` rockline venkatesh - chitraloka.com | Kannada Movie News, Reviews | Image

rockline venkatesh

  • ರವಿಚಂದ್ರನ್ ಪುತ್ರ ಹೀರೋ.. ರಾಕ್‍ಲೈನ್ ನಿರ್ಮಪಕ

    manoranjan, ravichandran at bruhaspathi audio kaunch

    ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಬೃಹಸ್ಪತಿ ಚಿತ್ರ ತೆರೆಗೆ ಬರುತ್ತಿದೆ. ಮುಂದಿನ ವರ್ಷದ ಜನವರಿ ಮೊದಲ ವಾರದಲ್ಲೇ ಮನೋರಂಜನ್, ಬೃಹಸ್ಪತಿಯಾಗಿ ಟಾಕೀಸ್ ಟಾಕೀಸ್‍ಗಳಲ್ಲಿ ದರ್ಶನ ಕೊಡಲಿದ್ದಾರೆ.

    ಚಿತ್ರದ ವಿಶೇಷವೇನು ಗೊತ್ತಾ..? ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ತಮಿಳು, ತೆಲುಗು,  ಹಿಂದಿಯಲ್ಲಿ ಬಿಗ್ ಬಜೆಟ್ ಸಿನಿಮಾಕ್ಕಿಳಿದು ಗೆದ್ದ ರಾಕ್‍ಲೈನ್, ಕನ್ನಡ ಚಿತ್ರರಂಗವನ್ನು ಬಿಟ್ಟರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಉತ್ತರ ಕೊಟ್ಟಿದ್ದಾರೆ ರಾಕ್‍ಲೈನ್.

    ಈಗ ವಿಶೇಷ ವಿಷಯಕ್ಕೆ ಬರೋಣ. ರಾಕ್‍ಲೈನ್ ವೆಂಕಟೇಶ್, ನಟ ರವಿಚಂದ್ರನ್ ಆಪ್ತಮಿತ್ರರಲ್ಲಿ ಒಬ್ಬರು. ರವಿಚಂದ್ರನ್ ಅಭಿನಯದ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದ ರಾಕ್‍ಲೈನ್ ವೆಂಕಟೇಶ್, ಈಗ ಅವರ ಮಗನ ಚಿತ್ರವನ್ನೂ ನಿರ್ಮಿಸಿದ್ದಾರೆ. ರಾಕ್‍ಲೈನ್-ರವಿಚಂದ್ರನ್ ಜೋಡಿಗೆ ಸಿಕ್ಕಂಥ ಯಶಸ್ಸು, ರಾಕ್‍ಲೈನ್-ಮನೋರಂಜನ್ ಜೋಡಿಗೂ ಸಿಗಲಿ.

    ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕ. ಮಿಶ್ತಿ ಚಕ್ರವರ್ತಿ ನಾಯಕಿ. ಇನ್ನು ರವಿಚಂದ್ರನ್ ಅವರ ಗರಡಿಯಲ್ಲೇ ಇದ್ದ ಹರಿಕೃಷ್ಣ ಮ್ಯೂಸಿಕ್ ಡೈರೆಕ್ಟರ್. ಸಿತಾರಾ, ಅವಿನಾಶ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ್ ಮೊದಲಾದವರು ನಟಿಸಿರುವ ಸಿನಿಮಾ, ತಮಿಳಿನ ವಿಐಪಿ ಚಿತ್ರದ ರೀಮೇಕ್. 

  • ರಾಕ್ ಲೈನ್ ಪ್ರೊಡಕ್ಷನ್ಸ್ #47ಗೆ ಮುಹೂರ್ತ

    ರಾಕ್ ಲೈನ್ ಪ್ರೊಡಕ್ಷನ್ಸ್ #47ಗೆ ಮುಹೂರ್ತ

    ಕನ್ನಡ ಚಿತ್ರರಂಗದ ಸ್ಟಾರ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಹೊಸ ಸಿನಿಮಾ, 47ನೇ ಸಿನಿಮಾಗೆ ಮುಹೂರ್ತ ನೆರವೇರಿದೆ. ಈ ಚಿತ್ರದ ಹೈಲೈಟ್ ಶಿವಣ್ಣ ಮತ್ತು ಪ್ರಭುದೇವ ಒಟ್ಟಿಗೇ ನಟಿಸುತ್ತಿರುವುದು. ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರೋದು.

