` arjun janya - chitraloka.com | Kannada Movie News, Reviews | Image

arjun janya

  • 100  ದಾಟಿದ ಅರ್ಜುನ್ ಜನ್ಯಾ, ಥ್ಯಾಂಕ್ಸ್ ಹೇಳಿದ್ದು ಕಿಚ್ಚನಿಗೆ..!

    arjun janya bats century

    ಆಟೋಗ್ರಾಫ್ ಪ್ಲೀಸ್ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯಾ, ಸೆಂಚುರಿ ಹೊಡೆದಿದ್ದಾರೆ. ಗಣೇಶ್-ಭಾವನಾ-ಪ್ರೀತಂ ಗುಬ್ಬಿ-ರಾಮು ಕಾಂಬಿನೇಷನ್‍ನ 99 ಚಿತ್ರವೇ, ಅರ್ಜುನ್ ಜನ್ಯ ಅವರ 100ನೇ ಸಿನಿಮಾ.

    ಅರ್ಜುನ್ ಜನ್ಯಾ 100 ಚಿತ್ರ ಪೂರೈಸಿದ್ದಕ್ಕೆ ಚಿತ್ರರಂಗದ ಗಣ್ಯರಿಂದ ಮೆಚ್ಚುಗೆ, ಶುಭಾಶಯಗಳ ಸುರಿಮಳೆಯಾಗಿದೆ.  ಅದರಲ್ಲೂ ವಿಶೇಷವಾಗಿ ಕಿಚ್ಚ ಸುದೀಪ್. ನಿಮ್ಮ ಈ ಸಾಧನೆಯ ಹಾದಿಯಲ್ಲಿ ನಾನೂ ಒಂದು ಭಾಗವಾಗಿದ್ದೆ ಎನ್ನುವುದೇ ನನಗೊಂದು ಹೆಮ್ಮೆ ಎಂದಿದ್ದಾರೆ ಸುದೀಪ್. ಅದಕ್ಕೆ ಅರ್ಜುನ್ ಜನ್ಯಾ ಪ್ರತಿಕ್ರಿಯೆ ನೋಡಿ..

    `ನಿಮ್ಮ ಬೆಂಬಲವಿಲ್ಲದೇ ಹೋಗಿದ್ದರೆ, ಇವತ್ತು ನಾನು ಏನೇನೂ ಅಲ್ಲ ಸರ್. ನೀವು ನನ್ನ ಗಾಡ್‍ಫಾದರ್, ಗುರು, ಮಾರ್ಗದರ್ಶಕ.. ಎಲ್ಲವೂ. ನನ್ನ ಈ ಪುಟ್ಟ ಸಾಧನೆ, ನಿಮಗೆ ಅರ್ಪಣೆ' ಎಂದಿದ್ದಾರೆ ಅರ್ಜುನ್ ಜನ್ಯಾ.

    ಅದಕ್ಕೆ ಕಾರಣವೂ ಇದೆ. ಅರ್ಜುನ್ ಜನ್ಯಾ ಆರಂಭದ ದಿನಗಳಲ್ಲಿ ಸಂಗೀತ ನೀಡಿದ ಚಿತ್ರಗಳ ಹಾಡುಗಳೆಲ್ಲ ಸೂಪರ್ ಹಿಟ್. ಪಟ್ರೆ ಲವ್ಸ್ ಪದ್ಮ, ಧಿಮಾಕು, ಸ್ಲಂ ಬಾಲ, ಬಿರುಗಾಳಿ, ಜುಗಾರಿ, ಸಂಚಾರಿ.. ಹೀಗೆ.. ಆದರೆ ಸಿನಿಮಾ ಫ್ಲಾಪ್. ಹೀಗಾಗಿ ಅನ್‍ಲಕ್ಕಿ ಹಣೆಪಟ್ಟಿ ಹೊತ್ತುಕೊಂಡಿದ್ದ ಅರ್ಜುನ್ ಜನ್ಯಾಗೆ ಸ್ಟಾರ್ ಚಿತ್ರಗಳ ಚಾನ್ಸ್ ಸಿಕ್ಕಿರಲಿಲ್ಲ. ಹಾಗಿದ್ದ ವೇಳೆಯಲ್ಲಿ ಅರ್ಜುನ್ ಜನ್ಯಾ ಮೇಲೆ ಭರವಸೆ ಇಟ್ಟು ಅವಕಾಶ ನೀಡಿದವರು ಸುದೀಪ್. ಕೆಂಪೇಗೌಡ ಚಿತ್ರದಿಂದ ಅರ್ಜುನ್ ಜನ್ಯಾ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆದರು. ಈಗ 100 ದಾಟಿದ್ದಾರೆ. ಬೆಸ್ಟ್ ಆಫ್ ಲಕ್.

  • 3 ಗಂಟೆ.. 40 ಪ್ರಶ್ನೆ.. ಮೀಟೂಗೆ ಅರ್ಜುನ್ ಸರ್ಜಾ ಉತ್ತರ

    arjun sarja answers 40 questions in me too craze

    ಮೀಟೂ ಆರೋಪದಲ್ಲಿ ಸಿಲುಕಿರುವ ನಟ ಅರ್ಜುನ್ ಸರ್ಜಾ, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪೊಲೀಸರ 40 ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಸತತ 3 ಗಂಟೆಗಳ ವಿಚಾರಣೆಯಲ್ಲಿ ಪೊಲೀಸರು 40 ಪ್ರಶ್ನೆ ಕೇಳಿದ್ದರೆ, ಆ 40 ಪ್ರಶ್ನೆಗಳಿಗೂ ಅರ್ಜುನ್ ಸರ್ಜಾ ಉತ್ತರಗಳನ್ನು ನೀಡಿದ್ದಾರೆ. ಲಿಖಿತ ಹೇಳಿಕೆಯನ್ನೂ ಕೊಟ್ಟಿದ್ದಾರೆ.

    ವಿಸ್ಮಯ ಚಿತ್ರದಲ್ಲಿ ನಿರ್ದೇಶಕರು ಹೇಳಿದಂತೆ ನಟಿಸಿದ್ದೇನೆ. ಸಿನಿಮಾದ ಶೂಟಿಂಗ್ 50 ಜನರ ಎದುರು ನಡೆದಿದೆ. ಸೆಟ್‍ನಲ್ಲಿ ಶೃತಿ ಅವರನ್ನು ತಬ್ಬಿಕೊಂಡಿದ್ದು, ಚಿತ್ರೀಕರಣದ ಒಂದು ಭಾಗ. ಹೀಗಾಗಿ ಆರೋಪವೇ ದುರುದ್ದೇಶದಿಂದ ಕೂಡಿದೆ.

