` kiccha sudeepa - chitraloka.com | Kannada Movie News, Reviews | Image

kiccha sudeepa

  • ಒಂದು ಸೀಕ್ರೆಟ್ ಬಿಟ್ಟೇ ಬಿಟ್ರು ವಿಲನ್ ಪ್ರೇಮ್

    prem reveals one of the villain's secret

    ದಿ ವಿಲನ್ ಚಿತ್ರದ ಕಥೆಯನ್ನೇ ನಂಗೆ ಹೇಳಿಲ್ಲ. ಶಿವಣ್ಣಂಗೂ ಹೇಳಿಲ್ಲ. ಅವರಿಗೆ ಹೇಳಿದ್ದೀನಿ ಡಾರ್ಲಿಂಗ್ ಅಂತಾ ನಂಗೆ, ನಂಗೆ ಹೇಳಿದ್ದೀನಿ ಅಂಥಾ ಶಿವಣ್ಣಂಗೆ ಯಾಮಾರಿಸಿದ್ದಾರೆ ಪ್ರೇಮ್.. ಇದು ಆಗಾಗ್ಗೆ ವಿಲನ್ ನಿರ್ದೇಶಕ ಪ್ರೇಮ್ ಅವರನ್ನು ಸುದೀಪ್ ಅವರು ಗೋಳಾಡಿಸುವ ಪರಿ. ಪ್ರೇಮ್ ಇರೋದೇ ಹಾಗೆ. ಗುಟ್ಟು ಬಿಟ್ಟುಕೊಡಲ್ಲ. ಇಷ್ಟೆಲ್ಲ ಆಗಿಯೂ.. ಈ ಬಾರಿ ಪ್ರೇಮ್ ದಿ ವಿಲನ್ ಚಿತ್ರದ ಒಂದು ಮಹಾ ಸೀಕ್ರೆಟ್ ಹೊರಹಾಕಿದ್ದಾರೆ.

    ದಿ ವಿಲನ್ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಫೈಟ್ ಇಲ್ಲವಂತೆ. ಅದು ಸೆಂಟಿಮೆಂಟ್ ದೃಶ್ಯ ಎಂಬ ಮಾಹಿತಿಯನ್ನು ಸ್ವತಃ ಪ್ರೇಮ್ ಅವರೇ ಹೊರಹಾಕಿರುವುದು ವಿಶೇಷ. ಶಿವಣ್ಣ ಮತ್ತು ಸುದೀಪ್ ಇಬ್ಬರೂ ಕಮರ್ಷಿಯಲ್ ಹೀರೋಗಳು. ಅವರನ್ನಿಟ್ಟುಕೊಂಡು ಆ್ಯಕ್ಷನ್ ಸಿನಿಮಾ ಮಾಡೋದು ದೊಡ್ಡದಲ್ಲ. ಒಂದು ಉದ್ದೇಶ, ಸಂದೇಶ ಇಟ್ಟುಕೊಂಡು ಸೆಂಟಿಮೆಂಟ್ ಕಥೆ ಇರುವ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ ಪ್ರೇಮ್.

    ಕ್ಲೈಮಾಕ್ಸ್‍ನಲ್ಲಿ ಫೈಟ್ ಸೀನ್ ಇಲ್ಲ ಎನ್ನುವ ಮೂಲಕ ಪ್ರೇಮ್ ಒಂದು ಗುಟ್ಟನ್ನಷ್ಟೇ ಹೊರಹಾಕಿದ್ದಾರೆ. ಉಳಿದ ಗುಟ್ಟುಗಳನ್ನೆಲ್ಲ ಈಗಲೇ ಹೇಳೋಕೆ ಸಾಧ್ಯವಿಲ್ಲ. ಸಿ.ಆರ್.ಮನೋಹರ್ ನಿರ್ಮಾಣದ ಈ ಸಿನಿಮಾದ ಮಿಕ್ಕ ಎಲ್ಲ ಗುಟ್ಟುಗಳನ್ನೂ ನೋಡೋಕೆ ಆಯುಧಪೂಜೆವರೆಗೆ ಕಾಯಲೇಬೇಕು.

  • ಕಣ್ಣೀರಿಟ್ಟಿದ್ದ ಸುದೀಪ್`ಗೆ ಕಪಿಲ್ ಕೊಟ್ಟ ಗಿಫ್ಟ್

    ಕಣ್ಣೀರಿಟ್ಟಿದ್ದ ಸುದೀಪ್`ಗೆ ಕಪಿಲ್ ಕೊಟ್ಟ ಗಿಫ್ಟ್

    ಆಗ ನಾನಿನ್ನೂ ಚಿಕ್ಕ ಹುಡುಗ. ಕಪಿಲ್ ದೇವ್ ಅಂದ್ರೆ ಇಷ್ಟ. ಅವರ ಜೊತೆ ಫೋಟೋ ತೆಗೆಸಿಕೊಳ್ಳೋ ಆಸೆ. 1987 ಇರಬೇಕು. ವೆಸ್ಟ್‍ಇಂಡೀಸ್ ಜೊತೆ ಆಡೋಕೆ ಕಪಿಲ್ ದೇವ್ ಟೀಂ ಬೆಂಗಳೂರಿಗೆ ಬಂದಿತ್ತು. ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಉಳಿದುಕೊಂಡಿತ್ತು. ನಾನು ಅಕ್ಕನ ಜೊತೆ ಹೋಗಿದ್ದೆ.

    ಕಪಿಲ್ ಹೋಗುತ್ತಿದ್ದನ್ನು ನೋಡಿ.. ಓಡಿ ಹೊಗಿ ಅವರ ಕೋಟ್ ಹಿಡಿದು ಎಳೆದೆ. ಅವರು ತಿರುಗಿ ನೋಡಿ ಏನು ಬೇಕು ಮಗು ಅಂದ್ರು. ನಾನು ಫೋಟೋ ಬೇಕು ಎಂದು ನನ್ನ ಬಳಿಯಿದ್ದ ಫ್ಯೂಜಿ ಕ್ಯಾಮೆರಾ ತೋರಿಸಿದೆ. ಯಾರು ಫೋಟೋ ತೆಗೀತಾರೆ ಅಂದೆ. ಅಷ್ಟೊತ್ತಿಗೆ ನನ್ನ ಅಕ್ಕ ಕೂಡಾ ಓಡೋಡಿ ಬಂದಿದ್ದರು. ಅಕ್ಕನನ್ನು ತೋರಿಸಿದೆ. ಆದರೆ, ಫೋಟೋ ತೆಗೆಯೋಕೆ ಅದೇ ಟೈಮಿಗೆ ಹೋದರೆ ಕ್ಯಾಮೆರಾ ಕೆಲಸ ಮಾಡ್ತಿಲ್ಲ. ನಾನು ಅಳೋಕೆ ಶುರು ಮಾಡಿದೆ. ಆಗ ಕಪಿಲ್ ಅವರೇ ಸಮಾಧಾನ ಮಾಡಿದ್ರು. ನಂತರ ನಾನು ವೆಂಗ್ ಸರ್ಕಾರ್ ಅವರನ್ನ ನೋಡ್ಬೇಕು ಅಂದೆ. ಅಳುತ್ತಿದ್ದ ನನ್ನನ್ನು ಕರೆದುಕೊಂಡು ಹೋಗಿ ಅವರನ್ನೂ ಭೇಟಿ ಮಾಡಿಸಿದರು.

    ಸುದೀಪ್ ಇದಿಷ್ಟೂ ಕಥೆಯನ್ನು 83 ಚಿತ್ರದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಳ್ತಿರೋವಾಗ ಅಲ್ಲಿಯೇ ವೇದಿಕೆ ಮೇಲಿದ್ದ ಕಪಿಲ್ ಎದ್ದು ಬಂದು ಈಗ ಸುದೀಪ್‍ಗೆ ನನ್ನ ಜೊತೆ ಫೋಟೋ ಬೇಕೋ ಬೇಡವೋ.. ನನಗೀಗ ಸುದೀಪ್ ಜೊತೆ ಪಿಕ್ಚರ್ ಬೇಕು ಎಂದು ಫೋಟೋ ತೆಗೆಸಿಕೊಂಡರು.

    ಇದೆಲ್ಲ ನಡೆದದ್ದು 83 ಈವೆಂಟ್‍ನಲ್ಲಿ. ಅಂದು ಕಪಿಲ್ ಜೊತೆಗೆ ಒಂದು ಫೋಟೋಗಾಗಿ ಕಣ್ಣೀರಿಟ್ಟಿದ್ದ ಸುದೀಪ್, ಈಗ ಅವರ ಬಯೋಪಿಕ್ 83ಯನ್ನು ಕನ್ನಡದಲ್ಲಿ ಅರ್ಪಣೆ ಮಾಡುತ್ತಿದ್ದಾರೆ. 

  • ಕಣ್ಮಣಿಗೆ ಕಣ್ಣು ಹೊಡೆದದ್ದು ನೋಡಿದ್ರಾ..

    sudeep akansha's romantic number creates sensation

    ಪೈಲ್ವಾನ್ ಚಿತ್ರದ ಕಣ್ಮಣಿಯೇ.. ಕಣ್ಣು ಹೊಡೆಯೇ.. ಹಾಡಿನ ಟೀಸರ್ ಹೊರಬಂದಿದೆ. ಇದು ಬಾಲಿವುಡ್ ಸ್ಟೈಲ್. ಬಾಲಿವುಡ್‍ನಲ್ಲಿ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟ ನಂತರ ಹಾಡಿನ ಸಣ್ಣ ತುಣುಕಿನ ಟೀಸರ್ ಹೊರತರುತ್ತಾರೆ. ಅದೇ ಹೆಜ್ಜೆಯಲ್ಲಿ ಮುಂದುವರೆದಿದೆ ಪೈಲ್ವಾನ್ ಟೀಂ.