    ರಾಕ್`ಲೈನ್ ಸ್ಟುಡಿಯೋದಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಮೊದಲ ಸೀನ್‍ಗೆ ಕ್ಲಾಪ್ ಮಾಡಿದ್ದು ಗೀತಾ ಶಿವರಾಜಕುಮಾರ್. ಕ್ಯಾಮೆರಾಗೆ ಚಾಲನೆ ಕೊಟ್ಟವರು ಪುಷ್ಪಕುಮಾರಿ ವೆಂಕಟೇಶ್.  

    ರಾಕ್‍ಲೈನ್ ಸಂಸ್ಥೆ ನಮ್ಮದೇ ಸಂಸ್ಥೆ. ನಮ್ಮ ಮನೆಯ ಸಂಸ್ಥೆ ಇದ್ದಂತೆ. ರಾಕ್`ಲೈನ್ ನನಗೆ ಸ್ನೇಹಿತರಾಗಿ ಬಂದರು. ನಂತರ ನಿರ್ಮಾಪಕರಾದರು. ಅವರ ಸಂಸ್ಥೆಯಲ್ಲಿ ನಟಿಸುತ್ತಿದ್ದೇನೆ. ಯೋಗರಾಜ್ ಭಟ್ ನಿರ್ದೇಶನ, ಪ್ರಭುದೇವ ಅವರ ಜೊತೆ ನಟಿಸುತ್ತಿರೋದು.. ಎಲ್ಲವೂ ಖುಷಿಯೇ ಎಂದವರು ಶಿವಣ್ಣ.

    ಹೆಚ್2ಒ ನಂತರ ನಾನು ಕನ್ನಡದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರೋ ಸಿನಿಮಾ ಇದು. ಶಿವಣ್ಣ ಜೊತೆ ಮೊದಲ ಬಾರಿಗೆ ಸಿನಿಮಾ ಮಾಡ್ತಿದ್ದೇನೆ. ಎಕ್ಸೈಟ್ ಆಗಿದ್ದೇನೆ ಎಂದವರು ಪ್ರಭುದೇವ.

    ಚಿತ್ರದ ಚಿತ್ರೀಕರಣ ಜುಲೈನಲ್ಲಿ ಶುರುವಾಗಲಿದೆ.

  • ರಾಕ್'ಲೈನ್ ಮನೆಗೇ ನುಗ್ಗಿದ ಜೆಡಿಎಸ್ ಕಾರ್ಯಕರ್ತರು

    ರಾಕ್'ಲೈನ್ ಮನೆಗೇ ನುಗ್ಗಿದ ಜೆಡಿಎಸ್ ಕಾರ್ಯಕರ್ತರು

    ಕೆಆರ್‍ಎಸ್ ಬಿರುಕು, ಅಕ್ರಮ ಗಣಿಗಾರಿಕೆ, ರಾಜಕೀಯ ಕದನ, ಅಂಬರೀಷ್ ಶವಸಂಸ್ಕಾರ, ಸುಮಲತಾ ಮತ್ತು ರಾಕ್‍ಲೈನ್ ವೆಂಕಟೇಶ್ ಬಗ್ಗೆ ಆರೋಪಗಳು.. ಎಲ್ಲವೂ ಮುಗಿಯುತ್ತಿದ್ದಂತೆಯೇ(?) ಈಗ ಹೋರಾಟ, ಪ್ರತಿಭಟನೆ ರಾಕ್‍ಲೈನ್ ವೆಂಕಟೇಶ್ ಮನೆ ಬಾಗಿಲು ತಟ್ಟಿದೆ.

    ಜೆಡಿಎಸ್‍ನ ಕೆಲವು ಕಾರ್ಯಕರ್ತರು ನೇರ ರಾಕ್‍ಲೈನ್ ವೆಂಕಟೇಶ್ ಮನೆಗೇ ನುಗ್ಗಿದ್ದಾರೆ. ರಾಕ್‍ಲೈನ್ ನಿವಾಸಕ್ಕೆ ಪೊಲೀಸ್ ಭದ್ರತೆ ಇದೆ. ಹೀಗಿದ್ದರೂ ನೂರಾರು ಕಾರ್ಯಕರ್ತರು ರಾಕ್‍ಲೈನ್ ಮನೆಗೆ ನುಗ್ಗಿದ್ದಾರೆ. ಮುತ್ತಿಗೆ ಹಾಕಿದ್ದಾರೆ.

