` puneethrajkumar, - chitraloka.com | Kannada Movie News, Reviews | Image

puneethrajkumar,

  • ದಾಖಲೆ ಮೊತ್ತಕ್ಕೆ ನಟಸಾರ್ವಭೌಮ ಸೇಲ್..!

    natasarvabhouma distribution rights sold for record sum

    ಪುನೀತ್ ಚಿತ್ರಗಳು ಎಂದರೆ ವಿತರಕರು ಸಾಲುಗಟ್ಟುತ್ತಾರೆ. ಜೊತೆಗೆ ಈ ಬಾರಿ ಪುನೀತ್ ಜೊತೆ ರಾಕ್‍ಲೈನ್ ವೆಂಕಟೇಶ್ ಸಿನಿಮಾ ಎಂಬುದೂ ಸೇರಿ ನಟಸಾರ್ವಭೌಮನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಚಿತ್ರದ ಟ್ರೇಲರ್ ಎಬ್ಬಿಸಿದ ಹವಾ ನೋಡಿದ ವಿತರಕರು, ಚಿತ್ರವನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರಂತೆ.

    ಧೀರಜ್ ಎಂಟರ್‍ಪ್ರೈಸಸ್ ಚಿತ್ರವನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದು, 350ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಪುನೀತ್, ರಚಿತಾ ರಾಮ್, ಅನುಪಮಾ, ಚಿಕ್ಕಣ್ಣ, ಸಾಧುಕೋಕಿಲ, ಬಿ.ಸರೋಜಾದೇವಿ, ರವಿಶಂಕರ್ ಸೇರಿದಂತೆ ಭರ್ಜರಿ ತಾರಾಗಣ ಇರುವ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ.

  • ನ.16ಕ್ಕೆ ಅರಮನೆ ಮೈದಾನದಲ್ಲಿ ಪುನೀತ ನಮನ

    ನ.16ಕ್ಕೆ ಅರಮನೆ ಮೈದಾನದಲ್ಲಿ ಪುನೀತ ನಮನ

    ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅರಮನೆ ಮೈದಾನದಲ್ಲಿ ನವೆಂಬರ್ 16ರಂದು ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ, ವಿಶೇಷ ಆಹ್ವಾನಿತರಾಗಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

    ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಚೇಂಬರ್ ಪರವಾಗಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಎನ್.ಎಂ.ಸುರೇಶ್, ಎ.ಗಣೇಶ್ ಆಹ್ವಾನಿಸಿದರು.

    ನ.16ರಂದು ದಕ್ಷಿಣ ಭಾರತ ಚಿತ್ರರಂಗದ ಗಣ್ಯಾತಿಗಣ್ಯರು ಭಾಗವಹಿಸುತ್ತಿದ್ದಾರೆ. ಗುರುಕಿರಣ್ ಅವರು ಸಂಗೀತ ನಮನ ಸಲ್ಲಿಸಲಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಪುನೀತ್ ಅವರಿಗಾಗಿ ಬರೆದಿರುವ ಹಾಡನ್ನು ಬಿಡುಗಡೆ ಮಾಡಲಿದ್ದಾರೆ.

  • ನಟಭಯಂಕರನಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾರೈಕೆ

    ನಟಭಯಂಕರನಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾರೈಕೆ

    ಒಳ್ಳೆ ಹುಡ್ಗ ಪ್ರಥಮ್, ಬಿಗ್ ಬಾಸ್ ಪ್ರಥಮ್.. ಇನ್ನು ಮುಂದೆ ನಟಭಯಂಕರ ಪ್ರಥಮ್ ಆಗಲಿದ್ದಾರೆ. ಅವರದ್ದೇ ನಟನೆ ಹಾಗೂ ನಿರ್ದೇಶನದ ನಟಭಯಂಕರ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಚಿತ್ರದ ಒಂದು ಹಾಡನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದು ವಿಶೇಷ. ಚಿತ್ರದ ಪ್ರಚಾರವನ್ನೂ ಎಂದಿನಂತೆ ವಿಭಿನ್ನವಾಗಿಯೇ ಮಾಡಿರುವ ಪ್ರಥಮ್ ಚಿತ್ರದಲ್ಲಿ ಹಾರರ್ ಕಾಮಿಡಿ ಸಬ್ಜೆಕ್ಟ್ ಕಥೆ ಹೇಳಿದ್ದಾರೆ.

    ಅಶ್ವಿನಿ ಎಂದಿನಂತೆ ಆಲ್ ದಿ ಬೆಸ್ಟ್ ಎಂದಷ್ಟೇ ಹೇಳಿದರಾದರೂ, ವೇದಿಕೆಯಲ್ಲಿದ್ದ ಅವರನ್ನೂ ತುಸುಹೊತ್ತು ನಗಿಸಿದ್ದು ಪ್ರಥಮ್ ಸಾಧನೆ. ಟ್ರೇಲರ್ ನೋಡಿ ಮೆಚ್ಚಿದ್ದಾರಂತೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಚಿತ್ರದ ಹಾಡುಗಳನ್ನು ಲಹರಿ ಸಂಸ್ಥೆ ಖರೀದಿಸಿದೆ. ಪ್ರಥಮ್ ಎದುರು ಚಂದನ, ನಿಹಾರಿಕಾ, ಸುಶ್ಮಿತಾ ಜೋಷಿ ನಾಯಕಿಯರಾಗಿ ನಟಿಸಿದ್ದಾರೆ.

