` rockline venkatesh - chitraloka.com | Kannada Movie News, Reviews | Image

rockline venkatesh

  • ಅಪ್ಪು ಹೊಸ ಚಿತ್ರ ರೀಮೇಕ್ ಅಲ್ಲ, ಸ್ವಮೇಕ್

    puneeth rajkumar's new movie is swamake

    ಪುನೀತ್ ರಾಜ್ಕುಮಾರ್ ಚೆನ್ನೈನಲ್ಲಿ ವೆಟ್ರಿಮಾರನ್ ಅವರನ್ನು ಭೇಟಿ ಮಾಡಿದ್ದು ಸಂಚಲನ ಸೃಷ್ಟಿಸಿತ್ತು.

    ವೆಟ್ರಿಮಾರನ್ ನಿರ್ದೇಶನದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ವಿಸಾರಣೈ ರೀಮೇಕ್ನಲ್ಲಿ ಪುನೀತ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಖಚಿತ ವರ್ತಮಾನ ಬಂದಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ಅಪ್ಪು ನಟಿಸ್ತಾ ಇರೋದು ನಿಜ. ಆ ಚಿತ್ರಕ್ಕೆ ವೆಟ್ರಿಮಾರನ್ ನಿರ್ದೇಶಕ ಅನ್ನೋದೂ ನಿಜ.

    ಆದರೆ, ಅದು ವಿಸಾರಣೈ ರೀಮೇಕ್ ಅಲ್ಲ ಎಂಬ ಸ್ಪಷ್ಟನೆ ಹೊರಬಿದ್ದಿದೆ. ಚಿತ್ರದ ಕಥೆ ಚಿತ್ರಕಥೆ ಸಿದ್ಧವಾಗುತ್ತಿದ್ದು, ಅಂಜನಿಪುತ್ರದ ನಂತರ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಹಿಂದೆ ಮೌರ್ಯ, ಅಜಯ್ ಚಿತ್ರ ನಿರ್ಮಿಸಿದ್ದ ರಾಕ್ಲೈನ್ ವೆಂಕಟೇಶ್, 11 ವರ್ಷಗಳ ನಂತರ ಪುನೀತ್ ಜೊತೆ ಚಿತ್ರ ನಿರ್ಮಿಸಲಿದ್ದಾರೆ.

     

  • ಅಪ್ಪು ಹೊಸ ಚಿತ್ರ ವಿಸಾರಣೈ ರೀಮೇಕ್..?

    appu's new film is visaranai remake ?

    ವಿಸಾರಣೈ. ತಮಿಳಿನ ಸೂಪರ್ ಹಿಟ್ ಚಿತ್ರ. ಭಾರತದಿಂದ ಆಸ್ಕರ್ಗೂ ಹೋಗಿದ್ದ ಈ ಚಿತ್ರವನ್ನು ಪುನೀತ್ ರಾಜ್ಕುಮಾರ್ ಮಾಡ್ತಾರಾ..? ಸದ್ಯಕ್ಕೆ ಅಂಥಾದ್ದೊಂದು ಕುತೂಹಲ ಉದ್ಭವವಾಗಿದೆ. ಪಕ್ಕಾ ಆಗಿಲ್ಲ. ತಮಿಳು ನಿರ್ದೇಶಕ ವೇಟ್ರಿಮಾರನ್ ಅವರನ್ನು ಭೇಟಿ ಮಾಡಿರುವ ಪುನೀತ್, ಚಿತ್ರಕ್ಕೆ ಹೆಚ್ಚೂ ಕಡಿಮೆ ಓಕೆ ಎಂದಿದ್ದಾರಂತೆ.

    ವಿಸಾರಣೈ ಹೀರೋ ವೈಭವೀಕರಣದ ಚಿತ್ರವಲ್ಲ. ರಿಯಲೆಸ್ಟಿಕ್ ಚಿತ್ರ. ಅಮಾಯಕ ಯುವಕರು ಅಪರಾಧವೊಂದರಲ್ಲಿ ತಮಗೇ ಗೊತ್ತಿಲ್ಲದೆ ಸಿಕ್ಕಿ ಒದ್ದಾಡುವ ಕಥೆ. ಇನ್ನು ವೇಟ್ರಿಮಾರನ್ ಚಿತ್ರಗಳ ಇತಿಹಾಸ ನೋಡೋದಾದ್ರೆ, 'ಪೊಲ್ಲಾದವನ್', 'ಆಡುಕುಲಂ', 'ವಿಸಾರಣೈ', ಹಾಗೂ 'ವಡಾ ಚೆನ್ನೈ' ನಂತರ ಹಿಟ್ ಚಿತ್ರಗಳಿವೆ. 'ಆಡುಕುಲಂ' ಹಾಗೂ 'ವಿಸಾರಣೈ'  ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳು ಎನ್ನವುದು ವಿಶೇಷ.

    ಹೊಸತನದ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಇರುವ ಪುನೀತ್, ಈ ಬಾರಿ ವಿಸಾರಣೈನಲ್ಲಿ ನಟಿಸುವ ಸಾಧ್ಯತೆ ಹೆಚ್ಚು. ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಿಸುವ ಸಾಧ್ಯತೆಗಳಿವೆ. ಅದು ಸಾಧ್ಯವಾದರೆ ದಶಕದ ನಂತರ ಪುನೀತ್ ಮತ್ತು ರಾಕ್ಲೈನ್ ಜೋಡಿ ಒಂದಾಗಲಿದೆ. ಸದ್ಯಕ್ಕೆ ಪುನೀತ್ ಹರ್ಷ ನಿರ್ದೇಶನದ ಅಂಜನಿಪುತ್ರದಲ್ಲಿ ಬ್ಯುಸಿಯಾಗಿದ್ದಾರೆ.

     

  • ಅಪ್ಪು ಹೊಸ ಸಿನಿಮಾಗೆ ಪ್ರಿಯಾಂಕಾ ಹೀರೋಯಿನ್..!

    priyanka jawalkar is heroine for appu's next

    ರಾಕ್‍ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ, ಪವನ್ ಒಡೆಯರ್ ನಿರ್ದೇಶನದ ಹೊಸ ಚಿತ್ರ ಪಂಜುಗೆ ನಾಯಕಿ ಸಿಕ್ಕಿದ್ದಾಳೆ. ಚಿತ್ರದ ಟೈಟಲ್ ಇನ್ನೂ ಅಧಿಕೃತವಾಗಿಲ್ಲ. ನಾಯಕಿಯ ಆಯ್ಕೆಯಂತೂ ಆಗಿದೆ. ಚಿತ್ರಕ್ಕೆ ಪ್ರಿಯಾಂಕಾ ಜ್ವಾಲಕರ್ ನಾಯಕಿ.