    ಕಿಚ್ಚ ಸುದೀಪ್ ಇಲ್ಲಿ ಕಣ್ಣು ಹೊಡೆಯೋದು ಆಕಾಂಕ್ಷಾ ಸಿಂಗ್ ಅವರಿಗೆ. ಹಾಡಿನ ಮೇಕಿಂಗ್ ಅದ್ಧೂರಿಯಾಗಿದೆ ಅನ್ನೋದಕ್ಕೆ ಸಾಕ್ಷಿ ಟೀಸರ್. ಅರ್ಜುನ್ ಜನ್ಯಾ ಸಂಗೀತದಲ್ಲಿ ಸಂಚಿತ್ ಹೆಗ್ಡೆ ಹಾಡಿರುವ ಹಾಡು ಮಜಬೂತಾಗಿದೆ.

    ಸ್ವಪ್ನಾ ಕೃಷ್ಣ ನಿರ್ಮಾಣದ ಪೈಲ್ವಾನ್‍ಗೆ ಕೃಷ್ಣ ನಿರ್ದೇಶಕ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಪೈಲ್ವಾನ್.

  • ಕನ್ನಡ ಕಿರುತೆರೆಯಲ್ಲಿ ಸಲ್ಮಾನ್ ಖಾನ್ - ಪೈಲ್ವಾನ್ ಜೊತೆ ಸುಲ್ತಾನ್

    pailwan with sultan

    ಸಲ್ಮಾನ್ ಖಾನ್, ಬಾಲಿವುಡ್ ಸುಲ್ತಾನ್. ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳಿರೋ ಸಲ್ಮಾನ್, ಇದೇ ಮೊದಲ ಬಾರಿಗೆಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ವಾಹಿನಿಯ ಸೆನ್ಸೇಷನ್ ಬಿಗ್ ಬಾಸ್ ಶೋನಲ್ಲಿ ವಾರದ ಕಥೆ ಕಿಚ್ಚನಜೊತೆಯಲ್ಲಿ ಸಲ್ಮಾನ್ ಖಾನ್ ಈ ವಾರದ ಅತಿಥಿಯಾಗಿದ್ದರು. 

    ಹಿಂದಿ ಬಿಗ್ ಬಾಸ್ ನಲ್ಲಿ ಬಳಸುವ ಕೆಲ ಪದಗಳನ್ನ ಕನ್ನಡದಲ್ಲಿ ಹೇಗೆ ಹೇಳುವಿರಿ ಎಂದು ಸುದೀಪ್ ಅವರಿಂದ ಕೇಳಿ ಅದನ್ನ ಪುನರ್ಉಚ್ಚರಿಸಿದರು ಮತ್ತು ಕನ್ನಡ ಇಷ್ಟು ಸುಲಭವಾಗಿ ಹೇಳಬಹುದು ಎಂದಾದರೆ ನಾನೇ ನಡೆಸಿಕೊಡುವೆ ಎಂದಾಗ ಸುದೀಪ್ ಕೂಡಲೆಸಂತೋಷದಿಂದ ಒಪ್ಪಿ ಆಹ್ವಾನಿಸಿದರು.

    ಹಿಂದಿ ಬಿಗ್ ಬಾಸ್ ಶೋ ನಿರೂಪಕರೂ ಆಗಿರುವ ಸಲ್ಮಾನ್ ಖಾನ್ ಅವರ ದಬಾಂಗ್ 3 ಈ ಬಾರಿ ಕನ್ನಡದಲ್ಲಿ ಡಬ್ ಆಗಿ ಬರುತ್ತಿದೆ. ಇದೇ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡಾ ನಟಿಸಿದ್ದಾರೆ. ದಬಾಂಗ್ 3 ಚಿತ್ರದ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬಂದಿರುವ ಸಲ್ಮಾನ್, ಕನ್ನಡದಕಿರುತೆರೆಯ ಟಾಪ್ ಶೋ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದಾರೆ.

  • ಕನ್ನಡದಲ್ಲೇ ಬರುತ್ತಾ ಸೈರಾ..?

    is syera releasing in kannada

    ಸೈರಾ. ತೆಲುಗಿನ ಬಿಗ್ ಬಜೆಟ್ ಸಿನಿಮಾ. ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರನ ಕಥೆ. ಮೆಗಾಸ್ಟಾರ್ ಚಿರಂಜೀವಿ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ಕಿಚ್ಚ ಸುದೀಪ್, ಅಮಿತಾಬ್ ಬಚ್ಚನ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತೆಲುಗಿನಲ್ಲಷ್ಟೆ ಅಲ್ಲ, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಮಾಡುತ್ತೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಈಗ... ಸೈರಾ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ, ಒಟ್ಟಿಗೇ ಕನ್ನಡದಲ್ಲಿ ರಿಲೀಸ್ ಮಾಡುತ್ತಾರೆ ಎಂಬ ಸುದ್ದಿ ಹೊರಬಿದ್ದಿದೆ. ಸೈರಾ ಚಿತ್ರದ ವಿಕಿಪೀಡಿಯಾ ಪೇಜ್‍ನಲ್ಲಿ ಕೂಡಾ, ಸೈರಾ ಕನ್ನಡದಲ್ಲೂ ರಿಲೀಸ್ ಆಗಲಿದೆ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಡಬ್ಬಿಂಗ್ ಚಿತ್ರಗಳ ಮೇಲಿನ ನಿಷೇಧ ತೆರವಾಗಿದ್ದು, ಸೈರಾ ಚಿತ್ರ ಕನ್ನಡದಲ್ಲಿಯೇ ರಿಲೀಸ್ ಆಗಿ ಇತಿಹಾಸ ಸೃಷ್ಟಿಸುತ್ತಾ..? ಸದ್ಯಕ್ಕೆ ಇದು ಪ್ರಶ್ನೆ ಮತ್ತು ಕುತೂಹಲ ಮಾತ್ರ.

  • ಕನ್ನಡವನ್ನ ಉಳಿಸಬೇಕು ಅನ್ನೋದು ಬೇಡ, ಬೆಳೆಸಬೇಕು ಅನ್ನೋಣ : ಕಿಚ್ಚ ಸುದೀಪ್

    ಕನ್ನಡವನ್ನ ಉಳಿಸಬೇಕು ಅನ್ನೋದು ಬೇಡ, ಬೆಳೆಸಬೇಕು ಅನ್ನೋಣ : ಕಿಚ್ಚ ಸುದೀಪ್

    ಕನ್ನಡವನ್ನ ನಾವೆಲ್ಲರೂ ಸೇರಿ ಉಳಿಸಬೇಕು ಅಂತಾ ದಯವಿಟ್ಟು ಹೇಳಬೇಡಿ. ಕನ್ನಡವನ್ನು ಬೆಳೆಸೋಣ ಅನ್ನಿ. ಕನ್ನಡವನ್ನು ಉಳಿಸೋಣ ಎನ್ನುವುದೇ ನಮ್ಮ ಮೊದಲ ಸೋಲು. ಹೀಗೆಂದು ಹೇಳಿದ್ದಾರೆ ಕಿಚ್ಚ ಸುದೀಪ್.

    ಕಿಚ್ಚ ಸುದೀಪ್ ಇತ್ತೀಚೆಗೆ ಭುರ್ಜ್ ಖಲೀಫಾದಲ್ಲಿ ಕನ್ನಡ ಬಾವುಟವನ್ನು ಹಾರಿಸಿ ಸುದ್ದಿ ಮಾಡಿದ್ದರು. ಸುದೀಪ್ ಅವರ ಚಿತ್ರರಂಗದ ಜರ್ನಿಯ 25ನೇ ವರ್ಷವನ್ನು ದುಬೈನಲ್ಲಿ ಆಚರಣೆ ಮಾಡಲಾಗಿತ್ತು. ಆಗ ಭುರ್ಜ್ ಖಲೀಫಾದಲ್ಲಿ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ಲೋಗೋ ಬಿಡುಗಡೆಗೂ ಮುನ್ನ ಕನ್ನಡ ಬಾವುಟ ಪ್ರದರ್ಶನ ಮಾಡಲಾಗಿತ್ತು.

    ಈ ಹಿನ್ನೆಲೆಯಲ್ಲಿ ಸುದೀಪ್ ಅವರನ್ನು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಹಲವು ಕನ್ನಡಪರ ಸಂಘಟನೆಗಳು ಸನ್ಮಾನಿಸಿದವು. ಕನ್ನಡ ಸಂಘಟನೆಗಳ ಸನ್ಮಾನ ಸ್ವೀಕರಿಸಿದ ವೇಳೆ ಕಿಚ್ಚ ಈ ಮಾತು ಹೇಳಿದ್ದಾರೆ.

