಾಂಶ ಸಿಗಲಿಲ್ಲ. ನಂತರ ಎಚ್‌.ಡಿ ಕುಮಾರಸ್ವಾಮಿ ಮೈಸೂರಿನಿಂದ ರಾಮನಗರಕ್ಕೆ ಫಿಲಂ ಸಿಟಿ ಸ್ಥಳಾಂತರಿಸಿದ್ದರು. ಒನ್ಸ್ ಎಗೇಯ್ನ್ ಏನೂ ಆಗಲಿಲ್ಲ. ಈಗ ಯಡಿಯೂರಪ್ಪ ಸರ್ಕಾರ ರಾಮನಗರದಿಂದ ಬೆಂಗಳೂರಿಗೆ ಫಿಲಂ ಸಿಟಿಯನ್ನು ತಂದಿದೆ.

    ಸದ್ಯಕ್ಕೆ ಫಿಲಂ ಸಿಟಿಗೆ 500 ಕೋಟಿ ಎಂದು ಘೋಷಿಸಲಾಗಿದೆಯಾದರೂ.. ಎಲ್ಲಿ ಮಾಡಬೇಕು.. ಎಷ್ಟು ಎಕರೆ ಜಾಗ.. ಯಾವಾಗ ಕಾರ್ಯಾರಂಭ.. ಯಾವುದೂ ಸ್ಪಷ್ಟವಿಲ್ಲ. ಎಲ್ಲಿ ಎನ್ನುವುದೇ ಸ್ಪಷ್ಟತೆಯಿಲ್ಲದಿರುವಾಗ ಭೂಮಿ ಪರಿಶೀಲನೆಯ ಪ್ರಸ್ತಾಪವೇ ಬರೋದಿಲ್ಲ. ಅಲ್ಲಿಗೆ 500 ಕೋಟಿ ಕೇವಲ ಘೋಷಣೆಯಲ್ಲಷ್ಟೇ ಉಳಿಯಲಿದೆ. ಮುಂದಿನ ವರ್ಷ.. ಅದರ ಮುಂದಿನ ವರ್ಷ.. ಮತ್ತದರ ಮುಂದಿನ ವರ್ಷ.. ಫಿಲಂ ಸಿಟಿ ಎನ್ನುವುದು ಕನ್ನಡ ಚಿತ್ರರಂಗಕ್ಕೆ ಇಷ್ಟು ದಶಕಗಳ ನಂತರವೂ ಕನಸು ಮಾತ್ರ.