  • ನಟಸಾರ್ವಭೌಮ ಚಿತ್ರದಲ್ಲಿ ಭೂತ ಯಾರು..?

    who is ghost in natasarvabhouma

    ನಟಸಾರ್ವಭೌಮ ಚಿತ್ರದ ಟ್ರೇಲರ್ ಬಿಡುಗಡೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದರೆ, ಚಿತ್ರದ ಒಂದು ರಹಸ್ಯ ಸೋರಿಕೆಯಾಗಿಬಿಟ್ಟಿದೆ. ಚಿತ್ರದಲ್ಲಿ ಒಂದು ದೆವ್ವ ಅರ್ಥಾತ್ ಭೂತ ಅಂದ್ರೆ ಆತ್ಮವೊಂದು ಇರಲಿದೆ. ಪುನೀತ್ ಪಾಲಿಗೆ ಇದು ಮೊತ್ತಮೊದಲ ಹಾರರ್ ಸಿನಿಮಾ ಆಗಲಿದೆ. ಹಾಗಾದರೆ, ದೆವ್ವ ಯಾರು..?

    ರಚಿತಾ, ಅನುಪಮಾ ನಾಯಕಿಯರು. ಬಿ.ಸರೋಜಾದೇವಿಯವರದ್ದೊಂದು ಪ್ರಧಾನ ಪಾತ್ರ. ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ.. ಮೊದಲಾದವರು ಚಿತ್ರದಲ್ಲಿದ್ದಾರೆ. ಇವರಲ್ಲೇ ಒಬ್ಬರು.. ಅಥವಾ ಇವರನ್ನು ಹೊರತುಪಡಿಸಿ ಒಬ್ಬರು ಚಿತ್ರದಲ್ಲಿ ದೆವ್ವವಾಗಿರ್ತಾರೆ ಅನ್ನೋದು ಕನ್‍ಫರ್ಮು. ಟ್ರೇಲರ್‍ನಲ್ಲಿಯೂ ಆ ಗುಟ್ಟು ಹೇಳೋದಿಲ್ವಂತೆ ನಿರ್ದೇಶಕ ಪವನ್ ಒಡೆಯರ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಹೀಗೆಯೇ ಭರ್ಜರಿ ಸದ್ದು ಮಾಡುತ್ತಿದೆ. ರಿಲೀಸ್ ಡೇಟು ಕೂಡಾ ಹತ್ತಿರವಾಗುತ್ತಿದೆ.

  • ನಟಸಾರ್ವಭೌಮನಲ್ಲೂ ಇರಲಿದೆ ಅಪ್ಪು ವಂಡರ್ಸ್

    johnny master to choregraph puneeth again

    ರಾಜಕುಮಾರ ಚಿತ್ರ, ಸೂಪರ್ ಡ್ಯೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಪುನೀತ್ ರಾಜ್‍ಕುಮಾರ್ ಸ್ಟೆಪ್ಪುಗಳೂ ಪ್ರೇಕ್ಷಕರನ್ನು ಬೆರಗಾಗಿಸಿದ್ದವು. ಡ್ಯಾನ್ಸ್ ಅಪ್ಪು ಡ್ಯಾನ್ಸ್ ಅಂತೂ ಚಿಕ್ಕಮಕ್ಕಳಿಗೂ ಫೇವರಿಟ್ ಆಗಿ ಹೋಗಿತ್ತು. ಹೀಗೆ ಹೆಜ್ಜೆಗಳ ಮೂಲಕವೇ ಮೋಡಿ ಮಾಡಿದ್ದರ ಹಿಂದಿದ್ದವರು ಜಾನಿ ಮಾಸ್ಟರ್. ಅವರೀಗ ಮತ್ತೆ ಬಂದಿದ್ದಾರೆ. ನಟಸಾರ್ವಭೌಮನಿಗಾಗಿ.

    ರಾಕ್‍ಲೈನ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್ ನಾಯಕಿಯಾಗಿದ್ದು, ಬಿ.ಸರೋಜಾದೇವಿ ದಶಕಗಳ ನಂತರ ಬಣ್ಣ ಹಚ್ಚಿದ್ದಾರೆ. ಹೀಗೆ ಸ್ಪೆಷಲ್‍ಗಳ ಸ್ಪೆಷಲ್ ಹೊತ್ತಿರುವ ಚಿತ್ರಕ್ಕೆ ಈಗ ಜಾನಿ ಮಾಸ್ಟರ್ ಕ್ರೇಜ್. ಅಭಿಮಾನಿಗಳು, ಈ ಚಿತ್ರದಲ್ಲೂ ಅಪ್ಪು ಅವರಿಂದ ಅದ್ಭುತ ಡ್ಯಾನ್ಸ್ ನಿರೀಕ್ಷೆ ಮಾಡಬಹುದು.