    ಬೇರೆ ಭಾಷೆಯವರು ಕನ್ನಡ ಮಾತನಾಡುವಾಗ ಅವರಿಗೆ ಸಪೋರ್ಟ್ ಮಾಡೋಣ. ಕನ್ನಡವನ್ನ ನಮ್ಮಿಂದ ಯಾರೂ ಕಿತ್ಕೊಳ್ಳೋಕೆ ಆಗಲ್ಲ. ಕನ್ನಡವನ್ನ ಉಳಿಸೋಣ ಎನ್ನಬೇಡಿ. ಅದೇ ನಮ್ಮ ಮೊದಲ ಸೋಲು. ಕನ್ನಡವನ್ನ ಬೆಳೆಸೋಣ ಎನ್ನೋಣ ಎಂದಿದ್ದಾರೆ ಸುದೀಪ್.

  • ಕಪಿಲ್ ಶರ್ಮಾ ಶೋನಲ್ಲಿ ಪೈಲ್ವಾನ್

    sudeep in kapil sharma show

    ಸೆಪ್ಟೆಂಬರ್ 12ರಂದು ಕಿಚ್ಚ ಸುದೀಪ್ ಪೈಲ್ವಾನ್ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿರುವ ಸುದೀಪ್, ಹಿಂದಿ ಪೈಲ್ವಾನ್ ಪ್ರಚಾರಕ್ಕಾಗಿ ಮುಂಬೈನಲ್ಲಿದ್ದಾರೆ. ಹಿಂದಿಯ ಸೂಪರ್ ಹಿಟ್ ಶೋ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಕಪಿಲ್ ಶರ್ಮಾ ಶೋನಲ್ಲಿ ಸುದೀಪ್ ಭಾಗವಹಿಸುತ್ತಿರುವುದು ಇದು 2ನೇ ಸಲ. ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆ ಕಪಿಲ್ ಶೋನಲ್ಲಿ ಭಾಗಿಯಾಗಿ ಸಿನಿಮಾ ಪ್ರಚಾರ ಮಾಡಿದ್ದಾರೆ.

    ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿರುವ ಚಿತ್ರಕ್ಕೆ ಕೃಷ್ಣ ನಿರ್ದೇಶಕರಾದರೆ, ಸ್ವಪ್ನಾ ಕೃಷ್ಣ ನಿರ್ಮಾಪಕಿ. 

  • ಕಬ್ಜ 3ನೇ ವಾರಕ್ಕೆ ಎಂಟ್ರಿ : ಏ.14ಕ್ಕೆ ಒಟಿಟಿಗೆ

    ಕಬ್ಜ 3ನೇ ವಾರಕ್ಕೆ ಎಂಟ್ರಿ : ಏ.14ಕ್ಕೆ ಒಟಿಟಿಗೆ

    ಉಪೇಂದ್ರ, ಶ್ರೇಯಾ ಸರಣ್ ಪ್ರಧಾನ ಪಾತ್ರದಲ್ಲಿದ್ದ ಕಬ್ಜ 3ನೇ ವಾರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಶಿವಣ್ಣ ಮತ್ತು ಸುದೀಪ್ ರೋಮಾಂಚನದ ನಡುವೆ 100 ಕೋಟಿ ಕ್ಲಬ್ ಸೇರಿದ್ದ ಕಬ್ಜ ಥಿಯೇಟರಿನಲ್ಲಿ ಈಗಲೂ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಕೆಲವರು ಉದ್ದೇಶಪೂರ್ವಕವಾಗಿಯೇ ನೆಗೆಟಿವ್ ಪ್ರಚಾರ ನಡೆಸುತ್ತಿದ್ದರೂ, ಆರ್.ಚಂದ್ರು ಅವರನ್ನು ಪರ್ಸನಲ್ ಅಟ್ಯಾಕ್ ಮಾಡುತ್ತಿದ್ದರೂ ಪ್ರೇಕ್ಷಕರು ಕಬ್ಜ ಚಿತ್ರವನ್ನು ಮೆಚ್ಚಿಕೊಂಡಿರುವುದೇ ಖುಷಿ ಕೊಡುವ ವಿಚಾರ. ಡೈರೆಕ್ಷನ್ ಅಷ್ಟೇ ಅಲ್ಲ, ಪ್ರೊಡ್ಯೂಸರ್ ಕೂಡಾ ಆಗಿದ್ದ ಆರ್.ಚಂದ್ರು ಗೆಲುವಿನ ನಗೆ ನಕ್ಕಿದ್ದಾರೆ. ಇದರ ಮಧ್ಯೆ ಕಬ್ಜ ಚಿತ್ರದ ಒಟಿಟಿ ರಿಲೀಸ್ ಡೇಟ್ ಕೂಡಾ ಫಿಕ್ಸ್ ಆಗಿದೆ.

    ಕಬ್ಜ’ ಚಿತ್ರ ಏ.14ರಿಂದ ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗಲಿದೆ. ಮಾ.17ರಂದು 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ಬಿಡುಗಡೆಯಾಗಿತ್ತು.

    ಇತ್ತೀಚೆಗೆ ಚಿತ್ರ ಚೆನ್ನಾಗಿದೆ, ಪ್ರೇಕ್ಷಕರು ಬರುತ್ತಿದ್ದಾರೆ ಎಂಬ ವಿಷಯವನ್ನೂ ತಿರುಚಿ, ಸುಳ್ಳು ಸುಳ್ಳು ಸುದ್ದಿ ಸೃಷ್ಟಿಸಿದ್ದ ಎಫೆಕ್ಟ್, ಈ ಬಾರಿ ವಿತರಕರೇ ಬಂದು ಹೇಳುತ್ತಿದ್ದರೂ ಅನುಮಾನದ ಕಣ್ಣಿಂದ ನೋಡುವಂತಾಗಿದೆ. ಆದರೆ ಕಬ್ಜ ಭರ್ಜರಿ ಹಿಟ್ ಆಗಿದೆ ಎನ್ನುವುದಂತೂ ನಿಜ.

  • ಕಬ್ಜ ಕ್ರೇಜ್ : ಕಿಚ್ಚ, ಉಪ್ಪಿ ಜೊತೆ ಶಿವಣ್ಣ

    ಕಬ್ಜ ಕ್ರೇಜ್ : ಕಿಚ್ಚ, ಉಪ್ಪಿ ಜೊತೆ ಶಿವಣ್ಣ

    ಇದು ಒಂದು ರೀತಿಯಲ್ಲಿ ಚಕ್ರವರ್ತಿಗಳ ಸಮಾಗಮ. ಒಬ್ಬರು ಅಭಿನಯ ಚಕ್ರವರ್ತಿ. ಮತ್ತೊಬ್ಬರು ಸೆನ್ಸೇಷನ್‍ಗೆ ಬಾಸ್. ಇದೀಗ ಅವರಿಬ್ಬರ ಜೊತೆ ಕರುನಾಡ ಚಕ್ರವರ್ತಿ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಶಿವ ರಾಜ್ ಕುಮಾರ್. ಕಬ್ಜ' ಚಿತ್ರದಲ್ಲಿ 'ನಾಟ್ಯಸಾರ್ವಭೌಮ' ಶಿವರಾಜ್ ಕುಮಾರ್ ಕೂಡ ಅಭಿನಯಿಸಿದ್ದಾರೆ. ಉಪೇಂದ್ರ, ಸುದೀಪ್ ಹಾಗೂ ಶಿವರಾಜ್ ಕುಮಾರ್.. ಕನ್ನಡ ಚಿತ್ರರಂಗದ ಈ ಮೂವರು ಸ್ಟಾರ್ಗಳು 'ಕಬ್ಜ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಮೂವರು ಸ್ಟಾರ್ಗಳನ್ನ ಒಟ್ಟಿಗೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಲಭಿಸಿದೆ. ಶಿವಣ್ಣ ಪಾತ್ರ ಏನಿರಬಹುದು..? ಅದು ಸಸ್ಪೆನ್ಸ್. ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರವೇನು ಎಂಬುದು ಬಹಿರಂಗವಾಗಿಲ್ಲ.

    'ಕಬ್ಜ' ಚಿತ್ರದ ಹಾಡೊಂದನ್ನು ಇತ್ತೀಚೆಗಷ್ಟೇ ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಭಾಗವಹಿಸಿದ್ದು ವಿಶೇಷವಾಗಿತ್ತು. ಇಂದು 'ಕಬ್ಜ' ಚಿತ್ರದ ಟ್ರೇಲರ್ ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನ.. ಅಂದ್ರೆ ಮಾರ್ಚ್ 17 ರಂದು 'ಕಬ್ಜ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಪುನೀತ್ ರಾಜ್ಕುಮಾರ್ ಅವರ ಸವಿನೆನಪಿನಲ್ಲಿ 'ಕಬ್ಜ' ಸಿನಿಮಾ ತೆರೆಗೆ ಬರಲಿದೆ.