    ರಾಕ್‍ಲೈನ್ ವೆಂಕಟೇಶ್ ಕುಮಾರಣ್ಣನ ಕ್ಷಮೆ ಕೇಳಬೇಕು ಎನ್ನುವುದು ಅವರ ಆಗ್ರಹ. ಪರಿಸ್ಥಿತಿ ಹತೋಟಿ ತಪ್ಪುತ್ತಿದೆ. ರಕ್ಷಣೆ ನೀಡಬೇಕಾದ ಹೊಣೆ ರಾಜ್ಯ ಸರ್ಕಾರದ್ದು.

  • ರಾಕ್‍ಲೈನ್ ಬ್ಯಾನರ್ ನಮ್ದೇ - ಪುನೀತ್

    rockline banner is like family banner says puneeth

    ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ ನಟಿಸುವಾಗ ನಾವು ಬೇರೆ ನಿರ್ಮಾಪಕರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನಿಸುವುದಿಲ್ಲ. ಅದು ನಮ್ಮದೇ ಬ್ಯಾನರ್ ಎನಿಸುತ್ತೆ. ಹೀಗಾಗಿಯೇ ಅವರು ಆಫರ್ ಕೊಟ್ಟಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ಇದು ಪುನೀತ್ ರಾಜ್‍ಕುಮಾರ್ ಮಾತು.

    ರಾಕ್‍ಲೈನ್ ವೆಂಕಟೇಶ್ ಮತ್ತು ಡಾ.ರಾಜ್ ಮನೆತನದ ಸಂಬಂಧ, ಗೆಳೆತನ, ಬಾಂಧವ್ಯ ಇಡೀ ಕರ್ನಾಟಕಕ್ಕೇ ಗೊತ್ತು. ಹೀಗಾಗಿಯೇ, 

    ಪುನೀತ್ ರಾಜ್‍ಕುಮಾರ್ ಈ ಮಾತು ಹೇಳಿದ್ದಾರೆ.

    ನಟಸಾರ್ವಭೌಮ, ರಾಕ್‍ಲೈನ್ ಮತ್ತು ಪುನೀತ್ ಕಾಂಬಿನೇಷನ್‍ನ 3ನೇ ಸಿನಿಮಾ. ಈ ಹಿಂದೆ ಅಪ್ಪು ಅವರಿಗಾಗಿ ಅಜಯ್ ಮತ್ತು ಮೌರ್ಯ ಚಿತ್ರಗಳನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು.

  • ರಾಕ್‍ಲೈನ್, ಪುನೀತ್ ಸಂಗಮಕ್ಕೆ ದಶಕ ಬೇಕಾಯ್ತು..!

    puneeth rockline combination waiting for good script

    ಭಾರತ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಾಕ್‍ಲೈನ್ ವೆಂಕಟೇಶ್, ಡಾ.ರಾಜ್ ಕುಟುಂಬದ ಪ್ರತಿಯೊಬ್ಬರಿಗೂ ಹತ್ತಿರ ಹತ್ತಿರ. ರಾಜ್ ಮನೆಯಲ್ಲಿ ಏನೇ ಆದರೂ ಅಲ್ಲಿ  ರಾಕ್‍ಲೈನ್ ಇರಲೇಬೇಕು. ಅಫ್‍ಕೋರ್ಸ್, ಚಿತ್ರರಂಗದ ಬಹುತೇಕರಿಗೆ ರಾಕ್‍ಲೈನ್ ವೆಂಕಟೇಶ್ ಇರೋದೇ ಹಾಗೆ. ಹೀಗಿದ್ದರೂ, ಪುನೀತ್ ಜೊತೆ ರಾಕ್‍ಲೈನ್ ವೆಂಕಟೇಶ್ 13 ವರ್ಷಗಳ ಕಾಲ ಸಿನಿಮಾ ಮಾಡೋಕೆ ಆಗಿರಲಿಲ್ಲ.