    ಯಾರು ಈ ಪ್ರಿಯಾಂಕಾ ಜ್ವಾಲಕರ್ ಎಂದರೆ ವಿಜಯ್ ದೇವರಕೊಂಡ ಅಭಿಯನದ ಟ್ಯಾಕ್ಸಿವಾಲಾ ಚಿತ್ರದ ನಾಯಕಿ. ಇದು ಈಕೆಯ ಅಭಿನಯದ 2ನೇ ಸಿನಿಮಾ ಎನ್ನುವುದು ವಿಶೇಷ. ಮೊದಲ ಚಿತ್ರದಲ್ಲಿ ತೆಲುಗಿನಲ್ಲಿ ಯಂಗ್ ಹೀರೋ ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ಪ್ರಿಯಾಂಕಾ, ಎರಡನೇ ಸಿನಿಮಾ ಕನ್ನಡ ಚಿತ್ರರಂಗದ ಸ್ಟಾರ್ ಜೊತೆ ಎನ್ನುವುದು ಸ್ಪೆಷಲ್. ಆಂಧ್ರಪ್ರದೇಶದ ಅನಂತಪುರಂನ ಈ ಹುಡುಗಿ ವೃತ್ತಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್. ಫ್ಯಾಷನ್ ಡಿಸೈನಿಂಗ್ ಪದವೀಧರೆ. ಹಲವು ಕಿರುಚಿತ್ರಗಳಲ್ಲಿ ನಟಿಸಿರುವ ಪ್ರಿಯಾಂಕಾ  ಅಭಿನಯದ ಟ್ಯಾಕ್ಸಿವಾಲಾ ಇನ್ನೂ ರಿಲೀಸ್ ಆಗಿಲ್ಲ.

    ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಡಿ.ಇಮ್ಮಾನ್ ಆಯ್ಕೆಯಾಗಿದ್ದರೆ, ಕೊರಿಯೋಗ್ರಫಿ ಹೊಣೆಯನ್ನು ವೈದಿ ವಹಿಸಿಕೊಂಡಿದ್ದಾರೆ. ಹಲವು ವರ್ಷಗಳ ನಂತರ ಈ ಸಿನಿಮಾ ಮೂಲಕ ಬಿ.ಸರೋಜಾದೇವಿ ಬಣ್ಣ ಹಚ್ಚುತ್ತಿರುವುದು ವಿಶೇಷ.

     

  • ಅಪ್ಪು, ರಾಕ್‍ಲೈನ್, ಪವನ್ ಒಡೆಯರ್ ಕಾಂಬಿನೇಷನ್ ರೆಡಿ

    pavan appu, rockline team up

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮುಂದಿನ ಸಿನಿಮಾ ಯಾವುದು ಎಂಬ ಗೊಂದಲಕ್ಕೆ ಸದ್ಯಕ್ಕೆ ತೆರೆ ಬೀಳುತ್ತಿದೆ. ಅಂಜನೀಪುತ್ರ ಚಿತ್ರದ ನಂತರ ಅಪ್ಪು ಶಶಾಂಕ್ ನಿರ್ದೇಶನದ ಸಿನಿಮಾದಲ್ಲಿ ನಟಿಸ್ತಾರಾ..? ರಾಕ್‍ಲೈನ್ ಬ್ಯಾನರ್‍ನಲ್ಲಿ ನಟಿಸ್ತಾರಾ..? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಮುಂದಿನ ತಿಂಗಳು ರಾಕ್‍ಲೈನ್ ಬ್ಯಾನರ್‍ನಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ ಸೆಟ್ಟೇರಲಿದೆ. 

    ನಿರ್ದೇಶನ ಪವನ್ ಒಡೆಯರ್ ಅವರದ್ದು.

    ಸಿನಿಮಾದ ಕಥೆ ಓಕೆ ಆಗಿದೆ. ತಾಂತ್ರಿಕ ವರ್ಗ ಹಾಗೂ ಕಲಾವಿದರ ಆಯ್ಕೆ ನಡೆಯಬೇಕಿದೆ. ಅಪ್ಪು ಅಭಿಮಾನಿಗಳನ್ನು ರಂಜಿಸುವ ಎಲ್ಲ ಅಂಶಗಳೂ ಚಿತ್ರದಲ್ಲಿವೆ. ಆ ನಿಟ್ಟಿನಲ್ಲೇ ಪವನ್ ಒಡೆಯರ್ ಕಥೆ ಸಿದ್ಧ ಮಾಡಿದ್ದಾರೆ ಎಂದಿದ್ದಾರೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್.

    ಈಗ ಪವನ್ ಒಡೆಯರ್ ಏನು ಮಾಡ್ತಾರೆ..? ಅವರು ಅಂಬರೀಷ್ ಪುತ್ರ ಅಭಿಷೇಕ್‍ಗೆ ಕಥೆ ಹೇಳಿದ್ದಾರೆ. ಸಿನಿಮಾ ಬಗ್ಗೆ ಅಂತಿಮ ನಿರ್ಧಾರ ಹೊರಬಿದ್ದಿಲ್ಲವಾದರೂ ಅದು ಡ್ರಾಪ್ ಅಂತೂ ಆಗಿಲ್ಲ. ಈಗ ಅಪ್ಪು ಸಿನಿಮಾ ಒಪ್ಪಿಕೊಂಡರೆ ಮಿನಿಮಮ್ 6 ತಿಂಗಳು ಪವನ್ ಒಡೆಯರ್ ಬೇರೆ ಕಡೆ ಹೊರಳೋಕೆ ಸಾಧ್ಯವೇ ಇಲ್ಲ. ಈ ಎಲ್ಲದರ ಮಧ್ಯೆ ಫೆಬ್ರವರಿಯಲ್ಲಿ ರಾಕ್‍ಲೈನ್ ಬ್ಯಾನರ್ ಸಿನಿಮಾ ಸೆಟ್ಟೇರುತ್ತಿರುವುದು ನಿಜ.

    Related Articles :-

    Pavan Wodeyar To Direct A Film For Puneeth Rajakumar

  • ಅವಳ ಮದುವೆಗೆ ಒಪ್ಪಿಗೆ ಕೊಡ್ತಾನಾ ಗಂಡ..? ಆದಿಲಕ್ಷ್ಮೀ ಪುರಾಣ

    adi lakshmi purana traile released

    ಮದುವೆಯಾಗು.. ಹುಡುಗಿ ನೋಡು.. ಎನ್ನುತ್ತಿದ್ದ ತಾಯಿಗೆ ಹುಡುಗಿಯನ್ನು ನೋಡಿಕೊಂಡು ಬಂದ ಮಗ ಹೇಳ್ತಾನೆ. ``ನಾನೊಂದು ಹುಡುಗಿಯನ್ನ ಇಷ್ಟಪಟ್ಟಿದ್ದೀನಿ. ಅವಳನ್ನೇ ಮದುವೆಯಾಗ್ತೀನಿ' ತಾಯಿ ಹೇಳ್ತಾಳೆ `ಕೇಳೋಣ ಬಿಡು' ಆದರೆ ಮಗನ ಮುಂದಿನ ರಿಯಾಕ್ಷನ್ ನೋಡಿ.. ಕೇಳೋದಾದ್ರೆ, ಅವಳ ಗಂಡನ್ನೇ ಕೇಳಬೇಕು..