    ಆರ್.ಚಂದ್ರು ಅವರು ಕಬ್ಜ ಚಿತ್ರವನ್ನು ಲೇಟ್ ಮಾಡುತ್ತಿದ್ದಾರೆ ಎಂದು ಶಿವಣ್ಣ ವೇದಿಕೆಯೊಂದರಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಶಿವಣ್ಣ ಅವರಿಗೆ ನನಗೆ ಬುದ್ದಿ ಹೇಳೋ ಎಲ್ಲ ಅಧಿಕಾರ ಇದೆ ಎಂದು ಉತ್ತರ ಕೊಟ್ಟಿದ್ದರು ಆರ್.ಚಂದ್ರು. ಈ ಹಿಂದೆ ಆರ್.ಚಂದ್ರು ಅವರ ಜೊತೆ ಮೈಲಾರಿ ಚಿತ್ರ ಮಾಡಿದ್ದರು ಚಂದ್ರು. 13 ವರ್ಷಗಳ ನಂತರ ಮತ್ತೊಮ್ಮೆ ಚಂದ್ರು ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದಾರೆ. ಉಪೇಂದ್ರ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದ ಶಿವಣ್ಣ, ಕಿಚ್ಚ ಸುದೀಪ್ ಜೊತೆಯಲ್ಲೂ 2ನೇ ಸಿನಿಮಾ ಮಾಡುತ್ತಿದ್ದಾರೆ. ಮಲ್ಟಿಸ್ಟಾರ್ ಸಿನಿಮಾ ಸಾಕಪ್ಪಾ ಸಾಕು ಎಂದಿದ್ದ ಸುದೀಪ್, ಉಪ್ಪಿ-ಶಿವಣ್ಣ ಜೊತೆ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಉಪೇಂದ್ರ ಜೊತೆ ಸುದೀಪ್ ಅವರಿಗೂ ಇದು 2ನೇ ಸಿನಿಮಾ.

  • ಕಬ್ಜ ಟೀಸರ್ ಸಕ್ಸಸ್ : ಥ್ರಿಲ್ಲಾದ ಚಂದ್ರು

    ಕಬ್ಜ ಟೀಸರ್ ಸಕ್ಸಸ್ : ಥ್ರಿಲ್ಲಾದ ಚಂದ್ರು

    ಕಬ್ಜ ಚಿತ್ರದ ಟೀಸರ್ ಹಿಟ್ ಆಗಿದೆ. ಎರಡೂವರೆ ಕೋಟಿಗೂ ಹೆಚ್ಚು ಜನ ಟೀಸರ್ ನೋಡಿದ್ದಾರೆ. ಮೆಚ್ಚಿದ್ದಾರೆ. ತೆಲುಗಿನಲ್ಲಂತೂ 50ಕ್ಕೂ ಹೆಚ್ಚು ಫೋನ್ ಬಂದಿದ್ದು ಮಾರ್ಕೆಟಿಂಗ್ ಬಗ್ಗೆ ಮಾತನಾಡುತ್ತಿದ್ದಾರಂತೆ. ಬಿಸಿನೆಸ್ ಶುರುವಾಗಿದೆಯಂತೆ. ವಿದೇಶದಿಂದಲೂ ಚಿತ್ರದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಇದೆ ಎಂದು ಶ್ರೀಕಾಂತ್ ಹೇಳುತ್ತಿದ್ದರೆ.. ನಿರ್ದೇಶಕ ಆರ್.ಚಂದ್ರು ಮುಖದಲ್ಲಿ ಗೆಲುವಿನ ಹುಮ್ಮಸ್ಸಿತ್ತು.

    ಈ ಚಿತ್ರಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಯುಐ ಚಿತ್ರದ ಮೇಕಿಂಗ್‍ನ್ನು ಯೋಚಿಸುವಂತೆ ಮಾಡಿದೆ  ಎಂದ ಉಪ್ಪಿ ಒಂದು ಕಥೆ ಹೇಳಿದರು.  ಒಂದೂರಲ್ಲಿ ಒಬ್ಬ ಆರ್ಟಿಸ್ಟ್ ಇದ್ದ. ಅವನ ಕಲಾಕೃತಿಯನ್ನು ನೋಡಿದವನೊಬ್ಬ ಮೆಚ್ಚಿಕೊಂಡು ಈ ಕಲಾಕೃತಿ ಯಾವಾಗ ಮುಗಿಯುತ್ತೆ ಎಂದು ಕೇಳಿದ. ಇದು ಮುಗಿಯೋದಿಲ್ಲ. ಇವತ್ತೇ ತೆಗೆದುಕೊಂಡುಹೋಗಬಹುದು ಎಂದ ಕಲಾವಿದರ. ಆರ್.ಚಂದ್ರು ಕೂಡಾ ಹಾಗೆಯೇ. ಅವರ ಕೆಲಸ ಮುಗಿಯೋದಿಲ್ಲ. ಆದರೆ ಅಂದುಕೊಂಡಿದ್ದನ್ನು ಮಾಡಿ ತೋರಿಸುತ್ತಾರೆ ಎಂದು ಮೆಚ್ಚಿದರು.

    ಕೆಜಿಎಫ್ ಚಿತ್ರವನ್ನು ನೋಡಿದ ನಂತರ ವ್ಹಾವ್.. ಅದ್ಭುತ ಸಿನಿಮಾ ಎನ್ನಿಸಿತು. ಮಾಡಿದರೆ ಕೆಜಿಎಫ್ ರೀತಿ ಸಿನಿಮಾ ಮಾಡಬೇಕು ಎನ್ನಿಸಿತು. ಕಬ್ಬ ಮಾಡಿದ್ದೇನೆ. ದಯವಿಟ್ಟು ಕಬ್ಜವನ್ನು ಕೆಜಿಎಫ್ ಜೊತೆ ಹೋಲಿಕೆ ಮಾಡಬೇಡಿ. ಮೊದಲು ಚಿತ್ರವನ್ನು ನೋಡಿ ಡಿಸೈಡ್ ಮಾಡಿ ಎಂದು ಮನವಿ ಮಾಡಿದರು ಆರ್.ಚಂದ್ರು.

  • ಕಬ್ಜ ಟೈಮ್ 2 ಗಂಟೆ..16 ನಿಮಿಷ : ಕಬ್ಜ 2 ಬರುತ್ತಾ?

    ಕಬ್ಜ ಟೈಮ್ 2 ಗಂಟೆ..16 ನಿಮಿಷ : ಕಬ್ಜ 2 ಬರುತ್ತಾ?

    ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ಶ್ರೇಯಾ.. ಮುರಳಿ ಕೃಷ್ಣ, ಪೋಸಾನಿ ಕೃಷ್ಣ ಮುರಳಿ, ಅನೂಪ್ ರೇವಣ್ಣ, ಕಬೀರ್ ದುಲ್ಹಾನ್ ಸಿಂಗ್, ದೇವ್‍ಗಿಲ್, ಕಾಮರಾಜನ್, ನವಾಬ್ ಷಾ, ಜಾನ್ ಕೊಕೆನ್, ಡ್ಯಾನಿಷ್ ಅಖ್ತರ್.. ಹೀಗೆ.. ಚಿತ್ರದ ಪ್ರತಿ ಪಾತ್ರಗಳಲ್ಲೂ ಸ್ಟಾರ್ ನಟರೇ ಇದ್ದಾರೆ. ನಿರ್ದೇಶಕ ಆರ್.ಚಂದ್ರು ಕಬ್ಜ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ದೊಡ್ಡದಾಗಿರುತ್ತೆ ಎನ್ನುವವರಿಗೆಲ್ಲ ಕಬ್ಜ ಬೇರೆಯದೇ ಉತ್ತರ ಕೊಟ್ಟಿದೆ.

    ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಇತ್ತೀಚೆಗೆ ಸೆನ್ಸಾರ್ ಆಗಿದೆ. ಈ ಸೆನ್ಸಾರ್ ಸರ್ಟಿಫಿಕೇಟ್ ಪ್ರಕಾರ, 'ಕಬ್ಜ' ಸಿನಿಮಾದ ಉದ್ದ ಸುಮಾರು 136 ನಿಮಿಷ. ಅಂದರೆ, ಇಡೀ ಸಿನಿಮಾ 2 ಗಂಟೆ 16 ನಿಮಿಷದಲ್ಲಿ ಮುಗಿದು ಹೋಗುತ್ತೆ. ಪ್ಯಾನ್ ಇಂಡಿಯಾ ಸಿನಿಮಾಗಳ ರನ್ಟೈಮ್ ಸಹಜವಾಗಿ 150 ರಿಂದ 170 ನಿಮಿಷ ಇರಬೇಕು ಅನ್ನೋ ವಾದವಿದೆ.

    ಹೀಗಾಗಿ ಸ್ಕ್ರೀನ್ ಪ್ಲೇ ಚುರುಕಾಗಿರುತ್ತೆ. ಕಥೆ ಚಿರತೆಯಂತೆ ಓಡುತ್ತೆ. ಚಕಚಕನೆ ಸರಿದು ಹೋಗುತ್ತೆ ಎನ್ನುವ ನಿರೀಕ್ಷೆ ಇದೆ. ಇದೆಲ್ಲದರ ನಡುವೆ ಉಪೇಂದ್ರ ಕಬ್ಜ 2 ಕೂಡಾ ಬರಲಿದೆ ಎಂಬ ಸುಳಿವು ನೀಡಿದ್ದಾರೆ. ಬಂದರೂ ಬರಬಹುದು. ಟಿಕೆಟ್ ಬುಕ್ಕಿಂಗ್ ಅಂತೂ ಭರ್ಜರಿಯಾಗಿ ನಡೆಯುತ್ತಿದೆ.