    2004ರಲ್ಲಿ ಮೌರ್ಯ ಹಾಗೂ 2006ರಲ್ಲಿ ಅಜಯ್ ಚಿತ್ರಗಳನ್ನು ಪುನೀತ್ ಅವರಿಗಾಗಿ ನಿರ್ಮಿಸಿದ್ದ ರಾಕ್‍ಲೈನ್ ವೆಂಕಟೇಶ್, 13 ವರ್ಷಗಳ ಕಾಲ ಪುನೀತ್ ಸಿನಿಮಾ ನಿರ್ಮಿಸೋಕೆ ಆಗಿರಲಿಲ್ಲ.

    ನಾನು ಮೊದಲು ಕಥೆ ಕೇಳ್ತೇನೆ. ಕಥೆ ಓಕೆ ಎನಿಸಿದ ನಂತರ ಅದಕ್ಕೆ ಯಾರು ಸೂಟ್ ಆಗಬಹುದು ಎಂದು ಹುಡುಕುತ್ತೇನೆ. ನನಗೆ ಪುನೀತ್ ಅವರಿಗೆ ಸೂಟ್ ಆಗಬಹುದಾದ ಕಥೆ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲ, ನನಗೆ ಇಷ್ಟವಾದ ಕಥೆ ಅವರಿಗೂ ಇಷ್ಟವಾಗಬೇಕಲ್ಲ. ಹೀಗಾಗಿ ವಿಳಂಬವಾಯಿತು ಎಂದು ಕಾರಣ ಹೇಳಿದ್ದಾರೆ ರಾಕ್‍ಲೈನ್ ವೆಂಕಟೇಶ್.

    ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅತ್ಯದ್ಭುತವಾಗಿ ನಟಿಸಿದ್ದಾರೆ. ಅವರ ಇದುವರೆಗಿನ ಚಿತ್ರಗಳಿಗಿಂತ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಖಂಡಿತಾ ಈ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸಲಿದೆ ಎನ್ನುತ್ತಾರೆ ರಾಕ್‍ಲೈನ್. ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದೆ.

  • ರಾಕ್‍ಲೈನ್‍ಗೆ ಸಿಕ್ಕರು ಅಪ್ಪು..!

    puneeth's next movie is with rockline venkatesh

    ಅಂಜನೀಪುತ್ರದ ನಂತರ ಪುನೀತ್ ರಾಜ್‍ಕುಮಾರ್ ಮುಂದಿನ ಚಿತ್ರ ಯಾವುದು..? ಇಂಥಾದ್ದೊಂದು ಗೊಂದಲಕ್ಕೆ ಕಾರಣಗಳಿದ್ದವು. ಪುನೀತ್ ಬ್ಯಾನರ್‍ನಲ್ಲೇ ಶಶಾಂಕ್ ಪುನೀತ್ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದರು. ಕಥೆಯೂ ಓಕೆಯಾಗಿತ್ತು. ಇನ್ನು ರಾಜಕುಮಾರ ಚಿತ್ರದ ನಂತರ ಮತ್ತೊಮ್ಮೆ ಸಂತೋಷ್ ಆನಂದ್‍ರಾಮ್ ಹಾಗೂ ಪುನೀತ್ ಮಿಲನ ಕನ್‍ಫರ್ಮ್ ಆಗಿತ್ತು. ಈ ಎರಡೂ ಚಿತ್ರಗಳ ಮಧ್ಯೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಸಿನಿಮಾ ಕುರಿತು ಮಾತು ಕೇಳಿ ಬರೋಕೆ ಶುರುವಾಯ್ತು.

    ಸದ್ಯಕ್ಕೆ ಯಾವುದೂ ಫೈನಲ್ ಆಗಿಲ್ಲ. ಫೆಬ್ರವರಿಯಲ್ಲಿ ಹೇಳ್ತೇನೆ ಎಂದಿದ್ದ ಪುನೀತ್, ಈಗ ರಾಕ್‍ಲೈನ್ ಚಿತ್ರಕ್ಕೆ ಗ್ರೀನ್‍ಸಿಗ್ನಲ್ ಕೊಟ್ಟಿದ್ದಾರೆ. ಪವನ್ ಒಡೆಯರ್ ನಿರ್ದೇಶಕ. ಇತ್ತ ಶಶಾಂಕ್, ತಮ್ಮ ನಿರ್ಮಾಣದ ತಾಯಿಗೆ ತಕ್ಕ ಮಗ ಚಿತ್ರದ ನಿರ್ದೇಶನದ ಹೊಣೆಯನ್ನೂ ಈಗ ತಾವೇ ಹೊತ್ತುಕೊಂಡಿದ್ದಾರೆ. ಸಂತೋಷ್ ಆನಂದ್‍ರಾಮ್ ಮುಂದೇನು ಮಾಡ್ತಾರೆ ಅನ್ನೋದು ಗೊತ್ತಿಲ್ಲ. ಒಟ್ಟಿನಲ್ಲಿ ಸುದೀರ್ಘ ವಿರಾಮದ ನಂತರ ಪುನೀತ್ ರಾಜ್‍ಕುಮಾರ್ ಮತ್ತು ರಾಕ್‍ಲೈನ್ ಜೋಡಿ ಮತ್ತೊಮ್ಮೆ ಒಂದಾಗಿದೆ.