    ಇಂತಹ ಸಣ್ಣದೊಂದು ಪಂಚ್ ಕೊಟ್ಟೇ ಟ್ರೇಲರ್ ಬಿಟ್ಟಿದ್ದಾರೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಆದಿಲಕ್ಷ್ಮೀ ಪುರಾಣದ ಟ್ರೇಲರ್‍ನ ಝಲಕ್ ಇದು. ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಅಭಿನಯದ ಈ ಸಿನಿಮಾಗೆ ಪ್ರಿಯಾ ನಿರ್ದೇಶಕಿ.

    2016ರಲ್ಲಿ ಯಶ್ ಜೊತೆ ನಟಿಸಿದ್ದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ನಂತರ ರಾಧಿಕಾ ಪಂಡಿತ್ ಅವರು ನಟಿಸಿರುವ ಚಿತ್ರವಿದು. ಯಶ್ ಅವರನ್ನು ಮದುವೆಯಾದ ಮೇಲೆ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಂಡಿರೋ ಮೊದಲ ಚಿತ್ರ. 

  • ಆದಿಲಕ್ಷ್ಮಿ ಪುರಾಣ

    adi lakshmi purana highlights

    ಆದಿ ದಕ್ಷ, ಪ್ರಾಮಾಣಿಕ ಅಧಿಕಾರಿ. ಸುಳ್ಳು ಹೇಳುವವರನ್ನು ಕಂಡ್ರೆ ಆಗೋದಿಲ್ಲ... ಅದು ನಿರೂಪ್ ಭಂಡಾರಿ..

    ಅವನಿಗೆ ಮದುವೆಯಾಗಿಲ್ಲ. ಹುಡುಗಿ ಹುಡುಕುತ್ತಿದ್ದಾರೆ. ಇವನೇ ಯಾರಿಗೂ ಎಸ್ ಅಂತಿಲ್ಲ.. ಇವನಿಗೆ ಎಂತ ಹುಡುಗಿ ಬೇಕು ಅಂದ್ರೆ, ಅವಳನ್ನು ನೋಡಿದ ತಕ್ಷಣ ಮಿಂಚು ಹೊಡೀಬೇಕು. ಹಾರ್ಟಲ್ಲಿ ಸುನಾಮಿ ಎದ್ದೇಳಬೇಕು...

    ನಿರೂಪ್‍ಗೆ ಮಿಂಚು ಹೊಡೆಸಿ, ಸುನಾಮಿಯನ್ನೂ ಏಳುವಂತೆ ಮಾಡುವ ಚೆಲುವೆ ಸಿಂಡ್ರೆಲಾ ರಾಧಿಕಾ ಪಂಡಿತ್.

    ನಿಮ್ಮ ಹೆಸರು ನಂದಿನಿ ಅಲ್ಲ ತಾನೆ.. ಹಳೆಯ ಕಾಲದಿಂದಲೂ ಆ ಹೆಸರಿನ ಹುಡುಗೀರೇ ಹುಡುಗರಿಗೆ ಹುಚ್ಚು ಹಿಡಿಸಿರೋದು ಎನ್ನುವ ಡೈಲಾಗಿನಲ್ಲಿ ಬಂಧನ, ಮುಂಗಾರು ಮಳೆ ಚಿತ್ರಗಳನ್ನೆಲ್ಲ ನೆನಪಿಸಿಬಿಡ್ತಾರೆ.

    ಆದಿ ಲಕ್ಷ್ಮಿ ಲವ್ ಪುರಾಣದ ಕಥೆ ಇಷ್ಟರಲ್ಲೇ ಕುತೂಹಲ ಹುಟ್ಟಿಸಿಬಿಡುತ್ತೆ. ಮಣಿರತ್ನಂ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ನಿರ್ದೇಶನದ ಮೊದಲ ಚಿತ್ರವಿದು. 

    ಈಗ ಕುತೂಹಲವನ್ನು ಹಿಮಾಲಯದ ಎತ್ತರಕ್ಕೆ ಹೊತ್ತೊಯ್ಯುವ ಈ ಡೈಲಾಗ್ ಕೇಳಿಬಿಡಿ.

    ನಾನೊಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ ಅಂತಾನೆ ನಾಯಕ. ಓಕೆ ಅನ್ನೋದನ್ನೇ ಕಾಯುತ್ತಿರುವ ನಾಯಕನ ಅಮ್ಮ ತಾರಾ, ಬಾ.. ಹೋಗಿ ಅವರ ಅಪ್ಪ ಅಮ್ಮನನ್ನ ಕೇಳಿಬಿಡೋಣ ಅಂತಾರೆ.

    ನಾವು ಹೆಣ್ಣು ಕೇಳೋದಾದ್ರೆ, ಅವಳ ಗಂಡನನ್ನೇ ಕೇಳಬೇಕು ಅಂತಾನೆ ನಾಯಕ.. ಮುಂದಿನದ್ದು.. ನಿಮ್ಮ ಊಹೆಗೆ ಬಿಟ್ಟಿದ್ದು. ಉತ್ತರ ಸಿಕ್ಕೋದು ಮುಂದಿನ ವಾರ.

  • ಕನ್ನಡದ ಅರ್ಜುನ್ ರೆಡ್ಡಿ ಡಾಲಿ ಧನಂಜಯ್..?

    will dhananjay act in kannada remake of arjun reddy

    ಅರ್ಜುನ್ ರೆಡ್ಡಿ, ಕಳೆದ ವರ್ಷ ತೆಲುಗಿನಲ್ಲಿ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡ ಸಿನಿಮಾ. ಹಸಿಹಸಿ ಪ್ರೇಮಕಥೆಯಿದ್ದ ಚಿತ್ರವದು. ಮಡಿವಂತರು ಮುಖ ಮುಚ್ಚಿಕೊಳ್ಳುವಂತ ದೃಶ್ಯಗಳಿದ್ದ ಚಿತ್ರದಲ್ಲಿ, ಅಷ್ಟೇ ಅದ್ಭುತವಾದ ಸಂದೇಶವೂ ಇತ್ತು. ಹೀಗಾಗಿಯೇ ಈ ಚಿತ್ರದ ರೀಮೇಕ್ ರೈಟ್ಸ್ ಈಗ ರಾಕ್‍ಲೈನ್ ವೆಂಕಟೇಶ್ ಬಳಿ ಇದೆ. ಅರ್ಜುನ್ ರೆಡ್ಡಿ ಚಿತ್ರದಿಂದ ವಿಜಯ್ ದೇವರಕೊಂಡ ಎಂಬ ಹೀರೋ, ಟಾಲಿವುಡ್‍ನಲ್ಲಿ ಸ್ಟಾರ್ ಆಗಿದ್ದು ವಿಶೇಷ.