  • ಕಬ್ಜ ಟ್ರೇಲರ್ ಸೃಷ್ಟಿಸಿದ ಕ್ರೇಜ್

    ಕಬ್ಜ ಟ್ರೇಲರ್ ಸೃಷ್ಟಿಸಿದ ಕ್ರೇಜ್

    ಉಪೇಂದ್ರ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭೂಗತ ಲೋಕದ ಡಾನ್. ಎರಡೂ ಪಾತ್ರಗಳಲ್ಲಿದ್ದಾರೆ. ಕಿಚ್ಚ ಸುದೀಪ್ ಅವರದ್ದು ಪೊಲೀಸ್ ಆಫೀಸರ್ ಪಾತ್ರ. ಶ್ರೇಯಾ ಸರಣ್ ಅಪ್ಪಟ ಮಹಾರಾಣಿಯಂತೆಯೇ ಕಂಗೊಳಿಸುತ್ತಿದ್ದಾರೆ. ಒಂದೊಂದು ದೃಶ್ಯದಲ್ಲೂ ಕ್ಯಾಮೆರಾ ಕೈಚಳಕ ಕಾಣಿಸುತ್ತಿದೆ. ಎಜೆ ಶೆಟ್ಟಿ ವ್ಹಾವ್ ಎನಿಸುತ್ತಾರೆ. ರವಿ ಬಸ್ರೂರು ಹೊಸದೇ ರೀತಿಯ ಮ್ಯಾಜಿಕ್ ಮಾಡಿದ್ದಾರೆ. ಇವೆಲ್ಲದರ ಮಧ್ಯೆ ಆರ್.ಚಂದ್ರು ಅವರು ಮಾತ್ರ ಶಿವರಾಜ್ ಕುಮಾರ್ ಪಾತ್ರದ ರಹಸ್ಯವನ್ನು ಹಾಗೇ ಉಳಿಸಿದ್ದಾರೆ.

    ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಪೊಸಾನಿ ಕೃಷ್ಣ ಮುರಳಿ, ಸುಧಾ, ಕಬೀರ್ ದುಹಾನ್ ಸಿಂಗ್, ಜಾನ್ ಕೊಕ್ಕೆನ್, ದೇವ್ ಗಿಲ್, ಕಾಮರಾಜನ್, ದನೀಶ್ ಅಖ್ತರ್, ಲಕ್ಕಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ತಾಹಾ ಶಾ, ಅವಿನಾಶ್, ಸುನಿಲ್ ಪಟ್ನಾಯಕ್, ಅನೂಪ್, ಬಿ ಸುರೇಶ್, ಅಶ್ವತ್ಥ್ ನೀನಾಸಂ, ಸಂದೀಪ್ ಮಲಾನಿ, ಮಾಸ್ಟರ್ ಚಿರು ಹಾಗೂ ಮಾಸ್ಟರ್ ಜ್ಞಾನ್ ಕಬ್ಜ ಚಿತ್ರದಲ್ಲಿ ನಟಿಸಿದ್ದಾರೆ.  

    ಚಿತ್ರದಲ್ಲಿ ಬ್ರಿಟಿಷ್ ಕಾಲದ ಕಥೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ನಂತರದ ಕಥೆ ಇರುವ ಸೂಚನೆ ನೀಡಿದೆ ಟ್ರೇಲರ್. ದೇಶಪ್ರೇಮ, ವ್ಯವಸ್ಥೆಯ ವಿರುದ್ಧ ಹೋರಾಟ, ಪಾತಕ ಲೋಕ, ತಾಯಿ ಸೆಂಟಿಮೆಂಟ್, ಬ್ರದರ್ ಸೆಂಟಿಮೆಂಟ್ ಎಲ್ಲವನ್ನೂ ‘ಕಬ್ಜ’ದಲ್ಲಿ ಆರ್.ಚಂದ್ರು ಕಟ್ಟಿಕೊಟ್ಟಿದ್ದಾರೆ. ಙ್ರಲ್ ಕೊಡುತ್ತಿರುವುದು ಉಪೇಂದ್ರ ಕೂಡಾ ಒಂದು ಕಡೆ ಪೊಲೀಸ್ ಆಫೀಸರ್ ಗೆಟಪ್‍ನಲ್ಲಿರುವುದು. ಟ್ರೇಲರ್‍ನ ಆರಂಭದಲ್ಲಿ ಗನ್ ಹಿಡುದು ಹೆಜ್ಜೆಯಿಡುವ ವ್ಯಕ್ತಿಯನ್ನು ತೋರಿಸಿದ್ದಾರೆ. ಅದು ಶಿವಣ್ಣನೇ ಇರಬೇಕು ಎಂಬುದು ಅಭಿಮಾನಿಗಳ ನಂಬಿಕೆ.

    ಅಂದಹಾಗೆ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಟ್ರೇಲರ್ ರಿಲೀಸ್ ಮಾಡಿ ಚಿತ್ರಕ್ಕೆ ಬೊಂಬಾಟ್ ಕ್ರೇಜ್ ಸೃಷ್ಟಿಸಿದ್ದಾರೆ. ಟ್ರೇಲರ್ ನೋಡಿದವರೆಲ್ಲ ಹ್ಯಾಪಿ..ಹ್ಯಾಪಿ.. ಮಾರ್ಚ್ 17ಕ್ಕೆ ಜಗತ್ತಿನಾದ್ಯಂತ ಸುಮಾರು 4000 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ಕಬ್ಜ ರಿಲೀಸ್ ಡೇಟ್ 24ಕ್ಕೆ ಅನೌನ್ಸ್

    ಕಬ್ಜ ರಿಲೀಸ್ ಡೇಟ್ 24ಕ್ಕೆ ಅನೌನ್ಸ್

    ಜನವರಿ 24ನ್ನು ಇಡೀ ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶ ಕಾತರದಿಂದ ಕಾಯುತ್ತಿದೆ. ಈ ವರ್ಷದ ಇಂಡಿಯಾದ ಟಾಪ್ ನಿರೀಕ್ಷಿತ ಚಿತ್ರಗಳಲ್ಲಿ ಕಬ್ಜಾ ಕೂಡಾ ಒಂದು. ಕರ್ನಾಟಕದ ಟಾಪ್ 1 ಬಹುನಿರೀಕ್ಷಿತ ಸಿನಿಮಾ. ಏಕೆಂದರೆ ಚಿತ್ರದಲ್ಲಿ ಇರೋದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್. ಸಹಜವಾಗಿಯೇ ಕುತೂಹಲ ಜಾಸ್ತಿ. ಆ ಕುತೂಹಲ ಹೆಚ್ಚಿಸಲೆಂದೇ ನಿರ್ದೇಶಕ ಮತ್ತು ನಿರ್ಮಾಪಕ ಆರ್.ಚಂದ್ರು ಇದ್ದಾರೆ. ಚಿತ್ರದ ರಿಲೀಸ್ ಡೇಟ್ ಘೋಷಿಸುತ್ತೇವೆ ಎಂದು ಒಂದು ದಿನಾಂಕ ಘೋಷಿಸುವುದು ಹೊಸತು. ಅಂತಹ ಯೋಜನೆ ಸಿದ್ಧ ಮಾಡಿರುವ ಚಂದ್ರು, ಯಾವಾಗ ರಿಲೀಸ್ ಅನ್ನೋದನ್ನ ಜನವರಿ 24ರಂದು ಘೋಷಣೆ ಮಾಡ್ತಾರಂತೆ.

    ಈಗಾಗಲೇ ಚಿತ್ರದ ಟೀಸರ್ ಹವಾ ಎಬ್ಬಿಸಿದೆ. ದೇಶ ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದು. ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಐದಲ್ಲ, ಒಟ್ಟಾರೆ 8 ಬಾಷೆಗಳಲ್ಲಿ ಬರುತ್ತಿರೋ ಚಿತ್ರ ಕಬ್ಜ. ಕಳೆದ ವರ್ಷವಿಡೀ ಕನ್ನಡ ಚಿತ್ರಗಳ ಅಬ್ಬರ ಇಡೀ ಇಂಡಿಯಾದಲ್ಲಿ ಕೇಳಿತ್ತು. ಕೆಜಿಎಫ್ ಚಾಪ್ಟರ್ 2, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಭರ್ಜರಿ ಭರ್ಜರಿ ಭರ್ಜರಿ ಸದ್ದು ಮಾಡಿದ್ದವು. ಬಾಕ್ಸಾಫೀಸ್ ಕೊಳ್ಳೆ ಹೊಡೆಯೋದರ ಜೊತೆಗೆ ಇಂಡಿಯನ್ ಪ್ರೇಕ್ಷಕರ ಹೃದಯವನ್ನು ಕೊಳ್ಳೆ ಹೊಡೆದಿದ್ದವು. ಇದೀಗ ಕಬ್ ಚಿತ್ರದ ರಿಲೀಸ್ ಡೇಟ್ ಜನವರಿ 24ರಂದು ಘೋಷಣೆಯಾಗುತ್ತಿದೆ.

  • ಕಬ್ಜ ವಿಶೇಷ ದಾಖಲೆ : ಕೆಜಿಎಫ್ ಹೋಲಿಕೆಗೆ ಉಪ್ಪಿ ಹೇಳಿದ್ದೇನು..?

    ಕಬ್ಜ ವಿಶೇಷ ದಾಖಲೆ : ಕೆಜಿಎಫ್ ಹೋಲಿಕೆಗೆ ಉಪ್ಪಿ ಹೇಳಿದ್ದೇನು..?

    ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶ್ರಿಯಾ ಸರಣ್ ಪ್ರಧಾನ ಪಾತ್ರದಲ್ಲಿರೋ ಕಬ್ಜ ಟೀಸರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ಕಬ್ಬ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಮತ್ತು ಒರಿಯಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

    ಕಬ್ಬ ಟೀಸರ್ ಮೇಕಿಂಗ್ ಅದ್ಧೂರಿಯಾಗಿದೆ. ಮ್ಯೂಸಿಕ್, ಮೇಕಿಂಗ್.. ಎಲ್ಲದರಲ್ಲೂ ಅದ್ಧೂರಿತನವಿದೆ. ಗ್ಯಾಂಗ್ ಸ್ಟರ್ ಒಬ್ಬನ ಕಥೆಯನ್ನು ಹೇಳುತ್ತಿದೆ. ಟೀಸರ್ ನೋಡಿದವರು ಕೆಜಿಎಫ್ ರೀತಿ ಇದೆ ಎಂದು ಹೋಲಿಕೆ ಮಾಡುತ್ತಿದ್ದಾರೆ. ಇದರ ಮಧ್ಯೆ ಆನಂದ್ ಆಡಿಯೋದ ಕಬ್ಜ ಟೀಸರ್ ಯೂಟ್ಯೂಬ್‍ನಲ್ಲಿ ಈಗಲೂ ನಂ.1 ಟ್ರೆಂಡಿಂಗ್. ನೋಡಿದವರ ಸಂಖ್ಯೆ 15 ಮಿಲಿಯನ್. ಅಂದರೆ ಒಂದೂವರೆ ಕೋಟಿಗೂ ಹೆಚ್ಚು.

    ಇದರ ಮಧ್ಯೆ ಕೆಜಿಎಫ್ ಹೋಲುತ್ತಿದೆ ಎಂಬ ಮಾತಿಗೆ ಖುದ್ದು  ಉಪೇಂದ್ರ ಹೇಳಿರೋದಿಷ್ಟು. ಹೋಲಿಕೆ ಸಹಜ. ಆದರೆ ಸಿನಿಮಾ ಬಂದ ಮೇಲಷ್ಟೇ ಕೆಜಿಎಫ್ ಕಥೆಯೇ ಬೇರೆ. ಕಬ್ಜ ಕಥೆಯೇ ಬೇರೆ ಎನ್ನುವುದನ್ನು ಅರ್ಥ ಮಾಡಿಕೊಳ್ತಾರೆ. ಮೇಕಿಂಗ್ ಹಾಗೂ ಅದ್ಧೂರಿ ಸೆಟ್ ನೋಡಿದವರಿಗೆ ಹಾಗನ್ನಿಸುವುದು ಸಹಜ ಎಂದಿದ್ದಾರೆ ಉಪ್ಪಿ. ಅಲ್ಲದೆ ಕೆಜಿಎಫ್‍ಗೆ ಹೋಲಿಸುವುದು ಸಂತೋಷದ ವಿಚಾರವೇ ಎಂದೂ ಹೇಳಿದ್ದಾರೆ.

  • ಕಬ್ಜದ ಕ್ರೆಡಿಟ್ ಯಾರದು..? ಉಪೇಂದ್ರ, ಸುದೀಪ್ ಹೇಳಿದ ಆರ್.ಚಂದ್ರು ಸ್ಟೋರಿ

    ಕಬ್ಜದ ಕ್ರೆಡಿಟ್ ಯಾರದು..? ಉಪೇಂದ್ರ, ಸುದೀಪ್ ಹೇಳಿದ ಆರ್.ಚಂದ್ರು ಸ್ಟೋರಿ

    ಯಶಸ್ಸಿಗೆ ಸಾವಿರ ಸರದಾರರು..ಸೋಲಿಗೆ ಯಾರೂ ಇಲ್ಲ ಎಂಬುದು ಗಾದೆಯೂ ಹೌದು..ನಾಣ್ಣುಡಿಯೂ ಹೌದು. ಈಗ ಕಬ್ಜ ರಿಲೀಸ್ ಹೊತ್ತಿನಲ್ಲಿ ಕೂಡಾ ಅದು ಚರ್ಚೆಗೆ ಬಂದಿದೆ. ಕಬ್ಜ ಈಗಾಗಲೇ ಒಂದು ಮಟ್ಟಕ್ಕೆ ಗೆದ್ದಾಗಿದೆ. ರಿಲೀಸ್ ಆಗುವುದಕ್ಕೂ ಮೊದಲೇ 100 ಕೋಟಿ ಕ್ಲಬ್ ಸೇರಿರುವ ಕಬ್ಜ ಚಿತ್ರ ಥಿಯೇಟರ್ ಓಪನಿಂಗ್ಸ್ ಎದುರು ನೋಡುತ್ತಿದೆ. 4000+ ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗಲಿರೋ ಕಬ್ಜ ಚಿತ್ರದ ರೂವಾರಿ ಆರ್.ಚಂದ್ರು.

    ಕಬ್ಜ ಚಿತ್ರಕ್ಕೆ ನಿರ್ದೇಶಕರೂ ಅವರೇ..ನಿರ್ಮಾಪಕರೂ ಅವರೇ. ಪ್ರೊಡಕ್ಷನ್ ಹೆಡ್ ಯಮುನಾ ಚಂದ್ರಶೇಖರ್. ಸ್ಟಾರ್ ಗಿರಿಯೋ.. ಅಬ್ಬಬ್ಬಾ ಎನ್ನುವಂತಿದೆ. ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ಶ್ರೇಯಾ.. ಹೀಗೆ ಸ್ಟಾರ್‍ಗಳೇ ತುಂಬಿರುವ ಚಿತ್ರದಲ್ಲಿ ಪೋಷಕ ಕಲಾವಿದರೂ ಸ್ಟಾರ್ ನಟರೇ. ಮುರಳಿ ಕೃಷ್ಣ, ಪೋಸಾನಿ ಕೃಷ್ಣ ಮುರಳಿ, ಅನೂಪ್ ರೇವಣ್ಣ, ಕಬೀರ್ ದುಲ್ಹಾನ್ ಸಿಂಗ್, ದೇವ್‍ಗಿಲ್, ಕಾಮರಾಜನ್, ನವಾಬ್ ಷಾ, ಜಾನ್ ಕೊಕೆನ್, ಡ್ಯಾನಿಷ್ ಅಖ್ತರ್.. ಹೀಗೆ.. ಹೀಗಾಗಿಯೇ ಚಿತ್ರದ ಬಗ್ಗೆ ಮಾತನಾಡಿದ ಎಲ್ಲರೂ ಕ್ರೆಡಿಟ್ ಸಲ್ಲಿಸಿದ್ದು ಆರ್.ಚಂದ್ರು ಅವರಿಗೆ.

    ಈ ಚಿತ್ರಕ್ಕೆ ನಾನು ಓಕೆ ಎಂದಿದ್ದು ಚಿತ್ರದ ಮೇಕಿಂಗ್ ನೋಡಿ ಅಲ್ಲ. ಆರ್.ಚಂದ್ರು ಅವರನ್ನು ನೋಡಿ. ಚಂದ್ರು ಅವರ ಡೆಡಿಕೇಷನ್ ಅದ್ಭುತ. ಇದು ಅವರ ಸ್ನೇಹಕ್ಕಾಗಿ ಮಾಡಿದ ಸಿನಿಮಾ ಎಂದ ಸುದೀಪ್ ಉಪ್ಪಿ ಸರ್ ಸಿನಿಮಾದಲ್ಲಿ ನಾನಿದ್ದೇನೆ ಎನ್ನುವುದೇ ಖುಷಿ. ಈ ಸಿನಿಮಾ ಚಂದ್ರುಗೋಸ್ಕರ ಗೆಲ್ಲಬೇಕು ಎಂದರು.

    ಸಮಸ್ಯೆಗಳನ್ನೇ ತುಳಿದು ಕಬ್ಜ ಮಾಡಿದವರು ಚಂದ್ರು. ಆ ವಾಮನ ಬಲಿ ಚಕ್ರವರ್ತಿಯನ್ನು ತುಳಿದರೆ, ಈ ವಾಮನ ಆರ್.ಚಂದ್ರು ಸಮಸ್ಯೆಗಳನ್ನೆಲ್ಲ ತುಳಿದು ಒಳ್ಳೆಯ ಸಿನಿಮಾ ಮಾಡಿದ್ದಾರೆ ಎಂದವರು ಉಪೇಂದ್ರ.

    ಆರ್.ಚಂದ್ರು ಅವರ ಕನಸುಗಳನ್ನು ಹೊಗಳಿದ ನೆನಪಿರಲಿ ಪ್ರೇಮ್ ಎಲ್ಲ ಒಳ್ಳೆಯ ಮನಸ್ಸುಗಳ ಸಾಥ್ ಸಿಕ್ಕಿರುವ ಕಬ್ಜ ಖಂಡಿತಾ ಗೆಲ್ಲಲಿದೆ ಎಂದರು. ನಮ್ಮ ಸೀನಿಯರ್ ಅಣ್ಣಂದಿರೆಲ್ಲ ದೊಡ್ಡ ದಾರಿ ತೋರಿಸುತ್ತಿದ್ದಾರೆ. ದೊಡ್ಡ ದೊಡ್ಡ ಗ್ಯಾಂಗ್‍ಸ್ಟರ್ಸ್ ಕಥೆ ಇದೆ. ಆದರೆ ಮತ್ತೊಬ್ಬ ಗ್ಯಾಂಗ್‍ಸ್ಟರ್ ಡಾಲಿನ ಮಿಸ್ ಮಾಡಿದ್ದೀರಾ ಎನ್ನುತ್ತಲೇ ಶ್ರೇಯಾ ಸರಣ್ ಜೊತೆ ಡ್ಯಾನ್ಸ್ ಮಾಡುವ ಆಸೆಯನ್ನೂ ಹೇಳಿಕೊಂಡರು.