  • ರಾಜ್ ಬಿಡುಗಡೆಯಲ್ಲಿ ಕೆಲ ವಿಷಯಗಳು ಓಪನ್ ಸೀಕ್ರೇಟ್ -  ನಡುಮಾರನ್ ಕೈ ಬಿಟ್ಟಾಗ ಅಂಬಿ ಮಾಡಿದ್ದೇನು?

    rajkumar kidnap image

    ನರಹಂತಕ ವೀರಪ್ಪನ್ ವರನಟ ಡಾ. ರಾಜ್ ಕುಮಾರ್ ಅವರನ್ನ ಅಪಹರಿಸಿದ 108 ದಿನಗಳಲ್ಲಿ ಅನೇಕ ಘಟನೆಗಳು ನಡೆದಿದ್ದವು. ಆ ಸಮಯದಲ್ಲಿ ಬಹಳಷ್ಟು ಓಡಾಡಿದವರು ರಾಕ್ ಲೈನ್ ವೆಂಕಟೇಶ್. ಮೊಟ್ಟ ಮೊದಲ ಬಾರಿಗೆ ರಾಕ್ ಲೈನ್ ಚಿತ್ರಲೋಕ ಜೊತೆಗೆ ಅನೇಕ ವಿಷಯಗಳನ್ನ ತಿಳಿಸಿದ್ದಾರೆ. 

    During Rajkumar Kidnap by Veerappan, Rockline was in the front line who had struggled for the release of the matinee icon. For the first time in 20 years Rockline Venkatesh has told the Hidden story on Dr Rajkumar Kidnap story to chitraloka.

     

  • ಸಾ.ರಾ.ಗೋವಿಂದು ಆ ಹೆಸರು ಹೇಳುತ್ತಿದ್ದಂತೆ ಕಣ್ಣೀರಾದರು ರಾಕ್‍ಲೈನ್

    rockline venkatesh in tears at raghavendra chitravani award ceremony

    ರಾಕ್‍ಲೈನ್ ವೆಂಕಟೇಶ್ ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಬಹಿರಂಗವಾಗಿ ತೋರ್ಪಡಿಸುವವರಲ್ಲ. ಹೀಗಿದ್ದರೂ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಕ್‍ಲೈನ್ ವೆಂಕಟೇಶ್ ದುಃಖ ತಡೆಯಲಾರದೆ ಕಣ್ಣೀರಿಟ್ಟಿದ್ದಾರೆ. ಅದಕ್ಕೆ ಕಾರಣವಾಗಿದ್ದು ಸಾ.ರಾ.ಗೋವಿಂದು ಅವರ ಮಾತು. 

    ಕಲಾವಿದರ ಸಂಘದ ಕಟ್ಟಡದಲ್ಲಿಯೇ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಾ.ರಾ.ಗೋವಿಂದು, ಕಟ್ಟಡವನ್ನು ಕಟ್ಟಿಸಿದ ಅಂಬರೀಷ್ ಅವರನ್ನು ಸ್ಮರಿಸಿದರು. ಗೋವಿಂದು ಅಂಬಿ ಹೆಸರು ಹೇಳುತ್ತಿದ್ದಂತೆಯೇ ವೇದಿಕೆಯಲ್ಲಿ ಕುಳಿತಿದ್ದ ರಾಕ್‍ಲೈನ್ ವೆಂಕಟೇಶ್ ಭಾವುಕರಾದರು. ವೇದಿಕೆ ಎಂಬುದನ್ನೂ ಮರೆತು ಕಣ್ಣೀರು ಒರೆಸಿಕೊಂಡರು.

