` yash, - chitraloka.com | Kannada Movie News, Reviews | Image

yash,

  • ಪ್ರಶಾಂತ್ ನೀಲ್, ಯಶ್`ಗೆ ರವೀನಾ ಟಂಡನ್ ಕೊಟ್ಟ ಸರ್ಟಿಫಿಕೇಟ್

     ಪ್ರಶಾಂತ್ ನೀಲ್, ಯಶ್`ಗೆ ರವೀನಾ ಟಂಡನ್ ಕೊಟ್ಟ ಸರ್ಟಿಫಿಕೇಟ್

    ಕನ್ನಡಕ್ಕೆ ಬೇರೆ ಭಾಷೆಯ ನಟ, ನಟಿಯರು ಬರುವುದು ಹೊಸದೇನಲ್ಲ. ಆದರೆ ಕೆಲವರು ಬಂದು ಹೋದ ಮೇಲೆ ಕೆಟ್ಟದನ್ನು ಹೇಳೋದೇ ಹೆಚ್ಚು. ಈ ಹಿಂದೆ ಉಪೇಂದ್ರ ಚಿತ್ರಕ್ಕೆ ಬಂದು ಹೋಗಿದ್ದ ರವೀನಾ, ಕನ್ನಡ ಚಿತ್ರರಂಗದ ಬಗ್ಗೆ ಒಳ್ಳೆಯ ಮಾತುಗಳನ್ನೇನೂ ಆಡಿರಲಿಲ್ಲ. ಆದರೆ, ಈಗ ಕೆಜಿಎಫ್ ಚಾಪ್ಟರ್-2ಗೆ ಬಂದಿರೋ ವೀನಾ ಟಂಡನ್, ಚಿತ್ರ, ನಿರ್ದೇಶಕ ಮತ್ತು ನಾಯಕ ನಟನನ್ನು ಹಾಡಿ ಹೊಗಳಿದ್ದಾರೆ.

    ಕೆಜಿಎಫ್ 1 ನೋಡೋದಕ್ಕೂ ಮುನ್ನವೇ ಕೆಜಿಎಫ್ 2 ಮತ್ತು ನನ್ನ ಪಾತ್ರದ ಬಗ್ಗೆ ಕೇಳಿದ್ದೆ. ಆನಂತರ ಪ್ರಶಾಂತ್ ನೀಲ್ ಚಿತ್ರಕಥೆಯ ರೀಡಿಂಗ್ ಕೊಟ್ಟರು. ಕಥೆ ಮತ್ತು ಪಾತ್ರ ಇಷ್ಟವಾಯಿತು. ಕೆಜಿಎಫ್ 1 ನೋಡಿದ ಮೇಲಂತೂ, ಸಿನಿಮಾವನ್ನು ಡ್ರಾಪ್ ಮಾಡಲು ಯಾವುದೇ ಕಾರಣ ನನಗೆ ಸಿಗಲಿಲ್ಲ ಎಂದಿರೋ ರವೀನಾ ಟಂಡನ್ ಕಣ್ಣಿಗೆ ಪ್ರಶಾಂತ್ ನೀಲ್ ಸ್ಪೆಷಲ್ ಡೈರೆಕ್ಟರ್.

    ಅವರ ಕೂಲ್ ಕಣ್ಣಲ್ಲಿ ಏನೇನೆಲ್ಲ ಓಡುತ್ತೆ ಅನ್ನೋದನ್ನು ಊಹಿಸೋಕೂ ಸಾಧ್ಯವಿಲ್ಲ ಅನ್ನೋ ರವೀನಾ ಟಂಡನ್, ತಮ್ಮ ರಮಿಕಾ ಸೇನ್ ಪಾತ್ರವನ್ನು ನೀವ್ಯಾರೂ ಊಹಿಸೋಕೆ ಸಾಧ್ಯವಿಲ್ಲ ಎನ್ನುತ್ತಾರೆ.

    ನಟ ಯಶ್ ಪ್ರತಿಭಾವಂತ, ಅವರ ಜೊತೆ ಕೆಲಸ ಮಾಡುವುದು ವಿಶಿಷ್ಟ ಅನುಭವ ಅನ್ನೋದು ರವೀನಾ ಟಂಡನ್ ಮಾತು.

  • ಯಶ್ ಚಿತ್ರಕ್ಕೆ ಮಫ್ತಿ ನರ್ತನ್ ಡೈರೆಕ್ಷನ್..?

    yash's next movie with mufti narthan

    ಯಶ್ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರಂತೆ. ಆ ಚಿತ್ರಕ್ಕೆ ತಮನ್ನಾ ನಾಯಕಿಯಂತೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿಬಿಟ್ಟಿದೆ. ನಿರ್ಮಾಪಕರೂ ರೆಡಿ, ನಿರ್ದೇಶಕರು ರೆಡಿ ಎನ್ನುತ್ತಿದ್ದರಾದರೂ, ಯಾರವರು ಎಂಬುದು ಮಾತ್ರ ಪಕ್ಕಾ ಆಗುತ್ತಿಲ್ಲ. ಹಾಗೆ ಕೇಳಿಬಂದ ನಿರ್ದೇಶಕರ ಹೆಸರಲ್ಲಿ ಮಫ್ತಿ ನರ್ತನ್ ಹೆಸರೂ ಇದೆ. ಹೌದಾ ಎಂದಾಗ ನರ್ತನ್ ಹೇಳಿರೋದು ಇಷ್ಟು.

    `ಯಶ್ ನನಗೆ ಅಣ್ಣನಿದ್ದಂತೆ. ಕಥೆ ಮಾಡಿಕೊಂಡು ಬಾ ಎಂದಿದ್ದಾರೆ. ಕೆಜಿಎಫ್ ನಂತರ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ಜವಾಬ್ದಾರಿ ಹೆಚ್ಚು. ಅದಕ್ಕೆ ತಕ್ಕಂತೆ ಕಥೆ ಮಾಡುತ್ತಿದ್ದೇನೆ' ಎಂದಿದ್ದಾರೆ.