    ಚಿತ್ರದ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞರೂ ಎಲ್ಲರೂ ಚಂದ್ರು ಅವರನ್ನು ಹಾಡಿ ಹೊಗಳುತ್ತಿದ್ದರೆ, ಚಂದ್ರು ನಾಚುತ್ತಲೇ ಮೂಕ ಪ್ರೇಕ್ಷಕರಾಗಿದ್ದರು.ಅಂದಹಾಗೆ ನರ್ತಕಿಯಲ್ಲಿ ಮೂವರೂ ಸ್ಟಾರ್ಸ್ ಇರುವ 72 ಅಡಿ ಎತ್ತರದ ಕಟೌಟ್ ಇರಲಿದೆ. 'ಕಬ್ಜ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, ಕರ್ನಾಟಕದಲ್ಲಿ ಈ ಸಿನಿಮಾ ಹವಾನೇ ಬೇರೆ. ಕನ್ನಡ ಮೂವರು ಸೂಪರ್ಸ್ಟಾರ್ಗಳು ಒಂದೇ ಸಿನಿಮಾದಲ್ಲಿ ಕಂಡಿರಲಿಲ್ಲ. ಉಪೇಂದ್ರ-ಕಿಚ್ಚ ಸುದೀಪ್, ಉಪೇಂದ್ರ-ಶಿವಣ್ಣ, ಶಿವಣ್ಣ-ಕಿಚ್ಚ ಸುದೀಪ್ ಒಟ್ಟಿಗೆ ನಟಿಸಿದ್ದರು. ಆದ್ರೀಗ 'ಕಬ್ಜ'ದಲ್ಲಿ ಮೂವರನ್ನೂ ಒಟ್ಟಿಗೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

    ನಿರ್ದೇಶಕ ಆರ್ ಚಂದ್ರು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಿದು. ಇದೂವರೆಗೂ ರೊಮ್ಯಾಂಟಿಕ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರು, ಇದೇ ಮೊದಲ ಬಾರಿಗೆ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ 'ಕಬ್ಜ' ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತೆ? ಅನ್ನೋ ಕುತೂಹಲವಿದೆ.

  • ಕಬ್ಜದಲ್ಲಿ ಶಿವಣ್ಣ ಇದ್ದಾರೆ ಎನ್ನುವುದನ್ನು ರಿವೀಲ್ ಮಾಡಿದ್ದೇಕೆ ಆರ್.ಚಂದ್ರು..?

    ಕಬ್ಜದಲ್ಲಿ ಶಿವಣ್ಣ ಇದ್ದಾರೆ ಎನ್ನುವುದನ್ನು ರಿವೀಲ್ ಮಾಡಿದ್ದೇಕೆ ಆರ್.ಚಂದ್ರು..?

    ಕಬ್ಜದಲ್ಲಿ ಶಿವಣ್ಣ ಕೂಡಾ ಇದ್ದಾರೆ ಎನ್ನುವುದು ಶಿವರಾಜ್ ಕುಮಾರ್ ಫ್ಯಾನ್ಸ್‍ಗೆ ಖುಷಿ ಕೊಟ್ಟಿರುವುದೇನೋ ನಿಜ. ಆದರೆ ಶಿವಣ್ಣ ಪಾತ್ರವನ್ನು ರಿವೀಲ್ ಮಾಡಿದ ಆರ್.ಚಂದ್ರು ಅವರ ಸೋಷಿಯಲ್ ಮೀಡಿಯಾ ಪೇಜಿಗೆ ಹೋಗಿ ಕಮೆಂಟ್ಸ್ ನೋಡಬೇಕು. ಬಹುತೇಕ ಜನ ಶಿವಣ್ಣ ಪಾತ್ರ ರಿವೀಲ್ ಮಾಡಿದ್ದನ್ನು ಒಪ್ಪಿಲ್ಲ. ಹಾಗಂತ ಅವರೇನೂ ಶಿವಣ್ಣ ವಿರೋಧಿಗಳೂ ಅಲ್ಲ. ಎಲ್ಲರೂ ಶಿವಣ್ಣ ಫ್ಯಾನ್ಸ್. ಹೀಗಿದ್ದರೂ ಅವರು ಶಿವಣ್ಣ ಪಾತ್ರ ರಿವೀಲ್ ಆಗಿದ್ದನ್ನು ಬೇಡ ಎಂದಿದ್ದೇಕೆ ಎಂದರೆ ಕಾರಣವೂ ಇತ್ತು.

    ಇತ್ತೀಚೆಗೆ ತಮಿಳಿನಲ್ಲಿ ಬಂದ ವಿಕ್ರಂ ಚಿತ್ರದಲ್ಲಿ ಸೂರ್ಯ ಪಾತ್ರ ಆ ರೀತಿ ಸರ್‍ಪ್ರೈಸ್ ಕೊಡುತ್ತೆ. ಸೂರ್ಯ ಪಾತ್ರ ತೆರೆಯ ಮೇಲೆ ಬಂದಾಗ ಕೊಡುವ ಥ್ರಿಲ್ಲೇ ಬೇರೆ. ಆ ರೀತಿಯಲ್ಲಿಯೇ ಚಿತ್ರ ರಿಲೀಸ್ ಆಗುವವರೆಗೆ ಶಿವಣ್ಣ ಪಾತ್ರ ಸಸ್ಪೆನ್ಸ್ ಆಗಿಯೇ ಇರಬೇಕಿತ್ತು. ನೀವು ನಮಗೆ ಥಿಯೇಟರ್ ಥ್ರಿಲ್ ಮಿಸ್ ಮಾಡಿದ್ರಿ ಎಂದಿದ್ದರು ಬಹುತೇಕ ಅಭಿಮಾನಿಗಳು.

    ಶಿವಣ್ಣನ ಪಾತ್ರ  ಸರ್‍ಪ್ರೈಸ್ ನಿಜ. ಆದ್ರೆ, ಚಿತ್ರ ನೋಡಿಕೊಂಡು ಬಂದ ಅಭಿಮಾನಿಗಳು ಶಿವಣ್ಣನ ಕಟೌಟ್ ಯಾಕೆ ಹಾಕಿಲ್ಲ ಎಂದು ಗಲಾಟೆ ಮಾಡ್ಬಿಟ್ರೆ? ಅಷ್ಟಕ್ಕೂ ಎಲ್ಲಿ ತನಕ ಸರ್ಪ್ರೈಸ್ ಇಡೋಕೆ ಸಾಧ್ಯ? ಮೊದಲನೇ ಶೋ ತನಕ ಮಾತ್ರ. ಥಿಯೇಟರ್ನಿಂದ ಹೊರಗೆ ಬಂದ ಪ್ರೇಕ್ಷಕ, 'ಚಿತ್ರದ ಕೊನೆಯಲ್ಲಿ ಶಿವಣ್ಣ ಬರ್ತಾರೆ' ಅಂದ್ಬಿಟ್ರೆ ಆಯ್ತಲ್ಲ? ಅದಕ್ಕೆ, ರಿಸ್ಕ್ ಯಾಕೆ ಅಂತ ಚಂದ್ರು ಮೊದ್ಲೇ ರಿವೀಲ್ ಮಾಡ್ಬಿಟ್ರು

    ಇದನ್ನು ವೇದಿಕೆಯಲ್ಲಿಯೇ ಖುದ್ದು ಹೇಳಿದ್ದು ರಿಯಲ್ ಸ್ಟಾರ್ ಉಪೇಂದ್ರ. ಬೆಂಗಳೂರಿನಲ್ಲಿ ನಡೆದ ಪ್ರೀ-ರಿಲೀಸ್ ಈವೆಂಟ್‍ನಲ್ಲಿ ಮಾತನಾಡಿರೋ ಉಪೇಂದ್ರ ಎಲ್ಲ ಭಾರವನ್ನೂ ಆರ್.ಚಂದ್ರು ಹೆಗಲಿಗೇ ಹೊತ್ತು ಹಾಕಿದ್ರು. ಮಾರ್ಚ್ 17ರಂದು ಕಬ್ಜ ರಿಲೀಸ್ ಆಗುತ್ತಿದ್ದು, ಒಂದು ಕಡೆ ಅಪ್ಪು ಜಯಂತಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕಬ್ಜ ಉತ್ಸವ ನೆರವೇರಲಿದೆ.

    ಚಿತ್ರದ ಮೇಕಿಂಗ್, ಸ್ಟಿಲ್ಸ್ ಎಲ್ಲವನ್ನೂ ನೋಡಿದ್ದ ಪುನೀತ್, ಈ ಚಿತ್ರದ ಪ್ರತಿ ಪ್ರಚಾರದಲ್ಲೂ ನಾನಿರುತ್ತೇನೆ ಎಂದು ಆರ್.ಚಂದ್ರುಗೆ ಹೇಳಿದ್ದರಂತೆ. ಅವರ ಪ್ರೀತಿ ಮತ್ತು ಅಭಿಮಾನಕ್ಕಾಗಿ ಅದೇ ದಿನ ಕಬ್ಜ ರಿಲೀಸ್ ಮಾಡುತ್ತಿದ್ದೇವೆ ಎಂದು ಪುನರುಚ್ಚರಿಸಿದ್ದಾರೆ ಆರ್.ಚಂದ್ರು.

  • ಕಬ್ಬ ಹಬ್ಬಕ್ಕೆ ರಾಣಾ..ಶಿವಣ್ಣ

    ಕಬ್ಬ ಹಬ್ಬಕ್ಕೆ ರಾಣಾ..ಶಿವಣ್ಣ

    ನಾಳೆ ಉಪ್ಪಿ ಹಬ್ಬ. ಅದಕ್ಕೆ ಮುನ್ನ ಹಬ್ಬಕ್ಕೆ ಉಡುಗೊರೆಯಾಗಿ ಬರುತ್ತಿರುವುದು ಕಬ್ಜ ಟೀಸರ್. ಟೀಸರ್ ಬಿಡುಗಡೆಯನ್ನೇ ಹಬ್ಬದಂತೆ ಮಾಡುತ್ತಿದ್ದಾರೆ ಆರ್.ಚಂದ್ರು. ಕಬ್ಜ ಚಿತ್ರಕ್ಕೆ ನಿರ್ದೇಶಕರೂ ಅವರೇ. ನಿರ್ಮಾಪಕರೂ ಅವರೇ. ಉಪೇಂದ್ರ-ಸುದೀಪ್ ಕಾಂಬಿನೇಷನ್ ಸಿನಿಮಾ ಎಂದ ಮೇಲೆ ಚಿತ್ರದ ಪ್ರತಿಯೊಂದು ಸುದ್ದಿಯೂ ಹಬ್ಬವೇ ಸೈ.

    ಕಬ್ಬ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಶಿವರಾಜಕುಮಾರ್ ಮತ್ತು ರಾಣಾ ದಗ್ಗುಬಾಟಿ ಮುಖ್ಯ ಅತಿಥಿಗಳು. ಕಬ್ಬ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಎಲ್ಲ ಭಾಷೆಗಳ ಪತ್ರಕರ್ತರೂ ಬರಲಿದ್ದಾರೆ.

    ಉಪೇಂದ್ರ, ಕಿಚ್ಚ ಸುದೀಪ್, ಶ್ರೀಯಾ ಸರಣ್ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. 

  • ಕರ್ನಾಟಕ ಬುಲ್ಡೋಜರ್ಸ್ ಕ್ಯಾಪ್ಟನ್ ಈ ಬಾರಿ ಕಿಚ್ಚ ಅಲ್ಲ..!

    kiccha sudeep is not ccl captain this time

    ಸಿಸಿಎಲ್ ಪಂದ್ಯಾವಳಿ ಶುರುವಾಗುತ್ತಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಈಗಾಗಲೇ ಚಂಡೀಘಡದತ್ತ ಪಯಣ ಬೆಳೆಸಿ ಆಗಿದೆ. ಇದು 10ನೇ ಸಿಸಿಎಲ್ ಸೀಸನ್. ಆದರೆ, ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಟೀಂನಲ್ಲಿ ಕೆಲವು ಬದಲಾವಣೆಗಳಾಗಿವೆ. ಈ ಬಾರಿ ಕರ್ನಾಟಕ ಟೀಂ ಕ್ಯಾಪ್ಟನ್ ಕಿಚ್ಚ ಸುದೀಪ್ ಅಲ್ಲ, ಪ್ರದೀಪ್.

    ನಾಯಕ ಸ್ಥಾನವನ್ನು ಪ್ರದೀಪ್‍ಗೆ ಬಿಟ್ಟುಕೊಟ್ಟಿರುವ ಸುದೀಪ್, ಹೊಸ ನಾಯಕನ ನೇತೃತ್ವದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ನಾಯಕನಿಲ್ಲದೇ ಹೋದರೂ, ಸುದೀಪ್ ತಂಡದಲ್ಲಿರುತ್ತಾರೆ. 

  • ಕಾರ್ತಿಕ್ ಸುಬ್ಬರಾಜುರಿಂದ ಕಿಚ್ಚನಿಗಾಗಿ ಕನ್ನಡ ಸಿನಿಮಾ

    karthik subbaraju to direct sudeep

    ಪಿಜ್ಜಾ, ಜಿಗರ್‍ಥಂಡಾ, ಇರೈವಿ, ಮಕ್ರ್ಯುರಿ.. ಮತ್ತು ಈಗ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜು ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅದೂ ಕಿಚ್ಚನಿಗಾಗಿ. ಚಿತ್ರದ ಕುರಿತ ಮಾತುಕತೆ ಪ್ರಗತಿಯಲ್ಲಿದ್ದು, ವರ್ಷದ ಕೊನೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಕೊಡುವುದಾಗಿ ಹೇಳಿದ್ದಾರೆ ಜಾಕ್ ಮಂಜು.

    ಕಾರ್ತಿಕ್ ಸುಬ್ಬರಾಜು ಸಿನಿಮಾ ಜಿಗರ್‍ಥಂಡ ಚಿತ್ರವನ್ನು ಕನ್ನಡದಲ್ಲಿ ಸುದೀಪ್ ಮಾಡಿದ್ದರು. ತಾವೇ ನಿರ್ಮಿಸಿದ್ದರು. ಈಗ ಅದೇ ನಿರ್ದೇಶಕರ ಚಿತ್ರದಲ್ಲಿ ನಟಿಸುವ ಕಾಲ ಕೂಡಿ ಬಂದಿದೆ. ಆ ಚಿತ್ರ ಕನ್ನಡ ಹಾಗೂ ತಮಿಳು, ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ ಜಾಕ್ ಮಂಜು.

  • ಕಿಚ್ಚ @ 25

    kiccha sudeep completes 25 years in film industry

    ಕಿಚ್ಚ ಸುದೀಪ್. ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿ ಹೋದವು. ಸರಿಯಾಗಿ 25 ವರ್ಷಗಳ ಹಿಂದೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದ ಸುದೀಪ್, ಈ 25 ವರ್ಷಗಳಲ್ಲಿ ಏರಿದ ಎತ್ತರ ಊಹೆಗೂ ನಿಲುಕದ್ದು. ಆರಡಿ ಕಟೌಟ್ ಕಿಚ್ಚ ಅಂದ್ರೆ ಬಾಲಿವುಡ್‍ಗೆ ಅಚ್ಚುಮೆಚ್ಚು. ಟಾಲಿವುಡ್‍ಗೆ ಡಾರ್ಲಿಂಗ್. ತಮಿಳಿನವರಿಗೆ ವಿಚಿತ್ರ ಪ್ರೀತಿ.

    ಸುದೀಪ್‍ಗೆ ಬ್ರೇಕ್ ಕೊಟ್ಟಿದ್ದು ಸುನಿಲ್ ಕುಮಾರ್ ದೇಸಾಯಿ. ಸ್ಟಾರ್ ಪಟ್ಟ ಕೊಟ್ಟಿದ್ದು ಓಂಪ್ರಕಾಶ್ ರಾವ್. ಸುದೀಪ್ ಅದೆಷ್ಟು ವಂಡರ್‍ಫುಲ್ ಆ್ಯಕ್ಟರ್ ಎಂದು ಜಗತ್ತಿಗೆ ತೋರಿಸಿದ್ದು ರಾಜಮೌಳಿ. ಈ ಹಾದಿಯಲ್ಲಿ ಸುದೀಪ್ ಭಾರತದ ವಂಡರ್ ಡೈರೆಕ್ಟರುಗಳ ಜೊತೆ ಕೆಲಸ  ಮಾಡಿದ್ದಾರೆ. ಈ ನಡುವೆ ಸ್ವತಃ ನಿರ್ದೇಶಕರಾಗಿ ಗೆದ್ದ ಸುದೀಪ್, ಬಾಕ್ಸಾಫೀಸ್ ಪೈಲ್ವಾನ್.

    ನಂ.1 ಪಟ್ಟ ಇಷ್ಟವಿಲ್ಲ. ನಂಬರ್‍ಗಳಲ್ಲಿ ನಂಬಿಕೆಯಿಲ್ಲ. ಬಾಕ್ಸಾಫೀಸ್ ರೆಕಾರ್ಡುಗಳಿಗಿಂತ ಒಳ್ಳೆಯ ಪಾತ್ರಗಳಷ್ಟೇ ಮುಖ್ಯ ಎಂದೆಲ್ಲ ಹೇಳಲ್ಲ. ನನಗೆ ಅವೆಲ್ಲವೂ ಬೇಕು ಎನ್ನುವ ಸುದೀಪ್, ಈ 25 ವರ್ಷಗಳಲ್ಲಿ ನನಗೆ ಕೇಳದೆಯೇ ಸಿಕ್ಕ ಒಂದು ದೊಡ್ಡ ವರ ಅಭಿಮಾನಿಗಳ ಪ್ರೀತಿ. ಅವರಿಗೆ ನಾನು ಚಿರಋಣಿ ಎನ್ನುತ್ತಾರೆ.

    ಸುದೀಪ್ ಅವರ ರಜತ ಮಹೋತ್ಸವವನ್ನು ಅಭಿಮಾನಗಳು ಗ್ರ್ಯಾಂಡ್ ಸೆಲಬ್ರೇಟ್ ಮಾಡುತ್ತಿದ್ದಾರೆ.