    ಆದರೆ, ಕನ್ನಡದಲ್ಲಿ ಅರ್ಜುನ್ ರೆಡ್ಡಿ ಯಾರಾಗ್ತಾರೆ ಅನ್ನೋ ಕುತೂಹಲ ಇನ್ನೂ ಅಂತಿಮಗೊಂಡಿಲ್ಲ. ಯಶ್ ನಟಿಸುತ್ತಾರೆ ಎಂಬ ಸುದ್ದಿಯಿತ್ತಾದರೂ, ಯಶ್ ಒಪ್ಪಲಿಲ್ಲ ಎಂಬ ಸುದ್ದಿಯೂ ಹಿಂದೆಯೇ ಬಂದಿತ್ತು. ನಂತರ ಕೇಳಿ ಬಂದ ಹೆಸರು ಡಲಿ ಧನಂಜಯ್ ಅವರದ್ದು. ಟಗರು ಚಿತ್ರದ ಡಾಲಿ ಪಾತ್ರ ನೋಡಿದವರು ಅರ್ಜುನ್ ರೆಡ್ಡಿಯನ್ನು ಕಲ್ಪಿಸಿಕೊಂಡಿದ್ದರೆ ಅಚ್ಚರಿಯಿಲ್ಲ.

    ಆದರೆ, ರಾಕ್‍ಲೈನ್ ಹೇಳೋದೇ ಬೇರೆ. ಆ ಚಿತ್ರದ ನಿರ್ದೇಶನಕ್ಕೆ ಒಬ್ಬ ಸಮರ್ಥ ನಿರ್ದೇಶಕನ ಹುಡುಕಾಟದಲ್ಲಿದ್ದೇವೆ. ಇನ್ನೂ ನಿರ್ದೇಶಕರು ಫೈನಲ್ ಆಗಿಲ್ಲ. ಅದಾದ ಮೇಲೆ ಹೀರೋ ಆಯ್ಕೆ. ಸದ್ಯಕ್ಕೆ ಯಾವುದೇ ಹೆಸರು ಅಂತಿಮಗೊಂಡಿಲ್ಲ ಎಂದಿದ್ದಾರೆ ರಾಕ್‍ಲೈನ್.

  • ಕಲಾವಿದರಿಗೆ ಕಲಾವಿದರ ಭವನದಲ್ಲಿ ಆಹಾರ ಕಿಟ್ ವಿತರಣೆ

    Artist Association helps artist image

    ಚಲನಚಿತ್ರರಂಗದ ಕಾರ್ಮಿಕರು, ತಂತ್ರಜ್ಞರಿಗೆ ಫಿಲಂ ಚೇಂಬರ್ ನೆರವು ನೀಡಿದೆ. ನೂರಾರು ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಹಾಗೂ ದಾನಿಗಳ ನೆರವಿನಿಂದ ಸಹಾಯ ಹಸ್ತ ಚಾಚಿದೆ. ಕಲಾವಿದರ ಸಂಘವೂ ಹಿಂದೆ ಬಿದ್ದಿಲ್ಲ. ಬುಧವಾರ ಕಲಾವಿದರ ಸಂಘದಲ್ಲಿ ನೂರಾರು ಸಹ ಕಲಾವಿದರು, ಪೋಷಕ ನಟರಿಗೆ ಆಹಾರದ ಕಿಟ್ ವಿತರಿಸಲಾಯ್ತು.

    Minister B C Patil Helps KFCC Members

    ಸಚಿವ ಗೋಪಾಲಯ್ಯ, ಸಂಸದೆ ಸುಮಲತಾ ಅಂಬರೀಷ್,  ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ತಾರಾ ಅನುರಾಧಾ ಮೊದಲಾದವರು ಭಾಗವಹಿಸಿದ್ದರು. 200ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್ ಮತ್ತು 3 ಸಾವಿರ ರೂ. ಮೌಲ್ಯದ ಕೂಪನ್ ವಿತರಿಸಲಾಯ್ತು. ಸಚಿವ ಗೋಪಾಲಯ್ಯ ತಮ್ಮ ಕ್ಷೇತ್ರಕ್ಕೆ ಅಂಬರೀಷ್ ಮಾಡಿದ್ದ ಸಹಾಯವನ್ನು ನೆನಪಿಸಿಕೊಂಡು, ಇದು ನಮ್ಮ ಕರ್ತವ್ಯ. ಮುಖ್ಯಮಂತ್ರಿಗಳು ಹೇಳಿದಂತೆ ನಾನು ಕೆಲಸ ಮಾಡುತ್ತಿದ್ದೇನೆ ಅಷ್ಟೆ ಎಂದು ಹೇಳಿದರು.

    Also See

    ಸೀರಿಯಲ್ ಶೂಟಿಂಗ್ ಲಾಕ್ ಓಪನ್

    S V Babu's Video Salutes Police Department

    Minister B C Patil Helps KFCC Members

    BC Patil and Gopalaiah Help Film Journalists

     

  • ಕಾಡಿನಲ್ಲಿದ್ದ ರಾಜ್ ಜೊತೆ ಫೋನ್ ನಲ್ಲಿ ಮಾತನಾಡಿದ ವ್ಯಕ್ತಿ ಯಾರು?

    rajkumar, veerappan, rockline venkatesh image

    ಡಾ. ರಾಜ್ ಕುಮಾರ್ ಅಪಹರಣದ ಸಮಯದಲ್ಲಿ ಬಹಳಷ್ಟು ಓಡಾಡಿದವರು ರಾಕ್ ಲೈನ್ ವೆಂಕಟೇಶ್. ಮೊಟ್ಟ ಮೊದಲ ಬಾರಿಗೆ ರಾಕ್ ಲೈನ್ ಚಿತ್ರಲೋಕ ಜೊತೆಗೆ ಅನೇಕ ವಿಷಯಗಳನ್ನ ತಿಳಿಸಿದ್ದಾರೆ. ಈ ಸಂಚಿಕೆಯಲ್ಲಿ ರಾಕ್ ಲೈನ್ ಭಾವುಕರಾಗುತ್ತಾರೆ. ಕಾರಣ... ವಿಡಿಯೋ ನೋಡಿ..

     

  • ಕಾಡಿನಿಂದ ಬಿಡುಗಡೆಗೊಂಡ ರಾಜ್‌ರನ್ನು ಮೊದಲು ನೋಡಿದ್ದು ಯಾರು?

    rajkuma released from veerappan image

    ನವೆಂಬರ್ 14, 2000. ವರನಟ ಡಾ. ರಾಜ್ ಕುಮಾರ್ ವೀರಪ್ಪನ್ ಕಪಿ ಮುಷ್ಠಿಯಿಂದ ಬಿಡುಗಡೆಗೊಂಡ ದಿನ. ಆ ದಿನ ಕಾಡಿನಿಂದ ಬಂದ ರಾಜ್ ಅವರನ್ನ ಮೊದಲು ನೋಡಿದ್ದು ಯಾರು? ಆ ಸಮಯದಲ್ಲಿ ಅವರು ಎಲ್ಲಿದ್ದರು? ಎಲ್ಲವನ್ನೂ ವಿವರಿಸಿದ್ದಾರೆ ರಾಕ್ ಲೈನ್ ವೆಂಕಟೇಶ್

    November 14, 2000. Dr Rajkumar came out from the clutches for forest brigand Veerappan. When he came out from the forest who was the first person to meet him? What happened that day? Rockline Venkatesh explains in details. 