  • ಬನಾರಸ್ ನೋಡಿ ಮೆಚ್ಚಿಕೊಂಡ ಸಿದ್ದರಾಮಯ್ಯ

    ಬನಾರಸ್ ನೋಡಿ ಮೆಚ್ಚಿಕೊಂಡ ಸಿದ್ದರಾಮಯ್ಯ

    ಇದೇ ವಾರ ರಿಲೀಸ್ ಆಗಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಬನಾರಸ್. ಜಯತೀರ್ಥ ನಿರ್ದೇಶನದ ಚಿತ್ರ ಮೊದಲ ದಿನವೇ ಭರ್ಜರಿ 3 ಕೋಟಿ ಗಳಿಕೆ ಮಾಡಿತ್ತು. ಚಿತ್ರತಂಡವೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿತ್ತು. ಆಕ್ಟಿಂಗ್‍ನಲ್ಲಿ ಭರವಸೆ ಹುಟ್ಟಿಸಿದ್ದ ಝೈದ್ ಖಾನ್ ಬಗ್ಗೆ ಚಿತ್ರರಂಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರರಂಗಕ್ಕೆ ವೆಲ್‍ಕಂ ಎಂದು ಸ್ವಾಗತ ಕೋರಿದ್ದರು. ಝೈದ್ ಖಾನ್, ಆಶಿಕಾ ರಂಗನಾಥ್ ಅಭಿನಯ, ಜಯತೀರ್ಥ ನಿರ್ದೇಶನ ಮೆಚ್ಚುಗೆ ಗಳಿಸಿತ್ತು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗೆ ನಾನು ಸಿನಿಮಾ ನೋಡುತ್ತಿಲ್ಲ. ಜಮೀರ್ ಮಗ ಮಾಡಿದ್ದಾನೆ ಎಂದು ಹೇಳಿ ಕರೆದುತಂದರು. ಜಮೀರ್  ಮಗ ಝೈದ್ ಖಾನ್ ನಟನೆ ನೋಡಿದರೆ ಹೊಸಬ ಅನ್ನಿಸಲ್ಲ. ಆಶಿಕಾ ರಂಗನಾಥ್ ನಿಜಕ್ಕೂ ಚೆನ್ನಾಗಿ ಮಾಡಿದ್ದಾರೆ. ಜಯತೀರ್ಥ ಕಥೆಯನ್ನು ಹೇಳುವ ರೀತಿ, ಡೈರೆಕ್ಷನ್ ಸೊಗಸಾಗಿ ಮೂಡಿ ಬಂದಿದೆ. ಟೋಟಲ್ಲಿ ಇಟ್ಸ್ ಎ ಗುಡ್ ಮೂವಿ ಎಂದಿದ್ದಾರೆ ಸಿದ್ದು. ಸಿದ್ದು ಅವರ ಜೊತೆ ಜಮೀರ್ ಅಹ್ಮದ್ ಕೂಡಾ ಸಿನಿಮಾ ನೋಡಿ ಮಗನಿಗೆ ಶಹಬ್ಬಾಸ್ ಹೇಳಿದರು. ಅಪ್ಪ ಬಂದು ನನ್ನ ಸಿನಿಮಾ ನೋಡಿರುವುದು ಹಾಗೂ ಮೆಚ್ಚಿಕೊಂಡಿರೋದು ಸಿನಿಮಾ ನೂರು ಕೋಟಿ ಮಾಡಿದಷ್ಟೇ ಖುಷಿ ತಂದಿದೆ ಎಂದರು ಝೈದ್ ಖಾನ್. ಇಂದಿನಿಂದ ಝೈದ್ ಖಾನ್ ಸೇರಿದಂತೆ ಇಡೀ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ಮೂಲಗಳ ಪ್ರಕಾರ ಚಿತ್ರ 10 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. 

  • ಮೀನೂಟ ವಿವಾದಕ್ಕೆ ಚಿತ್ರರಂಗದವರು ಏನಂದ್ರು ಗೊತ್ತಾ..?

    fish politics

    ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ, ಮೀನು ತಿಂದು ಹೋಗಿದ್ದು ವಿವಾದವಾಗಿ ಹೋಗಿದೆ. ಪರ ವಿರೋಧ ಚರ್ಚೆಗಳೆರಡೂ ಬಿರುಸಾಗಿ ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಬೇಡರ ಕಣ್ಣಪ್ಪನ ಉದಾಹರಣೆ ನೀಡಿ ಸಮರ್ಥಿಸಿಕೊಂಡಿದ್ದಾರೆ. 

    ಚಿತ್ರರಂಗದಲ್ಲಿಯೂ ಕೆಲವರು ಸಿಎಂ ಮೀನೂಟ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ಬುಲೆಟ್ ಪ್ರಕಾಶ್, ಬೇಡರ ಕಣ್ಣಪ್ಪ ಶಿವನಿಗೆ ಕಣ್ಣು ಕೊಟ್ಟಿದ್ದ. ನೀವೂ ಕೊಟ್ಟುಬಿಡಿ ಎಂದು ಸಿಎಂ ಸಿದ್ದರಾಮಯ್ಯನವರನ್ನು ಕೆಣಕಿದ್ದಾರೆ. 