    ಅಂಬರೀಷ್ ಇದ್ದಿದ್ದರೆ, ರಾಕ್‍ಲೈನ್ ವೆಂಕಟೇಶ್ ಅವರಿಗೆ ಅಂಬರೀಷ್ ಅವರೇ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದರೇನೋ..

    ಪಿ.ಆರ್.ಒ. ಸುಧೀಂದ್ರ ಅವರ ನೆನಪಿನಲ್ಲಿ ಅವರ ಕುಟುಂಬ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ನೀಡುವ ಪುರಸ್ಕಾರ ಈ ಬಾರಿ ರಾಕ್‍ಲೈನ್ ವೆಂಕಟೇಶ್ ಅವರಿಗೆ ಸಂದಿದೆ. ರಾಕ್‍ಲೈನ್ ಅವರೊಂದಿಗೆ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ನಟ ದೊಡ್ಡಣ್ಣ, ಹಿನ್ನೆಲೆ ಗಾಯಕಿ ಎಸ್.ಜಾನಕಿ, ನಿರ್ದೇಶಕ ಪಿ.ವಾಸು, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಿರ್ದೇಶಕ ರಿಷಬ್ ಶೆಟ್ಟಿ, ಸಂಭಾಷಣೆಕಾರ ಬಿ.ಎ.ಮಧು, ಚೊಚ್ಚಲ ನಿರ್ದೇಶನಕ್ಕಾಗಿ ಕಾರ್ತಿಕ್ ಸರಗೂರು, ಚಂಪಾಶೆಟ್ಟಿ, ಚಿತ್ರಸಾಹಿತಿ ಕೆ.ಕಲ್ಯಾಣ್ ಕೂಡಾ ಚಿತ್ರವಾಣಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

  • ಸುಮಲತಾ ಬೆಂಬಲಕ್ಕೆ ರಾಕ್‍ಲೈನ್, ದೊಡ್ಡಣ್ಣ

    rockline and doddanna supports sumalatha

    ಗಂಡ ಸತ್ತ ತಿಂಗಳಿಗೆಲ್ಲ ಈಯಮ್ಮನಿಗೆ ರಾಜಕೀಯ ಬೇಕಿತ್ತಾ..? ಕ್ಷಮೆ ಕೇಳಲ್ರೀ.. ಕ್ಷಮೆ ಕೇಳುವಂತ ತಪ್ಪು ಏನ್ ಮಾಡಿದ್ದೀನಿ ನಾನು..? ಹಿಂದೂ ಸಂಸ್ಕøತಿ ಪ್ರಕಾರವೇ ಮಾತನಾಡಿದ್ದೀನಿ.. ಇವು ಸಚಿವ ಹೆಚ್.ಡಿ.ರೇವಣ್ಣ ಸುಮಲತಾ ವಿರುದ್ಧ ಆಡಿರುವ ಮಾತುಗಳು. ರೇವಣ್ಣನವರ ಈ ಮಾತು ಚಿತ್ರರಂಗದವರನ್ನು ಕೆರಳಿಸಿದೆ. ಅದರಲ್ಲೂ ಅಂಬಿ ಆಪ್ತಬಳಗದಲ್ಲಿದ್ದ ರಾಕ್‍ಲೈನ್, ದೊಡ್ಡಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದೊಡ್ಡಣ್ಣ : ಜನರಿಗೆ ಯಾರನ್ನು ಯಾವಾಗ ಮನೆಗೆ ಕಳುಹಿಸಬೇಕು ಎಂದು ಗೊತ್ತಿದೆ. ಜನರೇ ನಿರ್ಧರಿಸ್ತಾರೆ ಬಿಡಿ.