     

  • ದೇಶದಲ್ಲೇ ನಡೆದಿರಲಿಲ್ಲ ಇಂಥಾದ್ದೊಂದು ಸಿನಿಮಾ ಐಟಿ ರೇಡ್..!

    biggest ever income raids raid on sandalwood stars

    ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್‍ಕುಮಾರ್, ಯಶ್, ರಾಕ್‍ಲೈನ್ ವೆಂಕಟೇಶ್, ಸಿ.ಆರ್.ಮನೋಹರ್, ಜಯಣ್ಣ, ವಿಜಯ್ ಕಿರಗಂದೂರು ಮೇಲೆ ನಡೆದಿರುವ ಐತಿಹಾಸಿಕ ಐಟಿ ರೇಡ್ ಹಿಂದಿರೋ ನಿಜವಾದ ಕಾರಣ ಏನಿರಬಹುದು..? ಅದು ಈಗ ಎಲ್ಲೆಡೆ ಚರ್ಚೆಯಾಗುತ್ತಿರುವ ವಿಷಯ. ಏಕೆಂದರೆ, ಈ ಹಿಂದೆ ಚಿತ್ರರಂಗದವರ ಐಟಿ ದಾಳಿ ಆಗಿಯೇ ಇಲ್ಲ ಎಂದಲ್ಲ. ಹಲವಾರು ಬಾರಿ ಆಗಿವೆ. ಅತೀ ಹೆಚ್ಚು ಐಟಿ ತನಿಖೆ ಎದುರಿಸಿರುವುದು ಬಾಲಿವುಡ್ ಮಂದಿ. ಅವರನ್ನು ತಮಿಳು, ತೆಲುಗು ಚಿತ್ರನಟರು, ನಿರ್ಮಾಪಕರ ಮನೆಗಳಿಗೆ ಐಟಿ ಮಂದಿ ಹೋಗಿ ಬಂದಿದ್ದಾರೆ. ಆದರೆ.. ಹೀಗೆ.. ಇಷ್ಟು ದೊಡ್ಡ ಮಟ್ಟದಲ್ಲಿ.. ಒಂದೇ ದಿನ.. ಇಷ್ಟೊಂದು ನಟರ ಮೇಲೆ, ನಿರ್ಮಾಪಕರ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದ್ದು ದೇಶದಲ್ಲಿ ಇದೇ ಮೊದಲು.

    ಸುಮಾರು 300 ಅಧಿಕಾರಿಗಳ ತಂಡ ದಾಳಿ, ಪರಿಶೀಲನೆ, ವಿಚಾರಣೆಯಲ್ಲಿ ನಿರತವಾಗಿದ್ದಾರೆ. ದಾಳಿ ಎದುರಿಸುತ್ತಿರುವುದು 10ಕ್ಕೂ ಹೆಚ್ಚು ಮಂದಿ. 100 ಇನ್ನೋವಾ ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ದಾಳಿ ಆರಂಭಿಸುವ ಅರ್ಧಗಂಟೆಗೂ ಮುನ್ನ. ಅದು ಐಟಿ ಅಧಿಕಾರಿಗಳ ದಾಳಿಯ ವೈಖರಿ.

    ಒಂದು ಮೂಲದ ಪ್ರಕಾರ, ಇತ್ತೀಚೆಗೆ ಬಂದಂತಹ ವಿಲನ್, ಕೆಜಿಎಫ್ ಚಿತ್ರಗಳು ನೂರಾರು ಕೋಟಿ ಗಳಿಸಿವೆ ಎಂಬ ಸುದ್ದಿಯೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಚಿತ್ರಕ್ಕೆ ಅಷ್ಟು ದೊಡ್ಡ ಮೊತ್ತ ಹೂಡಿಕೆ ಮಾಡಿದ್ದು ಹೇಗೆ..? ಆ ಹಣ ಎಲ್ಲಿಂದ ಬಂತು..? ಅದು ಕಪ್ಪುಹಣವಾ..? ಹಾಗಾದರೆ, ಕಪ್ಪುಹಣದ ಮೂಲ ಎಲ್ಲಿ..? ಯಾರು..? ಇಷ್ಟೂ ಹಣಕ್ಕೆ ತೆರಿಗೆ ಕಟ್ಟಿದ್ದಾರಾ..? ಇಲ್ಲವಾ..? ಹೀಗೆ ಹಲವಾರು ಅನುಮಾನಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

  • ನಟಸಾರ್ವಭೌಮ ಕಲೆಕ್ಷನ್ ಎಷ್ಟು..? - ರಾಕ್‍ಲೈನ್ ಸ್ಪೀಕಿಂಗ್

    rockline venkatesh talks about natasarvabhouma

    ನಟಸಾರ್ವಭೌಮ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅದ್ಭುತ ಎನ್ನುವಂತಹ ಪ್ರತಿಕ್ರಿಯೆಗಳೇ ಸಿಗುತ್ತಿರುವಾಗ ಚಿತ್ರದ ಕಲೆಕ್ಷನ್ ಎಷ್ಟಾಗಿರಬಹುದು..? ನಟಸಾರ್ವಭೌಮ ಹೊಸ ದಾಖಲೆ ಬರೆಯಿತಾ..? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವುದು ಸತ್ಯ. ಇದಕ್ಕೆ ಚಿತ್ರದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರೇ ಉತ್ತರ ಕೊಟ್ಟಿದ್ದಾರೆ.

    `ರಿಲೀಸ್ ಆಗಿ ಇನ್ನೂ ಕೆಲವೇ ದಿನಗಳಾಗಿವೆ. ಈಗಲೇ ಅಧಿಕೃತ ಎಂದು ಲೆಕ್ಕ ಹೇಳುವುದು ಕಷ್ಟ. ಅಂದಾಜಿನ ಲೆಕ್ಕ ಸಿಗಬಹುದು. ನನಗೆ ಈಗಾಗಲೇ ಹಾಕಿದ ಬಂಡವಾಳ ವಾಪಸ್ ಬಂದಾಗಿದೆ. ಇನ್ನು ಬರುವುದೆಲ್ಲವೂ ಲಾಭ. ಒಂದೆರಡು ವಾರ ಕಳೆದ ಬಳಿಕ ಅಧಿಕೃತ ಮಾಹಿತಿ ಸಿಗಲಿದೆ' ಎಂದಿದ್ದಾರೆ ರಾಕ್‍ಲೈನ್.

    ಅಂದಹಾಗೆ ಇದು ಕೆಜಿಎಫ್ ದಾಖಲೆಯನ್ನೇನೂ ಮುರಿದಿಲ್ಲ. ಕೆಜಿಎಫ್ ಸಿನಿಮಾನೇ ಬೇರೆ. ನಟಸಾರ್ವಭೌಮ ಚಿತ್ರವೇ ಬೇರೆ. ಒಂದಕ್ಕೊಂದು ಕಂಪೇರ್ ಮಾಡೋದೇ ಸರಿಯಲ್ಲ. ನನ್ನ ಬ್ಯಾನರ್‍ನ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ನಟಸಾರ್ವಭೌಮ. ಚಿತ್ರವನ್ನು 350 ಥಿಯೇಟರುಗಳಲ್ಲಿ ರಿಲೀಸ್ ಮಾಡಿದ್ದೆವು. ಈಗ ಇನ್ನಷ್ಟು ಸೆಂಟರ್‍ಗಳಿಂದ ಬೇಡಿಕೆ ಬರುತ್ತಿದೆ ಎಂದಿದ್ದಾರೆ ರಾಕ್‍ಲೈನ್.