    ಹಾಗಂತ ಅದು ಫೈನಲ್ ಅಲ್ಲ. ಏಕೆಂದರೆ ನರ್ತನ್ ಅವರ ಬಳಿ ಇನ್ನೂ ಕಥೆ ಕಂಪ್ಲೀಟ್ ಸಿದ್ಧವಾಗಿಲ್ಲ. ಆ ಕಥೆಯನ್ನು ಯಶ್‍ಗೆ ಹೇಳಿಯೂ ಇಲ್ಲ. ಹೀಗಾಗಿ ಈಗ ಹರಿದಾಡುತ್ತಿರುವ ಯಶ್ ಹೊಸ ಚಿತ್ರ, ತಮನ್ನಾ ನಾಯಕಿ ಎಂಬ ಸಿನಿಮಾದ ನಿರ್ದೇಶಕ ನರ್ತನ್ ಅವರಲ್ಲದೆಯೂ ಇರಬಹುದು. ಗಾಳಿಸುದ್ದಿಗಳಿಗೆಲ್ಲ ಗುದ್ದು ಕೊಟ್ಟು ಇದೇ ಕರೆಕ್ಟ್ ಎಂದು ಹೇಳಬೇಕಿರುವುದು ಯಶ್ ಮಾತ್ರ.

  • `ತಪ್ಪು ಮಾಡಿ.. ಆಣ್ಣಾ.. ನಾನು ನಿನ್ನ ಅಭಿಮಾನಿ ಎನ್ನಬೇಡಿ'

    yash requests fans to help curb piracy

    ಪೈರಸಿ ವಿರುದ್ಧ ಸಮರವನ್ನೇ ಸಾರಲು ಹೊರಟಿರುವ ಕೆಜಿಎಫ್ ಚಿತ್ರತಂಡ, ಹೆಲ್ಪ್‍ಲೈನ್ ಆರಂಭಿಸಿರುವುದು ತಿಳಿದಿದೆಯಷ್ಟೇ. ಅಷ್ಟೇ ಅಲ್ಲ, 2000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರ, ಚಿತ್ರವನ್ನು ಪೈರೇಟ್ ಮಾಡುವವರ ವಿರುದ್ಧ ಹದ್ದಿನ ಕಣ್ಣಿಟ್ಟಿದೆ.

    ಫೇಸ್‍ಬುಕ್ ಲೈವ್, ಥಿಯೇಟರುಗಳಲ್ಲಿ ಮೊಬೈಲ್, ಕ್ಯಾಮೆರಾಗಳಲ್ಲಿ ಚಿತ್ರೀಕರಣ ಮಾಡೋದು.. ತಪ್ಪು. ಯಾರೂ ಕಾನೂನು ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಯಶ್. ಪೈರಸಿ ಆಗದಂತೆ ತಡೆಯುವ ಹೊಣೆಯನ್ನು ಖಾಸಗಿ ಏಜೆನ್ಸಿಯೊಂದಕ್ಕೆ ವಹಿಸಲಾಗಿದೆ.

    ತಪ್ಪು ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ತಪ್ಪು ಮಾಡಿ, ಅಣ್ಣಾ ನಾನು ನಿಮ್ಮ ಅಭಿಮಾನಿ ಎಂದರೆ, ಪೊಲೀಸರು ಸುಮ್ಮನಿರಲ್ಲ. ಒಳ್ಳೆಯ ಸಿನಿಮಾ ಮಾಡಿದರೆ, ಕನ್ನಡ ಚಿತ್ರರಂಗ ಏರುವ ಎತ್ತರವೇ ಬೇರೆ. ಕನ್ನಡ ತಲುಪುವ ಎತ್ತರವೇ ಬೇರೆ. ಮರೆಯಬೇಡಿ. ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ ಯಶ್. 

  • `ಮೈ ನೇಮ್ ಈಸ್ ಕಿರಾತಕ'ನ ಕಥೆ ಏನು..?

    what is the story od my name is kirataka

    ಕೆಜಿಎಫ್ ಚಾಪ್ಟರ್ 1 ಮುಗಿದು, ಚಾಪ್ಟರ್ 2 ಶುರುವಾಗುವ ನಡುವೆ ಯಶ್ ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ನಟಿಸಬೇಕಿತ್ತು. ಚಿತ್ರಕ್ಕೆ ಮುಹೂರ್ತವೂ ಆಗಿತ್ತು. ಗಡ್ಡ, ಕೂದಲು ತೆಗೆಸಿಕೊಂಡು ಸ್ಮಾರ್ಟ್ ಆಗಿದ್ದ ಯಶ್, ಈ ಚಿತ್ರಕ್ಕೆ ಕೆಲವು ದಿನಗಳ ಚಿತ್ರೀಕರಣವನ್ನೂ ಮಾಡಿದ್ದರು. ಆದರೆ, ಚಾಪ್ಟರ್ 2 ಶುರುವಾದ ಕೂಡಲೇ ಈ ಚಿತ್ರಕ್ಕೆ ಬ್ರೇಕ್ ಬಿದ್ದಿತ್ತು. ಕೆಜಿಎಫ್ ಚಾಪ್ಟರ್ 2 ಮುಗಿದ ಮೇಲೆ ಮೈ ನೇಮ್ ಈಸ್ ಕಿರಾತಕ ಎಂದಿದ್ದರು ಯಶ್ ಮತ್ತು ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ.

    ಮುಂದೇನಾಯ್ತು..? ಆಗ ಸ್ಪಷ್ಟನೆ ಕೊಟ್ಟ ಬಳಿಕ ಚಿತ್ರತಂಡ ಕಂಪ್ಲೀಟ್ ಸೈಲೆಂಟ್ ಆಗಿತ್ತು. ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದಲ್ಲಿ ಸೆಟ್ಟೇರಿರುವ ಮೈ ನೇಮ್ ಈಸ್ ಕಿರಾತಕ ಈ ಬಾರಿ ಯಶ್ ಹುಟ್ಟುಹಬ್ಬಕ್ಕೆ ಜಾಹೀರಾತು ನೀಡಿದೆ.

    ಅಕಸ್ಮಾತ್ ಚಿತ್ರ ನಿಂತಿದ್ದರೆ, ಜಾಹೀರಾತಿನ ಪ್ರಮೇಯವೇ ಬರುತ್ತಿರಲಿಲ್ಲ. ಜಾಹೀರಾತು ನೋಡಿದವರಿಗೆ ಅದು ಪಕ್ಕಾ ಆಗಿದೆ. ಅರ್ಥಾತ್, ಕೆಜಿಎಫ್ 2 ನಂತರ ಯಶ್ ಮತ್ತೊಮ್ಮೆ ಜಯಣ್ಣ ಭೋಗೇಂದ್ರ ಬ್ಯಾನರ್‍ನ ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ನಟಿಸಲಿದ್ದಾರೆ

  • `ರಾಯ'ರ ಮಗಳ ಫೋಟೋ ವೈರಲ್

    baby yr image

    ಬೇಬಿ ವೈಆರ್. ಇದು ಸದ್ಯಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಮಗಳಿಗೆ ಇಟ್ಟಿರೋ ಟೆಂಪೊರರಿ ಹೆಸರು. ನಾವು ಸ್ವಲ್ಪ ಕನ್ನಡದಲ್ಲೇ ಕರೆಯುತ್ತಿದ್ದೇವೆ. ರಾಯರ ಮಗಳು ಅನ್ನೋಣ. 

    ಅಕ್ಷಯ ತೃತೀಯದ ದಿನದಂದು, ತಮ್ಮ ಮುದ್ದಿನ ಮಗಳ ಫೋಟೋ ತೋರಿಸಲು ಮುಹೂರ್ತ ಇಟ್ಟುಕೊಂಡಿದ್ದ ಯಶ್ ಮತ್ತು ರಾಧಿಕಾ ಜೋಡಿ, ಮುದ್ದು ಮುದ್ದಾದ ಫೋಟೋ ಬಿಡುಗಡೆ ಮಾಡಿದೆ.

    ಅಭಿಮಾನಿಗಳು, ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು.. `ರಾಯ'ರ ಮಗಳಿಗೆ ಶುಭ ಕೋರಿದ್ದಾರೆ. ಹರಸಿ ಆಶೀರ್ವದಿಸಿದ್ದಾರೆ. 

    ಸದ್ಯಕ್ಕಿನ್ನೂ `ರಾಯ'ರ ಮಗಳಿಗೆ ನಾಮಕರಣ ಆಗಿಲ್ಲ. ಸ್ವಲ್ಪ ದಿನಗಳಲ್ಲೇ `ರಾಯ'ರ ಮಗಳ ನಾಮಕರಣದ ಮುಹೂರ್ತ ಫಿಕ್ಸ್ ಆಗಬಹುದು. ಕಾಯ್ತಾ ಇರಿ.

  • 'KGF 2' Likely To Release During Sankranthi Festival

    meet the prime suspect behind bangalore drug mafia

    Every year, there is a huge rush of big stars films during the Sankranthi festival season particularly in South India. This time, due to Corona effect there is no line up of big releases as most of the films are still under progress. 

    While most of the big stars' films are yet to be completed, Yash's 'KGF 2' is likely to encash the situation, If sources are to be believed then 'KGF 2' is likely to release during the Sankranthi Festival season in 2021.

    The final schedule of Yash starrer 'KGF - Chapter 2' has already started and the team has shot some major portions in the coastal area of Karnataka, after which shooting will continue in Bangalore, Hyderabad and other places.

    The team intends to wrap up the remaining portions by this month end, after which the team will work towards the promotion and release. 

    'KGF - Chapter 2' stars Yash, Srinidhi Shetty, Sanjay Dutt, Raveena Tandon and others in prominent roles. The film is produced by Vijaykumar Kiragandur under Hombale Productions. Prashanth Neel has written the story and screenplay apart from directing it

  • 'KGF 2' Teaser Creates A Record

    'KGF 2' Teaser Creates A Record

    The 'KGF 2' teaser which was released on the 07th of January ahead of Yash's birthday has created a record of sorts in Indian film history for being the most watched teaser among the Indian films till now.

    The teaser of 'KGF 2' was scheduled on the 08th of January for Yash's birthday. However, the teaser was released 12 hours earlier due to various reasons and the teaser smashed all the previous records of Indian films including 'Master', 'RRR' and others and became the first film teaser to record a 100 plus million views and 5.3 plus million likes. The teaser is still trending number one on Youtube and marching ahead.

    The shooting for 'KGF 2' was completed in December 2020 and the team is busy with the post-production of the film. Meanwhile, the teaser has taken the country by storm which has enhanced the team's confidence in the film.

    'KGF 2' stars Yash, Srinidhi Shetty, Sanjay Dutt, Raveena Tandon and others. Prashant Neel has scripted the film apart from directing it. Vijay Kiragandur has produced the film under Hombale Films.

  • 'KGF 2' To Release On The 16th Of July

    'KGF 2' To Release On The 16th Of July

    Just when the release dates of all the big films of Sandalwood for the first half were announced, the release date of 'KGF  2' was a mystery. Now, the team has finally put an end to the long wait by announcing the release date of the film. 'KGF 2' is all set to be released on the 16th of July this year.

    Director Prashanth Neel took to social media recently and announced the release date of the film. 'KGF 2' is one among the few PAN India films that people are waiting for. The shooting for 'KGF 2' was completed in December 2020 and the team is busy with the post-production of the film. Meanwhile, the teaser has taken the country by storm and has broken all the previous records so far.

    'KGF 2' stars Yash, Srinidhi Shetty, Sanjay Dutt, Raveena Tandon and others. Prashant Neel has scripted the film apart from directing it. Vijay Kiragandur has produced the film under Hombale Films.

  • 'KGF' In Television On March 30th

    kgf in tv on march 30th

    Yash starrer 'KGF' which is a blockbuster at the box-office is nearing 100 days. Meanwhile, the film is all set to be premiered in Colors Kannada on the 30th of March.

    The Kannada version of the film is already streaming in Amazon Prime and the Hindi version of the film has already been aired in Sony television. Now the Kannada version of KGF is all set to be premiered in Colors Kannada at 7 PM on March 30th.

    'KGF' is written and directed by Prashanth Neel who had earlier directed Murali starrer 'Ugram'. Tthe film is produced by Vijaykumar Kiragandur. The film stars Yash, Srinidhi Shetty, Tamanna Bhatia, Vasishta Simha, Ananth Nag and others. The film has music by Ravi Basrur and camerawork is by Bhuvan Gowda.

  • 'KGF' Release Date To Be Announced On Sep 19th

    kgf release date to announce on sep 19th

    The shooting for Yash starrer 'KGF' is complete and the release date of the film is all set to be announced on the 19th of September.

    'KGF' is written and directed by Prashanth Neel who had earlier directed Murali starrer 'Ugram'. This is his second film as a director and the film is produced by Vijaykumar Kiragandur, who had earlier produced 'Rajakumara', 'Ninnindale' and 'Master Piece'. 

    'KGF' stars Yash, Srinidhi Shetty, Tamanna Bhatia, Vasishta Simha, Achyuth Kumar, Nassar and others and will be released in Kannada, Telugu and Tamil languages simultaneously. The film has music by Ravi Basrur and camerawork is by Bhuvan Gowda.

  • 'KGF' To Release On November 16th

    kgf to release on nov 16th

    The release date of Yash starrer 'KGF' was said to be announced today and according to that the the film's release date has been scheduled on the 16th of November.

    'KGF' is written and directed by Prashanth Neel who had earlier directed Murali starrer 'Ugram'. This is his second film as a director and the film is produced by Vijaykumar Kiragandur, who had earlier produced 'Rajakumara', 'Ninnindale' and 'Master Piece'. 

    'KGF' stars Yash, Srinidhi Shetty, Tamanna Bhatia, Vasishta Simha, Achyuth Kumar, Nassar and others and will be released in Kannada, Telugu and Tamil languages simultaneously. The film has music by Ravi Basrur and camerawork is by Bhuvan Gowda.

  • 'My Name is Kirataka' To Be Delayed By Two Years

    my name is kirataka to be delayed by two years

    Recently, there was a news that Yash's new film 'My Name is Kirataka' has been shelved due to various reasons. However, producer Jayanna has denied the rumors saying that the film has not been shelved, but will be delayed by two years,

    Yash's new film 'My Name is Kirataka' which was earlier titled as 'Kirataka 2' was launched in August. The team shot for the film for few days. However, Yash got busy with the release of 'KGF' and the shooting for 'My Name is Kirataka' was stopped. Now 'KGF' has not only been released, but Yash is getting ready for the shooting of the sequel. So, Jayanna has decided to start the film, 'KGF 2' is released, which will happen only after two years.

    Anil of 'Rambo 2' has written the script apart from directing the film. Arjun Janya is the music director, while Sudhakar Raj is the cameraman. Actress Nanditha aka Shwetha was the heroine.

  • 'ರಾಯ'ರ ಮಕ್ಕಳ ಮೊದಲ ರಕ್ಷಾಬಂಧನ

    yash and radhika pandit's kids celebrate rakhi

    `ರಾಯ'ರ ಮಕ್ಕಳೆಂದರೆ ಗೊಂದಲವೇನೂ ಬೇಡ, ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಯ ಮಕ್ಕಳು, ಅಷ್ಟೆ. ಈಗ ಈ ರಾಯರ ಮಕ್ಕಳು ಮೊದಲ ರಕ್ಷಾ ಬಂಧನ ಆಚರಿಸಿರುವುದೇ ವಿಶೇಷ. ಈ ವರ್ಷದ ಹೊಸ ಅಕ್ಕ-ತಮ್ಮ ಜೋಡಿ ರಾಯರ ಮಕ್ಕಳು. ಐರಾ ಮತ್ತು ಮತ್ತವಳ ಪುಟ್ಟ ತಮ್ಮ.

    ಐರಾ ಈ ರಾಕಿಹಬ್ಬದ ದಿನ ತಮ್ಮನಿಗೆ ರಾಕಿ ಕಟ್ಟಿ ಸಂಭ್ರಮಿಸಿದರೆ, ರಾಕಿಭಾಯ್ ಯಶ್ ಸೋದರಿ ಅಣ್ಣನಿಗೆ ರಾಕಿ ಕಟ್ಟಿ ಸಂಭ್ರಮಿಸಿದ್ರು. ಮಕ್ಕಳ ರಾಕಿ ಹಬ್ಬದ ಸಂಭ್ರಮದ ನಡುವೆಯೂ ಸ್ವಲ್ಪ ಬೇಸರದಲ್ಲಿದ್ದವರು ಸ್ವತಃ ರಾಧಿಕಾ ಪಂಡಿತ್. ಏಕೆಂದರೆ ಅವರ ಪ್ರೀತಿಯ ಸಹೋದರ ಈಗ ಇರೋದು ಚಿಕಾಗೋದಲ್ಲಿ. ಕೊರೊನಾ ಇರೋ ಕಾರಣ ಬರೋದಕ್ಕೂ ಆಗಿಲ್ಲ. ಮೊದಲ ಬಾರಿಗೆ ರಾಕಿ ಹಬ್ಬದ ದಿನ ಅಣ್ಣನನ್ನು ಮಿಸ್ ಮಾಡಿಕೊಂಡಿದ್ದಾರೆ ರಾಧಿಕಾ ಪಂಡಿತ್.

  • 1.8 ಕೋಟಿ ನೆರವು ನೀಡಿ ಚಾನೆಲ್ಲುಗಳಿಗೆ ನೋ ಎಂದ ಯಶ್

    1.8 ಕೋಟಿ ನೆರವು ನೀಡಿ ಚಾನೆಲ್ಲುಗಳಿಗೆ ನೋ ಎಂದ ಯಶ್

    ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಹೃದಯವಂತಿಕೆ ಮೆರೆದಿದ್ದಾರೆ. ಒಬ್ಬರಲ್ಲ.. ಇಬ್ಬರಲ್ಲ.. ಬರೋಬ್ಬರಿ 3,600ಕ್ಕೂ ಹೆಚ್ಚು ಚಲನಚಿತ್ರ ಕಾರ್ಮಿಕ ಕುಟುಂಬಗಳಿಗೆ ತಲಾ 5 ಸಾವಿರ ರೂ. ನೀಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಒಬ್ಬೊಬ್ಬರಿಗೆ ತಲಾ 5 ಸಾವಿರ ಎಂದರೆ, ನೋಂದಾಯಿತ 3600 ಕುಟುಂಬಗಳಿಗೆ 1 ಕೋಟಿ 80 ಲಕ್ಷಕ್ಕೂ ಹೆಚ್ಚು ನೆರವು. ನೇರವಾಗಿ ಕಾರ್ಮಿಕರ ಖಾತೆಗೇ ಹಣ ಹಾಕುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ ಯಶ್.

    ಇದು ಬರೀ ಮಾತನಾಡುವ ಸಮಯ ಅಲ್ಲ. ಸಂಕಷ್ಟದಲ್ಲಿರುವ ನಮ್ಮವರ ಕುಟುಂಬದ ಜೊತೆ ನಿಲ್ಲಬೇಕಾದ ಸಮಯ. ನನ್ನದು ಸಣ್ಣ ಸಹಾಯ. ಸಂಕಷ್ಟದಲ್ಲಿರುವವರ ಎಲ್ಲ ಕಷ್ಟಗಳಿಗೂ ಇದು ಪರಿಹಾರ ಎನ್ನುವುದು ನನ್ನ ಭಾವನೆ ಅಲ್ಲ. 3 ಸಾವಿರಕ್ಕೂ ಹೆಚ್ಚಿರುವ ನಮ್ಮ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಖಾತೆಗಳಿಗೆ ನೇರವಾಗಿ ಅವರ ಅಧಿಕೃತ ಖಾತೆಗಳಿಗೆ ನನ್ನ ಸಂಪಾದನೆಯ ಹಣ ನೀಡಲಿದ್ದೇನೆ. ಈಗಿನಿಂದಲೇ ಅದು ಜಾರಿಗೆ ಬರಲಿದೆ ಎಂದು ವಿನಮ್ರತೆ ಮೆರೆದಿದ್ದಾರೆ ಯಶ್.

    ತಮ್ಮ ನೆರವಿನ ಹಸ್ತ ಚಾಚುವುದಕ್ಕೂ ಮುನ್ನ ಚಲನಚಿತ್ರರಂಗದ ಹಿರಿಯರಾದ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರವೀಂದ್ರನಾಥ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ವಿವರ ಪಡೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆಯನ್ನೂ ಕೊಟ್ಟಿದ್ದಾರೆ ಯಶ್.

    ಯಶ್ ಅವರ ಈ ಸಹಾಯಕ್ಕೆ ಕಾರ್ಮಿಕರು, ತಂತ್ರಜ್ಞರ ಪರವಾಗಿ ಧನ್ಯವಾದ ತಿಳಿಸಿದ್ದಾರೆ ಸಾ.ರಾ.ಗೋವಿಂದು.

    ಇಷ್ಟೇ ಅಲ್ಲ, ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರ ಕುಟುಂಬಗಳಿಗೆ ನೆರವಾಗಿ ನಿಲ್ಲಬೇಕು. ಹಾಗೆ ಮಾಡಿದರೆ ನಾನು ಮಾಡಿದ ಈ ಪ್ರಯತ್ನಕ್ಕೆ ಸಾರ್ಥಕತೆ ಬರಲಿದೆ ಎಂದಿದ್ದಾರೆ ಯಶ್.

    ಇನ್ನು ಈ ಬಗ್ಗೆ ಯಾವುದೇ ಸುದ್ದಿವಾಹಿನಿಗಳ ಜೊತೆ ಮಾತನಾಡಿಲ್ಲ. ಮಾಡಿದ ಸಹಾಯದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದೇ ಹೋದರೆ ಅದು ಕೆಲವರಿಗೆ ದಕ್ಕದೇ ಹೋಗಬಹುದು. ಮಾಹಿತಿ ನೀಡಿದ್ದೇನೆ. ಇಷ್ಟರಮೇಲೆ ನಾವು ಮಾಡಿದ ಸಹಾಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ ಯಶ್.

  • 10 ಕೋಟಿ ದಾಖಲೆಯತ್ತ ರಾಕಿ ಭಾಯ್

    10 ಕೋಟಿ ದಾಖಲೆಯತ್ತ ರಾಕಿ ಭಾಯ್

    ಕೆಜಿಎಫ್ ಚಾಪ್ಟರ್ 2 ಟೀಸರ್ ದಾಖಲೆಗಳನ್ನೇ ಸೃಷ್ಟಿಸಿಬಿಟ್ಟಿದೆ. ಲೀಕ್ ಆದರೂ ರೆಕಾರ್ಡುಗಳನ್ನೆಲ್ಲ ಬ್ರೇಕ್ ಮಾಡಿಕೊಂಡು ಮುನ್ನುಗ್ಗುತ್ತಿರೋ ಕೆಜಿಎಫ್ ಚಾಪ್ಟರ್ 2 ಟೀಸರ್, 10 ಕೋಟಿ ವೀಕ್ಷಣೆ ದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತಿದೆ. ಟೀಸರ್ ಬಿಡುಗಡೆ ಮಾಡಿದ 24 ಗಂಟೆಗಳಲ್ಲೇ 78 ಮಿಲಿಯನ್ ವ್ಯೂವ್ಸ್ ಪಡೆದದ್ದು ರಾಕಿ ಭಾಯ್ ಹೆಗ್ಗಳಿಕೆ.

    ಒಂದು ಮಿಲಿಯನ್ ಅಂದರೆ 10 ಲಕ್ಷ. ಈಗಾಗಲೇ 85 ಮಿಲಿಯನ್ ವೀಕ್ಷಕರ ಸಂಖ್ಯೆ ದಾಟಿದೆ. ಅಂದರೆ ಎಂಟೂವರೆ ಕೋಟಿ ವೀಕ್ಷಣೆಯ ದಾಖಲೆ. ಕನ್ನಡದ ಮಟ್ಟಿಗಂತೂ ಇದು ಅದ್ಭುತ ದಾಖಲೆಯೇ ಸರಿ.

    ಪ್ರಶಾಂತ್ ನೀಲ್ ಟಚ್ ಇರೋ ಟೀಸರಿನಲ್ಲಿ ಸಂಜಯ್ ದತ್ ಮುಖವನ್ನೇ ತೋರಿಸಲ್ಲ. ರವೀನಾ ಟಂಡನ್ ಅವರ ಮೆಚ್ಯೂರ್ಡ್ ಲುಕ್ ಗಮನ ಸೆಳೆಯುತ್ತೆ. ಶ್ರೀನಿಧಿ ಶೆಟ್ಟಿ ಸೌಂದರ್ಯ ದೇವತೆಯಂತೆ ಕಂಡರೆ, ಅವರೆಲ್ಲರನ್ನೂ ಸುಟ್ಟು ಬಿಡುವಂತೆ ಕೆಂಡದಂತೆ ಹೊಳೆಯುತ್ತಾನೆ ರಾಕಿ ಬಾಯ್. ಬೆನ್ನಲ್ಲಿ ಕೇಳಿಸೋದು ಪ್ರಕಾಶ್ ರೈ ವಾಯ್ಸ್. ಅನಂತ್‍ನಾಗ್ ಇಲ್ಲಿ ಇಲ್ಲ.

    ಟೋಟಲ್ ಆಗಿ ಖಡಕ್ಕಾಗಿರೋ ಟೀಸರ್ 10 ಕೋಟಿ ದಾಟೋದು ಪಕ್ಕಾ. ಅಲ್ಲಿಗೆ ಹೊಸ ಇತಿಹಾಸ ಸೃಷ್ಟಿಯಾಗೋದು ಕೂಡಾ ಪಕ್ಕಾ.

  • 10,000 ಸ್ಕ್ರೀನ್ + 100 ಟಿಕೆಟ್ ಫ್ಯಾನ್ + ಹೈದರಾಬಾದ್ ಪೊಲೀಸ್ = ದಾಖಲೆ ಸಾರ್.. ದಾಖಲೆ

    10,000 ಸ್ಕ್ರೀನ್ + 100 ಟಿಕೆಟ್ ಫ್ಯಾನ್ + ಹೈದರಾಬಾದ್ ಪೊಲೀಸ್ = ದಾಖಲೆ ಸಾರ್.. ದಾಖಲೆ

    ಸಿನಿಮಾ ಸೃಷ್ಟಿಸುತ್ತಿರೋ ದಾಖಲೆ ಒಂದಾದ್ರೆ.. ಫ್ಯಾನ್ಸ್ ಸೃಷ್ಟಿಸಿದ  ದಾಖಲೆಗಳೇ ಬೇರೆ..

    ಇದೊಂಥರಾ ನೋಡೋಕೆ ಮಜಾ. ಒಂದು ಕಡೆ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ದಾಖಲೆಗಳ ಮೇಲೆ ದಾಖಲೆ ಬರೆದು ಪ್ರೇಕ್ಷಕರಿಗೆ ತಲುಪಿಸೋ ಸಾಹಸ ಮಾಡುತ್ತಿರೋದು ಹೊಂಬಾಳೆ ಫಿಲಮ್ಸ್. ಪ್ರಶಾಂತ್ ನೀಲ್-ಯಶ್-ವಿಜಯ್ ಕಿರಗಂದೂರ ಕಾಂಬಿನೇಷನ್‍ನ ಸಿನಿಮಾ ಸೃಷ್ಟಿಸುತ್ತಿರೋ ದಾಖಲೆಗಳು ಒಂದೆರಡಲ್ಲ. ರಾಕಿಂಗ್ ಸ್ಟಾರ್ ಜೊತೆ ಈ ಬಾರಿ ಸಂಜಯ್ ದತ್, ರವೀನಾ ಟಂಡನ್ ಕೂಡಾ ಇರೋದ್ರಿಂದ ಇಡೀ ಚಿತ್ರದ ತೂಕವೇ ಹೆಚ್ಚಾಗಿದೆ. ಶ್ರೀನಿಧಿ ಶೆಟ್ಟಿ, ನಾಗಾಭರಣ, ಮಾಳವಿಕಾ ಅವಿನಾಶ್, ವಸಿಷ್ಠ ಸಿಂಹ ಜೊತೆಗೆ ಈ ಬಾರಿ ಪ್ರಕಾಶ್ ರೈ ಕೂಡಾ ಬಂದಿದ್ದಾರೆ. ಅಂದಹಾಗೆ ಕೆಜಿಎಫ್ 2 ಬರೆಯುತ್ತಿರೋ ಇನ್ನಷ್ಟು ದಾಖಲೆಗಳ ಲೆಕ್ಕವನ್ನೊಮ್ಮೆ ನೋಡೋಣ.

    ಕೆಜಿಎಫ್ 2 ರಿಲೀಸ್ ಆಗುತ್ತಿರೋದು 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ. ಜಗತ್ತಿನಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿರೋ ಕೆಜಿಎಫ್ 2, ಆರ್.ಆರ್.ಆರ್.ಗಿಂತಲೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಪ್ರದರ್ಶನವಾಗುತ್ತಿದೆ.

    ಫ್ರಾನ್ಸ್‍ನಲ್ಲಿ ಒಂದು ಪ್ರೀಮಿಯರ್ ಶೋ ಇಟ್ಟುಕೊಳ್ಳಲಾಗಿದೆ. ಫ್ರೆಂಚರ ಊರಿನಲ್ಲಿ ಪ್ರೀಮಿಯರ್ ಶೋ ಆಗುತ್ತಿರೋ ಮೊದಲ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 2.

    ರಿಲೀಸ್ ಆಗುತ್ತಿರೋ ಎಲ್ಲ ದೇಶಗಳಲ್ಲಿ ಚಿತ್ರದ ಎಲ್ಲ ಭಾಷೆಗಳ ವರ್ಷನ್ ಕೂಡಾ ರಿಲೀಸ್ ಆಗುತ್ತಿರೋದು ವಿಶೇಷ.

    ವಿದೇಶಗಳಲ್ಲಿ ಕೂಡಾ ಅಭಿಮಾನಿಗಳ ಒತ್ತಾಯದ ಮೇಲೆ ಮಧ್ಯರಾತ್ರಿ ಶೋ ಆಗುತ್ತಿರೋದು ವಿಶೇಷ.

    ಚಿತ್ರತಂಡದವರೇ ಹೀಗಿರೋವಾಗ ಅಭಿಮಾನಿಗಳೆನು ಕಡಿಮೆ. ಮುಂಬೈನಲ್ಲೊಬ್ಬ ಯಶ್ ಅಭಿಮಾನಿ.. ಒಬ್ಬನೇ 100 ಟಿಕೆಟ್ ಖರೀದಿಸಿ ಸ್ನೇಹಿತರಿಗೆಲ್ಲ ಸಿನಿಮಾ ತೋರಿಸುತ್ತಿದ್ದಾನೆ. ಸ್ವತಃ ಕಾರ್ತಿಕ್ ಗೌಡ ಇದನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ತಮಿಳುನಾಡಿನಲ್ಲಿ ವಿಜಯ್ ಅಭಿನಯದ ಬೀಸ್ಟ್ ಪೈಪೋಟಿಯಿದ್ದರೂ ಬುಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿರೋದು ಸ್ಪೆಷಲ್.

    ಅತ್ತ ಹೈದರಾಬಾದಿಗೆ ಹೋದರೆ.. ಅಲ್ಲಿ ಆಗ್ತಿರೋದೇ ಬೇರೆ. ಚಿತ್ರದ ಡೈಲಾಗ್‍ನ್ನು ಸ್ವಲ್ಪ ಚೇಂಜ್ ಮಾಡಿದ್ದಾರೆ ಹೈದರಾಬಾದ್ ಸಿಟಿ ಪೊಲೀಸ್. ಹೆಲ್ಮೆಟ್ ಹೆಲ್ಮೆಟ್ ಹೆಲ್ಮೆಟ್.. ಐ ಡೋಂಟ್ ಲೈಕ್ ಹೆಲ್ಮೆಟ್.. ಬಟ್ ಹೆಲ್ಮೆಟ್ ಸೇವ್ಸ್ ಮೀ. ಐ ಕಾಂಟ್ ಅವಾಯ್ಡ್ ಇಟ್.. ಎನ್ನೋ ಸ್ಲೋಗನ್ ಬರೆದು ಹೆಲ್ಮೆಟ್ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.

  • 100 ಕೋಟಿ ಕ್ಲಬ್‍ಗೆ ಕೆಜಿಎಫ್

    kgf joins 100 cr club

    ಕೆಜಿಎಫ್ ಸಿನಿಮಾ, ಯಾವ ನಿರೀಕ್ಷೆಯನ್ನೂ ಹುಸಿ ಮಾಡಲಿಲ್ಲ. ಹೇಳಿದಂತೆಯೇ ಭಾರತದ ಮೂಲೆ ಮೂಲೆಯನ್ನೂ ತಲುಪಿದೆ. ದಾಖಲೆಗಳ ಮೇಲೆ ದಾಖಲೆಯನ್ನು ಚಿಂದಿ ಮಾಡುತ್ತಿದೆ. ಈಗ 100 ಕೋಟಿ ಕ್ಲಬ್‍ನ್ನೂ ಸೇರಿದೆ ಕೆಜಿಎಫ್.

    ಮೂಲಗಳ ಪ್ರಕಾರ, ಕನ್ನಡದಲ್ಲಿಯೇ ಕೆಜಿಎಫ್ ಗಳಿಗೆ 50 ಕೋಟಿ ದಾಟಿದೆ. ತೆಲುಗಿನಲ್ಲಿ 8 ಕೋಟಿ, ತಮಿಳಿನಲ್ಲಿ 6 ಕೋಟಿ, ಹಿಂದಿಯಲ್ಲಿ 20 ಕೋಟಿ, ಮಲಯಾಳಂನಲ್ಲಿ 3 ಕೋಟಿ ಬ್ಯುಸಿನೆಸ್ ಮಾಡಿದೆ ಕೆಜಿಎಫ್. ವಿದೇಶಗಳಲ್ಲಿಯೂ ಕೆಜಿಎಫ್‍ನ ಗಳಿಕೆ 20 ಕೋಟಿ ಸಮೀಪಿಸಿದ್ದು, 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ ಕೆಜಿಎಫ್. 

    ಇದು ಎಷ್ಟು ಪಕ್ಕಾ ಲೆಕ್ಕ ಅನ್ನೋದನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅವರೇ ಸ್ಪಷ್ಟಪಡಿಬೇಕಿದೆ.

  • 1000 ಕೋಟಿ ಆಗಿ ಹೋಯ್ತಾ..?

    1000 ಕೋಟಿ ಆಗಿ ಹೋಯ್ತಾ..?

    ಕನ್ನಡದಲ್ಲಿಯೇ 150 ಕೋಟಿ ದಾಟಿರುವ ಕೆಜಿಎಫ್ ಚಾಪ್ಟರ್ 2, ರಿಲೀಸ್ ಆದ ಪ್ರತೀ ರಾಜ್ಯದಲ್ಲೂ.. ಪ್ರತೀ ಭಾಷೆಯಲ್ಲೂ ದಾಖಲೆ ಬರೆಯುತ್ತಿದೆ.

    ತೆಲುಗಿನ ಆಂಧ್ರ ಮತ್ತು ತೆಲಂಗಾಣದಲ್ಲಿ ಕೆಜಿಎಫ್ ಗಳಿಕೆ 125 ಕೋಟಿಗೂ ಹೆಚ್ಚು. ಅಲ್ಲಿ ಟಿಕೆಟ್ ಬೆಲೆ 250 ರೂ. ಮೀರುವಂತಿಲ್ಲ ಎನ್ನುವುದೂ ನೆನಪಲ್ಲಿರಬೇಕು. ಹಿಂದಿಯಲ್ಲಿ ಈಗಾಗಲೇ 400 ಕೋಟಿ ಗಡಿಯಲ್ಲಿದೆ ಕೆಜಿಎಫ್. ಇನ್ನೂ ವಿಶೇಷವೆಂದರೆ ಹಿಂದಿ ಮತ್ತು ತೆಲುಗಿನಲ್ಲಿ ಕೆಜಿಎಫ್ ನೋಡಿದವರ ಸಂಖ್ಯೆ ಕನ್ನಡದಲ್ಲಿ ನೋಡಿದವರ ಸಂಖ್ಯೆಗಿಂತ ಹೆಚ್ಚು.

    ತಮಿಳುನಾಡಿನಲ್ಲಿ 100 ಕೋಟಿ ಗಡಿಯಲ್ಲಿರೋ ಕೆಜಿಎಫ್ ಈ ವಾರಾಂತ್ಯಕ್ಕೆ 100 ಕೋಟಿ ಗಡಿ ದಾಟಬಹುದು. ತಮಿಳಿನ ವಿಜಯ್ ಚಿತ್ರವನ್ನೂ ಮೀರಿಸಿ ಮುನ್ನುಗ್ಗುತ್ತಿರೋ ಕೆಜಿಎಫ್, ತಮಿಳುನಾಡಿನಲ್ಲಿ 100 ಕೋಟಿ ದಾಟುವ ಮೊದಲ ಕರ್ನಾಟಕ ಸಿನಿಮಾ ಎಂಬ ದಾಖಲೆ ಬರೆಯುತ್ತಿದೆ.

    ಕೇರಳದಲ್ಲಿ ಕಲೆಕ್ಷನ್ ಈಗಾಗಲೇ 50 ಕೋಟಿ ದಾಟಿದೆ. ಅದೂ ದಾಖಲೆಯೇ. ದೇಶದ ಇತರೆಡೆ ಕಲೆಕ್ಷನ್ 400 ಕೋಟಿಗೂ ಹೆಚ್ಚು. ವಿದೇಶದಲ್ಲಿಯೂ 160 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ.

    ಕೆಜಿಎಫ್ ಚಾಪ್ಟರ್ 2.. ಅಧಿಕೃತವಾಗಿಯೇ ಸಾವಿರ ಕೋಟಿ ಬಾರ್ಡರ್‍ನಲ್ಲಿದೆ. ಈ ವಾರಾಂತ್ಯದ ಹೊತ್ತಿಗೆ ಅದು ದಾಟುವ ಎಲ್ಲ ಸಾಧ್ಯತೆಗಳೂ ಇವೆ.

  • 16ನೇ ಶತಮಾನದ ಪುಷ್ಕರಣಿಗೆ ಯಶ್ ಯಶೋಮಾರ್ಗ ಕಾಯಕಲ್ಪ

    16ನೇ ಶತಮಾನದ ಪುಷ್ಕರಣಿಗೆ ಯಶ್ ಯಶೋಮಾರ್ಗ ಕಾಯಕಲ್ಪ

    ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಬಳಿ ಇರೋ ಚಂಪಕ ಸರಸು ಪುಷ್ಕರಣಿ. ಈ ಕಲ್ಯಾಣಿಯನ್ನು ಕೆಳದಿ ಅರಸರ ಕಾಲದಲ್ಲಿ ಕಟ್ಟಲಾಗಿತ್ತು. ಆದರೆ, ಸರಿಯಾಗಿ ನಿಗಾವಹಿಸದ ಕಾರಣ ಕಲ್ಯಾಣಿಯ ಗೋಡೆಗಳು ಬಿದ್ದು ಹೋಗಿ, ಕಲ್ಲುಗಳು ಹಾಳಾಗಿತ್ತು. ಸುಣ್ಣದ ಗಾರೆ ಕಿತ್ತು ಹೋಗಿ, ಕಲ್ಯಾಣಿಯ ಗೋಡೆಗಳ ಮಧ್ಯೆ ಮರಗಳ ಬೇರು, ರೆಂಬೆಕೊಂಬೆಗಳು ಬೆಳೆದಿದ್ದವು. ಆ ಕಲ್ಯಾಣಿಗೀಗ ಮರುಜೀವ ನೀಡಲಾಗಿದೆ.

    ಇದು ಗೊತ್ತಾಗಿದ್ದು ಪರಿಸರ ಪ್ರೇಮಿ ಶಿವಾನಂದ ಕಳವೆ ಅವರಿಂದ. ಪರಿಸರ ಪ್ರೇಮಿ ಕಳವೆ, ಜಲತಜ್ಞರೆಂದೇ ಹೆಸರಾದವರು. ಹಲವು ಕೆರೆ, ಕಲ್ಯಾಣಿಗಳ ಪುನಃಶ್ಚೇತನದ ಬಗ್ಗೆ ವೈಜ್ಞಾನಿಕವಾಗಿ ಬಲ್ಲವರು. ಗ್ರಾಮೀಣ ಪ್ರದೇಶಗಳಲ್ಲಿ ಜನಪೂರಣದ ಬಗ್ಗೆಯೇ ಕೆಲಸ ಮಾಡುತ್ತಿರುವ ಅವರು ಈ ಕಲ್ಯಾಣಿಯ ವಿಷಯವನ್ನು ನಟ ಯಶ್ ಅವರ ಗಮನಕ್ಕೆ ತಂದರು. ಯಶೋಮಾರ್ಗದ ಮೂಲಕ ಕೆಲಸ ಶುರುವಾಯಿತು.

    ಈ ಕಲ್ಯಾಣಿಗೆ ಪುರಾತನ ಮಾದರಿಯನ್ನೇ ಬಳಸಲಾಗಿದೆ. ಅಂದರೆ ಕಾಂಕ್ರೀಟ್ ಮತ್ತು ಸಿಮೆಂಟ್ ಬಳಸಿಲ್ಲ. ಸುಮಾರು 60ರಿಂದ 100 ಕೆಜಿ ತೂಕದ ಕಲ್ಲುಗಳನ್ನು ಬಳಸಿ, ಹಿಂದೆ ಯಾವ ರೀತಿ ಕಟ್ಟಲಾಗಿತ್ತೋ.. ಅದೇ ಮಾದರಿಯಲ್ಲಿ ಕಟ್ಟಲಾಗಿದೆ. ಮಣ್ಣನ್ನು ಕಲೆಸಿ ಮೂರ್ನಾಲ್ಕು ದಿನ ಬಿಟ್ಟು, ಆ ಕೆಸರಿನ ಮಣ್ಣು ಅಂಟಂಟು ಆಗಲು ಬಿಟ್ಟು, ಆ ಅಂಟಂಟು ಕೆಸರಿನ ಮಣ್ಣಿನಿಂದ ಕಟ್ಟಲಾಗಿದೆ. ಕಾಂಕ್ರೀಟ್ ಬಳಸಿ ಮಾಡಿದರೆ ಖರ್ಚು ಕಡಿಮೆ. ಮಣ್ಣಿನ ಕೆಲಸಕ್ಕೇ ಖರ್ಚು ಜಾಸ್ತಿ. ಆದರೂ ಕಳವೆ ಅವರು ಹೇಳಿದ ಆ ಮಾರ್ಗವನ್ನೇ ಬಳಸಿ ಕಲ್ಯಾಣಿ ಪುನಶ್ಚೇತನಗೊಳಿಸಿದೆ ಯಶ್ ಅವರ ಯಶೋಮಾರ್ಗ. ಸುಮಾರು ಒಂದೂವರೆ ತಿಂಗಳಿಂದ ಈ ಕೆಲಸ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆಯಂತೆ.

  • 17 ಸಾವಿರ ವರ್ಷಗಳ ಯುದ್ಧದ ಇತಿಹಾಸ.. ಕೆಜಿಎಫ್

    kgf image

    ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ ಪಂಚಭಾಷೆಯಲ್ಲೂ ಸಿದ್ಧವಾಗುತ್ತಿದೆ. ಶೂಟಿಂಗ್‍ನ ಯಾವುದೇ ಗುಟ್ಟುಗಳನ್ನೂ ಬಿಟ್ಟುಕೊಡದೆ ವರ್ಷವಿಡೀ ಸುದ್ದಿಯಲ್ಲಿದ್ದ ಸಿನಿಮಾ ಕೆಜಿಎಫ್. ಯಶ್ ಅವರ ಹುಟ್ಟುಹಬ್ಬಕ್ಕೆ ಟೀಸರ್‍ನ ಉಡುಗೊರೆ ನೀಡಿದೆ. ಅದು 17 ಸಾವಿರ ವರ್ಷಗಳ ಯುದ್ಧದ ಇತಿಹಾಸ.

    ಯಶ್ ಕೆಜಿಎಫ್‍ನ ಈ ಟೀಸರ್ ಬಗ್ಗೆ ಹೆಮ್ಮೆ ಪಡಲು ಇನ್ನೂ ಒಂದು ಕಾರಣವಿದೆ. ಯಶ್ ಅವರ ಪಾತ್ರವನ್ನು ಪರಿಚಯ ಮಾಡಿಸುವುದು ಅನಂತ್‍ನಾಗ್. ಟೀಸರ್ 17 ಸಾವಿರ ವರ್ಷಗಳ ಯುದ್ಧದ ಇತಿಹಾಸ ಎಂಬ ವಾಕ್ಯದೊಂದಿಗೇ ಶುರುವಾಗುತ್ತೆ. ಹಾಗಾದರೆ ಇದು ಇತಿಹಾಸದ ಕಥೆಯಾ..?  ಇತಿಹಾಸದ ಕಥೆಯಾದರೆ ಕಾಸ್ಟ್ಯೂಮ್ ಹೇಗೆ ಅಪ್‍ಡೇಟ್ ಆಗಿದೆ. ಹಾಗಾದರೆ ಇದು ಪುನರ್ಜನ್ಮದ ಕಥೆಯಾ..? ಅಥವಾ ಎರಡನ್ನೂ ಬ್ಲೆಂಡ್ ಮಾಡಿರುವ ವಿಭಿನ್ನ ಪ್ರಯತ್ನವಾ..? ಸದ್ಯಕ್ಕೆ ಯಾವುದಕ್ಕೂ ಉತ್ತರ ಇಲ್ಲ.

    ಅಂದಹಾಗೆ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.