    ನಿರ್ದೇಶಕ ಎಂ.ಎಸ್. ರಮೇಶ್ ದೇವಸ್ಥಾನಕ್ಕೆ ಚಪ್ಪಲಿ ಹಾಕಿಕೊಂಡು ಬರಬೇಡಿ ಎಂದು ಕೂಡಾ ದೇವರು ಹೇಳಿಲ್ಲ. ಹಾಗಾಗಿ ನೀವೂ ಚಪ್ಪಲಿ ಹಾಕಿಕೊಂಡು ಹೋಗ್ತೀರಾ..? ಧರ್ಮಸ್ಥಳದಲ್ಲಿ ಪುರುಷರು ಮೈಮೇಲಿನ ಶರಟು ತೆಗೆದು ಹೋಗುತ್ತಾರೆ. ಅದನ್ನೇಕೆ ನೀವು ಪಾಲಿಸಿಲ್ಲ. ನೀವು ಗಂಡಸರಲ್ಲವೇ ಎಂದು ಕೆಣಕಿದ್ದಾರೆ.

  • ಮುಖ್ಯಮಂತ್ರಿಗಳೇ ಬರ್ತಾರೆ.. ನೋಡ್ತಾರೆ

    cm siddaramaiah raju kannada medium team

    ರಾಜು ಕನ್ನಡ ಮೀಡಿಯಂ ಚಿತ್ರ ಕನ್ನಡಿಗರಿಗೆ, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ, ಇಂಗ್ಲಿಷ್ ಬಾರದವರಿಗೆ ಸ್ಫೂರ್ತಿ ತುಂಬುವ ಹಾಗಿದೆ. ಕನ್ನಡ ಕಲಿತವರೆಲ್ಲ ದಡ್ಡರಲ್ಲ, ಇಂಗ್ಲಿಷ್ ಗೊತ್ತಿದ್ದವರೆಲ್ಲ ಅತಿಮಾನುಷರಲ್ಲ ಎಂಬ ಸಂದೇಶ ಇರುವ ಚಿತ್ರವನ್ನು ನೀವೊಮ್ಮೆ ನೋಡಬೇಕು. ನೋಡಿ ಪ್ರೋತ್ಸಾಹಿಸಬೇಕು.

    ರಾಜು ಕನ್ನಡ ಮೀಡಿಯಂ ಚಿತ್ರತಂಡ, ಖುದ್ದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ಮುಂದಿಟ್ಟಿರುವ ಬೇಡಿಕೆ ಇದು. ಅಂದಹಾಗೆ ಸಿದ್ದರಾಮಯ್ಯ ಕೂಡಾ ಕನ್ನಡಾಭಿಮಾನಿ. ಇನ್ನೂ ವಿಶೇಷವೆಂದರೆ, ರಾಜು ಕನ್ನಡ ಮೀಡಿಯಂ ಚಿತ್ರದ ಸಂದೇಶವನ್ನು ಸ್ವತಃ ಸಿದ್ದರಾಮಯ್ಯ ತಮ್ಮದೇ ಜೀವನದಲ್ಲಿ ಅಳವಡಿಸಿಕೊಂಡಿರುವವರು. ಕನ್ನಡದಲ್ಲಿ ಕಲಿತು, ಇಂಗ್ಲಿಷ್ ಗೊತ್ತಿಲ್ಲ ಎಂಬ ಕಾರಣಕ್ಕೆ ಕೀಳರಿಮೆಗೆ ಬೀಳಬೇಡಿ ಎಂದು ಹಲವು ಕಡೆ ಹೇಳಿರುವ ಸಿದ್ದರಾಮಯ್ಯ, ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. 

     

  • ಲೀಡರ್ ರಾಮಯ್ಯ ಸಿನಿಮಾದಲ್ಲಿ ಏನೇನೆಲ್ಲ ಇರುತ್ತೆ..?

    ಲೀಡರ್ ರಾಮಯ್ಯ ಸಿನಿಮಾದಲ್ಲಿ ಏನೇನೆಲ್ಲ ಇರುತ್ತೆ..?

    ಸಿದ್ದರಾಮಯ್ಯ, ರಾಜ್ಯದ ಕಲರ್`ಫುಲ್ ವ್ಯಕ್ತಿತ್ವದ ನಾಯಕ. ಸಿದ್ದು ಮಾತುಗಾರಿಕೆ, ಬಾಡಿ ಲಾಂಗ್ವೇಜ್ ವಿಶೇಷವಾಗಿರುತ್ತೆ. ಇದರ ಜೊತೆಗೆ ಎರಡು ಪಕ್ಷಗಳಲ್ಲಿ ದೊಡ್ಡ ಸ್ಥಾನಕ್ಕೆ ಏರಿದ ನಾಯಕನಾಗಿ, ಜನತಾ ಪರಿವಾರದಿಂದ ಶಾಸಕ, ಸಚಿವ, ಉಪಮುಖ್ಯಮಂತ್ರಿ, ಜೆಡಿಎಸ್‍ನಲ್ಲಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ಸೇರಿ ವಿರೋಧ ಪಕ್ಷದ ನಾಯಕ, ಸಿಎಂ ಆಗಿರುವ ಸಿದ್ದರಾಮಯ್ಯ ಅವರ ಜರ್ನಿ ರೋಚಕ. ಸಿದ್ದರಾಮಯ್ಯ ಅವರ ಬಯೋಪಿಕ್ ತೆರೆಮೇಲೆ ಬರಲಿದೆ ಎಂಬ ವಿಚಾರ ಈಚೆಗಷ್ಟೇ ಭಾರಿ ಸುದ್ದಿ ಮಾಡಿತ್ತು. ಇದೀಗ ಸಿದ್ದರಾಮಯ್ಯ ಬಯೋಪಿಕ್ ಬಗ್ಗೆ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಸಿದ್ದರಾಮಯ್ಯ ಅವರ ಬಯೋಪಿಕ್ಗೆ 'ಲೀಡರ್ ರಾಮಯ್ಯ' ಟೈಟಲ್ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗಲಿದ್ದು, ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

    ಶ್ರೀರಾಮ ನವಮಿ ಪ್ರಯುಕ್ತ ಸಿದ್ದರಾಮಯ್ಯ ಬಯೋಪಿಕ್ನ ಫಸ್ಟ್ ಲುಕ್ ಮತ್ತು ಟೈಟಲ್ ಘೋಷಣೆ ಮಾಡಲಾಗಿದೆ. ಸತ್ಯ ರತ್ನಂ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಈಗ ಭಾಗ ಒಂದು ಎಂದು ಸಿನಿಮಾ ಆರಂಭಿಸಿದ್ದೇವೆ. ಅದರಲ್ಲಿ ಸಿದ್ದರಾಮಯ್ಯ ಅವರ ಬಾಲ್ಯದ ದಿನಗಳು ಕಾಲೇಜು, ಲಾಯರ್ ಆಗಿದ್ದ ದಿನಗಳು, ನಂಜುಂಡಸ್ವಾಮಿ ಅವರ ಜೊತೆಗಿನ ಹೋರಾಟಗಳು, ರಾಜಕೀಯಕ್ಕೆ ಅವರು ಬಂದಿದ್ದು ಹೇಗೆ ಎಂಬುದರ ಕುರಿತಾಗಿ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ ಸತ್ಯರತ್ನಂ.

    ಅಂದಹಾಗೆ ಪಾರ್ಟ್ 01ನಲ್ಲಿ ವಿಜಯ್ ಸೇತುಪತಿ ಇರಲ್ಲ. ಭಾಗ-01ರಲ್ಲಿ ಯಂಗ್ ಆಗಿರುವ ನಟ ಬೇಕು. ಹೀಗಾಗಿ ಕನ್ನಡದ ಒಬ್ಬ ಯುವನಟ ಆ ಪಾತ್ರ ಮಾಡುತ್ತಾರೆ. ಎರಡನೇ ಭಾಗಕ್ಕೆ ಸೇತುಪತಿ ಬರಲಿದ್ದಾರೆ ಎಂದು ಹೇಳಿದ್ದಾರೆ ಡೈರೆಕ್ಟರ್ ಸತ್ಯರತ್ನಂ.

    ಅಂದಹಾಗೆ ಸಿದ್ದರಾಮಯ್ಯ ಅವರಿನ್ನೂ ಚಿತ್ರದ ಫಸ್ಟ್ ಲುಕ್, ಟೈಟಲ್ ಕಾರ್ಡ್ ನೋಡಿಲ್ಲವಂತೆ. ಆಕ್ಷನ್, ಲವ್, ತಂದೆ-ಮಗನ ಸೆಂಟಿಮೆಂಟ್ ಕೂಡಾ ಚಿತ್ರದಲ್ಲಿದೆಯಂತೆ.. ಸಿನಿಮಾ ರಿಲೀಸ್ ಆಗುವುದು ಅಕ್ಟೋಬರ್ 3ರಂದು ಸಿದ್ದರಾಮಯ್ಯ ಹುಟ್ಟುಹಬ್ಬದ ದಿನ.

     

  • ಸಲಗನಿಗೆ ಟಗರು ಶುಭ ಹಾರೈಕೆ

    ಸಲಗನಿಗೆ ಟಗರು ಶುಭ ಹಾರೈಕೆ

    ಸಲಗ. ಇದೇ ದಸರಾಗೆ ರಿಲೀಸ್ ಆಗುತ್ತಿರುವ ಬಹುನಿರೀಕ್ಷಿತ ಚಿತ್ರ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದ ಮೂಲಕ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರೂ ಆಗಿರುವ ಚಿತ್ರ. ಈ ಚಿತ್ರಕ್ಕೀಗ ಟಗರಿನ ಬಲ ಸಿಕ್ಕಿದೆ. ರಾಜ್ಯ ರಾಜಕೀಯದಲ್ಲಿ ಟಗರು ಎಂದೇ ಫೇಮಸ್ ಆಗಿರೋ ಕಾಂಗ್ರೆಸ್ ಲೀಡರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

    ದುನಿಯಾ ವಿಜಯ್ ಅವರೊಂದಿಗೆ ತಮ್ಮನ್ನು ಭೇಟಿ ಮಾಡಿದ ಚಿತ್ರತಂಡಕ್ಕೆ ಶುಭ ಕೋರಿರುವ ಸಿದ್ದರಾಮಯ್ಯ, ದುನಿಯಾ ವಿಜಯ್ ಅವರನ್ನು ಪ್ರತಿಭಾವಂತ ಕಲಾವಿದ ಎಂದು ಹೊಗಳಿದ್ದಾರೆ. ಅಕ್ಟೋಬರ್ 14ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾ ಸಕ್ಸಸ್ ಆಗಲಿ ಎಂದಿದ್ದಾರೆ. ಅಂದಹಾಗೆ ಸಲಗ ಚಿತ್ರದ ಮುಹೂರ್ತಕ್ಕೂ ಸಿದ್ದರಾಮಯ್ಯ ಬಂದು ಶುಭ ಕೋರಿದ್ದರು.

    ದುನಿಯಾ ವಿಜಯ್ ಜೊತೆ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ಸಲಗ. ಸಂಜನಾ ಆನಂದ್ ನಾಯಕಿ. ಚಿತ್ರ ಸೆನ್ಸಾರ್ ಮುಗಿಸಿದ್ದು, ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.

  • ಸಾಲ ಮನ್ನಾ ಮಾಡಿದ ಸಿದ್ದು, ಸಿನಿಮಾದಲ್ಲಿ ಏನು ಮಾಡಿದ್ದರು?

    siddaramaiah remembers his early days in film

    ರೈತರ 50 ಸಾವಿರ ರೂ.ವರೆಗಿನ ಕೃಷಿ ಸಾಲಮನ್ನಾ ಮಾಡಿರುವ ಸಿಎಂ ಸಿದ್ದರಾಮಯ್ಯ, ರೈತರ ಸಾಲ ವಸೂಲಿಗೆ ಹೋಗುವ ಬ್ಯಾಂಕ್ ಅಧಿಕಾರಿಗಳಿಗೆ ಚಳಿ ಬಿಡಿಸುತ್ತಿದ್ದಾರೆ. ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡದಂತೆ, ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಿದ್ದಾರೆ.

    ಆದರೆ, ಅದೇ ಸಿದ್ದರಾಮಯ್ಯ ಈ ಹಿಂದೆ, ರಾಜಕೀಯದ ಆರಂಭದ ದಿನಗಳಲ್ಲಿ ಸಿನಿಮಾವೊಂದರಲ್ಲಿ ನಟಿಸಿದ್ದರು. ಅದು ಲಂಕೇಶ್ ನಿರ್ದೇಶನದ ಎಲ್ಲಿಂದಲೋ ಬಂದವರು ಚಿತ್ರ. ಆ ಚಿತ್ರದಲ್ಲಿ ಸಿದ್ದರಾಮಯ್ಯ ಪುಟ್ಟದೊಂದು ಪಾತ್ರ ಮಾಡಿದ್ದಾರೆ. ಅದು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವ ಬ್ಯಾಂಕ್ ಅಧಿಕಾರಿಯ ಪಾತ್ರ. 

    ವೀಕೆಂಡ್ ವಿತ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ತಮ್ಮ ಎಲ್ಲಿಂದಲೋ ಬಂದವರು ಚಿತ್ರದ ನೆನಪು ಹಂಚಿಕೊಂಡರು. ವಿಶೇಷವೆಂದರೆ, ಎಂದೋ ನಟಿಸಿದ್ದ ಪಾತ್ರದ ನೆನಪೇ ಅವರಿಗೆ ಇರಲಿಲ್ಲ. ಅದನ್ನು ನೆನಪಿಸಿದವರು ಸುರೇಶ್ ಹೆಬ್ಳೀಕರ್.

     

     

     

  • ಸಿಎಂ ಸಿದ್ದರಾಮಯ್ಯ ಇಂದು ಸಿನಿಮಾ ಸಿದ್ದರಾಮಯ್ಯ

    CM Siddaramaiah today Cinema Siddaramaiah

    ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಂದಿನ ಸಂಪೂರ್ಣ ಪಯಣ ಬಣ್ಣದಲೋಕದಲ್ಲಿ. ಸಿದ್ದರಾಮಯ್ಯನವರ ಇಂದಿನ ಶೆಡ್ಯೂಲ್ ಹಾಗೆಯೇ ಇದೆ. ಸಿಎಂ ಸಿದ್ದರಾಮಯ್ಯ ತಮ್ಮ ಇಡೀ ದಿನದ ಕಾಲ್‍ಶೀಟ್‍ನ್ನು ಸಿನಿಮಾ ಮತ್ತು ಕಿರುತೆರೆಗೆ ನೀಡಿದ್ದಾರೆ.

    ಸಿದ್ದರಾಮಯ್ಯ ಮೊದಲು ಕಾಣಿಸಿಕೊಳ್ಳೋದು ಸಮ್ಮರ್ ಹಾಲಿಡೇಸ್ ಚಿತ್ರದ ಶೂಟಿಂಗ್‍ನಲ್ಲಿ. ಅದು ಕವಿತಾ ಲಂಕೇಶ್ ನಿರ್ದೇಶನದ, ಲಂಕೇಶ್ ಮೊಮ್ಮಕ್ಕಳೆಲ್ಲ ನಟಿಸುತ್ತಿರುವ ಚಿತ್ರ. ಅದರಲ್ಲಿರುವುದು ಒಂದೇ ಒಂದು ಲೈನ್ ಸಂಭಾಷಣೆಯಂತೆ.ಅದರಲ್ಲಿ ಸಿದ್ದರಾಮಯ್ಯ, ಸಿಎಂ ಸಿದ್ದರಾಮಯ್ಯನವರಾಗಿಯೇ ನಟಿಸಲಿದ್ದಾರೆ.

    ನಂತರ ಸಿದ್ದರಾಮಯ್ಯನವರ ಪಯಣ ಹೊರಡೋದು ಝೀ ಟೀವಿಯತ್ತ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಶೂಟಿಂಗ್‍ನಲ್ಲಿ ಪಾಲ್ಗೊಳ್ತಾರೆ ಸಿದ್ದರಾಮಯ್ಯ. ದೇವೇಗೌಡರ ನಂತರ ವೀಕೆಂಡ್ ವಿತ್ ರಮೇಶ್‍ನಲ್ಲಿ ಭಾಗವಹಿಸುತ್ತಿರುವ ಎರಡನೇ ರಾಜಕಾರಣಿ ಸಿದ್ದರಾಮಯ್ಯ. 

    ಅದೆಲ್ಲವೂ ಮುಗಿದ ಮೇಲೆ ಸಿದ್ದರಾಮಯ್ಯ ಬರೋದು ಪಂಟ ಸಿನಿಮಾ ನೋಡೋಕೆ. ಅದು ಸಿದ್ದರಾಮಯ್ಯನವರ ಆಪ್ತಮಿತ್ರ ಹೆಚ್.ಎಂ. ರೇವಣ್ಣ ಪುತ್ರ ಅನೂಪ್ ನಟಿಸಿರುವ ಸಿನಿಮಾ. ಪಂಟ ಸಿನಿಮಾದ ಪ್ರೀಮಿಯರ್ ಶೋದೊಂದಿಗೆ ಸಿದ್ದರಾಮಯ್ಯನವರ ಗುರುವಾರ ಕೊನೆಯಾಗಲಿದೆ.

    ಸಿದ್ದರಾಮಯ್ಯ ನಟನೆ ಇದೇ ಮೊದಲಲ್ಲ..!

    ಈ ಹಿಂದೆ ಲಂಕೇಶ್ ನಿರ್ದೇಶನದ ಎಲ್ಲಿಂದಲೋ ಬಂದವರು ಚಿತ್ರದಲ್ಲಿ ಪುಟ್ಟದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ ಸಿದ್ದರಾಮಯ್ಯ. ಈಗ ಕವಿತಾ ಲಂಕೇಶ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳೋ ಮೂಲಕ ಅಪ್ಪ-ಮಗಳ ಚಿತ್ರದಲ್ಲಿ ನಟಿಸಿದ ರಾಜಕಾರಣಿಯಾಗಲಿದ್ದಾರೆ ಸಿದ್ದರಾಮಯ್ಯ. 

    ನಟಿಸಲು ಸಿಎಂ ಷರತ್ತು

    ಚಿತ್ರದಲ್ಲಿ ಯಾವುದೇ ಅಸಭ್ಯ, ಅಶ್ಲೀಲ ಸಂಭಾಷಣೆ ಅಥವಾ ದೃಶ್ಯ ಇರಬಾರದು. ಹಿಂಸೆ ಇರಬಾರದು. ಇದು ಕವಿತಾ ಲಂಕೇಶ್‍ಗೆ ಸಿದ್ದರಾಮಯ್ಯ ಹಾಕಿರುವ ಷರತ್ತು.

    ಸಿದ್ದರಾಮಯ್ಯ ಡೈಲಾಗ್ ಏನು?

    ``ಶೌರ್ಯ ಪ್ರದರ್ಶಿಸಿರುವ ಮಕ್ಕಳಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡುತ್ತೇನೆ'' - ಇದು ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಸಿದ್ದರಾಮಯ್ಯ ಹೇಳುವ ಡೈಲಾಗ್. ಚಿತ್ರ ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ನಿರ್ಮಾಣವಾಗುತ್ತಿದೆ.

    Related Articles :-

    Siddaramaiah To Act In Summer Holidays

  • ಸಿದ್ದರಾಮಯ್ಯ ಆಗ್ತಾರಂತೆ ವಿಜಯ್ ಸೇತುಪತಿ

    ಸಿದ್ದರಾಮಯ್ಯ ಆಗ್ತಾರಂತೆ ವಿಜಯ್ ಸೇತುಪತಿ

    ಮಾಜಿ ಸಿಎಂ ಸಿದ್ದರಾಮಯ್ಯ. ರಾಜ್ಯ ರಾಜಕಾರಣ ನಳನಳಿಸುತ್ತಿರುವಾಗಲೇ.. ಎಲೆಕ್ಷನ್ ಹತ್ತಿರ ಬಂದಿರುವಾಗಲೇ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯನ್ನೇಕೆ ಸಿನಿಮಾ ಮಾಡುವ ಸುದ್ದಿ ಹೊರಬೀಳುತ್ತಿದೆ. ಮಾಜಿ ಸಚಿವ ಶಿವರಾಜ್ ತಂಗಡಗಿಯವರಿಗೆ ಇಂಥಾದ್ದೊಂದು ಆಲೋಚನೆ ಬಂದಿದ್ದೇ ತಡ ಐಡಿಯಾ  ಜಾರಿಗೆ ಮುಂದಾಗಿಬಿಟ್ಟಿದ್ದಾರೆ. ಎಲೆಕ್ಷನ್ ಕೂಡಾ ಹತ್ತಿರದಲ್ಲಿರೋದ್ರಿಂದ ನೀವು ಓಕೆ ಎಂದುಬಿಡಿ. ಮಿಕ್ಕಿದ್ದನ್ನು ನಾವು ನೋಡಿಕೊಳ್ತೇವೆ ಎಂದಿದ್ದಾರೆ. ಎಷ್ಟರಮಟ್ಟಿಗೆ ರೆಡಿಯಾಗಿದ್ದಾರೆಂದರೆ ಸಿದ್ದರಾಮಯ್ಯ ಪಾತ್ರಕ್ಕೆ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಅವರನ್ನೂ ಕಾಂಟ್ಯಾಕ್ಟ್ ಮಾಡಿದ್ದಾರೆ. ಯಾವುದೇ ಪಾತ್ರವಿರಲಿ, ಪಾತ್ರದೊಳಗೇ ತನ್ಮಯವಾಗುವ ಪರಕಾಯ ಪ್ರವೇಶ ಮಾಡುವ ವಿಜಯ್ ಸೇತುಪತಿಯವರೇ ಸಿದ್ದರಾಮಯ್ಯ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವುದು ಉತ್ತರ ಕರ್ನಾಟಕದ ಕಾಂಗ್ರೆಸ್ಸಿಗರ ನಂಬಿಕೆ. ಇದರ ಹಿಂದೆ ರಾಜಕೀಯ ಉದ್ದೇಶವೂ ಇರುವುದು ಸ್ಪಷ್ಟ.

    ಅಂದಹಾಗೆ ಮೊದಲು ಅಪ್ರೋಚ್ ಮಾಡಿದ್ದು ಸಿದ್ದರಾಮಯ್ಯ ಅವರನ್ನೇ ಅಂತೆ. ಅಂದರೆ ಈಗಿನ ಸಿದ್ದರಾಮಯ್ಯ ಅವರ ಪಾತ್ರವನ್ನು ಸ್ವತಃ ಸಿದ್ದರಾಮಯ್ಯ ಅವರೇ ಮಾಡಲಿ ಎನ್ನುವುದು ಅವರ ಬಯಕೆಯಾಗಿತ್ತು. ಕನಕಗಿರಿ ಕ್ಷೇತ್ರವರು ನನ್ನನ್ನೇ ನಟಿಸುವಂತೆ ಕೇಳಿದರು. ನನಗೆ ನಟನೆ ಬರಲ್ಲ. ಬೇಡ ಎಂದೆ. ಬಯೋಪಿಕ್ ಮಾಡುವ ಪ್ಲಾನ್ ತಂದಿದ್ದರು. ಸುಮ್ಮನೆ ಯಾಕೆ, 20 ಕೋಟಿ ವೇಸ್ಟ್ ಮಾಡುತ್ತೀರಿ. ಬೇಡ ಎಂದಿದ್ದೇನೆ ಎಂದು ಹೇಳಿದ್ದಾರೆ ಸಿದ್ದರಾಮಯ್ಯ.

    ಚಿತ್ರಕ್ಕೆ ಗಡ್ಡಧಾರಿ ಸಿದ್ದರಾಮಯ್ಯ ಎಂದು ಟೈಟಲ್ ಇಡುವ ಬಗ್ಗೆಯೂ ಚಿಂತನೆ ನಡೆದಿದೆ. ಜನವರಿಯಲ್ಲಿ ಮುಹೂರ್ತ ಮಾಡುವ ಯೋಚನೆಯೂ ಇದೆ. ಆದರೆ ಸಿದ್ದರಾಮಯ್ಯನವರೇ ಯೆಸ್ ಎಂದಿಲ್ಲ.