  • ನಿಷ್ಕರ್ಷಕ್ಕೆ ಕಾಯುತ್ತಿದ್ದಾರಂತೆ ರಾಕ್ಲೈನ್ ವೆಂಕಟೇಶ್

    rocline venkatesh wants to watch nishkarsha

    ನಿಷ್ಕರ್ಷ ಸಿನಿಮಾವನ್ನು ಹೊಸ ರೂಪದಲ್ಲಿ ಮತ್ತೊಮ್ಮೆ ನೋಡಲು ವಿಷ್ಣುವರ್ಧನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅವರಿಗೆ ವಿಷ್ಣುದಾದಾನನ್ನು ಮೇಜರ್ ರೂಪದಲ್ಲಿ ಮತ್ತೊಮ್ಮೆ ಕಣ್ಣು ತುಂಬಿಕೊಳ್ಳುವ ತವಕ. ಅಂದಹಾಗೆ ಅಂತಾದ್ದೊಂದು ತವಕ ವಿಷ್ಣುವರ್ಧನ್ ಅವರ ಗೆಳೆಯರೂ ಆಗಿದ್ದ ರಾಕ್ಲೈನ್ ವೆಂಕಟೇಶ್ ಅವರಿಗೂ ಇದೆ.

    1993ರಲ್ಲಿ ರಿಲೀಸ್ ಆಗಿದ್ದ ನಿಷ್ಕರ್ಷ, ಸಂಚಲನ ಸೃಷ್ಟಿಸಿತ್ತು. ಅದೊಂದು ಅದ್ಭುತ ಅನುಭವ ಕೊಟ್ಟಿತ್ತು. ಹಾಲಿವುಡ್ ಶೈಲಿಯಲ್ಲಿ ಬಂದಿದ್ದ ಆ ಚಿತ್ರವನ್ನು ನೋಡಲು ನಾನು ಕಾಯುತ್ತಿದ್ದೇನೆ. ಏಕೆಂದರೆ ನಾನೂ ಕೂಡಾ ವಿಷ್ಣು ಅಭಿಮಾನಿ ಎಂದಿದ್ದಾರೆ ರಾಕ್ಲೈನ್. ನಿಷ್ಕರ್ಷ ಚಿತ್ರವನ್ನು ಹೊಸ ರೂಪದಲ್ಲಿ ತೆರೆಗೆ ತರುತ್ತಿರುವ ಬಿ.ಸಿ.ಪಾಟೀಲ್ಗೆ ಶುಭ ಕೋರಿದ್ದಾರೆ ರಾಕ್ಲೈನ್ ವೆಂಕಟೇಶ್.

  • ಪಂಜುನಾ..? ಅಧಿಪತಿನಾ..? ಅಪ್ಪು ಸಿನ್ಮಾ ಟೈಟಲ್ ಏನು..?

    puneeth rockline movie

    ಪುನೀತ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ಮುಹೂರ್ತವಾಗಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ಎಲ್ಲವೂ ಲೆಕ್ಕಾಚಾರದಂತೆಯೇ ನಡೆದಿದ್ದರೆ, ಇಷ್ಟು ಹೊತ್ತಿಗೆ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ, ಏಕೋ ಏನೋ ಚಿತ್ರೀಕರಣ ಆರಂಭ ಎರಡು ಬಾರಿ ಮುಂದಕ್ಕೆ ಹೋಗಿದೆ.

    ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ, ಪಂಜು ಹಾಗೂ ಅಧಿಪತಿ ಎರಡೂ ಟೈಟಲ್‍ಗಳನ್ನು ತಂಡ ಪರಿಶೀಲನೆ ಮಾಡುತ್ತಿದೆ. ಇವೆರಡೂ ಅಲ್ಲದ ಇನ್ನೊಂದು ಟೈಟಲ್ ಬಂದರೂ ಅಚ್ಚರಿ ಪಡಬೇಕಿಲ್ಲ ಅಂತಾರೆ ಪವನ್ ಒಡೆಯರ್.

     

  • ಪುನೀತ್ ಚಿತ್ರಕ್ಕೆ ನೀವೂ ಹಾಡು ಬರೀಬಹುದು..!

    pavan wodeyar invites new comers

    ಪುನೀತ್ ರಾಜ್‍ಕುಮಾರ್ ಚಿತ್ರಕ್ಕೆ ಹಾಡು ಬರೆಯುವ ಸುವರ್ಣವಕಾಶ ನಿಮ್ಮದೂ ಆಗಬಹುದು. ಅಂತಾದ್ದೊಂದು ಚಾನ್ಸ್ ಕೊಡೋಕೆ ಸಿದ್ಧರಾಗಿರುವುದು ಪವನ್ ಒಡೆಯರ್. ನಟಸಾರ್ವಭೌಮ ಚಿತ್ರದ ನಿರ್ದೇಶಕ. 

    ಹೊಸಬರಿಂದ ಹಾಡು ಬರೆಸುವ ಯೋಚನೆಯಲ್ಲಿರುವ ಪವನ್ ಒಡೆಯರ್, ಈ ಕುರಿತು ಇನ್ನಷ್ಟು ಮಾಹಿತಿಯನ್ನು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ನೀಡಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ. ಹಾಡು ಬರೆಯಬೇಕಿರೋದು ಪುನೀತ್ ರಾಜ್‍ಕುಮಾರ್ ಇಂಟ್ರೊಡಕ್ಷನ್ ಸಾಂಗ್‍ಗೆ.

    ಸಾಹಿತ್ಯ ಚೆನ್ನಾಗಿದ್ದು, ಅದೃಷ್ಟವೂ ಚೆನ್ನಾಗಿದ್ದರೆ, ಪುನೀತ್ ಚಿತ್ರದಲ್ಲಿ ನಿಮ್ಮ ಹಾಡು ಮಿನುಗಲಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ, ಪುನೀತ್-ರಚಿತಾ ರಾಮ್ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಿ.

  • ಪುನೀತ್-ರಾಕ್‍ಲೈನ್ ಸಿನಿಮಾ ಸ್ಟಾರ್ಟ್

    puneeth's new film launched

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್‍ನ ಹೊಸ ಸಿನಿಮಾ ಶುರುವಾಗಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

    ಪ್ರೊಡಕ್ಷನ್ ನಂ.9 ಹೆಸರಲ್ಲಿ ಶುರುವಾಗಿರುವ ಚಿತ್ರಕ್ಕೆ ಶುಭ ಕೋರಿದ್ದು ನಿರ್ಮಾಪಕ ಮುನಿರತ್ನ.

    rockline_puneeth_newmovie_2.jpgರಣವಿಕ್ರಮ ಚಿತ್ರದ ನಂತರ ಪವನ್ ಒಡೆಯರ್, ಎರಡನೇ ಬಾರಿಗೆ ಪುನೀತ್ ಸಿನಿಮಾ ನಿರ್ದೇಶಿಸುತ್ತಿರುವುದು ವಿಶೇಷ. ಇನ್ನು ರಾಕ್‍ಲೈನ್ ವೆಂಕಟೇಶ್ ಕೂಡಾ ಹಲವು ವರ್ಷಗಳ ನಂತರ ಪುನೀತ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಹೀಗಾಗಿಯೇ ಚಿತ್ರ ಶುರುವಾಗುತ್ತಿದ್ದಂತೆಯೇ ನಿರೀಕ್ಷೆಗಳೂ ಶುರುವಾಗಿವೆ.