  • ಪುನೀತ್ ಜೀವನ ಚರಿತ್ರೆ ಬಿಡುಗಡೆ ಮಾಡಿದ ಕಿಚ್ಚ

    ಪುನೀತ್ ಜೀವನ ಚರಿತ್ರೆ ಬಿಡುಗಡೆ ಮಾಡಿದ ಕಿಚ್ಚ

    ಇತ್ತ ಜೇಮ್ಸ್ ರಿಲೀಸ್ ಹೊತ್ತಿನಲ್ಲೇ ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ ಪುಸ್ತಕವೂ ಹೊರಬಂದಿದೆ. ಈ ಜೀವನ ಚರಿತ್ರೆಯ ಹೆಸರು ನೀನೇ ರಾಜಕುಮಾರ.  ಈ ಕೃತಿ ಬರೆದಿರುವುದು ಶರಣು ಹುಲ್ಲೂರು. ಪುನೀತ್ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡಿರುವುದು ಕಿಚ್ಚ ಸುದೀಪ್.

    ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿಯಲ್ಲಿ ಅದನ್ನು ಚೆನ್ನಾಗಿ ಹಿಡಿದಿಟ್ಟಿದ್ದಾರೆ. ನಾನು ಯಾವತ್ತಿಗೂ ಮಿಸ್ ಮಾಡಿಕೊಳ್ಳುವ ವ್ಯಕ್ತಿ ಪುನೀತ್ ಎಂದಿದ್ದಾರೆ ಸುದೀಪ್.

    ಶರಣು ಹುಲ್ಲೂರು ಅವರ ಕೃತಿಗೆ ಸಾಹಿತಿ, ಪತ್ರಕರ್ತ ಜೋಗಿ ಬೆನ್ನುಡಿ ಬರೆದಿದ್ದಾರೆ. ಮುರಳೀಧರ ಖಜಾನೆ ಮುನ್ನುಡಿ ಬರೆದಿದ್ದಾರೆ.

  • ಮಾಲಾಶ್ರೀ-ಅಪ್ಪು ಜೋಡಿ ಫೋಟೋ - ಪುಟ್ಟ ಕಂದ ಯಾರು ಗೊತ್ತಾ..?

    two photos by malashree goes viral

    ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ, ಒಂದು ಹಳೇ ಫೋಟೋ ಹೊರಬಿಟ್ಟಿದ್ದಾರೆ. ಆ ಫೋಟೋದಲ್ಲಿರೋದು ಯಂಗ್ ಅಪ್ಪು. ಪುನೀತ್ ರಾಜ್‍ಕುಮಾರ್ ಮತ್ತು ಮಾಲಾಶ್ರೀ ಜೊತೆಯಾಗಿ ತೆಗೆಸಿಕೊಂಡಿರೋ ಫೋಟೋದಲ್ಲಿ ಮಾಲಾಶ್ರೀ ಪುಟ್ಟ ಮಗುವೊಂದನ್ನು ಎತ್ತಿಕೊಂಡಿದ್ದಾರೆ. ಎಲ್ಲರಿಗೂ ಕುತೂಹಲ.. ಯಾರಿದು...?

    ಅದಕ್ಕೆ ಮಾಲಾಶ್ರೀ ಅವರೇ ಉತ್ತರವನ್ನೂ ಕೊಟ್ಟಿದ್ದಾರೆ. ಮಾಲಾಶ್ರೀ ಎತ್ತಿಕೊಂಡಿರುವ ಮುದ್ದು ಕಂದ ವಿನಯ್ ರಾಜ್‍ಕುಮಾರ್. ನಂಜುಂಡಿ ಕಲ್ಯಾಣ ಶೂಟಿಂಗ್ ವೇಳೆ ತೆಗೆದಿದ್ದ ಫೋಟೋ ಅದು. 

    ಇನ್ನೊಂದು ಫೋಟೋದಲ್ಲಿ ಶಿವರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಜೊತೆಯಲ್ಲಿದ್ದಾರೆ. ನಡುವೆ ಇರೋದು ಗಡ್ಡ, ಮೀಸೆ ಅಂಟಿಸಿಕೊಂಡಿರೋ ಹುಡುಗಿ. ಅಫ್‍ಕೋರ್ಸ್.. ಅದು ಗಜಪತಿ ಗರ್ವಭಂಗದ ಮಾಲಾಶ್ರೀ.

  • ಯಶ್, ಅಪ್ಪು ಸಿನಿಮಾಗೆ ಕಿಚ್ಚನ ಪಟಾಕಿ

    sudeep wishes good luck to kgf and natasarvabhouma

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ, ಜನವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ವರ್ಷದ ಕೊನೆಯಲ್ಲಿ ಯಶ್ ಅಭಿನಯದ ಕೆಜಿಎಫ್ ಬರಲಿದೆ. ಸ್ಸೋ.. ಬೆಳ್ಳಿತೆರೆಯ ಮೇಲೆ ವರ್ಷವಿಡೀ ದೀಪಾವಳಿ ಎಂಬರ್ಥದಲ್ಲಿ ಸುದೀಪ್ ಟ್ವೀಟ್ ಮಾಡಿದ್ದರು.

    ಅಂದಹಾಗೆ ಆಯುಧಪೂಜೆಯಲ್ಲಿ ಶುರುವಾದ ಚಿತ್ರರಂಗದ ಹಬ್ಬ.. ದೀಪಾವಳಿ ನಂತರವೂ ಸದ್ದು ಮಾಡುತ್ತಲೇ ಇದೆ. ದಿ ವಿಲನ್ ಸಿನಿಮಾದಿಂದ ಶುರುವಾದ ಸ್ಟಾರ್ ಸಿನಿಮಾಗಳ ಕ್ರೇಜ್ ಹಾಗೆಯೇ ಮುಂದುವರಿಯುತ್ತಿದೆ. ಸುದೀಪ್ ಹಾರೈಕೆ ನಿಜವಾಗಿ ರಿಲೀಸ್ ಆದ ಸಿನಿಮಾಗಳೆಲ್ಲವೂ ಸಕ್ಸಸ್ ಕಾಣಲಿ.

    ಅಂದಹಾಗೆ ನಟಸಾರ್ವಭೌಮ ಚಿತ್ರದ ಡಬ್ಬಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಾಗಿ ನಡೆಯುತ್ತಿವೆ. 

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ನಟಿಸಿರುವ ಸಿನಿಮಾ ನಟಸಾರ್ವಭೌಮ.

  • ಯುವರತ್ನ ಅಪ್ಪು ಜೊತೆ ತಮನ್ನಾ..?

    will tamannah pair opposite puneeth in yuvataratna

    ತಮನ್ನಾ ಭಾಟಿಯಾ ಎಂಬ ಈ ಚೆಲುವೆ ಕನ್ನಡದಲ್ಲಿ ಕಾಣಿಸಿಕೊಂಡಿರೋದು ಎರಡು ಐಟಂ ಸಾಂಗುಗಳಲ್ಲಿ. ಮತ್ತು ಪುನೀತ್ ಜೊತೆಗಿನ ಜಾಹೀರಾತಿನಲ್ಲಿ. ಅಷ್ಟು ಬಿಟ್ಟರೆ, ಟಾಲಿವುಡ್, ಕಾಲಿವುಡ್, ಬಾಲಿವುಡ್‍ನಲ್ಲಿ ಸುತ್ತುತ್ತಿರುವ ಈ ಚೆಲುವೆ ಕನ್ನಡದಲ್ಲಿ ಪ್ರಧಾನ ಪಾತ್ರಕ್ಕೆ ಬಂದೇ ಇಲ್ಲ. ಹಲವು ಬಾರಿ ಕನ್ನಡದಲ್ಲಿ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದ ತಮನ್ನಾ, ಈ ಬಾರಿ ಬರೋದು ಖಚಿತಾನಾ..?

    ಒಂದು ಮೂಲದ ಪ್ರಕಾರ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಕಾಂಬಿನೇಷನ್ನಿನ ಯುವರತ್ನ ಚಿತ್ರಕ್ಕೆ ತಮನ್ನಾ ಬರುತ್ತಿದ್ದಾರೆ. ಮಾತುಕತೆ ನಡೆಯುತ್ತಿರುವುದು ಹೌದು ಎನ್ನುತ್ತಿರುವ ಚಿತ್ರತಂಡ, ಸುದ್ಧಿಯನ್ನು ಅಧಿಕೃತಗೊಳಿಸಿಲ್ಲ. ಏಕೆಂದರೆ, ಯಾವುದೂ ಇನ್ನೂ ಫೈನಲ್ ಆಗಿಲ್ಲ. 

  • ಯುವರತ್ನನಿಗೆ 2 ವರ್ಷದ ಸಂಭ್ರಮ..!

    ಯುವರತ್ನನಿಗೆ 2 ವರ್ಷದ ಸಂಭ್ರಮ..!

    ಹೆಡ್ಡಿಂಗ್ ರಾಂಗ್ ಇರಬೇಕು. ದಯವಿಟ್ಟು ಬದಲಿಸಿ..

    .ಅಂತಾ ಹೇಳ್ಬೇಕು ಅಂದ್ಕೊಂಡ್ರಾ..? ನಿಮ್ಮ ಲೆಕ್ಕಾಚಾರ ಕರೆಕ್ಟ್. ಯುವರತ್ನ ರಿಲೀಸ್ ಆಗಿಯೇ ಇಲ್ಲ. ಇನ್ನು 2 ವರ್ಷ ಆಗೋದ್ ಎಲ್ಲಿ.. ಅಲ್ವಾ..? ಆದರೆ 2 ವರ್ಷ ಆಗಿರೋದು ಸತ್ಯ. ರಿಲೀಸ್ ಆಗಿ ಅಲ್ಲ, ಮುಹೂರ್ತ ಆಗಿ.

    ಯುವರತ್ನ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು 2018ರ ಡಿ.12ರಂದು. ಎಲ್ಲವೂ ಪ್ಲಾನ್ ಪ್ರಕಾರವೇ ಜರುಗಿದ್ದರೆ, 2020ರ ಫಸ್ಟ್ ಹಾಫ್‍ನಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ರಾಜಕುಮಾರ ಸಕ್ಸಸ್ ಕಾಂಬಿನೇಷನ್ ಇದ್ದ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳೂ ಇದ್ದವು. ಆದರೆ.. ಎಲ್ಲವನ್ನೂ ಕೊರೊನಾ ನುಂಗಿ ಹಾಕಿಬಿಟ್ಟಿತು.

    ಪ್ರಾಬ್ಲಮ್ಮೇನೂ ಇಲ್ಲ ಬಿಡಿ. ಲೇಟ್ ಆದರೂ ಲೇಟೆಸ್ಟ್ ಆಗಿ ಬರ್ತಿರೋ ಯುವರತ್ನ, 2021ರಲ್ಲಿ ರಿಲೀಸ್ ಆಗೋದು ಗ್ಯಾರಂಟಿ. ಅದೂ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ. ಪವರ್ ಆಫ್ ಯೂಥ್.. 

  • ಯುವರತ್ನನಿಗೆ ಸಾಹೋ ಪವರ್

    saho stunt master directs yuvaratna

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಯುವರತ್ನ ಚಿತ್ರ, ಶೂಟಿಂಗ್ ಹಂತದಲ್ಲೇ ಅಬ್ಬಾ ಎನ್ನಿಸುವಷ್ಟು ಕುತೂಹಲ ಹುಟ್ಟಿಸುತ್ತಿದೆ. ಒಂದರ ಹಿಂದೊಂದು ವಿಶೇಷಗಳನ್ನು ಸೇರಿಸಿಕೊಳ್ತಿರೋ ಯುವರತ್ನ ಚಿತ್ರಕ್ಕೆ ಈಗ ಸಾಹೋ ಪವರ್ ಸಿಕ್ಕಿದೆ.

    ಅರ್ಥಾತ್, ಸಾಹೋ, ಧೀರನ್, ಥೆರಿ, ವಿಶ್ವಾಸಂ.. ಮೊದಲಾದ ಸೂಪರ್ ಹಿಟ್ ಚಿತ್ರಗಳಿಗೆ ಮೈನವಿರೇಳಿಸುವ ಸ್ಟಂಟ್ ಆಯೋಜಿಸಿದ್ದ ಸ್ಟಂಟ್ ಮಾಸ್ಟರ್ ದಿಲೀಪ್ ಸುಬ್ರಹ್ಮಣ್ಯನ್ ಯುವರತ್ನ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ.

    ಪವರ್ ಸ್ಟಾರ್ ಪವರ್‍ಗೆ ತಕ್ಕಂತೆ ಸಾಹಸ ಸಂಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿರುವ ಸಂತೋಷ್ ಆನಂದ್‍ರಾಮ್, ಅಭಿಮಾನಿಗಳು ಇನ್ನಷ್ಟು ಥ್ರಿಲ್ಲಾಗಿ ಕಾಯುವಂತೆ ಮಾಡಿದ್ದಾರೆ.

  • ರಾಮಾ ರಾಮಾ ರೇ ಡೈರೆಕ್ಟರ್‍ಗೆ ಪುನೀತ್ ಸಿನಿಮಾ

    director satyaprakash to direct next under puneeth'r banner

    ರಾಮಾ ರಾಮಾ ರೇ ಮೂಲಕ ಸಂಚಲನ ಮೂಡಿಸಿದ್ದ, ಒಂದಲ್ಲಾ ಎರಡಲ್ಲಾ ಚಿತ್ರದ ಮೂಲಕ ಭಾವನೆಗಳನ್ನು ಬಡಿದೆಬ್ಬಿಸಿದ್ದ ನಿರ್ದೇಶಕ ಸತ್ಯಪ್ರಕಾಶ್. ಅವರಿಗೀಗ ಒಂದೊಳ್ಳೆ ಆಫರ್ ಸಿಕ್ಕಿದೆ. ಅದು ಪುನೀತ್ ಬ್ಯಾನರ್‍ನಲ್ಲಿ. ಪಿಆರ್‍ಕೆ ಪ್ರೊಡಕ್ಷನ್‍ನಲ್ಲಿ ಚಿತ್ರ ನಿರ್ದೇಶನಕ್ಕೆ ಸತ್ಯಪ್ರಕಾಶ್ ರೆಡಿಯಾಗಿದ್ದಾರೆ. ಕಥೆಯನ್ನು ಪುನೀತ್ ಇಷ್ಟಪಟ್ಟಿದ್ದು, ಚಿತ್ರಕಥೆಯಲ್ಲಿ ಬ್ಯುಸಿಯಾಗಿದ್ದಾರಂತೆ ಸತ್ಯಪ್ರಕಾಶ್. ಅದು ಫೈನಲ್ ಆಗುವವರೆಗೆ ನೋ ಟಾಕ್ ಎಂದಿದ್ದಾರೆ ಸತ್ಯಪ್ರಕಾಶ್.

    ಕವಲುದಾರಿ ಸಕ್ಸಸ್ ಜೋಶ್‍ನಲ್ಲಿರುವ ಪುನೀತ್ ಬ್ಯಾನರ್‍ನಲ್ಲಿ ಈಗಾಗಲೇ ಮಾಯಾಬಜಾರ್, ಲಾ ಚಿತ್ರಗಳ ಶೂಟಿಂಗ್ ಮುಗಿದಿದೆ. ಪನ್ನಗಾಭರಣ, ಡ್ಯಾನಿಶ್ ಸೇಟ್ ಕಾಂಬಿನೇಷನ್ನಿನ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಒಂದರ ಹಿಂದೊಂದು ಬ್ರಿಡ್ಜ್ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಪುನೀತ್, ಯವ ನಿರ್ದೇಶಕರಿಗೆ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ.

  • ರಿಷಿ ಚಿತ್ರಕ್ಕೆ ಅಪ್ಪು ಹಾಡು

    puneeth sings a song for rishi's movie

    ತಮ್ಮದೇ ಬ್ಯಾನರಿನಲ್ಲಿ ಕವಲುದಾರಿ ಚಿತ್ರ ನಿರ್ಮಿಸಿ ಗೆದ್ದಿದ್ದರು ಪುನೀತ್ ರಾಜ್‍ಕುಮಾರ್. ಆ ಚಿತ್ರದಲ್ಲಿ ಹೀರೋ ಆಗಿದ್ದ ರಿಷಿ, ಈಗ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಿಷಿ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಹಾಡುವ ಮೂಲಕ ಪುನೀತ್ ರಿಷಿಗೆ ಗುಡ್ ಲಕ್ ಹೇಳಿದ್ದಾರೆ.

    ಅನೂಪ್ ರಾಮಸ್ವಾಮಿ ಕಶ್ಯಪ್ ಎಂಬುವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ದೇವರಾಜ್, ಪ್ರಶಾಂತ್ ರೆಡ್ಡಿ, ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು.

    ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ರಿಷಿಗೆ ಧನ್ಯಾ ನಾಯಕಿಯಾಗಿ ನಟಿಸುತ್ತಿದ್ದು, ದತ್ತಣ್ಣ, ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ.

  • ಲಕ್ಕಿಮ್ಯಾನ್ ಡ್ಯಾನ್ಸ್ : ಅಪ್ಪು ಪ್ರಭುದೇವ ಫೀಲಿಂಗ್ಸ್ ಏನು?

    ಲಕ್ಕಿಮ್ಯಾನ್ ಡ್ಯಾನ್ಸ್ : ಅಪ್ಪು ಪ್ರಭುದೇವ ಫೀಲಿಂಗ್ಸ್ ಏನು?

    ಪ್ರಭುದೇವ ಅವರನ್ನು ಬಹಳಷ್ಟು ಸಾರಿ ಭೇಟಿ ಮಾಡಿದ್ದೇನೆ. ನಾನು ಅವರ ಫ್ಯಾನ್. ಅವರ ಜೊತೆ ಲಕ್ಕಿಮ್ಯಾನ್ ಚಿತ್ರದಲ್ಲಿ ಡ್ಯಾನ್ಸ್ ಮಾಡಿದ್ದು ಮರೆಯಲಾಗದ ಅನುಭವ. ನೆಚ್ಚಿನ ಡ್ಯಾನ್ಸರ್ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಾಗ ಒಬ್ಬ ಅಭಿಮಾನಿಯ ಖುಷಿ ಹೇಗಿರುತ್ತೋ.. ನನಗೂ ಹಾಗೆಯೇ ಆಗಿದೆ. ಇದು ಪ್ರಭುದೇವ ಜೊತೆ ಲಕ್ಕಿಮ್ಯಾನ್ ಚಿತ್ರದಲ್ಲಿ ಹೆಜ್ಜೆ ಹಾಕಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮಾತಾದರೆ, ಅತ್ತ ಪ್ರಭುದೇವ ಕೂಡಾ ಇದಕ್ಕೆ ಹೊರತಾಗಿಲ್ಲ.

    ನಿಮ್ಮೊಂದಿಗೆ ಡ್ಯಾನ್ಸ್ ಮಾಡಿದ್ದು ಬಹಳ ಖುಷಿಕೊಟ್ಟ ವಿಚಾರ. ನೀವೊಬ್ಬ ಸಿಹಿಯಾದ ಮನಸ್ಸುಳ್ಳ ಅದ್ಭುತ ವ್ಯಕ್ತಿ ಎಂದು ಹೇಳಿದ್ದಾರೆ ಪ್ರಭುದೇವ.

    ಲಕ್ಕಿಮ್ಯಾನ್, ತಮಿಳಿನ ಓ ಮೈ ಕಡವುಳೆ ಚಿತ್ರದ ರೀಮೇಕ್. ಕನ್ನಡದಲ್ಲಿ ಈ ಚಿತ್ರವನ್ನು ಚಿತ್ರ, ಮನಸೆಲ್ಲ ನೀನೆ ಚಿತ್ರಗಳಲ್ಲಿ ನಟಿಸಿದ್ದ ಹೀರೋ ನಾಗೇಂದ್ರ ಪ್ರಸಾದ್ ಡೈರೆಕ್ಟ್ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಪ್ರಧಾನ ಪಾತ್ರಗಳಲ್ಲಿದ್ದಾರೆ.

  • ವ್ಹಾರೆವ್ಹಾ.. Gentleman

    gentlaman trailer released

    ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್ಮನ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ರಿಲೀಸ್ ಮಾಡಿದ್ದು ಪುನೀತ್ ಮತ್ತು ಧ್ರುವ ಸರ್ಜಾ ಎನ್ನುವುದೇ ವಿಶೇಷ. ಇನ್ನೂ ವಿಶೇಷವೆಂದರೆ ಪ್ರಜ್ವಲ್ ಹೇಳಿದ ಮಾತು. ‘ನನಗೆ ಸಿನಿಮಾ ರಂಗಕ್ಕೆ ಬರಲು ಸ್ಪೂರ್ತಿಯೇ ಪುನೀತ್ ಮತ್ತು ವಯಸ್ಸಿನಲ್ಲಿ ಚಿಕ್ಕವನಾದರೂ ಧ್ರುವ ನನಗೆ ಸದಾ ಪ್ರೇರಣೆ ’ ಎಂದರು ಪ್ರಜ್ವಲ್.

    ಜಡೇಶ್ ಕುಮಾರ್ ನಿರ್ದೇಶನದ ಜೆಂಟಲ್ಮ್ಯಾನ್ ಟ್ರೇಲರ್ ಟೆಕ್ನಿಕಲ್ ಸಖತ್ತಾಗಿದೆ. ಕ್ಯಾಮೆರಾ, ಮ್ಯೂಸಿಕ್, ಡೈಲಾಗ್ ಎಲ್ಲವೂ ಅದ್ಭುತ ಕ್ವಾಲಿಟಿಯಲ್ಲಿದೆ ಎಂದು ಮೆಚ್ಚಿಕೊಂಡರು ಪುನೀತ್. ಅಫ್ಕೋರ್ಸ್.. ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎಂದು ಕುತೂಹಲ ಹುಟ್ಟಿಸುವಂತಿದೆ ಟ್ರೇಲರ್. ಹೆಣ್ಣು ಮಕ್ಕಳ ಕಿಡ್ನಾಪ್ ಕಥೆ, ಒಂದು ಕ್ಯೂಟ್ ಲವ್ ಸ್ಟೋರಿ ಮತ್ತು ಇವೆಲ್ಲದರ ಮಧ್ಯೆ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ನಲ್ಲಿ ಒದ್ದಾಡುವ ಯುವಕನ ಹೋರಾಟ.

    ಗುರುದೇಶ ಪಾಂಡೆ ನಿರ್ಮಾಣದ ಜೆಂಟಲ್ಮ್ಯಾನ್ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಹೀರೋಯಿನ್.  ಸಿನಿಮಾ ಇದೇ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

  • ಸೂರಿ ಚಿತ್ರಕ್ಕೆ ಅಪ್ಪು ಸಪೋರ್ಟ್

    puneeth supports duniya soori's movie

    ದುನಿಯಾ ಸೂರಿ ನಿರ್ದೇಶನದ ಹೊಸ ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಸಪೋರ್ಟ್ ಸಿಕ್ಕಿದೆ. ಪುನೀತ್ ಅವರಿಗೆ ಸದ್ಯಕ್ಕೆ ಅತೀ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಇರುವುದು ದುನಿಯಾ ಸೂರಿಗೆ. ಜಾಕಿ, ಅಣ್ಣಾಬಾಂಡ್, ದೊಡ್ಮನೆ ಹುಡ್ಗ ಚಿತ್ರಗಳಂತ ಹಿಟ್ ಕೊಟ್ಟಿರುವ ಸೂರಿ, ಈಗ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಮಾಡಿದ್ದಾರೆ. ಡಾಲಿ ಧನಂಜಯ್ ಹೀರೋ ಆಗಿರುವ ಚಿತ್ರವಿದು.

    ಟಗರು ಚಿತ್ರದ ಬಳಿಕ ಚರಣ್ ರಾಜ್ ಸಂಗೀತ ನೀಡಿರುವ ಮತ್ತೊಂದು ಬಿಗ್ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್. ಈ ಚಿತ್ರದ ಆಡಿಯೋ ರೈಟ್ಸ್ನ್ನು ಪುನೀತ್ ಅವರ ಪಿಆರ್ಕೆ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಸುಧೀರ್ ಕೆ.ಎಂ. ನಿರ್ಮಾಣದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆಗೆ ನಿರ್ಮಾಪಕ ನವೀನ್, ಕಾಕ್ರೋಚ್ ಖ್ಯಾತಿಯ ಸುಧಿ, ಅಮೃತಾ ಅಯ್ಯರ್ ಮೊದಲಾದವರು ನಟಿಸಿದ್ದಾರೆ.

  • ಹಿಮಾಲಯದಿಂದ ಸೈಕಲ್'ನಲ್ಲೇ ಬಂದ ಅಪ್ಪು ಅಭಿಮಾನಿ

    ಹಿಮಾಲಯದಿಂದ ಸೈಕಲ್'ನಲ್ಲೇ ಬಂದ ಅಪ್ಪು ಅಭಿಮಾನಿ

    ಅಪ್ಪು ಅಭಿಮಾನದ ಕಣ್ಣೀರು ಇನ್ನೂ ಆರಿಲ್ಲ. ಇಂದಿಗೂ ನೂರಾರು ಜನ ಪ್ರತಿನಿತ್ಯ ಅಪ್ಪು ಸಮಾಧಿಗೆ ಭೇಟಿ ನೀಡಿ ಕಣ್ಣೀರಿಡುತ್ತಿದ್ದಾರೆ. ಒಂದು ರೀತಿಯಲ್ಲಿ ಅಪ್ಪು ಸಮಾಧಿ ಪುಣ್ಯಕ್ಷೇತ್ರವಾಗುತ್ತಿದೆ. ಇದರ ನಡುವೆ ಇಂತಹ ಅಭಿಮಾನಿಗಳು. ಈತನ ಹೆಸರು ಗುರು ಪ್ರಕಾಶ್ ಗೌಡ.

    ಇರೋದು ಹಿಮಾಲಯದಲ್ಲಿ. ಹಿಮಾಚಲ ಪ್ರದೇಶದಲ್ಲಿ. ಅಪ್ಪಟ ಕನ್ನಡಿಗ. ಒಟ್ಟು 47 ದಿನ ಸತತವಾಗಿ 3350 ಕಿ.ಮೀ. ದೂರವನ್ನು ಸೈಕ್ಲಿಂಗ್ ಮಾಡುತ್ತಲೇ ಬಂದಿರೋ ಗುರುಪ್ರಕಾಶ್ ಗೌಡ ಅಪ್ಪು ಸಮಾಧಿಯೆದರು ಭಾವುಕರಾಗಿ ನಿಂತಿದ್ದಾರೆ.

    ಗುರು ಪ್ರಕಾಶ್ ಗೌಡ ಅವರು ಈ ರೀತಿ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ವತಃ ಯುವರಾಜ್ ಕುಮಾರ್, ರಾಘಣ್ಣ ಸಮಾಧಿ ಬಳಿ ಬಂದರು. ನೂರಾರು ಅಭಿಮಾನಿಗಳು ಗುರು ಅವರಿಗೆ ಜೈಕಾರ ಹಾಕಿ ಸ್ವಾಗತ ಕೋರಿದರು.

    ಇಂತಹ ಅಭಿಮಾನಿಗಳನ್ನೆಲ್ಲ ನೋಡ್ತಾ ಇದ್ರೆ ನಾವೇ ಅಪ್ಪುನ ಜಾಸ್ತಿ ಪ್ರೀತಿ ಮಾಡ್ಲಿಲ್ವೇನೋ ಅನ್ಸುತ್ತೆ. ಅಪ್ಪ ಅಭಿಮಾನಿಗಳನ್ನ ದೇವರು ಅಂದ್ರೆ, ಇವರೆಲ್ಲ ರಾಜ್‍ಕುಮಾರ್ ಮಗನನ್ನ ದೇವರು ಅಂತಿದಾರೆ ಎಂದು ಭಾವುಕರಾದರು ರಾಘಣ್ಣ.

  • ಹುಬ್ಬಳ್ಳಿಯಲ್ಲಿಂದು ನಟಸಾರ್ವಭೌಮ ಬರೋದು ಗ್ಯಾರಂಟಿ

    puneeth at natasarvabhouma audio launch in hubbali

    ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಹುಬ್ಬಳ್ಳಿಗೆ ಬರುತ್ತಾರೋ ಇಲ್ಲವೋ.. ನಟಸಾರ್ವಭೌಮ ಆಡಿಯೋ ರಿಲೀಸ್ ಆಗುತ್ತೋ.. ಇಲ್ಲವೋ ಎಂಬ ಎಲ್ಲ ಗೊಂದಲಗಳಿಗೆ ಈಗ ತೆರೆ ಬಿದ್ದಿದೆ. ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಗುರುವಾರ ಬೆಳಗ್ಗೆ ಶುರುವಾದ ಐಟಿ ತನಿಖೆ, ಶುಕ್ರವಾರ ರಾತ್ರಿ ಮುಗಿದಿದೆ. ಎಲ್ಲ ತನಿಖೆ, ವಿಚಾರಣೆ ಮುಗಿದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುನೀತ್ ರಾಜ್‍ಕುಮಾರ್, ತನಿಖೆಗೆ ಎಲ್ಲ ಸಹಕಾರ ನೀಡಿದ್ದೇವೆ. ಅವರ ಕರ್ತವ್ಯ ಅವರು ಮಾಡಿದ್ದಾರೆ ಎಂದಿದ್ದಾರೆ.

    ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಟಸಾರ್ವಭೌಮ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಪುನೀತ್ ಜೊತೆ ಯುವರಾಜ್ ಕುಮಾರ್ ಕೂಡಾ ಸ್ಟೆಪ್ ಹಾಕಲಿದ್ದಾರೆ. ಪವನ್ ಒಡೆಯರ್ ಈಗಾಗಲೇ ತಮ್ಮ ದೊಡ್ಡ ತಂಡದ ಜೊತೆ ಹುಬ್ಬಳ್ಳಿ ತಲುಪಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಮನೆಯಲ್ಲಿ ಐಟಿ ವಿಚಾರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರು ಬರುವ ಸಾಧ್ಯತೆ ಇನ್ನೂ ಅನುಮಾನ.