    ನನ್ನ ಮೇಲೆ ಆರೋಪ ಹೊರಿಸುತ್ತಿರು ನಟಿ ಶೃತಿ ಹರಿಹರನ್, ಚಿತ್ರದ ಬಿಡುಗಡೆ ಸಂದರ್ಭದಲ್ಲಿ ನನ್ನನ್ನು ಹಾಡಿ ಹೊಗಳಿದ್ದರು. ಚಿತ್ರೀಕರಣದ ವೇಳೆ ನನ್ನೆದುರಾಗಲೀ, ಚಿತ್ರತಂಡದ ಯಾರ ಎದುರೇ ಆಗಲಿ.. ಅಕೆ ಕಣ್ಣೀರು ಹಾಕಿರಲಿಲ್ಲ. ಬೇಕಿದ್ದರೆ, ಚಿತ್ರೀಕರಣದ ವಿಡಿಯೋ ತರಿಸಿಕೊಂಡು ಪರಿಶೀಲನೆ ಮಾಡಿ.

    ರೂಮಿಗೆ ಬನ್ನಿ, ಮಜಾ ಮಾಡೋಣ ಎಂದು ನಾನು ಶೃತಿ ಅವರನ್ನು ಕರೆದಿಲ್ಲ. ಸೆಟ್‍ನ ಎಲ್ಲರನ್ನೂ ಊಟಕ್ಕೆ ಕರೆದಿದ್ದೆ. ಎಲ್ಲರೊಂದಿಗೇ ಊಟ ಮಾಡಿದ್ದೆ. ಆಗ ಶೃತಿ ಅವರನ್ನೂ ಕರೆದಿದ್ದೇನೆ. ಯುಬಿ ಸಿಟಿಯಲ್ಲಿದ್ದಾಗ ಕೂಡಾ ನಾನು ಅವರನ್ನು ಕೊಠಡಿಗೆ ಕರೆದಿಲ್ಲ. ಅವರನ್ನಷ್ಟೇ ಅಲ್ಲ, ಯಾರನ್ನೂ ನಾನು ನನ್ನ ರೂಮಿಗೆ ಕರೆದಿಲ್ಲ.

    ಶೃತಿ ಅವರ ಆಯ್ಕೆ ವೇಳೆಯೂ ನಾನು ಇರಲಿಲ್ಲ. ನಿರ್ದೇಶಕ ಅರುಣ್ ಹೇಳಿದ ಮೇಲಷ್ಟೇ ಆಕೆ ಬಗ್ಗೆ ಗೊತ್ತಾಗಿದ್ದು. ಚಿತ್ರೀಕರಣದಲ್ಲಷ್ಟೇ ನಾನು ಆಕೆಯನ್ನು ಮೊದಲ ಬಾರಿಗೆ ನೋಡಿದ್ದು. ಅದಕ್ಕೂ ಮೊದಲು ಆಕೆಯನ್ನು ನೋಡಿರಲಿಲ್ಲ. ಪರಿಚಯವೂ ಇರಲಿಲ್ಲ.

    ಪೊಲೀಸರ ಎಲ್ಲ ಪ್ರಶ್ನೆಗಳಿಗೂ ಅರ್ಜುನ್ ಸರ್ಜಾ ಕೂಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ವಿಚಾರಣೆ ವೇಳೆ ಸ್ಟೇಷನ್‍ಗೆ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಆಪ್ತರಾದ ಪ್ರಶಾಂತ್ ಸಂಬರಗಿ ಹಾಗೂ ಮ್ಯಾನೇಜರ್ ಶಿವಾರ್ಜುನ್ ಕೂಡಾ ಬಂದಿದ್ದರು.

  • Arjun Janya Goes to Small Screen

    arjun janya image

    Arjun Janya who is considered as one of the busiest music directors of Kannada cinema is all set to move to small screen. Arjun Janya is all set to judge the 10th edition of the famous reality show 'Saregamapa Little Champs'.

    Arjun Janya along with singers Rajesh Krishnan and Vijayprakash will be judging the famous reality show. Rajesh Krishnan and Vijayprakash has not only compered the show, but also had judged the show. But this is the first time for Arjun Janya and the most sought after music director is excited about his entry to small screen as a judge.

    'Saregamapa Little Champs'  is all set to be aired in Zee Kannada from the 01st of August.

  • Arjun Janya Replaces Ajaneesh Lokanath In Ricky - Exclusive

    ricky image

    Well known music composer Arjun Janya has replaced Ajaneesh Lokanath as music director in Rakshith Shetty's 'Ricky' and Arjun Janya will be the new music director of the film. Earlier, Ajaneesh Lokanath who had composed music for Rakshith Shetty's 'Ulidavaruf Kandanthe' was roped in to compose the music for 'Ricky'.

    Ajaneesh had composed the music for the film. However, the music were not liked by the team and Ajaneesh failed to live up to their expectations. With no other go the team has replaced Ajaneesh Lokanath with Arjun Janya.

    ricky_team1.jpg

    Arjun Janya has already started composing songs for the film and his music compositions for the film has immensely been liked by the team and Arjun will continue as the new music director of 'Ricky'.

  • Arjun's Music And Harikrishna's Background Score For Darshan's Films

    arjun's musc and harikrishna's back ground score for odeya

    'Challenging Star' Darshan has said through his Twitter account, that Arjun will be composing music for 'Odeya' and 'Robert', while V Harikrishna who is known as the 'Re-recording King' will be doing the background music for both the films.

    V Harikrishna was the permanent music director for Darshan's films once upon a time and their combination was a huge hit. In the past few years, Arjun Janya has been roped in to compose music for 'Chakravarthy' and 'Odeya'. 'Robert' director Tharun Sudhir recently had disclosed that Arjun will be composing the music for his latest film. 

    It is being said that Darshan's fans were upset that V Harikrishna who is a permanent in Darshan's films is slowly making way for Arjun. So, after Darshan's fans expressed their displeasure, Darshan has made an arrangement, where in both Harikrishna and Arjun are being accommodated. While, Arjun will be composing music for 'Odeya' and 'Robert', Harikrishna has been given the responsibility of composing background music for both the films.