  • ಬೃಹಸ್ಪತಿ ಎಂದರೆ ಏನರ್ಥ ಗೊತ್ತಾ..?

    brihaspathi meaning in mythology

    ಬೃಹಸ್ಪತಿ ಎಂದರೆ ಮನೋರಂಜನ್ ಅಭಿನಯದ ಹೊಸ ಸಿನಿಮಾ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಂದಕಿಶೋರ್ ನಿರ್ದೇಶನದ ಈ ಸಿನಿಮಾ ಜನವರಿ 5 ರಂದು ತೆರೆಗೆ ಬರುತ್ತಿದೆ. ರವಿಚಂದ್ರನ್ ಪುತ್ರನ ಅಭಿನಯದ 2ನೇ ಚಿತ್ರ. ಈ ಚಿತ್ರಕ್ಕೆ ಇಟ್ಟಿರುವ ಟೈಟಲ್ ಕುತೂಹಲ ಹುಟ್ಟಿಸಿರುವುದು ಸತ್ಯ. 

    ಪುರಾಣ, ರಾಮಾಯಣ, ಮಹಾಭಾರತದ ಅರಿವಿಲ್ಲದೇ ಇರುವವರಿಗೆ ಬೃಹಸ್ಪತಿ ಎಂದರೆ ಏನು..? ಯಾರು..? ಎಂಬ ಕುತೂಹಲ ಸಹಜ. ಬೃಹಸ್ಪತಿ ಎಂದರೆ, ಬೃಹದಾಕಾರದ ಜಾಗ ಎನ್ನುವ ಪದದ ಅರ್ಥ. 

    ಬೃಹಸ್ಪತಿ ದೇವತೆಗಳ ಗುರು. ಅಂಗೀರಸ ಋಷಿಯ ಪುತ್ರ. ಇವನ ತಪಸ್ಸಿಗೆ ಮೆಚ್ಚಿ ಈಶ್ವರನೇ ಬೃಹಸ್ಪತಿಗೆ ದೇವತೆಗಳ ಗುರುವಿನ ಸ್ಥಾನ ನೀಡುತ್ತಾನೆ. ನವಗ್ರಹಗಳಲ್ಲಿಯೂ ಸ್ಥಾನ ಕೊಡುತ್ತಾನೆ. ಗುರು ಗ್ರಹದ ಅಧಿಪತಿ ಬೃಹಸ್ಪತಿ.

    ದೇವತೆಗಳಿಗೆ ಯಾವುದೇ ಸಮಸ್ಯೆ ಎದುರಾದರೂ ಅದನ್ನು ನಿವಾರಿಸುವುದು, ಮಾರ್ಗದರ್ಶನ ನೀಡುವುದು ಬೃಹಸ್ಪತಿ ಕಾಯಕ. ಗುರು ಎಂದರೆ ಬುದ್ದಿವಂತಿಕೆಯ ದೇವರು. ಎಲ್ಲ ಸರಿ, ಈ ಹೆಸರನ್ನು ಚಿತ್ರಕ್ಕೆ ಇಟ್ಟಿದ್ದು ಯಾಕೆ..? ಚಿತ್ರದ ಟೈಟಲ್‍ಗೂ, ಕಥೆಗೂ ಏನು ಸಂಬಂಧ..? ಸಿನಿಮಾ ಬಿಡುಗಡೆಯಾಗುವವರೆಗೂ ಕಾಯಬೇಕು.

  • ಬೃಹಸ್ಪತಿ ಮನೋರಂಜನ್ ಸಿಕ್ಸ್‍ಪ್ಯಾಕ್ ಹೆಂಗೆ..?

    brihaspathi movie highlights

    ಬೃಹಸ್ಪತಿ. ಮನೋರಂಜನ್ ರವಿಚಂದ್ರನ್ ಅಭಿನಯದ ಈ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರದ ಕಥೆ, ತಾರಾಗಣದಂತೆಯೇ ಗಮನ ಸೆಳೆದಿರುವುದು ಮನೋರಂಜನ್ ಸ್ಟೈಲ್. ಮೊದಲ ಚಿತ್ರ ಸಾಹೇಬದಲ್ಲಿ ಸಾಫ್ಟ್ ಹುಡುಗನಾಗಿ, ಅಮ್ಮನ ಪ್ರೀತಿಯ ಮಗನಾಗಿ ಕಾಣಿಸಿಕೊಂಡಿದ್ದ ಮನೋರಂಜನ್ ಈ ಚಿತ್ರದಲ್ಲಿ ಸ್ವಲ್ಪ ರಫ್ & ಟಫ್ ಆಗಿ ಕಾಣಿಸಿಕೊಳ್ತಾರೆ.

    ಎಂಜಿನಿಯರ್ ಪಾತ್ರದಲ್ಲಿ ನಟಿಸಿರುವ ಮನೋರಂಜನ್, ಕೆಲವು ದೃಶ್ಯಗಳಲ್ಲಿ ಪ್ರೇಕ್ಷಕರ ಕಣ್ಣು ಒದ್ದೆ ಮಾಡಲಿದ್ದಾರೆ ಎನ್ನುವ ಭರವಸೆ ನಿರ್ದೇಶಕ ನಂದಕಿಶೋಕರ್ ಅವರಿಂದ ಸಿಗುತ್ತಿದೆ. ಚಿತ್ರದ ಕಥೆಯೇ ಹಾಗಿದೆ. ಸರಳವಾದ ಕಥೆಯೊಳಗೆ ನೋಡ ನೋಡುತ್ತಲೇ ಪ್ರೇಕ್ಷಕ ಇಳಿದು ಹೋಗುತ್ತಾನೆ. ಯುವಕರಂತೂ ಮನೋರಂಜನ್ ಅವರಲ್ಲಿ ತಮ್ಮನ್ನು ತಾವೇ ನೋಡಿಕೊಳ್ಳುತ್ತಾರೆ ಎನ್ನುವುದು ನಿರ್ದೇಶಕರ ನುಡಿ.

    ಚಿತ್ರದಲ್ಲಿ ಮನೋರಂಜನ್ ತಮ್ಮ ದೇಹದಾಢ್ರ್ಯ ಪ್ರದರ್ಶನವನ್ನೂ ಮಾಡಿದ್ಧಾರೆ. ಹುರಿಗಟ್ಟಿದ ಮಾಂಸಖಂಡಗಳ ಮನೋರಂಜನ್ ಅವರ ಪೋಸ್ಟರ್ ಕಣ್ಣು ಕುಕ್ಕುವಂತಿದೆ. ಜ್ಯೂ.ಕ್ರೇಜಿಸ್ಟಾರ್ ಆಗುವ ಭರವಸೆ ಮೂಡಿಸಿರುವ ಮನೋರಂಜನ್‍ಗೆ ಬೃಹಸ್ಪತಿ, ಬೃಹತ್ ಆದ ಹಿಟ್ ಕೊಡಲಿ.