    ರಾಕ್‍ಲೈನ್ ವೆಂಕಟೇಶ್ : ಇದರ ಬಗ್ಗೆ ನಾನು ಏನೂ ಮಾತನಾಡೋದಿಲ್ಲ. ಅಂಬರೀಷ್ ನನ್ನ ಪಾಲಿಗೆ ಅಣ್ಣನಂತೆ ಇದ್ದವರು. ಸುಮಲತಾ ಅವರೊಂದಿಗೆ ನಾವಿರುತ್ತೇವೆ. ಉಳಿದದ್ದು ಜನರಿಗೆ ಬಿಟ್ಟಿದ್ದು

  • ಸುಮಲತಾ, ರಾಕ್‍ಲೈನ್ ವಿರುದ್ಧ ಅಸಹ್ಯದ ಮಟ್ಟಕ್ಕಿಳಿದ ರಾಜಕೀಯ : ಸಿಡಿದೆದ್ದ ರಾಕ್`ಲೈನ್

    ಸುಮಲತಾ, ರಾಕ್‍ಲೈನ್ ವಿರುದ್ಧ ಅಸಹ್ಯದ ಮಟ್ಟಕ್ಕಿಳಿದ ರಾಜಕೀಯ : ಸಿಡಿದೆದ್ದ ರಾಕ್`ಲೈನ್

    ಸುಮಲತಾ ವಿರುದ್ಧ ಜೆಡಿಎಸ್ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ ಟೀಕೆ.. ನಂತರ ಶುರುವಾದ ಏಟು ಎದಿರೇಟುಗಳ ನಡುವೆ ಕೆಆರ್‍ಎಸ್ ಗಂಭೀರ ಸ್ವರೂಪದಲ್ಲಿರುವ ವಿಚಾರ ಸೈಡಿಗೆ ಹೋಯ್ತಾ? ಅದಷ್ಟೇ ಅಲ್ಲ.. ಕುಮಾರಸ್ವಾಮಿ ಮತ್ತವರ ಶಾಸಕರ ಟೀಕೆಯನ್ನೂ ಮೀರಿಸುವಂತೆ ಕೆಲವರು ಅದನ್ನು ಅಸಹ್ಯದ ಮಟ್ಟಕ್ಕೆ ತಂದುಬಿಟ್ಟಿದ್ದಾರೆ. ಸುಮಲತಾ ಮತ್ತು ರಾಕ್`ಲೈನ್ ಅವರಿಗೂ ಸಂಬಂಧ ಕಟ್ಟಿಬಿಟ್ಟಿದ್ದಾರೆ. ಅಂಬರೀಶ್ ಸಂಸ್ಕಾರದ ಬಗ್ಗೆ ಕುಮಾರಸ್ವಾಮಿ ಮಾತನಾಡಿದಾಗಲೇ ಸಿಎಂ ಸ್ಥಾನದಲ್ಲಿ ಬೀದಿ ದಾಸಯ್ಯ ಇದ್ದರೂ ಅದೇ ಕೆಲಸ ಮಾಡುತ್ತಿದ್ದ ಎಂದು ಕೆರಳಿದ್ದ ರಾಕ್`ಲೈನ್ ಈಗ ಸಿಡಿದೆದ್ದಿದ್ದಾರೆ.

    ಸುಮಲತಾ ಜೊತೆ ರಾಕ್`ಲೈನ್ ಇರುವ ಫೋಟೋ ವೈರಲ್ ಮಾಡಿ.. ಅದಕ್ಕೆ ಅಶ್ಲೀಲ ಕಮೆಂಟ್ ಹಾಕಿದ್ದೇ ರಾಕ್`ಲೈನ್ ಸಿಡಿದೇಳೋಕೆ ಕಾರಣ.

    ಅನಿತಕ್ಕ (ಅನಿತಾ ಕುಮಾರಸ್ವಾಮಿ) ಜೊತೆಯಲ್ಲೂ ನನ್ನ ಫೋಟೋಗಳಿವೆ. ಕುಮಾರಸ್ವಾಮಿ ನ್ಯೂಸ್ ಚಾನೆಲ್ ಮಾಡುವಾಗ ನಾನು ತುಂಬಾ ಬ್ಯುಸಿ ಇರುತ್ತೇನೆ. ನನ್ನ ಪತ್ನಿ ಇರುತ್ತಾರೆ. ಜೊತೆಯಲ್ಲಿರಿ ಎಂದಿದ್ದರು. ಅವರ ಜೊತೆ ನೂರಾರು ಬಾರಿ ಮಾತನಾಡಿದ್ದೇನೆ. ಫೋಟೋಗಳೂ ಇವೆ. ಸಿಎಂ ಆದ ಬಳಿಕ ಇಬ್ಬರೇ ಮಾತನಾಡಿದ್ದೇವೆ. ಅದಕ್ಕೆಲ್ಲ ಸಂಬಂಧ ಕಟ್ತೀರಾ? ಕಟ್ಟೋಕೆ ಆಗುತ್ತಾ? ಅವರನ್ನು ನಾನು ಈಗಲೂ ಅನಿತಕ್ಕ ಎಂದೇ ಕರೆಯೋದು ಎಂದು ತಿರುಗಿಬಿದ್ದಿದ್ದಾರೆ ರಾಕ್`ಲೈನ್ ವೆಂಕಟೇಶ್.