  • Cherry Launching on January 23rd

    cherry image

    Sumanth Shailendra's new film 'Cherry' which is being directed by debutante Bhadravathi Jayaram and produced by Manjunath Babu who earlier produced 'Bramha' is all set to go on floors from the 23rd of January.

    Recently, the photo shoot for the film was held in a private apartment in Bangalore.

    cherry1.jpg

    Earlier, only Sumanth was finalised for the title role of Cherry and the lead actress for the film was not finalised. Now Malayalam actress Raksha Marina is said to be playing the female lead in the film. Arjun Janya is the music composer of the film.

  • John Jaani Janardhan Audio On October 3rd

    john jaani janardhan movie image

    The songs of 'John Jaani Janardhan' composed by Arjun Janya is all set to release on the 03rd of October in Bangalore.

    Guru Deshpande is the director of 'John Jaani Janardhan', while Padmanabh, Shashikiran and Girish has produced the film. Jhankar Music has acquired the audio rights of the film and is planning to release the songs in a big way.

    The film which stars Ajay Rao, Yogi and Krishna is an official remake of the Malayalam hit 'Amar Akbar Antony'. Kamna Ranawat and Malasri also play prominent roles in the film.

    Also Read

    Kamna Ranawat Heroine in John Jaani Janardhan

    Malashree To Act in John Jaani Janardhan - Exclusive

     

  • Raaga Songs Released

    raaga audio launched

    The songs of Mitra's debut film as a hero 'Raga' was released on Monday evening at the Jnanajyothi Auditorium in Bangalore.

    'Raga' is a film about two blind people and the songs of the film were released by the blind. Jaijagadish, Sihikahi Chandru, Vijayalakshmi Singh, Srinagara Kitty, Bhavana and others were also present at the event. Apart from the audio release, a live concert by music composer Arjun Janya was also organised.

    'Raaga' is being scripted and directed by P C Shekhar. Vaidi is the cameraman, while Arjun Janya is the music director of the film. 

    Related Articles :-

    Raaga Songs On March 20th

    Raaga Audio To Zee Music - Exclusive 

    Darshan Releases The trailer of Mitra's Raaga

    Raaga Trailer Releasing On 22nd February

    Sudeep's Voice For Raaga

    Mitra's New Film Titled Raaga

  • Vajrakaya is Arjun Janya’s 50th film

    vajrakaya image

    Well known music composer Arjun Janya who has given many popular songs in the recent times has completed 50 films as a music composer and his 50th film is none other than Shivarajakumar starrer ‘Vajrakaya’ being directed by A Harsha and produced by C R Manohar.

     Arjun Janya turned independent music director with Agni’s ‘Autograph Please’ which was released many years back. However, the music composer had to struggle to get a good break. His first such break was ‘Birugaali’. The songs of the film went on to become popular and Arjun Janya slowly started getting offers as a music director. However, it was Sudeep’s ‘Kempegowda’ which catapulted him to success.

     With ‘Kempegowda’ and the songs being a huge hit, Arjun Janya became the most wanted music composer of Kannada cinema and is the busiest music director for the last three years. After ‘Kempegowda’, the success followed with films like ‘Rambo’, ‘Victory’, ‘Bhajarangi’, ‘Adhyaksha’, ‘Jayammana Maga’ and others. Now Arjun Janya has completed 50 films with ‘Vajrakaya’ and is still going great. Chitraloka wishes the music composer a happy career.

  • ಅರ್ಜುನ್ ಜನ್ಯ ಈಗ ಹೇಗಿದ್ದಾರೆ..?

    arjun jany's health report

    ಅನಿರೀಕ್ಷಿತವಾಗಿ ಹೃದಯಾಘಾತಕ್ಕೊಳಗಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪುಟ್ಟದೊಂದು ಆಪರೇಷನ್ ಮಾಡಿದ್ದಾರೆ. ಆಂಜಿಯೋಪ್ಲಾಸ್ಟಿ ಮಾಡಿ ಸ್ಟಂಟ್ ಅಳವಡಿಸಿದ್ದಾರೆ. ಐಸಿಯುನಿಂದ ಶಿಫ್ಟ್ ಮಾಡಲಾಗಿದ್ದು, ಸದ್ಯಕ್ಕೆ ಅರ್ಜುನ್ ಜನ್ಯಾ ಕಂಪ್ಲೀಟ್ ಬೆಡ್ ರೆಸ್ಟ್‍ನಲ್ಲಿದ್ದಾರೆ.

    ಹೃದಯಾಘಾತಕ್ಕೆ ಅರ್ಜುನ್ ಜನ್ಯಾ ಅವರ ಜೀವನ ಶೈಲಿಯೇ ಕಾರಣ. ಅವರು ಅದನ್ನು ಬದಲಿಸಿಕೊಳ್ಳಬೇಕಿದೆ ಎಂದಿದ್ದಾರೆ ಡಾಕ್ಟರ್ಸ್. ಅರ್ಜುನ್ ಜನ್ಯಾ ಅವರ ಹೃದಯ 99% ಬ್ಲಾಕ್ ಆಗಿತ್ತು. ಅದನ್ನು ಇಂಪೆಂಡಿಂಗ್ ಹಾರ್ಟ್ ಅಟ್ಯಾಕ್ ಎನ್ನುತ್ತಾರೆ. ಇನ್ನೇನು ಸ್ವಲ್ಪ ತಡವಾಗಿದ್ದರೆ ಅಪಾಯದ ಎಲ್ಲ ಸಾಧ್ಯತೆಗಳೂ ಇದ್ದವು ಎಂದಿದ್ದಾರೆ ವೈದ್ಯರು. ದೇವರು ದೊಡ್ಡವನು. ಅರ್ಜುನ್ ಜನ್ಯಾ ಅವರು ಈಗ ಆರೋಗ್ಯವಾಗಿದ್ದಾರೆ.

  • ಅರ್ಜುನ್ ಜನ್ಯ ಈಸ್ ಬ್ಯಾಕ್

    arjn janya back to work

    ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತೆ ಕಾಯಕಕ್ಕೆ ಮರಳಿದ್ದಾರೆ. ಸರಿಗಮಪ ಶೋಗೂ ಎಂಟ್ರಿ ಕೊಟ್ಟಿದ್ದಾರೆ.

    ಬೀಟ್ಸ್ ಇರೋವರೆಗೂ ಹಾರ್ಟ್ ಬೀಟ್ ಯಾವತ್ತೂ ನಿಲ್ಲಲ್ಲ ಎಂದು ವಾಪಸ್ ಬಂದಿದ್ದಾರೆ ನಮ್ಮ ಅರ್ಜುನ್ ಜನ್ಯ. ಇಷ್ಟರಲ್ಲೇ ಚಿತ್ರದ ಆಡಿಯೋ ಹೊರಬರಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ ಜೋಗಿ ಪ್ರೇಮ್.

    ಅರ್ಜುನ್ ಜನ್ಯ ಕಿಟ್‍ನಲ್ಲಿ ಕೋಟಿಗೊಬ್ಬ-3, ರಾಬರ್ಟ್, ಗಾಳಿಪಟ 2, ಮದಗಜ, ಅವತಾರ್ ಪುರುಷ ಸೇರಿದಂತೆ ದೊಡ್ಡ ದೊಡ್ಡ ಚಿತ್ರಗಳ ಬುತ್ತಿಯೇ ಇದೆ.


     

  • ಅರ್ಜುನ್ ಜನ್ಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬ್ ಚಾನೆಲ್ಸ್

    ಅರ್ಜುನ್ ಜನ್ಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬ್ ಚಾನೆಲ್ಸ್

    ಅರ್ಜುನ್ ಜನ್ಯ ಅವರ ಆರೋಗ್ಯ, ಅವರ ಕುಟುಂಬದ ಬಗ್ಗೆ ಯೂಟ್ಯೂಬ್‍ನಲ್ಲಿ ಸರ್ಚ್ ಮಾಡಿದರೆ ಸಿಗುವುದು ಒಂದಷ್ಟು ಕಪೋಲಕಲ್ಪಿತ ವಿಡಿಯೋಗಳು ಪ್ರತ್ಯಕ್ಷವಾಗುತ್ತವೆ. ಆ ಯೂಟ್ಯೂಬ್ ಚಾನೆಲ್ ಯಾರದು..? ವರದಿ ಮಾಡಿದವರು ಯಾರು..? ಇಷ್ಟಕ್ಕೂ ಅವರಿಗೆ ಅರ್ಜುನ್ ಜನ್ಯ ಅವರು ಗೊತ್ತಿದ್ದಾರಾ..? ಆ ಚಾನೆಲ್ಲಿನವರ ಬಳಿ ಅಟ್‍ಲೀಸ್ಟ್ ಜನ್ಯ ನಂಬರ್ ಆದರೂ ಇದೆಯಾ..? ಹುಡುಕಿದರೆ ಪ್ರತಿಯೊಂದಕ್ಕೂ ಸಿಗುವ ಉತ್ತರ ನೋ.

    ಆರಂಭದಲ್ಲಿ  ಇದನ್ನು ನಿರ್ಲಕ್ಷಿಸಿದ್ದ ಅರ್ಜುನ್ ಜನ್ಯ, ಈಗ ಕಾನೂನು ಹೋರಾಟಕ್ಕೆ ಕೈ ಹಾಕಿದ್ದಾರೆ. ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕಾರಣ, ಇಂತಹ ವಿಡಿಯೋಗಳಿಂದಾಗಿ ಅವರ ಪತ್ನಿ ಹಾಗೂ ಕುಟುಂಬದವರು ಕಣ್ಣೀರಿಡುವಂತಾಗಿದೆ. ಅದರಲ್ಲೂ ಕೊರೊನಾ ಪಾಸಿಟಿವ್ ಬಂದ ನಂತರ ಐಸೋಲೇಷನ್‍ನಲ್ಲಿರುವ ಅರ್ಜುನ್ ಜನ್ಯ ಇನ್ನು ಕೆಲವೇ ದಿನಗಳಲ್ಲಿ ಎಂದಿನಂತೆ ಕೆಲಸಕ್ಕೆ ಹಾಜರಾಗಲಿದ್ದಾರೆ.

    ಪೊಲೀಸರಿಗೆ ದೂರು ಕೊಟ್ಟು ಕ್ರಮ ತೆಗೆದುಕೊಳ್ಳುವಂತೆ ಹೇಳಿರುವ ಅರ್ಜುನ್ ಜನ್ಯ, ಈಗಲೂ ಕೂಡಾ ವಿಡಿಯೋಗಳನ್ನು ರಿಮೂವ್ ಮಾಡಿ ಎಂದು ಚಾನೆಲ್ಲಿನವರಿಗೆ ಮನವಿ ಮಾಡಿದ್ದಾರೆ. ಅದನ್ನು ಮೀರಿಯೂ ಆ ವಿಡಿಯೋಗಳು ಹಾಗೆಯೇ ಇದ್ದರೆ.. ಅಂತಹವರನ್ನು ಹುಡುಕಿ ಪೊಲೀಸರೇ ಅವರ ಮನೆ ಬಾಗಿಲು ತಟ್ಟಲಿದ್ದಾರೆ.

     

  • ಅರ್ಜುನ್ ಜನ್ಯ-ಶಿವಣ್ಣ ಚಿತ್ರಕ್ಕೆ ನಿರ್ಮಾಪಕರು ಯಾರು ಗೊತ್ತಾ?

    ರ್ಜುನ್ ಜನ್ಯ-ಶಿವಣ್ಣ ಚಿತ್ರಕ್ಕೆ ನಿರ್ಮಾಪಕರು ಯಾರು ಗೊತ್ತಾ?

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ನಿರ್ದೇಶನದ ಸಾಹಸಕ್ಕೆ  ಕೈ ಹಾಕಿದ್ದಾರೆ ಹಾಗೂ ಆ ಚಿತ್ರಕ್ಕೆ ಶಿವಣ್ಣ ಹೀರೋ ಎನ್ನುವ ಸುದ್ದಿಯನ್ನು ಚಿತ್ರಲೋಕದಲ್ಲಿಯೇ ಓದಿದ್ದಿರಿ. ಈಗ ಆ ಚಿತ್ರದ ಅಪ್‍ಡೇಟ್ ಸಿಕ್ಕಿದೆ. ನಿರ್ಮಾಪಕರು ಯಾರು ಅನ್ನೋದು ಕೂಡಾ ಗೊತ್ತಾಗಿದೆ. ರಮೇಶ್ ರೆಡ್ಡಿ.

    ನನ್ನ ನಿರ್ದೇಶನದ ಮೊದಲ ಚಿತ್ರಕ್ಕೇ ಶಿವಣ್ಣ ಹೀರೋ. ಅದೇ ಖುಷಿ. ಚಿಕ್ಕಂದಿನಿಂದ ನನಗೆ ಮಣಿರತ್ನಂ ಚಿತ್ರಗಳೆಂದರೆ ಇಷ್ಟ. ಈಗ ನನ್ನ ಮೊದಲ ಚಿತ್ರಕ್ಕೆ ಶಿವಣ್ಣ ಹೀರೋ. ಇನ್ನೇನು ಬೇಕು ಎನ್ನುವುದು ಅರ್ಜುನ್ ಜನ್ಯಾ ಪ್ರಶ್ನೆ. ನನ್ನ ಕಥೆಗೆ ಶಿವಣ್ಣ ಯೆಸ್ ಎಂದರು. ಜೊತೆಗೆ ರಮೇಶ್ ರೆಡ್ಡಿಯಂತಾ ಪ್ರೊಡ್ಯೂಸರ್ ಸಿಕ್ಕರು. ಅವರೇ ನನ್ನ ಶಕ್ತಿ ಎಂದಿದ್ದಾರೆ ಅರ್ಜುನ್.

    ಆನಂದ್ ಸಿನಿಮಾ ನೋಡಿ ಶಿವಣ್ಣ ಅವರನ್ನು ನೋಡೋಕೆ ಅವರ ಮನೆಗೆ ಹೋಗಿದ್ದೆ. ಆಗಿರಲಿಲ್ಲ. ಈಗ ಅವರ ಚಿತ್ರಕ್ಕೆ ಪ್ರೊಡ್ಯೂಸರ್. ಐ ಯಾಮ್ ಲಕ್ಕಿ ಎಂದ ರಮೇಶ್ ರೆಡ್ಡಿ, ಅರ್ಜುನ್ ಜನ್ಯಾ ಸಿದ್ಧ ಪಡಿಸಿರುವ ಕಥೆ ವಿಭಿನ್ನವಾಗಿದೆ. ವಿಶೇಷವಾಗಿದೆ. ಪ್ರೀ-ಪ್ರೊಡಕ್ಷನ್ ಕೆಲಸಗಳಿಗೇ 3 ತಿಂಗಳು ಬೇಕು. ನಂತರ ಶಿವಣ್ಣ ಅವರ ಕಾಲ್‍ಷೀಟ್ ಶೆಡ್ಯೂಲ್ ನೋಡಿಕೊಂಡು ಶೂಟಿಂಗ್ ಶುರು ಮಾಡುತ್ತೇವೆ ಎಂದಿದ್ದಾರೆ ರಮೇಶ್ ರೆಡ್ಡಿ.

  • ಅರ್ಜುನ್ ಜನ್ಯಾ ಫೇವರಿಟ್ ಚುಟು ಚುಟು ಅಲ್ಲ..!

    arjun janya's favourite song in not chutu chutu

    ರ್ಯಾಂಬೋ 2 ಚಿತ್ರದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿರುವುದು ಚುಟು ಚುಟು ಅಂತೈತಿ.. ಹಾಡು. ಉತ್ತರ ಕರ್ನಾಟಕದ ಶೈಲಿಯಲ್ಲಿರೋ ಹಾಡು, ಚಿತ್ರರಸಿಕರಿಗೆ ಥ್ರಿಲ್ ಕೊಟ್ಟಿದೆ. ಶರಣ್ ಹೆಜ್ಜೆ, ಆಶಿಕಾರ ಗ್ಲ್ಯಾಮರ್ ರೋಮಾಂಚನ ಮೂಡಿಸಿದೆ. ಆದರೆ, ಹಾಡಿನ ಸೃಷ್ಟಿಕರ್ತ ಅರ್ಜುನ್ ಜನ್ಯಾ ಫೇವರಿಟ್ ಹಾಡು ಅದಲ್ಲವಂತೆ.

    ಸಾಮಾನ್ಯವಾಗಿ ಸೂಪರ್ ಹಿಟ್ ಆದ ಹಾಡುಗಳನ್ನು ನನ್ನ ಫೇವರಿಟ್ ಎಂದ ಹೇಳಿಕೊಳ್ಳೋದು ವಾಡಿಕೆ. ಆದರೆ, ಅರ್ಜುನ್ ಜನ್ಯಾಗೆ ಇಷ್ಟವಾಗಿರೋದು ಬಿಟ್‍ಹೋಗ್ಬೇಡಾ ಹಾಡು. ಆ ಹಾಡನ್ನು ಹಾಡಿರೋದು ಮೆಹಬೂಬ್. ವಿಷಾಧದ ಛಾಯೆಯಿರುವ ಆ ಹಾಡು ಜನ್ಯಾಗೆ ಫೇವರಿಟ್ ಆಗಿದೆ. 

    ಅಂದಹಾಗೆ ರ್ಯಾಂಬೋ 2 ಚಿತ್ರದ ಸಹ ನಿರ್ಮಾಪಕರಲ್ಲಿ ಅರ್ಜುನ್ ಜನ್ಯಾ ಕೂಡಾ ಒಬ್ಬರು. ಇಡೀ ತಂಡವನ್ನು ಒಟ್ಟಿಗೇ ಕರೆದೊಯ್ಯುತ್ತಿರುವುದು ತರುಣ್ ಸುಧೀರ್. ಸಹ ನಿರ್ಮಾಪಕರಾಗುತ್ತೀರಾ ಎಂದು ಆಫರ್ ಕೊಟ್ಟಾಗ ಎರಡನೇ ಯೋಚನೆ ಮಾಡದೆ ಒಪ್ಪಿಕೊಂಡುಬಿಟ್ಟೆ, ಕಥೆಯನ್ನೂ ಕೇಳಲಿಲ್ಲ. ಆದರೆ, ತರುಣ್ ಸುಧೀರ್ ಕಥೆಯನ್ನು ಪೂರ್ತಿಯಾಗಿ ತಿಳಿದುಕೊಳ್ಳಿ ಎಂದು ಸಲಹೆ ಕೊಟ್ಟರು. ಕಥೆ ಕೇಳಿದ ಮೇಲಂತೂ ಎರಡನೆ ಮಾತೇ ಇರಲಿಲ್ಲ, ಒಪ್ಪಿಕೊಂಡೆ ಎಂದಿದ್ದಾರೆ ಅರ್ಜುನ್ ಜನ್ಯಾ. ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.

  • ಅರ್ಜುನ್ ಜನ್ಯಾಗೆ ಗದರಿದ್ದೇಕೆ ಕಿಚ್ಚ ಸುದೀಪ್?

    ಅರ್ಜುನ್ ಜನ್ಯಾಗೆ ಗದರಿದ್ದೇಕೆ ಕಿಚ್ಚ ಸುದೀಪ್?

    ಕೋಟಿಗೊಬ್ಬ 3 ಸಕ್ಸಸ್ ಮೀಟ್ ಕಾರ್ಯಕ್ರಮ ನಡೆಯುತ್ತಿತ್ತು. ಚಿತ್ರತಂಡದವರೆಲ್ಲರೂ ಹಾಜರಿದ್ದರು. ಆರಂಭದಲ್ಲಿ ಎಡವಟ್ಟು ಮಾಡಿಕೊಂಡ ಕಾರಣಕ್ಕೆ

    ಸುದ್ದಿಯಾಗಿದ್ದ ಕೋಟಿಗೊಬ್ಬ 3, ನಂತರ ಮಾತಾಡಿದ್ದು ಕಲೆಕ್ಷನ್ನಿನ ಮೂಲಕ. ಸಹಜವಾಗಿಯೇ ಖುಷಿಯಾಗಿದ್ದ ಚಿತ್ರತಂಡ ಸಕ್ಸಸ್ ಮೀಟ್ ಕರೆದಿತ್ತು. ಸುದೀಪ್, ಮಡೋನ್ನಾ.. ಜೊತೆ ಸೂರಪ್ಪ ಬಾಬು, ಶೇಖರ್ ಚಂದ್ರ, ಅರ್ಜುನ್ ಜನ್ಯಾ.. ಎಲ್ಲರೂ ಕಾರ್ಯಕ್ರಮದಲ್ಲಿದ್ದರು. ಈ ಸಂದರ್ಭದಲ್ಲಿ ಅರ್ಜುನ್ ಜನ್ಯಾ ಒಂದು ಸಣ್ಣ ಎಡವಟ್ಟು ಮಾಡಿದರು.

    ಕಾರ್ಯಕ್ರಮಕ್ಕೆ ಅರ್ಜುನ್ ಜನ್ಯಾ ಆಗಮಿಸಿದಾಗ ಸುದೀಪ್ ಆಗಲೇ ಬಂದವರೊಂದಿಗೆ ಮಾತನಾಡುತ್ತಿದ್ದರು. ಜನ್ಯಾ ಸೀದಾ ಹೋದವರೇ.. ಸುದೀಪ್ ಕಾಲಿಗೆ ನಮಸ್ಕರಿಸಿದರು. ವಾಟ್ಸ್ ರಾಂಗ್ ವಿಥ್ ಯೂ.. ಎಂದು ಗದರಿದ ಸುದೀಪ್, ಜನ್ಯಾಗೆ ಬೆನ್ನು ತಟ್ಟಿದರು.

    ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿದ್ದು ಕೆಂಪೇಗೌಡ ಚಿತ್ರದ ಮೂಲಕ. ಅಂದಿನಿಂದಲೂ ಜನ್ಯಾಗೆ ಬೆನ್ನೆಲುಬಾಗಿ ನಿಂತಿರೋದು ಸುದೀಪ್. ಅರ್ಜುನ್ ಜನ್ಯಾ ಅಣ್ಣ ಆಸ್ಪತ್ರೆಯಲ್ಲಿದ್ದಾಗ ಕೋಟಿಗೊಬ್ಬ 3 ಚಿತ್ರದ ಬಿಜಿಎಂ ಕೆಲಸ ನಡೆಯುತ್ತಿದ್ದರು. ಅಣ್ಣ ಉಳಿಯದೇ ಹೋದರೂ.. ಆ ಸಂದರ್ಭದಲ್ಲಿ ಜೊತೆಗಿದ್ದು ಧೈರ್ಯ ನೀಡಿದ್ದವರು ಸುದೀಪ್. ಹೀಗಾಗಿ ಸುದೀಪ್ ಅವರ ಬಗ್ಗೆ ಅಭಿಮಾನಕ್ಕಿಂತ ಹೆಚ್ಚು ಗೌರವ ಇಟ್ಟುಕೊಂಡಿರೋ ಜನ್ಯಾ ಅದನ್ನು ಹಲವು ಬಾರಿ ಹೇಳಿಕೊಂಡೂ ಇದ್ದಾರೆ. ಆದರೆ ಸುದೀಪ್ ಅವರಿಗೆ ಯಾರೂ ತಮ್ಮ ಕಾಲಿಗೆ ಬೀಳೋದು ಇಷ್ಟವಾಗಲ್ಲ. ಅಷ್ಟೆ...

  • ಅರ್ಜುನ್ ಜನ್ಯಾಗೆ ಹೃದಯಾಘಾತ

    arjun janya suffers mild heart attack

    ಕನ್ನಡ ಚಿತ್ರರಂಗದ ಸೆನ್ಸೇಷನಲ್ ಮ್ಯೂಸಿಕ್ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ ಲಘು ಹೃದಯಾಘಾತವಾಗಿದೆ. ಮೈಸೂರಿನ ಬೋಗಾದಿಯಲ್ಲಿರುವ ಮನೆಯಲ್ಲಿ ಜನ್ಯಾ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಬೋಗಾದಿಯಲ್ಲಿ ಜನ್ಯಾ ಅವರ ಮನೆಯಿದೆ.

    ತಕ್ಷಣ ಕುಟುಂಬದವರು ಜನ್ಯಾ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜನ್ಯಾ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜನ್ಯಾ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

  • ಅರ್ಧ ಕೋಣ.. ಅರ್ಧ ಹಸು : ಅರ್ಜುನ್ ಜನ್ಯಾ 45ಕ್ಕೆ ಮುಹೂರ್ತ

    ಅರ್ಧ ಕೋಣ.. ಅರ್ಧ ಹಸು : ಅರ್ಜುನ್ ಜನ್ಯಾ 45ಕ್ಕೆ ಮುಹೂರ್ತ

    ಇದೊಂದು ಫಿಲಾಸಫಿಕಲ್ ಚಿತ್ರವಂತೆ. ಅರ್ಧ ಕೋಣ.. ಇನ್ನರ್ಧ ಹಸು ಇರುವ ಪೋಸ್ಟರ್ ಹೊರಬಿಟ್ಟಿದ್ದಾರೆ ಅರ್ಜುನ್ ಜನ್ಯ. ಕೋಣ ಎಂದರೆ ನೆನಪಾಗುವುದು ಯಮ. ಹಸು ಎಂದರೆ ಈಶ್ವರ. ಇಬ್ಬರೂ ಒಟ್ಟಿಗೇ ನೆನಪಾದರೆ ಕಣ್ಮುಂದೆ ಬರುವುದು ಮಾರ್ಕಂಡೇಯ ಪುರಾಣ. ಹೀಗೆಲ್ಲ ನೆನಪು ಮಾಡುತ್ತಿರುವ ಚಿತ್ರ 45. ಕೆಲವು ತಿಂಗಳ ಹಿಂದೆಯೇ ಘೋಷಿಸಿದ್ದ 45 ಚಿತ್ರಕ್ಕೆ ಈಗ ಮುಹೂರ್ತವೂ ಆಗಿದೆ.  

    ಚಿತ್ರ ಸೆಟ್ಟೇರಿರುವುದು ಈಗಲೇ. ಆದರೆ ನಾವು ಈಗಾಗಲೇ ಚಿತ್ರವನ್ನು ನೋಡಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರೂ ಆಗಿರುವ ರಮೇಶ್ ರೆಡ್ಡಿ, ಹೀರೋಗಳಾದ ಶಿವಣ್ಣ, ರಾಜ್ ಬಿ.ಶೆಟ್ಟಿ.

    ನಮಗೆ ಚಿತ್ರದ ಕಥೆ ಹೇಳಿ ಆಗಿತ್ತು. ಕಥೆ ಚೆನ್ನಾಗಿತ್ತು. ಓಕೆ ಎಂದ ಮೇಲೂ ಚಿತ್ರ ಮೂವ್ ಆಗುತ್ತಿರಲಿಲ್ಲ. ತಿಂಗಳುಗಳಾದ ಮೇಲೆ ಅರ್ಜುನ್ ಜನ್ಯ ಅವರನ್ನು ಕೇಳಿದರೆ ಅವರು ಆಗಲೇ ಚಿತ್ರವನ್ನು ತೋರಿಸಿದ್ದರು ಆನಿಮೇಷನ್ನಿನಲ್ಲಿ ತೋರಿಸಿದರು. ಅರ್ಜುನ್ ಜನ್ಯ ಅವರ ಮೇಲೆ ಇನ್ನಷ್ಟು ನಂಬಿಕೆ ಬಂತು ಎನ್ನುತ್ತಾರೆ ರಮೇಶ್ ರೆಡ್ಡಿ. ಸ್ವತಃ ನಿರ್ದೇಶಕರೂ ಆಗಿರುವ ರಾಜ್ ಬಿ.ಶೆಟ್ಟಿಗೆ ಜನ್ಯ ಅವರ ತಯಾರಿ ಭರವಸೆ ಹುಟ್ಟಿಸಿದೆ. ರಾಜ್ ಬಿ.ಶೆಟ್ಟಿಯವರಿಗೆ ಈ ಚಿತ್ರದಲ್ಲಿ ನಾಯಕಿಯಾಗಿರುವುದು ಕೌಸ್ತುಭ ಮಣಿ.

    ಇನ್ನು ಶಿವರಾಜ್ ಕುಮಾರ್ ಅವರಿಗಂತೂ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ನೋಡಿಯೇ ಉತ್ಸಾಹ ಮೂಡಿದೆ. ನೋಡ್ತಾ ಇರಿ, ಈ ಚಿತ್ರ ರಿಲೀಸ್ ಆದ್ಮೇಲೆ ಅರ್ಜುನ್ ಜನ್ಯ, ಕನ್ನಡದ ಟಾಪ್ ನಿರ್ದೇಶಕರಲ್ಲಿ ಒಬ್ಬರಾಗಲಿದ್ದಾರೆ ಎನ್ನುತ್ತಾರೆ ಶಿವಣ್ಣ.

    ‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

  • ಅವತಾರ್ ಪುರುಷನಿಗೆ ಅರ್ಜುನ್ ಜನ್ಯಾ ಬಂದಿದ್ದು ಏಕೆ..?

    reason behind arjun janya's music in avatara purusha

    ಶರಣ್, ಆಶಿಕಾ ರಂಗನಾಥ್ ಜೋಡಿಯ ಸಿನಿಮಾ ಅವತಾರ್ ಪುರುಷ. ಪುಷ್ಕರ್ ಬ್ಯಾನರ್‌ನಲ್ಲಿ ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಚಿತ್ರ ಅವತಾರ್ ಪುರುಷ. ಶ್ರೀನಗರ ಕಿಟ್ಟಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಬೇಕಿತ್ತು. ಆರಂಭದಲ್ಲಿ ಚಿತ್ರತಂಡವೂ ಇದೇ ಮಾತು ಹೇಳಿತ್ತು. ಆದರೀಗ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

    ಇದಕ್ಕೆ ಕಾರಣವೂ ಇದೆ. ರವಿಚಂದ್ರನ್-ಹAಸಲೇಖ, ದರ್ಶನ್-ಹರಿಕೃಷ್ಣ ಜೋಡಿಯಂತೆ ಹಿಟ್ ಆಗಿರುವ ಜೋಡಿ ಶರಣ್-ಜನ್ಯಾ ಕಾಂಬಿನೇಷನ್. ರ‍್ಯಾಂಬೋ, ರ‍್ಯಾಂಬೋ-೨, ಅಧ್ಯಕ್ಷ, ವಿಕ್ಟರಿ, ವಿಕ್ಟರಿ-೨, ಬುಲೆಟ್ ಬಸ್ಯಾ, ಜೈ ಮಾರುತಿ ೮೦೦.. ಹೀಗೆ ಇಬ್ಬರ ಜೋಡಿಯ ಸಿನಿಮಾಗಳ ಎಲ್ಲ ಹಾಡುಗಳೂ ಹಿಟ್ ಆಗಿರುವುದು ಇದಕ್ಕೆ ಕಾರಣ. ಹಿಟ್ ಜೋಡಿಯನ್ನು ಬೇರೆ ಮಾಡೋದೇಕೆ ಎಂಬ ಕಾರಣಕ್ಕೆ ಜನ್ಯಾ, ಅವತಾರ್ ಪುರುಷನಿಗೆ ಸರಿಗಮಪ ಹೇಳುತ್ತಿದ್ದಾರೆ.

  • ಆ ದಿನಗಳು ಚೇತನ್.. ಏನದು 9 ಲಕ್ಷದ ಕಥೆ..?

    is there any link behind arjun sarja and  sruthi hariharan me too story

    ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರ ಹಿಂದೆ ಪಿತೂರಿ ಇದೆಯಾ..? ಅಂಥಾದ್ದೊಂದು ಆರೋಪ ಮಾಡಿರುವುದು ಅರ್ಜುನ್ ಸರ್ಜಾ ಅವರ ಆಪ್ತರೂ ಆಗಿರುವ ಉದ್ಯಮಿ ಪ್ರಶಾಂತ್ ಸಂಬರಗಿ ಹಾಗೂ ನಿರ್ಮಾಪಕ ಮುನಿರತ್ನ. ಅದು ಪ್ರೇಮ ಬರಹ ಚಿತ್ರದ ವೇಳೆಯಲ್ಲಾದ ಘಟನೆ.

    ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾರನ್ನು ಪ್ರೇಮ ಬರಹ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆ ಚಿತ್ರಕ್ಕೆ ಮೊದಲು ನಾಯಕರಾಗಿ ಆಯ್ಕೆಯಾಗಿದ್ದವರು ಆ ದಿನಗಳು ಚೇತನ್. ಆಗ ಚೇತನ್‍ಗೆ ಅರ್ಜುನ್ ಸರ್ಜಾ 10 ಲಕ್ಷ ಅಡ್ವಾನ್ಸ್ ಕೂಡಾ ಕೊಟ್ಟಿದ್ದರು. ನಂತರ ಬೇರೆ ಬೇರೆ ಕಾರಣಗಳಿಂದಾಗಿ ಚೇತನ್‍ರನ್ನು ಚಿತ್ರದಿಂದ ಕೈಬಿಟ್ಟಿದ್ದರು. ಹಾಗೆ ಅವಕಾಶ ಕೈ ತಪ್ಪಿದ್ದಕ್ಕೆ ನಿಮಗೆ ತಕ್ಕ ಪಾಠ ಕಲಿಸುವೆ ಎಂದು ಮೆಸೇಜ್ ಮಾಡಿದ್ದರು ಚೇತನ್. ಈಗ ಶೃತಿ ಆರೋಪದ ಹಿಂದೆ ಕೆಲಸ ಮಾಡುತ್ತಿರುವುದು ಪ್ರೇಮ ಬರಹ ಚಿತ್ರದಿಂದ ಕೈ ಬಿಟ್ಟಿದ್ದು ಎಂದಿದ್ದಾರೆ ಪ್ರಶಾಂತ್ ಸಂಬರಗಿ ಹಾಗೂ ಮುನಿರತ್ನ.

    ಈ ಬಗ್ಗೆ ಚೇತನ್ ಹೇಳೋದೇ ಬೇರೆ. ಅರ್ಜುನ್ ಸರ್ಜಾ ಅಡ್ವಾನ್ಸ್ ಕೊಟ್ಟಿದ್ದರು ಅನ್ನೋದನ್ನು ಅವರು ಒಪ್ಪಿದ್ದಾರೆ. 10 ಲಕ್ಷ ಅಲ್ಲ,  9 ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದರು. ಅವರು ವಾಪಸ್ ಕೇಳಿಲ್ಲ. ನೋಟಿಸ್ ಕೂಡಾ ಕೊಟ್ಟಿಲ್ಲ. ಶೋಷಣೆಗೊಳಗಾಗುತ್ತಿರುವವರ ಪರ ನಾನಿದ್ದೇನೆ ಎಂದಿದ್ದಾರೆ ಚೇತನ್.

    ಸಿನಿಮಾದಿಂದ ಹೊರಬಂದ ಮೇಲೆ, ಅಡ್ವಾನ್ಸ್ ಪಡೆದುಕೊಂಡಿದ್ದ ಹಣವನ್ನು ಕೇಳದೇ ಹೋದರೆ ಕೊಡಬಾರದಾ..? ಏನೋ.. ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ.

  • ಕೆಂಪೇಗೌಡನ ಜರ್ನಿ - ಕಿಚ್ಚನಿಂದ ಅರ್ಜುನ್ ಜನ್ಯಾ, ಆರ್ಮುಗಂಗೆ ಹಾರೈಕೆ

    kempegowda completes 8 years

    ಕೆಂಪೇಗೌಡ, ಸುದೀಪ್ ಚಿತ್ರ ಜೀವನದ ಸಕ್ಸಸ್ ಸಿನಿಮಾಗಳಲ್ಲೊಂದು. ಈ ಚಿತ್ರ ರಿಲೀಸ್ ಆಗಿ ಇತ್ತೀಚೆಗೆ 8 ವರ್ಷ ಕಳೆದಿದೆ. ಇದನ್ನು ನೆನಪಿಸಿಕೊಂಡಿರೋ ಕಿಚ್ಚ ಸುದೀಪ್, ವಿಶೇಷ ಹಾರೈಕೆ ಮಾಡಿರುವುದು ರವಿಶಂಕರ್ ಮತ್ತು ಅರ್ಜುನ್ ಜನ್ಯಾಗೆ.

    ಈ ಚಿತ್ರದ ಮೂಲಕ ರವಿಶಂಕರ್, ಕನ್ನಡ ಚಿತ್ರರಂಗದಲ್ಲಿ ಅಭಿನವ ವಜ್ರಮುನಿಯಾಗಿ ವಿಜೃಂಭಿಸಿದರು. ಇಂದಿಗೂ ರವಿಶಂಕರ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ವಿಲನ್.

    ಇನ್ನು ಅರ್ಜುನ್ ಜನ್ಯಾಗೆ ದೊಡ್ಡ ಬ್ರೇಕ್ ಕೊಟ್ಟ ಮೊದಲ ಸಿನಿಮಾ ಕೆಂಪೇಗೌಡ. ಈಗ ಅವರು ಸಂಗೀತ ನಿರ್ದೇಶನ ನೀಡಿರುವ 99 ಚಿತ್ರ, ಅವರ 100ನೇ ಚಿತ್ರವಾಗಿದೆ.

    ಸುದೀಪ್ ಇವರಿಬ್ಬರಿಗೂ ವಿಶೇಷ ಹಾರೈಕೆ ಮಾಡಿರುವುದು ಇದೇ ಕಾರಣಕ್ಕೆ. ಕೆಂಪೇಗೌಡ, ಇವರಿಬ್ಬರಿಗೂ ಲೈಫ್ ಕೊಟ್ಟ ಸಿನಿಮಾ.