  • ಮಂಡ್ಯ ಜನರಿಗೆ ರಾಕ್‍ಲೈನ್ ಕೃತಜ್ಞತೆ ಸಲ್ಲಿಸ್ತಿರೋದು ಹೀಗೆ.

    rockline venkatesh thanks mndya people

    ಮಂಡ್ಯ ಎಲೆಕ್ಷನ್, ಅದು ಇಡೀ ರಾಜ್ಯ ರಾಜಕೀಯಕ್ಕೆ ಅಂಟಿಸಿದ ಬಿಸಿ, ಏರಿಸಿದ ಬಿಪಿ, ಕೊಟ್ಟ ರಿಸಲ್ಟು ಎಲ್ಲವನ್ನೂ ಕಣ್ಣಾರೆ ನೋಡಿರುವವರಿಗೆ ರಾಕ್‍ಲೈನ್ ವೆಂಕಟೇಶ್ ಯಾರ ಪರ ಇದ್ದರು ಎನ್ನುವುದು ಗುಟ್ಟೇನಲ್ಲ. ಬಹಿರಂಗವಾಗಿಯೇ ಸುಮಲತಾ ಅಂಬರೀಷ್ ಪರ ಕಾಣಿಸಿಕೊಂಡಿದ್ದ ರಾಕ್‍ಲೈನ್ ವೆಂಕಟೇಶ್, ಸುಮಲತಾ ಗೆಲುವಿನ ನಂತರವಂತೂ ಮಂಡ್ಯ ಜನರನ್ನು, ಅಂಬಿ ಅಭಿಮಾನಿಗಳಿಗೆ ಏನೋ ಒಂದು ವಿಶೇಷ ಕೊಡುಗೆ ಕೊಡಬೇಕು ಎಂದು ನಿರ್ಧರಿಸಿಯೇಬಿಟ್ಟರು.

    ನೀವು ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಆದಿ ಲಕ್ಷ್ಮಿ ಪುರಾಣ ಚಿತ್ರದ ಟ್ರೇಲರ್ ನೋಡಿದ್ದೀರಲ್ಲ. ಆ ಟ್ರೇಲರ್‍ನಲ್ಲಿ `ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಜನರ ಆಶೀರ್ವಾದದೊಂದಿಗೆ.. ಎಂಬ ಸಾಲು, ನಡುವೆ ಅಂಬರೀಷ್ ಫೋಟೋ.. ಅಕ್ಕಪಕ್ಕದಲ್ಲಿ ಕಹಳೆಯೂದುತ್ತಿರುವ ರೈತ (ಸುಮಲತಾ ಅವರ ಚಿಹ್ನೆಯಾಗಿತ್ತು)ರ ಫೋಟೋ ಬರುತ್ತವೆ. ತಮ್ಮ ಪ್ರತಿ ಚಿತ್ರದಲ್ಲೂ ಈ ಸಾಲುಗಳ ಮೂಲಕವೇ ಮಂಡ್ಯ ಜನರನ್ನು ಸ್ಮರಿಸುತ್ತೇನೆ ಎಂದು ಘೋಷಿಸಿದ್ದಾರೆ ರಾಕ್‍ಲೈನ್ ವೆಂಕಟೇಶ್. ಆ ಘೋಷಣೆ ಆದ ಮೇಲೆ ರಿಲೀಸ್ ಆಗುತ್ತಿರುವ ರಾಕ್‍ಲೈನ್ ನಿರ್ಮಾಣದ ಮೊದಲ ಸಿನಿಮಾ ಆದಿಲಕ್ಷ್ಮೀ ಪುರಾಣ. 

    ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ಚಿತ್ರಕ್ಕೆ ಮಣಿರತ್ನಂ ಅವರ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ನಿರ್ದೇಶನವಿದೆ. ರಾಕ್‍ಲೈನ್ ವೆಂಕಟೇಶ್ ಭಾರತೀಯ ಚಿತ್ರರಂಗದ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರು. ಹೀಗಾಗಿಯೇ ಆದಿಲಕ್ಷ್ಮೀ ಪುರಾಣ ಕುತೂಹಲ ಕೆರಳಿಸುತ್ತಿದೆ.

  • ಮುರುಘಾ ಶ್ರೀಗಳು ಮದಕರಿ ವಿವಾದ ತಣ್ಣಗಾಗಿಸ್ತಾರಾ..?

    will murugha mutt cools madakari nayaka issue

    ಮದಕರಿ ಚಿತ್ರದ ವಿವಾದ.. ಜಾತಿ ವಿವಾದಕ್ಕೆ ತಿರುಗಿರುವುದು ಗೊತ್ತೇ ಇದೆ. ಈಗ ಆ ವಿವಾದ ಮುರುಘಾ ಶರಣರ ಮಠದ ಅಂಗಳ ತಲುಪಿದೆ. ಶರಣರ ಉತ್ಸವಕ್ಕಾಗಿ ಚಿತ್ರದುರ್ಗಕ್ಕೆ ತೆರಳಿದ್ದ ದರ್ಶನ್ ಮತ್ತು ರಾಕ್‍ಲೈನ್ ವೆಂಕಟೇಶ್, ಈ ಕುರಿತು ಮುರುಘಾ ಶ್ರೀಗಳ ಜೊತೆ ಮಾತನಾಡಿದ್ದಾರಂತೆ.

    ವಾಲ್ಮೀಕಿ ಸಮುದಾಯದ ಶ್ರೀಗಳಾದ ಪ್ರಸನ್ನಾನಂದ ಸ್ವಾಮೀಜಿಗಳಿಗೆ ಮುರುಘಾ ಮಠದ ಶ್ರೀಗಳೆಂದರೆ ಅಪಾರ ಗೌರವ. ಹೀಗಾಗಿ ಮುರುಘಾ ಶರಣರ ಮೂಲಕ ವಾಲ್ಮೀಕಿ ಶ್ರೀಗಳನನ್ನು ಸುಮ್ಮನಾಗಿಸುವ ಪ್ರಯತ್ನ ಮಾಡಿದ್ದಾರಂತೆ ರಾಕ್‍ಲೈನ್ ವೆಂಕಟೇಶ್ ಮತ್ತು ದರ್ಶನ್.

    ಮದಕರಿ ಸಿನಿಮಾವನ್ನು ದರ್ಶನ್ ನಾಯಕತ್ವದಲ್ಲಿ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲಸಗಳು ಈಗಾಗಲೇ ಶುರುವಾಗಿವೆ ಎಂದಿರುವ ರಾಕ್‍ಲೈನ್ ವೆಂಕಟೇಶ್, ವಿವಾದದ ಬಗ್ಗೆ ಮಾತನಾಡುವುದಿಲ್ಲ. ಆದರೆ ವಿವಾದವನ್ನು ತಣ್ಣಗಾಗಿಸುವ ಕೆಲಸಕ್ಕೆ ಕೈ ಹಾಕಿರುವುದು ಸತ್ಯ.