    ಮೆಟ್ಟಿಲು ಇಳಿಯುವಾಗ ಸುಮಲತಾ ಅವರ ಕೈಯ್ಯನ್ನೂ ಹಿಡಿದುಕೊಂಡು ಬಂದಿದ್ದೇನೆ. ಅನಿತಕ್ಕನವರ ಕೈಯ್ಯನ್ನೂ ಹಿಡಿದುಕೊಂಡಿದ್ದೇನೆ. ಇದನ್ನೆಲ್ಲ ಕೆಟ್ಟದಾಗಿ ನೋಡಿದರೆ ಮರ್ಯಾದೆ ಹೋಗೋದು ನಮ್ಮದಲ್ಲ, ನಿಮ್ಮದು ಎಂದು ತಿರುಗೇಟು ನೀಡಿದ್ದಾರೆ ರಾಕ್`ಲೈನ್ ವೆಂಕಟೇಶ್.

  • ಸ್ತ್ರೀ ಸಾಮ್ರಾಜ್ಯದಲ್ಲಿ ನಿರೂಪ್ ಭಂಡಾರಿ

    nirup's next movie is with rockline

    ರಂಗಿತರಂಗ.. ನಂತರ ರಾಜರಥ.. ಮುಂದೇನು..? ಇದು ಹೀರೋ ನಿರೂಪ್ ಭಂಡಾರಿಗೆ ಅಭಿಮಾನಿಗಳೇ ಕೇಳ್ತಿರೋ ಪ್ರಶ್ನೆ. ಸದ್ಯಕ್ಕೆ ನಿರೂಪ್ ಭಂಡಾರಿ ರಾಕ್‍ಲೈನ್ ಪ್ರೊಡಕ್ಷನ್ಸ್‍ನ ಹೊಸ ಸಿನಿಮಾದಲ್ಲಿ ಬ್ಯುಸಿ. ಆ ಚಿತ್ರದಲ್ಲಿ ನಿರೂಪ್ ಸಂಪೂರ್ಣ ಮಹಿಳೆಯರ ಸೈನ್ಯದಲ್ಲಿಯೇ ನಟಿಸುತ್ತಿರುವುದು ವಿಶೇಷ.

    ಆ ಚಿತ್ರದಲ್ಲಿ ನಿರೂಪ್‍ಗೆ ಜೋಡಿಯಾಗಿರೋದು ರಾಧಿಕಾ ಪಂಡಿತ್. ಇನ್ನು ನಿರ್ದೇಶಕಿ ಪ್ರಿಯಾ. ಅವರು ಮಣಿರತ್ನಂ ಜೊತೆ ಅಸಿಸ್ಟೆಂಟ್ ಆಗಿದ್ದವರು. ಇದು ಅವರಿಗೆ ಮೊದಲ ಸಿನಿಮಾ. ಚಿತ್ರದ ಸಿನಿಮಾಟೋಗ್ರಾಫರ್ ಪ್ರೀತಾ ಜಯರಾಂ. 

    ಹೀಗೆ ಮಹಿಳಾ ಸೈನ್ಯದ ಜೊತೆಯಲ್ಲಿಯೇ ಕೆಲಸ ಮಾಡಿದ ನಿರೂಪ್‍ಗೆ ಕೆಲಸದ ವಿಚಾರದಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲವಂತೆ. ತಂಡದಲ್ಲಿ ಕೆಲಸ ಮಾಡಿದವರೆಲ್ಲರೂ ಅನುಭವಿಗಳೇ. ಅವರಿಗೆ ಹೋಲಿಸಿದರೆ ನಾನೇ ಹೊಸಬ. ಅವರೆಲ್ಲರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ನಿರೂಪ್ ಭಂಡಾರಿ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ.